ಅಂಧನನ್ನ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ ಮಾಧ್ಯಮದವರು| ಹಾವೇರಿಯಲ್ಲಿ ನಡೆದ ಘಟನೆ| ವಾಹನವೊಂದರಲ್ಲಿ ಅಂಧನನ್ನು ಕಳುಹಿಸುವ ವ್ಯವಸ್ಥೆ|
ಹಾವೇರಿ(ಮಾ.29): ಮೂಲತಃ ಬಳ್ಳಾರಿಯವನಾಲಾಕ್ಡೌನ್ ಸಂದರ್ಭದಲ್ಲಿ ದಾರಿ ತಪ್ಪಿಸಿಕೊಂಡು ನಗರದಲ್ಲಿ ಅಲೆದಾಡುತ್ತಿದ್ದ ಅಂಧನೋರ್ವನನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ಶನಿವಾರ ನಗರದಲ್ಲಿ ಸಂಭವಿಸಿದೆ.
Add Asianetnews Kannada as a Preferred Source

ಮಂಜುನಾಥ ಎಂಬವರು ಸಂಗೀತ ಕಲಾವಿದನಾಗಿದ್ದು, ಹುಬ್ಬಳ್ಳಿಗೆ ಬಂದಿದ್ದರು. ಅಲ್ಲಿ ತಮ್ಮ ಸಂಗಡಿಗರಿಂದ ತಪ್ಪಿಸಿಕೊಂಡು ಹೇಗೋ ಹಾವೇರಿಗೆ ಬಂದಿದ್ದರು.
ಮಂಗ್ಳೂರು ಬಳಿಕ ಮತ್ತೊಂದು ಜಿಲ್ಲೆಯತ್ತ ಸುಧಾಮ್ಮನ ಸಹಾಯ ಹಸ್ತ
ಶನಿವಾರ ಸಿದ್ದಪ್ಪ ವೃತ್ತದಲ್ಲಿ ಅನಾಥನಂತೆ ಅಲೆಯುತ್ತಿದ್ದಾಗ ಅವನನ್ನು ಮಾಧ್ಯಮದವರು ವಿಚಾರಿಸಿ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೊನೆಗೆ ಇಬ್ಬರೂ ಸೇರಿ ಬಳ್ಳಾರಿ ಮಾರ್ಗವಾಗಿ ಹೊರಟಿದ್ದ ವಾಹನವೊಂದರಲ್ಲಿ ಅಂಧನನ್ನು ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.
