Asianet Suvarna News Asianet Suvarna News

ಲಾಕ್‌ಡೌನ್‌ ಎಫೆಕ್ಟ್‌: 'ಊಟ, ವಸತಿ ಸಮಸ್ಯೆಗೆ ಸಿಲುಕಿದರೆ ಕೂಡಲೇ ಕರೆ ಮಾಡಿ'

ಕೊರೋನಾ ಸಂಕಷ್ಟ ನಿವಾರಣೆಗೆ ಮಹಾನಗರ ಪಾಲಿಕೆಯಿಂದ ಪರಿಹಾರ| ಪ್ರತಿ 7 ವಾರ್ಡುಗಳಿಗೆ ಓರ್ವ ಅಧಿಕಾರಿ ಒಳಗೊಂಡ ತಂಡ ನಿಯೋಜನೆ| ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮ|ವಲಸೆ ಕಾರ್ಮಿಕರು, ನಿರಾಶ್ರಿತರಿಗಾಗಿ ನಗರದ ಆಯ್ದ 20 ಕಡೆಗಳಲ್ಲಿ ಸ್ಥಳ ಗುರುತು|

Shivamogga City Corporation Commissioner Chidanand Vatare Talks Over Food Fecility during Bharath LockDown
Author
Bengaluru, First Published Apr 1, 2020, 2:44 PM IST

ಶಿವಮೊಗ್ಗ(ಏ.01): ಮಹಾನಗರ ಪಾಲಿಕೆಯು ಶಿವಮೊಗ್ಗ ವ್ಯಾಪ್ತಿಯಲ್ಲಿ ಕೊರೋನಾ ವೈರಸ್‌ನ ನಿಯಂತ್ರಣ ಹಾಗೂ ನಿರಾಶ್ರಿತ ಕಾರ್ಮಿಕರ ಊಟ, ವಸತಿ, ಆರೋಗ್ಯ ಮುಂತಾದ ತುರ್ತು ಸಮಸ್ಯೆಗಳ ಪರಿಹಾರ ಕ್ರಮವಾಗಿ ಪ್ರತಿ 7 ವಾರ್ಡುಗಳಿಗೆ ಓರ್ವರಂತೆ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ನಿಯೋಜಿಸಲಾಗಿದೆ. ಸಂಕಷ್ಟಕ್ಕೊಳಗಾದವರು ಈ ಕೆಳಕಂಡವರನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳುವಂತೆ ಪಾಲಿಕೆ ಆಯುಕ್ತ ಚಿದಾನಂದ ಎಸ್‌. ವಟಾರೆ ತಿಳಿಸಿದ್ದಾರೆ.

1 ರಿಂದ ಏಳನೇ ವಾರ್ಡ್‌ವರೆಗಿನ ಬಾಧಿತರು ಚಾಮರಾಜ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಮೊ.9448127454, ವಾರ್ಡ್‌ 8ರಿಂದ 14ನೇ ವಾರ್ಡಿನ ಬಾಧಿತರು ಶ್ರೀಧರ್‌ ಜೆ., ಕಾರ್ಯಪಾಲಕ ಅಭಿಯಂತರರು, ಮೊ.8762288680, ವಾರ್ಡ್‌ ನಂಬರ್‌ 15ರಿಂದ 21ರವರೆಗಿನ ಬಾಧಿತರು ಅನಂತಪದ್ಮನಾಭ ಎಂ.ಆರ್‌., ಕಾರ್ಯಪಾಲಕ ಅಭಿಯಂತರರು, ಮೊ.7022116800, ವಾರ್ಡ್‌ 22ರಿಂದ 28ರವರೆಗಿನ ಬಾಧಿತರು ಭರಮರೆಡ್ಡಿ ಬಿ.ಎಲ್‌., ಕಾರ್ಯಪಾಲಕ ಅಭಿಯಂತರರು, ಮೊ.9448425301 ಹಾಗೂ ವಾರ್ಡ್‌ ನಂಬರ್‌ 29ರಿಂದ 35ರವರೆಗಿನ ಬಾಧಿತರು ಬಾಲಾಜಿ ರಾವ್‌ ಎಚ್‌.ಎಂ., ಉಪ ಆಯುಕ್ತರು, ಕಂದಾಯ ವಿಭಾಗ, ಮೊ. 9901716488 ಇವರನ್ನು ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ತಿಳಿಸಿದ್ದಾರೆ.

