ಕೊರೋನಾ ವಿಪತ್ತು ಪರಿಹಾರ ನಿಧಿಗೆ 1 ಕೋಟಿ ರು. ನೀಡಿದ ಸಂಸದ ಸಂಗಣ್ಣ ಕರಡಿ|ಕೊರೋನಾ ವಿಪತ್ತು ನಿಗ್ರಹದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಆದ್ಯ ಕರ್ತವ್ಯ| ಪ್ರಧಾನಿಗಳ ಕೋರಿಕೆಯಂತೆ ಸಂಸದರ ನಿಧಿಯನ್ನು ಕೊರೋನಾ ನಿಗ್ರಹಕ್ಕೆ ಬಳಕೆ ಮಾಡಿಕೊಳ್ಳಲು 1 ಕೋಟಿ ರು.ನೀಡಲಾಗಿದೆ|

ಕೊಪ್ಪಳ(ಏ.01): ಕೊರೋನಾ ವಿಪತ್ತು ಪರಿಹಾರ ನಿಧಿಗೆ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದರ ನಿಧಿಯಿಂದ 1 ಕೋಟಿ ರುಪಾಯಿಯನ್ನು ನೀಡಿದ್ದಾರೆ. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರಿಗೆ ಪತ್ರ ನೀಡುವ ಮೂಲಕ ಸಂಸದರು ತಮ್ಮ ಸಂಸದರ ನಿಧಿಯನ್ನು ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ವಿಪತ್ತು ನಿಗ್ರಹದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವುದು ಆದ್ಯ ಕರ್ತವ್ಯವಾಗಿದೆ. ಪ್ರಧಾನಿಗಳ ಕೋರಿಕೆಯಂತೆ ಸಂಸದರ ನಿಧಿಯನ್ನು ಕೊರೋನಾ ನಿಗ್ರಹಕ್ಕೆ ಬಳಕೆ ಮಾಡಿಕೊಳ್ಳಲು 1 ಕೋಟಿ ರುಪಾಯಿ ನೀಡಲಾಗಿದೆ ಎಂದರು.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

ಪ್ರತಿಯೊಬ್ಬರೂ ಜಾಗೃತರಾಗಬೇಕಾಗಿದೆ. ಮನೆಯಲ್ಲಿಯೇ ಇರುವ ಮೂಲ ಕೊರೋನಾ ಹೊಡೆದೊಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ.