ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಪವಾಡಸದೃಶ ರೀತಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜ.20): ಕರುಣ್ ನಾಯರ್ ನೇತೃತ್ವದ ಹಾಲಿ ಚಾಂಪಿಯನ್ ಕರ್ನಾಟಕ ತಂಡಕ್ಕೆ ಅದೃಷ್ಟ ಕೈಹಿಡಿದಿದೆ. ಮುಷ್ತಾಕ್ ಅಲಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ಗೆ ಹಾಲಿ ಚಾಂಪಿಯನ್ ತಂಡ ಪ್ರವೇಶ ಪಡೆದಿದೆ.
‘ಎ’ ಗುಂಪಿನಲ್ಲಿದ್ದ ಕರ್ನಾಟಕ 5 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿ 16 ಅಂಕಗಳನ್ನು ಸಂಪಾದಿಸಿತ್ತು. ಆದರೆ ನೆಟ್ ರನ್ರೇಟ್ ವಿಚಾರದಲ್ಲಿ ತಂಡ ಹಿಂದೆ ಬಿದ್ದಿತ್ತು. ಹೀಗಾಗಿ ಕರ್ನಾಟಕ ಉಳಿದ 3 ಪಂದ್ಯಗಳ ಫಲಿತಾಂಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಮೂರೂ ಪಂದ್ಯಗಳ ಫಲಿತಾಂಶಗಳು ರಾಜ್ಯ ತಂಡದ ಪರವಾಗಿಯೇ ಬಂದಿದ್ದು ತಂಡದ ಅದೃಷ್ಟ.
Karnataka have qualified for the quarter-finals of Syed Mushtaq Ali Trophy 2020-21. #SMAT
— Karnataka Ranji Team║ಕರ್ನಾಟಕ ರಣಜಿ ತಂಡ (@RanjiKarnataka) January 19, 2021
ಮುಷ್ತಾಕ್ ಅಲಿ ಟ್ರೋಫಿ: ಉತ್ತರ ಪ್ರದೇಶವನ್ನು ಬಗ್ಗುಬಡಿದ ಕರ್ನಾಟಕ
‘ಬಿ’ ಗುಂಪಿನ ಪಂದ್ಯದಲ್ಲಿ ಬಂಗಾಳ ವಿರುದ್ಧ ತಮಿಳುನಾಡು ಜಯಗಳಿಸಬೇಕಿತ್ತು. ತಮಿಳುನಾಡು 8 ವಿಕೆಟ್ಗಳಿಂದ ಜಯಿಸಿತು. ‘ಸಿ’ ಗುಂಪಿನಲ್ಲಿ ಸರ್ವೀಸಸ್ ವಿರುದ್ಧ ಮಧ್ಯಪ್ರದೇಶ 2 ರನ್ ಗಳಿಂದ ಜಯಿಸಿತು. ಆದರೆ ನೆಟ್ ರನ್ ರೇಟ್ನಲ್ಲಿ ಕರ್ನಾ ಟಕ(0.292)ಕ್ಕಿಂತ ಹಿಂದೆ ಬಿತ್ತು. ಮಧ್ಯ ಪ್ರದೇಶ 5 ಪಂದ್ಯಗಳ ಮುಕ್ತಾಯಕ್ಕೆ 16 ಅಂಕ ಗಳಿಸಿ 0.285 ನೆಟ್ ರನ್ರೇಟ್ ಹೊಂದಿದೆ. ಇನ್ನು ‘ಡಿ’ ಗುಂಪಿನಲ್ಲಿ ಕೇರಳ ವಿರುದ್ಧ ಹರ್ಯಾಣ ಗೆಲ್ಲಬೇಕಿತ್ತು. ಹರ್ಯಾಣ 4 ರನ್ಗಳ ರೋಚಕ ಜಯ ಸಾಧಿಸಿತು. ಗುಂಪು ಹಂತದಲ್ಲಿ ಕರ್ನಾಟಕ ನಿರೀಕ್ಷಿತ ಆಟ ಪ್ರದರ್ಶಿಸಲಿಲ್ಲ. ಕ್ವಾರ್ಟರ್ನಲ್ಲಿ ತಂಡದಿಂದ ಸುಧಾರಿತ ಪ್ರದರ್ಶನ ನಿರೀಕ್ಷಿಸಲಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 20, 2021, 12:23 PM IST