Asianet Suvarna News Asianet Suvarna News

10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ ದಾದಿಗೆ ಬಹಿಷ್ಕಾರ

10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ್ದ ದಾರಿಯೊಬ್ಬರು ಕ್ವಾರಂಟೈನ್‌ನಲ್ಲಿರುವ ಸುದ್ದಿ ಕೇಳಿದ ಗ್ರಾಮಸ್ಥರು ಇಡೀ ಕುಟುಂಬ ಬಹಿಷ್ಕರಿಸಿರುವ ವಿದ್ಯಮಾನ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.

 

People dont allow nurse to enter village after she is quarantined
Author
Bangalore, First Published Apr 3, 2020, 10:56 AM IST

ಮಂಗಳೂರು(ಏ.03): 10 ತಿಂಗಳ ಮಗುವಿಗೆ ಚಿಕಿತ್ಸೆ ನೀಡಿದ್ದ ದಾರಿಯೊಬ್ಬರು ಕ್ವಾರಂಟೈನ್‌ನಲ್ಲಿರುವ ಸುದ್ದಿ ಕೇಳಿದ ಗ್ರಾಮಸ್ಥರು ಇಡೀ ಕುಟುಂಬ ಬಹಿಷ್ಕರಿಸಿರುವ ವಿದ್ಯಮಾನ ಮಂಗಳೂರು ಹೊರವಲಯದ ಕೊಣಾಜೆಯಲ್ಲಿ ನಡೆದಿದೆ.

ಕೊಣಾಜೆ ನಿವಾಸಿ ಸರಸ್ವತಿ, ದೇರಳಕಟ್ಟೆಖಾಸಗಿ ಆಸ್ಪತ್ರೆಯಲ್ಲಿ ದಾದಿಯಾಗಿದ್ದು, ವಾರದ ಹಿಂದೆ ಆಸ್ಪತ್ರೆಯಲ್ಲಿ ಜ್ವರಪೀಡಿತ ಮಗುವೊಂದನ್ನು ನಿಗಾಕ್ಕೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಕರ್ತವ್ಯ ನಿರ್ವಹಿಸಿದ ವೈದ್ಯರು ಹಾಗೂ ದಾದಿ ಎಲ್ಲರನ್ನೂ ನಿಗಾದಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದರು. ಅದರಂತೆ ಸರಸ್ವತಿ ಕೂಡ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿದ್ದರು.

COVID19: ಲಾಕ್‌ಡೌನ್‌ ಮೀರಿ ಹೊರ ಬಂದ್ರೆ 2 ವರ್ಷ ಜೈಲು

ಈ ವಿಚಾರ ತಿಳಿದ ಗ್ರಾಮಸ್ಥರು ಸರಸ್ವತಿ, ಪತಿ, ಮಕ್ಕಳು ಯಾರೂ ಮನೆಯ ಹೊರಗೆ ಕಾಲಿಡುವಂತಿಲ್ಲ ಎಂದು ಬಹಿಷ್ಕರಿಸಿದ್ದಾರೆ. ಅಲ್ಲದೇ ಸರಸ್ವತಿಯ ಪತಿಯನ್ನೂ ಸೆಕ್ಯುರಿಟಿ ಕೆಲಸದಿಂದ ಸದ್ಯಕ್ಕೆ ಮನೆಗೆ ಕಳುಹಿಸಿದ್ದು, ತುತ್ತಿನ ಕೂಳಿಗೆ ಈ ಕುಟುಂಬ ಪರದಾಡುವಂತಾಗಿದೆ. ಗ್ರಾಮಸ್ಥರು ಇಡೀ ಕುಟುಂಬದ ಬಗ್ಗೆ ಹೆದರಿಕೊಂಡಿದ್ದು, ಸಾಮಗ್ರಿಗೆ ಹೊರಗೆ ತೆರಳಿದರೆ, ತಕ್ಷಣ ಫೋನಾಯಿಸಿ ಜನಸೇರಿಸಿ ಮನೆಯಲ್ಲೇ ಇರುವಂತೆ ಬೆದರಿಸುತ್ತಾರೆ. ಗ್ರಾಮಸ್ಥರ ಈ ನಡೆಯಿಂದ ಕುಟುಂಬಕ್ಕೆ ತೀವ್ರ ಬೇಸರ ಉಂಟಾಗಿದೆ.

ನೆರವು:

ವಿಷಯ ಬಹಿರಂಗಗೊಂಡ ಬಳಿಕ ಗುರು​ವಾರ ಸಂಜೆ ಸ್ಥಳೀಯ ಬಿಜೆಪಿ ಮುಖಂಡ ಸಂತೋಷ್‌ ಕುಮಾರ್‌ ರೈ ಹಾಗೂ ಬಿಜೆಪಿ ಕಾರ್ಯ​ಕ​ರ್ತರು ದಾದಿಯ ಮನೆಗೆ ತೆರಳಿ ಕುಟುಂಬಕ್ಕೆ ದಿನಸಿ ನೀಡಿ ನೆರವಾದರು.

ಸಾಮಾಜಿಕ ಅಂತರದ್ದೇ ಸಮಸ್ಯೆ: ಜನ ಜಂಗುಳಿಯಿಂದಾಗಿ ಡೇಂಜರ್ ಝೋನ್‌ನಲ್ಲಿ ಮಾರ್ಕೆಟ್‌!

ಗ್ರಾಮಸ್ಥರು ಬಹಿಷ್ಕರಿಸಿರುವ ವಿಚಾರ ಗಮನಕ್ಕೆ ಬಂದಿದೆ. ದಾದಿ ನಿಗಾದಲ್ಲಿ ಇರುವ ಕಾರಣ ಕುಟುಂಬವನ್ನು ಭೀತಿಯಲ್ಲಿ ನೋಡಿರುವ ಸಾಧ್ಯತೆ ಇದೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಕುಟುಂಬಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ಮಂಗಳೂರು ಶಾಸಕ ಯು. ಟಿ. ಖಾದರ್ ತಿಳಿಸಿದ್ದಾರೆ.

Follow Us:
Download App:
  • android
  • ios