Border Gavaskar Trophy ನಾಗ್ಪುರ ಪಿಚ್ನಲ್ಲಿ ಆಸೀಸ್ ಅಭ್ಯಾಸಕ್ಕೆ ‘ತಣ್ಣೀರು’!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ನಾಗ್ಪುರ ಟೆಸ್ಟ್ ಎರಡೂವರೆ ದಿನಕ್ಕೆ ಮುಕ್ತಾಯ
ಪಂದ್ಯ ಮುಗಿದ ಬಳಿಕ ಸ್ಪಿನ್ ಸ್ನೇಹಿ ಪಿಚ್ನಲ್ಲಿ ಅಭ್ಯಾಸ ನಡೆಸಲು ಮುಂದಾಗಿದ್ದ ಆಸೀಸ್ಗೆ ನಿರಾಸೆ
ಶನಿವಾರ ರಾತ್ರಿಯೇ ಪಿಚ್ಗೆ ನೀರುಣಿಸಿದ ಮೈದಾನ ಸಿಬ್ಬಂದಿ ಆಸೀಸ್ಗೆ ಅಭ್ಯಾಸ ನಡೆಸಲು ನಿರಾಕರಣೆ
ನಾಗ್ಪುರ(ಫೆ.13): ಆಸ್ಪ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮಾರಕವಾದ ಇಲ್ಲಿನ ವಿಸಿಎ ಕ್ರೀಡಾಂಗಣದ ಪಿಚ್ನಲ್ಲಿ ಹೆಚ್ಚುವರಿ ಅಭ್ಯಾಸ ನಡೆಸುವ ಆಸ್ಪ್ರೇಲಿಯಾ ತಂಡದ ಯೋಜನೆಗೆ ಮೈದಾನ ಸಿಬ್ಬಂದಿ ತಣ್ಣೀರೆರೆಚಿದರು. ಮೂರನೇ ದಿನಕ್ಕೆ ಮೊದಲ ಟೆಸ್ಟ್ ಸೋತ ಆಸೀಸ್, ಭಾನುವಾರ ಅಭ್ಯಾಸ ನಡೆಸಲು ಅವಕಾಶ ನೀಡುವಂತೆ ಕ್ರೀಡಾಂಗಣದ ಪಿಚ್ ಕ್ಯುರೇಟರ್ಗೆ ಮನವಿ ಸಲ್ಲಿಸಿತ್ತು.
ಆದರೆ ಶನಿವಾರ ರಾತ್ರಿಯೇ ಪಿಚ್ಗೆ ನೀರುಣಿಸಿದ ಮೈದಾನ ಸಿಬ್ಬಂದಿ ಆಸೀಸ್ಗೆ ಅಭ್ಯಾಸ ನಡೆಸಲು ನಿರಾಕರಿಸಿದರು ಎಂದು ತಿಳಿದುಬಂದಿದೆ. 2ನೇ ಟೆಸ್ಟ್ ದೆಹಲಿಯಲ್ಲಿ ನಡೆಯಲಿದ್ದು, ಅರುಣ್ ಜೇಟ್ಲಿ ಕ್ರೀಡಾಂಗಣದ ಪಿಚ್ ಕೂಡ ಸ್ಪಿನ್ ಸ್ನೇಹಿಯಾಗಿರಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು 177 ರನ್ಗಳಿಗೆ ಸರ್ವಪತನ ಕಂಡಿತ್ತು. ಇನ್ನು ಇದಾದ ಬಳಿಕ ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕ ಹಾಗೂ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಬಾರಿಸಿದ ಕೆಚ್ಚೆದೆಯ ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್್ಸನಲ್ಲಿ 400 ರನ್ ಕಲೆಹಾಕಿ, ಬರೋಬ್ಬರಿ 223 ರನ್ ಇನ್ನಿಂಗ್್ಸ ಮುನ್ನಡೆ ಪಡೆದಿತ್ತು.
ನಾವು ಬೇರೆ ಪಿಚ್ನಲ್ಲಿ ಆಡ್ತೀವಾ ಎಂದು ಆಸ್ಟ್ರೇಲಿಯಾ ಕಾಲೆಳೆದ ರವಿಚಂದ್ರನ್ ಅಶ್ವಿನ್
ಇನ್ನು ಆತಿಥೇಯ ಭಾರತ ಇನ್ನಿಂಗ್್ಸ ಗೆಲುವಿನ ತವಕಲ್ಲಿತ್ತಾದರೂ ಆಸೀಸ್ನಿಂದ ಪ್ರಬಲ ಹೋರಾಟ ನಿರೀಕ್ಷಿಸಿತ್ತು. ಆದರೆ ಮೊದಲ ಇನ್ನಿಂಗ್್ಸನಂತೆ ಮತ್ತೊಮ್ಮೆ ಸ್ಪಿನ್ನರ್ಗಳ ಮುಂದೆ ಪೇಚಾಡಿದ ಕಮಿನ್ಸ್ ಬಳಗ ಕೇವಲ 32.3 ಓವರ್ಗಳಲ್ಲಿ ಹೋರಾಟ ಕೊನೆಗೊಳಿಸಿತು.
