ಕೊರೋನಾ ವೈರಸ್‌ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ| ಪೂರ್ವ ತಯಾರಿ ಇಲ್ಲದೇ 21 ದಿನಗಳ ಲಾಕ್‌ಡೌನ್‌ ಘೋಷಣೆ| ಅಧಿವೇಶನ ಮುಂದೂಡಲು ಹೇಳಿದರೂ ಮುಂದೂಡಲಿಲ್ಲ. ಜನತಾ ಕರ್ಫ್ಯೂ ಬಳಿಕ ಚಪ್ಪಾಳೆ ತಟ್ಟಿಸಿದ್ದು ಯಾರು: ಸಿದ್ದರಾಮಯ್ಯ| 

ಬೆಂಗಳೂರು(ಏ.03): ಕೊರೋನಾ ವೈರಸ್‌ ವಿಚಾರದಲ್ಲಿ ರಾಜಕೀಯ ಲಾಭ ಹುಡುಕಿದವರು ಬಿಜೆಪಿಯವರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ. 

Scroll to load tweet…

ಈ ಬಗ್ಗೆ ಗುರುವಾರ ರಾತ್ರಿ ಸರಣಿ ಟ್ವೀಟ್‌ ಮಾಡಿರುವ ಅವರು, ಈ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ಮಾಡಿಲ್ಲ. ಪೂರ್ವ ತಯಾರಿ ಇಲ್ಲದೇ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಯಿತು. ಅಧಿವೇಶನ ಮುಂದೂಡಲು ಹೇಳಿದರೂ ಮುಂದೂಡಲಿಲ್ಲ. ಜನತಾ ಕರ್ಫ್ಯೂ ಬಳಿಕ ಚಪ್ಪಾಳೆ ತಟ್ಟಿಸಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

Scroll to load tweet…

ಕೊರೋನಾ ಆತಂಕ: ಸಂಸದರ ನಿಧಿ ಪಿಎಂ ಫಂಡ್‌ಗೆ ಸಿದ್ದರಾಮಯ್ಯ ಆಕ್ರೋಶ

ವಿಮಾನ ನಿಲ್ದಾಣಗಳಲ್ಲಿ ಹೊರದೇಶದಿಂದ ಬರುವವರ ನಿಗಾ ಇಡಲಿಲ್ಲ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಚನಾತ್ಮಕ ಟೀಕೆ ಮಾಡಿದ್ದಾರೆ. ಅದನ್ನು ಸಹಿಸಿಕೊಳ್ಳುವ ಶಕ್ತಿ ಬಿಜೆಪಿಗೆ ಇಲ್ಲ ಎಂದು ಅವರು ಹರಿಹಾಯ್ದಿದ್ದಾರೆ.


Scroll to load tweet…