ಒಂದೆಡೆ ಕೊರೋನಾ ವೈರಸ್ ಹೊಡೆತದಿಂದ  ಬಿಸಿಸಿಐಗೆ ಅಪಾರ ನಷ್ಟವಾಗಿದೆ. ಭಾರತ-ಸೌತ್ ಆಫ್ರಿಕಾ ಸರಣಿ ರದ್ದು, ಐಪಿಎಲ್ ಟೂರ್ನಿ ಆಯೋಜನೆ ಸಂಕಷ್ಟದಿಂದ ಬಿಸಿಸಿಐ ಖಜಾನೆಗೆ ಸಾವಿರಾರುಕೋಟಿ ನಷ್ಟವಾಗಿದೆ. ಇದೀಗ ಬಿಸಿಸಿಐ ವೆಚ್ಚ ಕಡಿಮೆ ಮಾಡಲು ಬಿಸಿಸಿಐ ಮುಂದಾಗಿದೆ.  

ನವದೆಹಲಿ(ಮಾ.19): ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಈಗ ಐಷಾರಾಮಿ ವಿಮಾನ ಪ್ರಯಾಣಕ್ಕೂ ಕತ್ತರಿ ಹಾಕಿದ್ದು, ಟೀಂ ಇಂಡಿಯಾ ಆಯ್ಕೆ ಸಮಿತಿಯ ಮುಖ್ಯಸ್ಥರು ಮಾತ್ರ ಬ್ಯುಸನೆಸ್‌ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಈ ಬಾರಿ ಐಪಿಎಲ್ ಟೂರ್ನಿ ನಡೆಯೋದು ಡೌಟ್..!

ಉಳಿದಂತೆ ಸಮಿತಿಯ ಎಲ್ಲಾ ಸದಸ್ಯರು ಎಕಾನಮಿ ಕ್ಲಾಸ್‌ನಲ್ಲೇ ಪ್ರಯಾಣ ಬೆಳೆಸಬೇಕಿದೆ. ಈ ನಿಯಮ ಕಿರಿಯರ ಆಯ್ಕೆ ಸಮಿತಿಯ ಸದಸ್ಯರಿಗೂ ಅನ್ವಯವಾಗಲಿದೆ. ಬಿಸಿಸಿಐ ಈ ನಿರ್ಧಾರದಿಂದ ಮೊನ್ನೆ ಮೊನ್ನೆಯಷ್ಟೇ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಕನ್ನಡಿಗ ಸುನಿಲ್‌ ಜೋಶಿ ಅವರು ಈ ಅವಕಾಶ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಈ ಐವರು ಟೀಂ ಇಂಡಿಯಾ ಪ್ರತಿನಿಧಿಸಿದ್ದರು ಎನ್ನೋದು ನೆನಪಿದೆಯಾ..?

ಪ್ರಯಾಣದ ಅವಧಿ 7 ಗಂಟೆಗಿಂತ ಹೆಚ್ಚಿದ್ದರೆ ಮಾತ್ರ ಆಯ್ಕೆ ಸಮಿತಿಯ ಇತರೆ ಸದಸ್ಯರಿಗೂ ಬ್ಯುಸಿನೆಸ್‌ ಕ್ಲಾಸ್‌ ಸೌಕರ್ಯ ಸಿಗಲಿದೆ. ಹೊಸ ನಿಯಮದಿಂದ ಬಿಸಿಸಿಐಗೆ ವಾರ್ಷಿಕ ಲಕ್ಷಾಂತರ ರುಪಾಯಿ ಉಳಿತಾಯವಾಗಲಿದೆ ಎನ್ನಲಾಗಿದೆ.