ಭಾರತ ತಂಡದಿಂದ ಉನಾದ್ಕತ್ ಬಿಡುಗಡೆ, ರಣಜಿ ಫೈನಲ್ನಲ್ಲಿ ಕಣಕ್ಕೆ
ಮುಂಬೈ: ಬಂಗಾಳ ವಿರುದ್ಧ ಫೆ.16ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಆಡುವುದಕ್ಕಾಗಿ ಸೌರಾಷ್ಟ್ರದ ವೇಗಿ ಜಯ್ದೇವ್ ಉನಾದ್ಕತ್ರನ್ನು ಆಸ್ಪ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ 2ನೇ ಟೆಸ್ಟ್ಗೂ ಮುನ್ನ ಭಾರತ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಸರಣಿಯ ಮೊದಲ ಟೆಸ್ಟ್ನಲ್ಲಿ ಉನಾದ್ಕತ್ ಆಡಿರಲಿಲ್ಲ.
2ನೇ ಟೆಸ್ಟ್ನಲ್ಲೂ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎನ್ನುವುದನ್ನು ಮನಗಂಡ ಬಿಸಿಸಿಐ ತಂಡದಿಂದ ಬಿಡುಗಡೆ ಮಾಡಿದೆ. ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ವೇಗಿಗಳ ರೂಪದಲ್ಲಿ ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಕಣಕ್ಕಿಳಿದಿದ್ದರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲೂ ಈ ಇಬ್ಬರು ವೇಗಿಗಳೇ ತಂಡದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೀಗಾಗಿ ಉನಾದ್ಕತ್ ಅವರನ್ನು ಭಾರತ ತಂಡದಿಂದ ಬಿಡುಗಡೆಗೊಳಿಸಲಾಗಿದೆ. ಇದೀಗ ರಣಜಿ ಟ್ರೋಫಿ ಫೈನಲ್ನಲ್ಲಿ ಉನಾದ್ಕತ್ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. ಇದೀಗ ಫೆಬ್ರವರಿ 16ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಫೈನಲ್ನಲ್ಲಿ ಸೌರಾಷ್ಟ್ರ ಹಾಗೂ ಬೆಂಗಾಲ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
ಮೂರನೇ ಟೆಸ್ಟ್ ಬೆಂಗಳೂರಿಗೆ ಶಿಫ್ಟ್?
ಧರ್ಮಶಾಲಾ: ಮೈದಾನದ ನವೀಕರಣ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ಮಾರ್ಚ್ 1ರಿಂದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಭಾರತ-ಆಸ್ಪ್ರೇಲಿಯಾ 3ನೇ ಟೆಸ್ಟ್ ಪಂದ್ಯ ಬೇರೆಡೆಗೆ ಸ್ಥಳಾಂತರಗೊಂಡಿದೆ ಎಂದು ವರದಿಯಾಗಿದೆ. ಇದನ್ನು ಬಿಸಿಸಿಐ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಬದಲಿ ತಾಣವನ್ನು ಬಿಸಿಸಿಐ ಪ್ರಕಟಿಸಲಿದೆ.
ಧರ್ಮಶಾಲಾ ಕ್ರೀಡಾಂಗಣವನ್ನು ಭಾನುವಾರ ಬಿಸಿಸಿಐ ಪಿಚ್ ಕ್ಯುರೇಟರ್ ತಪೋಸ್ ಚಟರ್ಜಿ ಪರಿಶೀಲಿಸಿದ್ದು, ಶೀಘ್ರದಲ್ಲೇ ಮಂಡಳಿಗೆ ವರದಿ ಸಲ್ಲಿಸಲಿದ್ದಾರೆ. ಆ ಬಳಿಕ ಬಿಸಿಸಿಐ ಅಧಿಕೃತ ನಿರ್ಧಾರ ಕೈಗೊಳ್ಳಲಿದೆ. ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ವಿಶಾಖಪಟ್ಟಣಂ ಆಂಧ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮೊಹಾಲಿ, ರಾಜ್ಕೋಟ್, ಇಂದೋರ್ ಸಹ ಮೂರನೇ ಟೆಸ್ಟ್ ಆತಿಥ್ಯದ ರೇಸ್ನಲ್ಲಿವೆ.