ಕೊರೋನಾ ಬರುತ್ತೇ ಎಂದು ಭಯಗೊಂಡ ಜಮೀನಿನಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ| ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ಘಟನೆ| ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ| ಪರೀಕ್ಷಿಸಿದ ವೈದ್ಯರು ಕೊರೋನಾ ವೈರಸ್ ಇಲ್ಲ ಅಂತ ಹೇಳಿದ್ದರು|
ಗದಗ(ಏ.01): ಮಹಾಮಾರಿ ಕೊರೋನಾ ವೈರಸ್ ಬರುತ್ತೆ ಅಂತ ಭಯಗೊಂಡ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ಇಂದು(ಬುಧವಾರ) ನಡೆದಿದೆ. ಗುರುಸಂಗಪ್ಪ ಜಂಗಣ್ಣವರ(40) ಮೃತ ದುರ್ದೈವಿಯಾಗಿದ್ದಾನೆ.
Add Asianetnews Kannada as a Preferred Source

ಮೃತ ಗುರುಸಂಗಪ್ಪ ಜಂಗಣ್ಣವರ ಮಂಗಳೂರಲ್ಲಿ ಕೂಲಿ ಕೆಲಸಕ್ಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಮೂರು ದಿನಗಳ ಹಿಂದಷ್ಟೇ ಮಂಗಳೂರಿನಿಂದ ಕಲ್ಲಿಗನೂರು ಗ್ರಾಮಕ್ಕೆ ವಾಪಾಸ್ ಆಗಿದ್ದ. ಅನಾರೋಗ್ಯ ಹಿನ್ನೆಲೆಯಲ್ಲಿ ಶಾಂತಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು.
ಭಾರತದಲ್ಲಿ ಕೊರೋನಾ ಅಟ್ಟಹಾಸ: ಸೂಕ್ಷ್ಮ ಕ್ಷೇತ್ರಗಳಲ್ಲಿ ಕರ್ನಾಟಕದ 2 ಜಿಲ್ಲೆಗಳು..!
ಮೃತ ಗುರುಸಂಗಪ್ಪನನ್ನ ಪರೀಕ್ಷಿಸಿದ ವೈದ್ಯರು ಕೊರೋನಾ ವೈರಸ್ ಇಲ್ಲ ಅಂತ ಹೇಳಿದ್ದರು. ಆದರೆ ಕೊರೋನಾ ವೈರಸ್ ಬರುತ್ತದೆ ಎಂದು ಭಯಗೊಂಡು ಗ್ರಾಮದ ಹೊರವಲಯದ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
