Asianet Suvarna News Asianet Suvarna News

ಪುಲ್ವಾಮ ಹುತಾತ್ಮರ ಮಕ್ಕ​ಳಿಗೆ ಸೆಹ್ವಾಗ್‌ ಶಾಲೆಯಲ್ಲಿ ಉಚಿತ ಶಿಕ್ಷಣ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಜನ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ, ತರಭೇತಿ ನೀಡುತ್ತಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Kids of Pulwama martyrs train at Virender Sehwag school
Author
New Delhi, First Published Oct 17, 2019, 11:59 AM IST

ನವ​ದೆ​ಹ​ಲಿ[ಅ.17]: ಪುಲ್ವಾಮ ಉಗ್ರರ ದಾಳಿಯಲ್ಲಿ ಮಡಿದ ಹುತಾ​ತ್ಮ​ ಯೋಧರ ಮಕ್ಕ​ಳಿಗೆ ಉಚಿತ ಕ್ರಿಕೆಟ್‌ ತರ​ಬೇತಿ ಹಾಗೂ ಶಿಕ್ಷಣವನ್ನು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ನೀಡುತ್ತಿದ್ದಾರೆ. 

ಭಾರತದಲ್ಲಿ ಟಿ20 ಆಡಲು ಸಜ್ಜಾದ ಸಚಿನ್, ಲಾರಾ, ಸೆಹ್ವಾಗ್!

ಹರ್ಯಾಣದಲ್ಲಿರುವ ಸೆಹ್ವಾಗ್‌ ಅಂತಾರಾಷ್ಟ್ರೀಯ ಶಾಲೆಯಲ್ಲಿ ಯೋಧರ ಮಕ್ಕಳಿಗೆ ವಿದ್ಯಾಭ್ಯಾಸದ ವ್ಯವಸ್ಥೆ ಮಾಡಿದ್ದಾರೆ. ಸೆಹ್ವಾಗ್‌ ಅವರ ಈ ಕಾರ‍್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತ​ವಾ​ಗಿದೆ.

ಪುಲ್ವಾಮಾ ದಾಳಿ ಘಟನೆ ನಂತರ ಕಾಶ್ಮೀರದಲ್ಲಿ 93 ಉಗ್ರರ ಹತ್ಯೆ

ಬುಧ​ವಾರ ಸೆಹ್ವಾಗ್‌ ನಾಲ್ಕು ಚಿತ್ರ​ಗ​ಳನ್ನು ಟ್ವೀಟ್‌ ಮಾಡಿದ್ದು, ‘ಹೀರೋ​ಗಳ ಮಕ್ಕಳು! ಸೆಹ್ವಾಗ್‌ ಶಾಲೆ​ಯಲ್ಲಿ ಇವ​ರಿ​ಬ್ಬ​ರನ್ನು ಹೊಂದಿ​ರು​ವುದು, ಅವರ ಜೀವನ ರೂಪಿ​ಸಲು ಕೊಡುಗೆ ನೀಡು​ವು​ದು ನಮ್ಮ ಪುಣ್ಯ. ಬ್ಯಾಟ್ಸ್‌​ಮನ್‌ ಅರ್ಪಿತ್‌ ಸಿಂಗ್‌, ಪುಲ್ವಾಮ ಹುತಾತ್ಮ ರಾಮ್‌ ವಕೀಲ್‌ ಪುತ್ರ. ಬೌಲರ್‌ ರಾಹುಲ್‌ ಸೋರೆಂಗ್‌, ಪುಲ್ವಾಮ ಹುತಾತ್ಮ ವಿಜಯ್‌ ಸೋರೆಂಗ್‌ ಪುತ್ರ. ಈ ಸಂತ​ಸ​ವನ್ನು ಬೇರಾರ‍ಯ​ವುರಲ್ಲೂ ಸೋಲಿ​ಸ​ಲಾ​ಗ​ದು!’ ಎಂದು ಬರೆ​ದಿ​ದ್ದರು.

BCCIಗೆ ಗಂಗೂಲಿ ಬಿಗ್ ಬಾಸ್; ವಿಶೇಷ ರೀತಿಯಲ್ಲಿ ಶುಭಕೋರಿದ ಸೆಹ್ವಾಗ್!

ಇದೇ ವರ್ಷ ಫೆ.14ರಂದು ಜಮ್ಮು ಕಾಶ್ಮೀ​ರದ ಪುಲ್ವಾಮ ಜಿಲ್ಲೆಯ ಆವಂತಿ​ಪೊರ್‌ ಸಮೀಪ ಭಾರ​ತೀಯ ಸೇನಾ ವಾಹ​ನದ ಮೇಲೆ ಪಾಕಿಸ್ತಾನಿ ಭಯೋ​ತ್ಪಾ​ದ​ಕರು ಆತ್ಮಾ​ಹುತಿ ಕಾರು ಬಾಂಬ್‌ ದಾಳಿ ನಡೆ​ಸಿದ್ದ​ರು. ಈ ಭಯೋ​ತ್ಪಾ​ದಕ ದಾಳಿ​ಯಿಂದ 40 ಸಿಆ​ರ್‌​ಪಿ​ಎಫ್‌ ಯೋಧರು ಹುತಾ​ತ್ಮ​ರಾ​ಗಿ​ದ್ದರು. ಅವರ ಮಕ್ಕಳ ಶಿಕ್ಷ​ಣದ ಜವಾ​ಬ್ದಾರಿ ವಹಿ​ಸು​ವು​ದಕ್ಕಾಗಿ ಮಾಜಿ ಕ್ರಿಕೆ​ಟಿ​ಗ​ರಾದ ಸೆಹ್ವಾಗ್‌, ಗಂಭೀರ್‌ ತಾವಾ​ಗಿಯೇ ಮುಂದೆ ಬಂದಿ​ದ್ದ​ರು.

Follow Us:
Download App:
  • android
  • ios