ಕೊರೋನಾ ತಾಂಡವ: ಸದ್ಯ ಭಾರತದ ಸ್ಥಿತಿಗತಿ ಹೇಗಿದೆ? ರಾಜ್ಯವಾರು ಚಿತ್ರಣ
ಚೀನಾದಲ್ಲಿ ಕಂಡು ಬಂದ ಮಾರಕ ಕೊರೋನಾ ಸದ್ಯ ಭಾರತದಲ್ಲೂ ಅಟ್ಟಹಾಸ ಆರಂಭಿಸಿದೆ. ಈ ಮಾರಕ ವೈರಸ್ಗೆ ಒಂಭತ್ತು ಮಂದಿ ಬಲಿಯಾಗಿದ್ದು, ನಾಲ್ನೂರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಹೀಗಿರುವಾಗ ಭಾರತದಲ್ಲಿ ರಾಜ್ಯವಾರು ಸ್ಥಿತಿಗತಿ ಹೇಗಿದೆ? ಇಲ್ಲಿದೆ ಒಂದು ನೋಟ
ಆಂಧ್ರಪ್ರದೇಶ: ಪ್ರಕರಣ: 6:
ಕೊರೋನಾ ತಡೆಗೆ ಕ್ರಮ:
- ರಾಜ್ಯಕ್ಕೆ ಸಂಪರ್ಕಿಸುವ ಹೊರರಾಜ್ಯಗಳ ಎಲ್ಲ ಗಡಿಗಳು ಬಂದ್
- ತಿರುಪತಿ ತಿರುಮಲ, ಶ್ರೀಶೈಲ ದೇವಸ್ಥಾನ ಸೇರಿ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿಷೇಧ
- ವಿದೇಶದಿಂದ ಬಂದವರು ಮನೆಯಲ್ಲೇ ಕಡ್ಡಾಯವಾಗಿ ಇರಬೇಕು
- ಮಾ.31ರವರೆಗೆ ಚಿತ್ರಮಂದಿರಗಳು, ಮಾಲ್, ವ್ಯಾಪಾರ ಮಳಿಗೆಗಳು, ಶಾಲೆಗಳು ಬಂದ್
ಬಿಹಾರ: ಪ್ರಕರಣ: 3: ಸಾವು: 1
ಕೊರೋನಾ ತಡೆಗೆ ಕ್ರಮ:
- ಬಿಹಾರದ ನಗರ ಪ್ರದೇಶಗಳೆಲ್ಲ ಮಾ.31ರವರೆಗೆ ಲಾಕ್ಡೌನ್
- ಬಸ್ಸುಗಳು, ಆಟೋಗಳು ನಗರಗಳಲ್ಲಿ ಸಂಚರಿಸುವಂತಿಲ್ಲ
- ನಿಷೇಧ ಉಲ್ಲಂಘಿಸಿ ಬಸ್ಸು, ವಾಹನ ಓಡಿಸಿದರೆ ಪೊಲೀಸರಿಂದ ಜಪ್ತಿ
- ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್
ಪ.ಬಂಗಾಳ: ಪ್ರಕರಣ: 7
ಕೊರೋನಾ ತಡೆಗೆ ಕ್ರಮ:
- ಮಾ.27ರವರೆಗೆ ರಾಜ್ಯದ ನಗರ ಪ್ರದೇಶಗಳು, ಕೆಲ ಗ್ರಾಮೀಣ ಪ್ರದೇಶಗಳು ಲಾಕೌಟ್
- ಸರ್ಕಾರಿ ಸಾರಿಗೆ, ಟ್ಯಾಕ್ಸಿ, ಆಟೋ ರಿಕ್ಷಾ ಸೇವೆಗಳು ಇರಲ್ಲ
-ಆಹಾರ, ವೈದ್ಯಕೀಯ ಸಾಮಗ್ರಿ ಸಾಗಿಸುವ ಗೂಡ್ಸ್ ವಾಹನಗಳಿಗೆ ಮಾತ್ರ ಅವಕಾಶ
-ಖಾಸಗಿ ಕಚೇರಿಗಳು, ಉದ್ಯಮಗಳು, ಎಲ್ಲ ಅಂಗಡಿಗಳು ಬಂದ್
-ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ
---
ತೆಲಂಗಾಣ: ಪ್ರಕರಣ: 33: ಗುಣಮುಖ: 1
ಕೊರೋನಾ ತಡೆಗೆ ಕ್ರಮ:
-ಸೋಮವಾರದಿಂದ ತಿಂಗಳಾಂತ್ಯದವರೆಗೆ ರಾಜ್ಯ ಸಂಪೂರ್ಣ ಬಂದ್
- ಸರ್ಕಾರಿ ಬಸ್ಸುಗಳು, ಮೆಟ್ರೋ, ಟ್ಯಾಕ್ಸಿಗಳು ಆಟೋ ರಿಕ್ಷಾ, ಅಂಗಡಿ, ಉದ್ದಿಮೆ, ಕಚೇರಿ ಬಂದ್
-ವೈದ್ಯಕೀಯ, ದಿನಸಿ-ತರಕಾರಿ ಸೇರಿ ಇತರೆ ಅಂಗಡಿಗಳ ಸೇವೆಗಳಿಗೆ ಅಡಚಣೆಯಿಲ್ಲ
-ಬ್ಯಾಂಕ್, ಎಟಿಎಂಗಳು, ಮಾಧ್ಯಮಗಳು, ಐಟಿ, ಟೆಲಿಕಾಂ ಸೇವೆಗಳು ಯಥಾಸ್ಥಿತಿ
ಪುದುಚೇರಿ: ಪ್ರಕರಣ: 1
ಕೊರೋನಾ ತಡೆಗೆ ಕ್ರಮ:
- ಪುದುಚೇರಿ ಕೇಂದ್ರಾಡಳಿತ ಮಾ.31ರವರೆಗೆ ಪೂರ್ಣ ಪ್ರಮಾಣದಲ್ಲಿ ಬಂದ್
- ಎಲ್ಲಾ ಜನನಿಬಿಡ ಸ್ಥಳಗಳಲ್ಲಿ ಕಫä್ರ್ಯ ಜಾರಿ
- ಬಾರ್, ಕಾರ್ಖಾನೆಗಳು, ಉತ್ಪಾದನಾ ಕೇಂದ್ರಗಳು ಬಂದ್
- ಕಿರಾಣಿ, ತರಕಾರಿ, ಔಷಧ ಅಂಗಡಿ, ಹಾಲು-ಮೊಸರು ಮಾರಾಟ ಕೇಂದ್ರಗಳು, ಪೆಟ್ರೋಲ್ ಬಂಕ್, ಅಡುಗೆ ಅನಿಲ ಏಜೆನ್ಸಿಗಳಿಗೆ ವಿನಾಯ್ತಿ
- ಮುನ್ನೆಚ್ಚರಿಕಾ ಕ್ರಮವಾಗಿ 150 ಹಾಸಿಗೆಗಳ ಕೊಠಡಿ ಸಿದ್ಧ
ಕೇರಳ: ಪ್ರಕರಣ: 91: ಗುಣಮುಖ: 3
ಕೊರೋನಾ ತಡೆಗೆ ಕ್ರಮ:
- ಕೇರಳದಾದ್ಯಂತ ಲಾಕ್ಡೌನ್ ಜರಿ
- ಹೆಚ್ಚು ಪ್ರಕರಣ ದಾಖಲಾಗಿರುವ ಕಾಸರಗೋಡಿನಲ್ಲಿ ಕಠಿಣ ನಿರ್ಬಂಧ ಕ್ರಮ
- ಅತ್ಯ ಸೇವೆ ಬಿಟ್ಟು ಮಿಕ್ಕ ಎಲ್ಲ ಸೇವೆಗಳು ಬಂದ್
- ಹೊರರಾಜ್ಯ ಸಂಪರ್ಕಿಸುವ ರಾಜ್ಯದ ಎಲ್ಲ ಗಡಿಗಳು ಬಂದ್
- ಕೊರೋನಾ ತಪಾಸಣೆಯನ್ನು ತೀವ್ರಗೊಳಿಸಲು ಕ್ರಮ
ಚಂಡೀಗಢ: ಪ್ರಕರಣ: 7
ಕೊರೋನಾ ತಡೆಗೆ ಕ್ರಮ:
- ಕೇಂದ್ರಾಡಳಿತಕೆ ಒಳಪಟ್ಟಚಂಡೀಗಢ ನಗರದಾದ್ಯಂತ ಕಫä್ರ್ಯ
- ಅಗತ್ಯ ವಸ್ತುಗಳ ವ್ಯವಹಾರಕ್ಕೆ ಮಾತ್ರ ಅವಕಾಶ
- ಸಾರಿಗೆ ಸೇವೆ, ಅಂಗಡಿ-ಮುಂಗಟ್ಟು, ಕಚೇರಿಗಳು ಬಂದ್
- ತುರ್ತು ಸಂದರ್ಭ ಹೊರತುಪಡಿಸಿ ಮಿಕ್ಕ ವೇಳೆ ಜನರು ಮನೆಯಿಂದ ಹೊರಬರುವಂತಿಲ್ಲ
ಜಮ್ಮು-ಕಾಶ್ಮೀರ: ಪ್ರಕರಣ: 4
ಕೊರೋನಾ ತಡೆಗೆ ಕ್ರಮ:
