ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ಮಡಿಕೇರಿ(ಏ.03): ಲಾಕ್‌ಡೌನ್‌ ಬಿಸಿ ಹಸುಳೆ ಶವ ಸಂಸ್ಕಾರಕ್ಕೂ ತಟ್ಟಿದೆ. ಆಕಸ್ಮಿಕವಾಗಿ ಸಾವನ್ನಪ್ಪಿದ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ಅಸಹಾಯಕರಾಗಿದ್ದ ರಾಯಚೂರು ಮೂಲದ ದಂಪತಿಗೆ ಮಡಿಕೇರಿಯ ಯೂತ್‌ ಕಮಿಟಿ ನೆರವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾಲ್ಕು ದಿನ​ಗಳ ಹಿಂದೆ ಈ ಘಟನೆ ನಡೆ​ದಿದ್ದು, ರಾಯಚೂರು ಜಿಲ್ಲೆ ಜಾಕಿನ್ಗೊಡು ಗ್ರಾಮದ ದಂಪತಿ ದೇವರಾಜ್‌ ಹಾಗೂ ಸರೋಜಾ ಕೂಲಿ ಕೆಲಸಕ್ಕೆಂದು ಕೊಡಗು ಜಿಲ್ಲೆಯ ಕೂಡಿಗೆಗೆ ಬಂದಿದ್ದರು.

ಭಾರತ ಲಾಕ್‌ಡೌನ್: ಮನೆಗಳಿಗೆ ಔಷಧಿಗಳನ್ನು ವಿತರಿಸಲು ಮುಂದಾದ ಬಿ ವೈ ವಿಜಯೇಂದ್ರ

ಗರ್ಭಿಣಿಯಾಗಿದ್ದ ಸರೋಜಾ ಹೆರಿಗೆ ವೇಳೆ ಮಗು ಆಕಸ್ಮಿಕವಾಗಿ ಸಾವನ್ನಪ್ಪಿತ್ತು. ಆದರೆ ಲಾಕ್‌ಡೌನ್‌ ಹಿನ್ನೆಲೆ ಮಗುವಿನ ಶವವನ್ನು ಸ್ವಗ್ರಾಮಕ್ಕೆ ಕೊಂಡೊಯ್ಯಲಾಗದೆ ದಂಪತಿ ಅಸಹಾಯಕ ಸ್ಥಿತಿಯಲ್ಲಿದ್ದರು. ಈ ವೇಳೆ ಮಡಿಕೇರಿ ಯೂತ್‌ ಕಮಿಟಿ ಸಹಾಯಕ್ಕೆ ನಿಂತು ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಯಿತು. ಬಳಿಕ ವಾಹನದ ಮೂಲಕ ದಂಪತಿಯನ್ನು ಬೆಂಗಳೂರಿಗೆ ಕಳುಹಿಸಿ ಯುತ್‌ ಕಮಿಟಿ ಸದಸ್ಯರು ಮಾನೀಯತೆ ಮೆರೆದರು.