ರಣಜಿ ಟ್ರೋಫಿ ಟೂರ್ನಿಯ ಸೆಮೀಸ್‌ನಲ್ಲಿ ಕರ್ನಾಟಕ ಎದುರು ಸೌರಾಷ್ಟ್ರ ತಿರುಗೇಟುಇನಿಂಗ್ಸ್‌ ಹಿನ್ನಡೆ ಅನುಭವಿಸುವ ಭೀತಿಯಲ್ಲಿದೆ ಮಯಾಂಕ್‌ ಅಗರ್‌ವಾಲ್ ಪಡೆಆಕರ್ಷಕ ಶತಕ ಸಿಡಿಸಿ ಮಿಂಚಿದ ಸೌರಾಷ್ಟ್ರದ ಶೆಲ್ಡನ್ ಜ್ಯಾಕ್ಸನ್, ಅರ್ಪಿತ್ ವಸಾವ್ಡಾ

ಬೆಂಗ​ಳೂ​ರು(ಫೆ.11): ರಣಜಿ ಟ್ರೋಫಿ ಕ್ರಿಕೆ​ಟ್‌​ನಲ್ಲಿ ಬದ್ಧ​ವೈರಿ ಸೌರಾಷ್ಟ್ರ ವಿರುದ್ಧ ಕರ್ನಾ​ಟಕ ತಂಡ ಅನು​ಭ​ವಿ​ಸುವ ಸಂಕ​ಷ್ಟದ ಸಂಪ್ರ​ದಾಯ ನಿಲ್ಲುವ ಲಕ್ಷಣ ಕಾಣು​ತ್ತಿ​ಲ್ಲ. ಹಿಂದಿನ 3 ನಾಕೌಟ್‌ ಮುಖಾಮುಖಿಗಳಲ್ಲಿ ಸೌರಾಷ್ಟ್ರಕ್ಕೆ ಶರಣಾಗಿದ್ದ ಕರ್ನಾಟಕ, ಈ ಸಲವೂ ಅದೇ ದಿಕ್ಕಿನಲ್ಲಿ ಸಾಗಿದೆ.

ಮಯಾಂಕ್‌ ಅಗ​ರ್‌​ವಾಲ್‌ ಸಾಹ​ಸ ದಿಂದಾಗಿ ರಾಜ್ಯ ತಂಡ 400ಕ್ಕೂ ಹೆಚ್ಚು ರನ್‌ ಕಲೆ​ ಹಾ​ಕಿ​ದರೂ, ಶೆಲ್ಡನ್‌ ಜ್ಯಾಕ್ಸನ್‌ ಹಾಗೂ ಹಂಗಾಮಿ ನಾಯಕ ಅರ್ಪಿತ್‌ ವಸಾವ್ಡಾ ಮನಮೋಹಕ ಬ್ಯಾಟಿಂಗ್‌​ನಿಂದಾಗಿ ಸೌರಾಷ್ಟ್ರ ತಂಡ ಸೆಮಿ​ಫೈ​ನಲ್‌ ಕಾದಾ​ಟ​ದಲ್ಲಿ ಮೊದಲ ಇನ್ನಿಂಗ್‌್ಸ ಮುನ್ನಡೆ ಸಾಧಿ​ಸು​ವತ್ತ ದಾಪು​ಗಾ​ಲಿ​ಟ್ಟಿ​ದೆ.

Scroll to load tweet…

ತಂಡ 3ನೇ ದಿನ​ದಂತ್ಯಕ್ಕೆ 4 ವಿಕೆ​ಟ್‌ಗೆ 364 ರನ್‌ ಗಳಿ​ಸಿದ್ದು, ಇನ್ನು ಕೇವಲ 43 ರನ್‌ ಹಿನ್ನ​ಡೆ​ಯ​ಲ್ಲಿದೆ. 5 ದಿನದ ಆಟದ ಮುಕ್ತಾ​ಯಕ್ಕೆ ಯಾವುದೇ ಫಲಿ​ತಾಂಶ ಬರ​ದಿ​ದ್ದರೆ ಮೊದಲ ಇನ್ನಿಂಗ್‌್ಸ ಮುನ್ನಡೆ ಪಡೆದ ತಂಡ ಫೈನಲ್‌ ಪ್ರವೇ​ಶಿ​ಸ​ಲಿದ್ದು, ಕರ್ನಾ​ಟಕ ಪಂದ್ಯ ತನ್ನ​ದಾ​ಗಿ​ಸಿ​ಕೊಳ್ಳಲು ಕೊನೆ 2 ದಿನ ಅಸಾ​ಧಾ​ರಣ ಪ್ರದ​ರ್ಶನ ನೀಡಬೇ​ಕಾದ ಅಗ​ತ್ಯ​ವಿ​ದೆ.

