Asianet Suvarna News Asianet Suvarna News

India Tour of England: 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಚೇಂಜ್

* ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭ
* ಕೊರೋನಾದಿಂದ ಸ್ಥಗಿತಗೊಂಡಿದ್ದ ಇಂಗ್ಲೆಂಡ್-ಭಾರತ ನಡುವಿನ ಕೊನೆಯ ಟೆಸ್ಟ್
* ಜುಲೈ 01ರಿಂದ ಆರಂಭವಾಗಲಿದೆ ಮಹತ್ವದ ಟೆಸ್ಟ್ ಪಂದ್ಯ

India Tour of England almost changes in Indian Cricket Squad within 9 months kvn
Author
Bengaluru, First Published Jun 25, 2022, 2:32 PM IST

ಬೆಂಗಳೂರು(ಜೂ.25): 2021ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಟೀಂ ಇಂಡಿಯಾ(Team India), ಇಂಗ್ಲೆಂಡ್ ಟೂರ್​ಗೆ ಹೋಗಿತ್ತು (India Tour of England). ಜುಲೈನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ವರ್ಲ್ಡ್​​ಕಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್​ಗಳ ಸರಣಿ ಆಡಲು ಹೋಗಿದ್ದರು. ಮೊದಲ ನಾಲ್ಕು ಟೆಸ್ಟ್​ಗಳು ಸರಾಗವಾಗಿ ನಡೆಯಿತು. ಭಾರತ 2-1ರಿಂದ ಸರಣಿಯಲ್ಲಿ ಮುನ್ನಡೆಯನ್ನೂ ಸಾಧಿಸಿತ್ತು. ಆದರೆ 5ನೇ ಹಾಗೂ ಕೊನೆ ಟೆಸ್ಟ್ ಆರಂಭಕ್ಕೂ ಮುನ್ನವೇ ಕೊರೊನಾ ವೈರಸ್ ತನ್ನ ಅಟ್ಟಹಾಸ ಮೆರೆದಿದ್ದರಿಂದ ಆ ಟೆಸ್ಟ್ ಅನ್ನು ಮುಂದೂಡಲಾಯ್ತು. ಈಗ ಅದೇ ಟೆಸ್ಟ್​ ಅನ್ನು ಭಾರತ-ಇಂಗ್ಲೆಂಡ್ ತಂಡಗಳು ಜೂನ್ 1ರಿಂದ ಆಡಲಿವೆ.

ಕೋಚ್​-ಕ್ಯಾಪ್ಟನ್-ವೈಸ್ ಕ್ಯಾಪ್ಟನ್ ಎಲ್ಲರೂ ಚೇಂಜ್:

ಹೌದು, ಅಂದು ಇಂಗ್ಲೆಂಡ್​ ಟೂರ್​ಗೆ ಹೋಗಿದ್ದ ಟೀಂ ಇಂಡಿಯಾಗೆ ರವಿಶಾಸ್ತ್ರಿ (Ravi Shastri) ಕೋಚ್. ವಿರಾಟ್ ಕೊಹ್ಲಿ (Virat Kohli) ಕ್ಯಾಪ್ಟನ್. ಅಜಿಂಕ್ಯ ರಹಾನೆ ವೈಸ್ ಕ್ಯಾಪ್ಟನ್ ಆಗಿದ್ದರು. ಈ ತ್ರಿಮೂರ್ತಿಳ ಮುಂದಾಳತ್ವದಲ್ಲಿ ಭಾರತ ತಂಡ ಎರಡು ಟೆಸ್ಟ್ ಗೆದ್ದು, ಒಂದನ್ನ ಸೋತು, ಮತ್ತೊಂದನ್ನ ಡ್ರಾ ಮಾಡಿಕೊಂಡಿತ್ತು. ಈ ತ್ರಿವಳಿಗಳು 15 ವರ್ಷಗಳ ನಂತರ ಇಂಗ್ಲೆಂಡ್​ನಲ್ಲಿ ಸರಣಿ ಗೆಲ್ಲೋ ಉತ್ಸಾಹದಲ್ಲಿದ್ದರು. ಆದ್ರೆ ಕೊರೊನಾ ವಕ್ಕರಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಮುನ್ನಡೆ ಸಾಧಿಸಿದ್ದರೂ ಟ್ರೋಫಿ ಇಲ್ಲದೆ ಬರಿಗೈಯಲ್ಲಿ ಭಾರತಕ್ಕೆ ವಾಪಾಸ್ ಆಗಿದ್ದರು.

9 ತಿಂಗಳ ನಂತರ ಆ ಏಕೈಕ ಟೆಸ್ಟ್​ ಆಡಲು ಟೀಂ ಇಂಡಿಯಾ ಇಂಗ್ಲೆಂಡ್​ಗೆ ಹೋಗಿದೆ. ಈಗ ಭಾರತ ತಂಡ ಸಂಪೂರ್ಣ ಬದಲಾಗಿದೆ. ರಾಹುಲ್ ದ್ರಾವಿಡ್ (Rahul Dravid) ಕೋಚ್. ರೋಹಿತ್ ಶರ್ಮಾ (Rohit Sharma) ಕ್ಯಾಪ್ಟನ್. ರಿಷಭ್ ಪಂತ್ (Rishabh Pant) ವೈಸ್ ಕ್ಯಾಪ್ಟನ್ ಆಗಿದ್ದಾರೆ. ಈ ಮೂವರು ಮುಂದಾಳತ್ವದಲ್ಲಿ ತವರಿನಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿದೆ. ಆದ್ರೆ ವಿದೇಶದಲ್ಲಿ ಗೆದ್ದಿಲ್ಲ. ಈ ಏಕೈಕ ಟೆಸ್ಟ್ ಗೆದ್ದು, ಟ್ರೋಫಿ ಗೆಲ್ಲಿಸೋ ಒತ್ತಡದಲ್ಲಿ ಈ ತ್ರಿಮೂರ್ತಿಗಳಿದ್ದಾರೆ. ಒಂದು ಪಕ್ಷ ಈ ಟೆಸ್ಟ್​ ಸೋತರೆ ಸರಣಿ ಡ್ರಾ ಆಗಲಿದೆ. ಆಗ ರವಿಶಾಸ್ತ್ರಿ & ಟೀಂ ಮಾಡಿದ ಸಾಧನೆ ಮಣ್ಣು ಪಾಲಾಗಲಿದೆ.

ಲಾರ್ಡ್ಸ್ ಟೆಸ್ಟ್ ಗೆಲ್ಲಿಸಿದವರೇ ಟೀಮ್​ನಲ್ಲಿಲ್ಲ:

ಹೌದು, ಲಾರ್ಡ್ಸ್ ಟೆಸ್ಟ್ (Lords Test) ಗೆಲ್ಲಿಸಿ ಸರಣಿ ಮುನ್ನಡೆ ಪಡೆಯಲು ಕಾರಣರಾದ ಆಟಗಾರರೇ ಈ ಸಲದ ಟೂರ್​ನಲ್ಲಿ ಟೀಂ ಇಂಡಿಯಾದಲ್ಲಿಲ್ಲ. ಕೆ ಎಲ್ ರಾಹುಲ್ (KL Rahul) ಸೆಂಚುರಿ ಬಾರಿಸಿದ್ದರು. ರಹಾನೆ ಸೆಕೆಂಡ್ ಇನ್ನಿಂಗ್ಸ್​ನಲ್ಲಿ ಅರ್ಧಶತಕ ದಾಖಲಿಸಿದ್ದರು. ಇಶಾಂತ್ ಶರ್ಮಾ (Ishant Sharma) 5 ವಿಕೆಟ್ ಪಡೆದಿದ್ದರು. ಆದರೆ ಈ ತ್ರಿಮೂರ್ತಿಗಳು ಈಗ ಟೀಂ​ನಲ್ಲೇ ಇಲ್ಲ. ರಾಹುಲ್​​ ಗಾಯಾಳುವಾಗಿದ್ದರೆ, ರಹಾನೆ ಹಾಗೂ ಇಶಾಂತ್​​ ಅವರನ್ನ ಡ್ರಾಪ್ ಮಾಡಲಾಗಿದೆ. 

Warm up Match:ಲೀಸಸ್ಟರ್‌ಶೈರ್ ಎದುರು ಟೀಂ ಇಂಡಿಯಾ ಮೇಲುಗೈ

ಈ ಮೂವರ ಜೊತೆ ಮಯಾಂಕ್​ ಅಗರ್ವಾಲ್ (Mayank Agarwal)​, ಅಕ್ಷರ್ ಪಟೇಲ್ (Axar Patel), ಅಭಿಮನ್ಯು ಈಶ್ವರನ್, ವೃದ್ಧಿಮಾನ್ ಸಾಹ, ಪೃಥ್ವಿ ಶಾ, ಅವೇಶ್ ಖಾನ್, ಸೂರ್ಯಕುಮಾರ್ ಯಾದವ್, ವಾಷಿಂಗ್ಟನ್ ಸುಂದರ್ ಸಹ ಕಳೆದ ಟೂರ್​ನಲ್ಲಿ ಟೀಂ ಇಂಡಿಯಾದಲ್ಲಿದ್ದರೂ ಆಡಲು ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಈ ಸಲ ಇವರು ಟೀಮ್​ನಲ್ಲಿಲ್ಲ. ಒಟ್ನಲ್ಲಿ 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಬದಲಾಗಿದೆ. ಆಗಿನ ತಂಡ ಸರಣಿ ಮುನ್ನಡೆ ಪಡೆದುಕೊಟ್ಟಿತ್ತು. ಈಗಿನ ತಂಡ ಸರಣಿ ಗೆಲ್ಲಿಸಿಕೊಡುತ್ತಾ ಅನ್ನೋದು ಇನ್ನು 10 ದಿನಗಳಲ್ಲಿ ಗೊತ್ತಾಗಲಿದೆ.

Follow Us:
Download App:
  • android
  • ios