Asianet Suvarna News Asianet Suvarna News

5 ನೇ ದಿನವೂ ಲಾಠಿ ರುಚಿ; ಮನೆಯೊಳಗಿರಿ, ಹೊರಗೆ ಬರಬೇಡಿ

ಗೋಕಾಕ್‌ನಲ್ಲಿ ನೀರು ತರಲು ಹೋದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ನೀರು ತರಲು ಹೊರಟಿದ್ದ ಯುವಕನ ಮೇಲೆ ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ಕುಡಿಯುವುದಕ್ಕೆ ನೀರು ತರಲು ಬಿಡದಿದ್ದರೆ ಹೇಗೆ ಎಂದು ಅಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

covid 19 5 th day lockdown situation all over Karnataka
Author
Bengaluru, First Published Mar 29, 2020, 6:14 PM IST

ಬೆಳಗಾವಿ (ಮಾ. 29): ಗೋಕಾಕ್‌ನಲ್ಲಿ ನೀರು ತರಲು ಹೋದವರ ಮೇಲೆ ಪೊಲೀಸರು ಲಾಠಿ ಬೀಸಿದ್ದಾರೆ. ನೀರು ತರಲು ಹೊರಟಿದ್ದ ಯುವಕನ ಮೇಲೆ ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ಕುಡಿಯುವುದಕ್ಕೆ ನೀರು ತರಲು ಬಿಡದಿದ್ದರೆ ಹೇಗೆ ಎಂದು ಅಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"

ಬೆಳಗಾವಿ: ರೇಷನ್ ಅಂಗಡಿ ಮಾಲಿಕರ ಮೇಲೆಯೂ ಪೊಲೀಸರು ಲಾಠಿ ಬೀಸಿದ್ದಾರೆ. ಅಗತ್ಯ ವಸ್ತುಗಳನ್ನು ಪೂರೈಸುವವರ ಮೇಲೆ ಲಾಠಿ ಪ್ರಯೋಗ ಮಾಡಬೇಡಿ ಎಂದು ಪೊಲೀಸರಿಗೆ ಸತೀಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ. 

"

ಗಣಿನಾಡು ಬಳ್ಳಾರಿಯಲ್ಲಿ ಲೇಡಿ ಪೊಲೀಸರು ರೆಬಲ್ ಆಗಿದ್ದಾರೆ. ಅನಾವಶ್ಯಕವಾಗಿ ಹೊರಗೆ ಬಂದವರಿಗೆ ಲಾಠಿ ರುಚಿ ತೋರಿಸಿದ್ದಾರೆ. 

"

ಗದಗದಲ್ಲಿ ನಿಯಮ ಉಲ್ಲಂಘಿಸಿದವರಿಗೆ ಲಾಠಿ ಏಟಿನ ರುಚಿ ತೋರಿಸಿದ್ದಾರೆ. ಸುಮ್ಮಸುಮ್ಮನೆ ಬೀದಿಗೆ ಬಂದವರಿಗೆ ಲಾಠಿ ಏಟು ಬಿದ್ದಿದೆ. 

"

Follow Us:
Download App:
  • android
  • ios