ಅಂಗಡಿ ಮತ್ತು ಸಂಸ್ಕರಣಾ ಘಟಕದಲ್ಲಿ ಸಂಗ್ರಹಿಸಿಡಲಾದ ದವಸ-ಧಾನ್ಯ ಹಾಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ವ್ಯಾಪಾರಕ್ಕೆ ವಿನಾಯಿತಿ| ಮಾರುಕಟ್ಟೆ ಪ್ರಾಂಗಣದಲ್ಲಿ ಬರುವ ಅಂಗಡಿಗಳ ಬಾಗಿಲುಗಳನ್ನು ತೆರೆಯಲು ಹಾಗೂ ಸಂಸ್ಕರಣಾ ಘಟಕಗಳಲ್ಲಿ ದವಸ-ಧಾನ್ಯಗಳನ್ನು ಸಂಸ್ಕರಿಸಿ ರವಾನೆ ಮಾಡಲು ಅನುಮತಿ|
ಗದಗ(ಏ.01): ಭಾರತ್ ಲಾಕ್ಡೌನ್ ಆದೇಶ ಮಾಡಿರುವ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯ ಎಲ್ಲ ವ್ಯಾಪಾರ ವಹಿವಾಟನ್ನು ಬಂದ್ ಮಾಡಲಾಗಿತ್ತು.
Add Asianetnews Kannada as a Preferred Source

ಆದರೆ, ಮಾ. 30ರಂದು ದಲಾಲರು, ಖರೀದಿದಾರರ ವರ್ತಕರ ಸಂಘದವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮನವಿ ಸಲ್ಲಿಸಿದ್ದರ ಹಿನ್ನೆಲೆಯಲ್ಲಿ ಅಂಗಡಿ ಮತ್ತು ಸಂಸ್ಕರಣಾ ಘಟಕದಲ್ಲಿ ಸಂಗ್ರಹಿಸಿಡಲಾದ ದವಸ-ಧಾನ್ಯ ಹಾಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಲಾಕ್ಡೌನ್ನಿಂದ ಕೃಷಿ ಉತ್ಪನ್ನಗಳ ವ್ಯಾಪಾರಕ್ಕೆ ವಿನಾಯ್ತಿ ನೀಡಲಾಗಿದೆ.
ಲಾಕ್ಡೌನ್: ತುಂಬು ಗರ್ಭಿಣಿಯಾದರೂ ಲಾಠಿ ಹಿಡಿದು ಕರ್ತವ್ಯ ಪ್ರಜ್ಞೆ ಮೆರೆದ ಪಿಎಸ್ಐ!
ಮಾರುಕಟ್ಟೆ ಪ್ರಾಂಗಣದಲ್ಲಿ ಬರುವ ಅಂಗಡಿಗಳ ಬಾಗಿಲುಗಳನ್ನು ತೆರೆಯಲು ಹಾಗೂ ಸಂಸ್ಕರಣಾ ಘಟಕಗಳಲ್ಲಿ ದವಸ-ಧಾನ್ಯಗಳನ್ನು ಸಂಸ್ಕರಿಸಿ ರವಾನೆ ಮಾಡಲು ಅನುಮತಿಸಲಾಗಿದೆ. ದಲಾಲರ, ಖರೀದಿದಾರರ ಅಂಗಡಿಗಳನ್ನು ಸೋಮವಾರ, ಬುಧವಾರ, ಗುರುವಾರ ಮತ್ತು ಶನಿವಾರದ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.