ದೆಹಲಿ ಜಮಾತ್‌ಗೆ ಉಗ್ರರೊಂದಿಗೆ ನಂಟಿದೆ: ಪ್ರಮೋದ್‌ ಮುತಾಲಿಕ್‌

ಸಂಕಷ್ಟಕ್ಕೊಳಗಾದ, ವಲಸೆ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ನಗರದ ಆಯ್ದ ಕಡೆಗಳಲ್ಲಿ 20 ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಸ್ತುತ 4 ಸ್ಥಳಗಳಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸಿ, ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ನಗರದ ಹೊಳೆ ಬಸ್‌ಸ್ಟಾಪ್‌ನ ಸಮೀಪದಲ್ಲಿರುವ ಬೆಕ್ಕಿನ ಕಲ್ಮಠದಲ್ಲಿ ಹೈದರಾಬಾದ್‌ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೀದರ್‌ನ 30 ಕಾರ್ಮಿಕರಿಗೆ, ಖಾಸಗಿ ಬಸ್‌ನಿಲ್ದಾಣದ ಲಾಡ್ಜ್‌ನಲ್ಲಿ ಭಿಕ್ಷಕರು ಹಾಗೂ ವಸತಿ ಹೀನ 40 ಜನರಿಗೆ, ನಗರದ ಓ.ಟಿ. ರಸ್ತೆಯ ದುರ್ಗಾ- ಅಮೃತ ಲಾಡ್ಜ್‌ನಲ್ಲಿ ಉತ್ತರ ಪ್ರದೇಶದಿಂದ ವಲಸೆ ಬಂದಿದ್ದ 17 ಕಾರ್ಮಿಕರಿಗೆ ಹಾಗೂ ಪಾಲಿಕೆಯಿಂದ ನಗರದಲ್ಲಿ ವಸತಿರಹಿತವಾಗಿ ಇರುವವರಿಗೆ ಮಿಳ್ಳಘಟ್ಟದ ಗುರುನಾಥ ಸಾಮಿಲ್‌ನ ಸಮೀಪದಲ್ಲಿ 27 ಜನರಿಗೆ ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ನಗರ ವ್ಯಾಪ್ತಿಯ ಹಲವು ಪ್ರದೇಶಗಳ ಹೊರವಲಯದಲ್ಲಿ ಬೀಡು ಬಿಟ್ಟಿರುವ ಕುಶಲಕರ್ಮಿಗಳು, ಕಾರ್ಮಿಕರು ಹಾಗೂ ಊರೊಳಗೆ ವಸತಿ ಸೌಲಭ್ಯ ಹೊಂದಿದ್ದು, ಉದ್ಯೋಗಾವಕಾಶ ದೊರೆಯದೇ, ಆಹಾರಕ್ಕಾಗಿ ಪರಿತಪಿಸುತ್ತಿದ್ದ 563 ಜನ ಬಾಧಿತರಿಗೆ ಊಟೋಪಾಹಾರ ಒದಗಿಸಲಾಗುತ್ತಿತ್ತು. ಪ್ರಸ್ತುತ ಸ್ಥಳೀಯ ಬಸವ ಕೇಂದ್ರದ ಸಹಕಾರದೊಂದಿಗೆ ಮಲವಗೊಪ್ಪದ ಬೈಪಾಸ್‌ನಲ್ಲಿರುವ ಹಕ್ಕಿಪಿಕ್ಕಿ ಜನಾಂಗದ 57 ಕುಟುಂಬಗಳ 180 ಜನರಿಗೆ ಅಗತ್ಯ ದಿನಸಿ ಆಹಾರಗಳ ಕಿಟ್‌ನ್ನು ಪೂರೈಸಲಾಗಿದೆ.

ಇಂತಹ ಸಂದಿಗ್ಧ ಸಂದರ್ಭದಲ್ಲಿ ಪಾಲಿಕೆಯ ಈ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಕೋರಿರುವ ಅವರು, ನಗರದ ದಾನಿಗಳು ಸಿದ್ಧಪಡಿಸಿದ ಆಹಾರದ ಬದಲಾಗಿ ಅಕ್ಕಿ, ಬೇಳೆ ಮತ್ತಿತರ ದಿನಸಿಗಳನ್ನು ಮಹಾನಗರ ಪಾಲಿಕೆಯಲ್ಲಿ ಆರಂಭಿಸಲಾಗಿರುವ ಕೌಂಟರಿನಲ್ಲಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.
 

Follow Us:
Download App:
  • android
  • ios