Ranji Trophy ಮಯಾಂಕ್‌ ಅಗರ್‌ವಾಲ್ ಕೆಚ್ಚೆದೆಯ ದ್ವಿಶತಕ; ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ..!

232 ರನ್‌ ಜೊತೆ​ಯಾ​ಟ: 2ನೇ ದಿನ 2 ವಿಕೆಟ್‌ಗೆ 76 ರನ್‌ ಗಳಿಸಿದ್ದ ಸೌರಾಷ್ಟ್ರ ಶುಕ್ರ​ವಾರ ರಾಜ್ಯದ ಬೌಲ​ರ್‌​ಗ​ಳನ್ನು ಇನ್ನಿಲ್ಲದಂತೆ ಕಾಡಿತು. 3ನೇ ದಿನ ಪಿಚ್‌ ಸ್ಪಿನ್ನ​ರ್‌​ಗ​ಳಿಗೆ ನೆರ​ವಾ​ಗುವ ನಿರೀ​ಕ್ಷೆ​ಯಿತ್ತಾದ್ದರೂ ಜ್ಯಾಕ್ಸನ್‌, ಅರ್ಪಿತ್‌ ಆತಿ​ಥೇಯ ತಂಡದ ದಾಳಿ​ಯನ್ನು ಸಮ​ರ್ಥ​ವಾಗಿ ಎದು​ರಿ​ಸಿ​ದರು. ಹಾರ್ವಿಕ್‌ ದೇಸಾಯಿ 33 ರನ್‌ಗೆ ವಿಕೆಟ್‌ ಒಪ್ಪಿ​ಸಿದ ಬಳಿ​ಕ ಜ್ಯಾಕ್ಸ​ನ್‌ಗೆ ಜೊತೆ​ಯಾದ ಅರ್ಪಿತ್‌ 4ನೇ ವಿಕೆ​ಟ್‌ಗೆ 378 ಎಸೆ​ತ​ಗ​ಳಲ್ಲಿ 232 ರನ್‌ ಜೊತೆ​ಯಾ​ಟ​ವಾ​ಡಿದರು.

2ನೇ ದಿನ ಸಮಥ್‌ರ್‍ ಕೈಚೆ​ಲ್ಲಿದ್ದ ಕ್ಯಾಚ್‌ನ ಲಾಭ​ವೆ​ತ್ತಿ ಕ್ರೀಸ್‌​ನಲ್ಲಿ ಭದ್ರ​ವಾಗಿ ನೆಲೆ​ಯೂ​ರಿದ ಜ್ಯಾಕ್ಸನ್‌ ಕರ್ನಾ​ಟ​ಕಕ್ಕೆ ಕಂಟಕರಾದರು. ಅವರು 245 ಎಸೆ​ತ​ಗ​ಳಲ್ಲಿ 23 ಬೌಂಡರಿ, 2 ಸಿಕ್ಸ​ರ​ನ್ನೊ​ಳ​ಗೊಂಡ 160 ರನ್‌ ಸಿಡಿಸಿ ಕೆ.ಗೌ​ತ​ಮ್‌ಗೆ ವಿಕೆಟ್‌ ಒಪ್ಪಿ​ಸಿ​ದರು. ಸದ್ಯ 112 ರನ್‌ ಗಳಿ​ಸಿ​ರುವ ಅರ್ಪಿತ್‌ ಜೊತೆಗೆ ಚಿರಾಗ್‌ ಜಾನಿ​(19) ಕ್ರೀಸ್‌​ ಕಾಯ್ದುಕೊಂಡಿದ್ದಾರೆ. ಸೌರಾಷ್ಟ್ರದ ಬ್ಯಾಟಿಂಗ್‌ ಪಡೆ ಉದ್ದವಿದ್ದು, ದೊಡ್ಡ ಮುನ್ನಡೆ ಸಂಪಾದಿಸಿ ಕರ್ನಾಟಕಕ್ಕೆ ಫೈನಲ್‌ ಬಾಗಿಲು ಬಂದ್‌ ಆಗುವಂತೆ ಮಾಡಲು ಎದುರು ನೋಡುತ್ತಿದೆ.

ಸ್ಕೋರ್‌: ಕರ್ನಾ​ಟಕ 407/10 
ಸೌರಾಷ್ಟ್ರ(3ನೇ ದಿನ​ದಂತ್ಯ​ಕ್ಕೆ) 364/4
(ಜಾಕ್ಸನ್‌ 160, ಅರ್ಪಿತ್‌ 112*, ವಿದ್ವತ್‌ 2-64)

ಮಧ್ಯ ಪ್ರದೇಶ ವಿರುದ್ಧ ಇನ್ನಿಂಗ್ಸ್‌ ಮುನ್ನಡೆ ಪಡೆದ ಬಂಗಾ​ಳ

ಇಂದೋ​ರ್‌​: ರಣಜಿ ಟ್ರೋಫಿ ಸೆಮಿ​ಫೈ​ನ​ಲ್‌​ನಲ್ಲಿ ಹಾಲಿ ಚಾಂಪಿ​ಯನ್‌ ಮಧ್ಯ​ಪ್ರ​ದೇ​ಶ ತಂಡ ಬಂಗಾಳ ವಿರುದ್ಧ ಇನ್ನಿಂಗ್‌್ಸ ಹಿನ್ನಡೆ ಅನು​ಭ​ವಿ​ಸಿದೆ. ಬಂಗಾಳದ 438 ರನ್‌ಗೆ ಉತ್ತರವಾಗಿ ಮಧ್ಯ​ಪ್ರ​ದೇಶ ಕೇವಲ 170 ರನ್‌ಗೆ ಸರ್ವ​ಪ​ತನ ಕಂಡಿತು. ಸರನ್ಶ್ ಜೈನ್‌​(65) ತಂಡದ ಪರ ಏಕೈಕ ಅರ್ಧ​ಶತಕ ಸಿಡಿ​ಸಿ​ದರೆ, ಶುಭಂ ಶರ್ಮಾ ಔಟಾ​ಗದೆ 44 ರನ್‌ ಸಿಡಿ​ಸಿ​ದರು. ಆಕಾಶ್‌ದೀಪ್‌ 42ಕ್ಕೆ 5 ವಿಕೆಟ್‌ ಕಿತ್ತರು. 

268 ರನ್‌ ಮುನ್ನಡೆ ಪಡೆ​ದರೂ ಫಾಲೋ-ಆನ್‌ ಹೇರದೆ ಬಂಗಾಳ 2ನೇ ಇನ್ನಿಂಗ್‌್ಸ ಆರಂಭಿ​ಸಿದ್ದು, 3ನೇ ದಿನ​ದಂತ್ಯಕ್ಕೆ 2 ವಿಕೆ​ಟ್‌ಗೆ 59 ರನ್‌ ಗಳಿ​ಸಿದೆ. ತಂಡ ಒಟ್ಟಾರೆ 329 ರನ್‌ ಮುನ್ನ​ಡೆ​ಯ​ಲ್ಲಿದ್ದು, 4ನೇ ದಿನ​ವಾದ ಶನಿ​ವಾರ ಮತ್ತಷ್ಟು ರನ್‌ ಸೇರಿಸಿ ಮಧ್ಯ​ಪ್ರ​ದೇ​ಶಕ್ಕೆ ದೊಡ್ಡ ಗುರಿ ನೀಡುವ ನಿರೀ​ಕ್ಷೆ​ಯ​ಲ್ಲಿದೆ.