- ಕೊರೋನಾ ಕೇಸು ಪತ್ತೆ ಆದ ಶ್ರೀನಗರ ಸಂಪೂರ್ಣ ಲಾಕ್ಡೌನ್
- ಸರ್ಕಾರಿ ಸಾರಿಗೆ, ಮಾರುಕಟ್ಟೆಗಳು ಸೇರಿದಂತೆ ಇನ್ನಿತರ ಸೇವೆಗಳು ಬಂದ್
- ಅಗತ್ಯ, ತುರ್ತು ಸೇವೆಗಳು ಮಾತ್ರ ಲಭ್ಯ
- ರಾಜ್ಯದ ಉಳಿದೆಡೆ ಭಾಗಶಃ ಪ್ರತಿಬಂಧಕಾಜ್ಞೆ
ಛತ್ತೀಸ್ಗಢ: ಪ್ರಕರಣ: 1
ಕೊರೋನಾ ತಡೆಗೆ ಕ್ರಮ:
- 28 ಜಿಲ್ಲೆಗಳ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಮಾ.31ರವರೆಗೆ ಸಂಪೂರ್ಣ ನಿರ್ಬಂಧ
- ಸರ್ಕಾರಿ-ಖಾಸಗಿ ಬಸ್ಸು, ಆಟೋ, ಇ-ರಿಕ್ಷಾಗಳು, ಬಾಡಿಗೆ ಟ್ಯಾಕ್ಸಿ ಸೇವೆ ಬಂದ್
- ಅತ್ಯಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧ ಇಲ್ಲ
- ಜನ ಸಾಮಾನ್ಯರಿಗೆ 2 ತಿಂಗಳ ಪಡಿತರ ವಿತರಣೆಗೆ ವ್ಯವಸ್ಥೆ.
ದಿಲ್ಲಿ: ಪ್ರಕರಣ: 30: ಗುಣಮುಖ: 5: ಸಾವು: 1
ರೋಗ ತಡೆಗೆ ಕ್ರಮ:
- ಮಾ.31ರವರೆಗೂ ದಿಲ್ಲಿ ಬಂದ್
- ಡೈರಿಗಳು, ದಿನಸಿ ಅಂಗಡಿಗಳು, ವೈದ್ಯಕೀಯ, ಪೆಟ್ರೋಲ್ ಪಂಪ್, ಎಟಿಎಂಗಳು ಮಾತ್ರ ಓಪನ್
- ಕೈಗಾರಿಕೆಗಳು, ಕಚೇರಿಗಳು, ಕಂಪನಿಗಳು, ಶಾಪಿಂಗ್ ಮಾಲ್ಗಳು ಬಂದ್
- ಮೆಟ್ರೋ, ಆಟೋ, ಬಾಡಿಗೆ ಕಾರು ಸೇವೆಯ ಓಲಾ, ಊಬರ್ ಸೇವೆ ಸ್ತಬ್ಧ
- ಏಮ್ಸ್ ಆಸ್ಪತ್ರೆಯ ಹೊರರೋಗಿಗಳ ವಿಭಾಗ ಬಂದ್, ವಿಶೇಷ ಸೇವೆಗಳು ಸೇರಿ ಇನ್ನಿತರ ಸೇವೆಗಳು ಸಹ ಸ್ಥಗಿತ
ಗುಜರಾತ್: ಪ್ರಕರಣ: 29: ಸಾವು: 1
ಕೊರೋನಾ ತಡೆಗೆ ಕ್ರಮ:
- ರಾಜ್ಯದ 6 ಕೊರೋನಾ ಬಾಧಿತ ಜಿಲ್ಲೆಗಳಲ್ಲಿ ಮಾ.31ರವರೆಗೆ ಲಾಕ್ಡೌನ್
- ಈ ಜಿಲ್ಲೆಗಳಿಗೆ ಉಳಿದ ಜಿಲ್ಲೆಗಳಿಂದ ಸಂಚಾರ ನಿರ್ಬಂಧ
- ಅಗತ್ಯವಲ್ಲದ ಕೆಲಸಗಳಿಗೆ ಜನರು ಮನೆಯಿಂದ ಹೊರಬರದಂತೆ ಸೂಚನೆ
- ಜನರಿಗೆ ಅನ್ಯ ಊರುಗಳು, ರಾಜ್ಯಗಳಿಗೆ ತೆರಳದಂತೆ ಮನವಿ
ಗೋವಾ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ಮಾಚ್ರ್ 25ರವರೆಗೆ ‘ಜನತಾ ಕಫä್ರ್ಯ’ ಜಾರಿ
- ಬೆಳಗ್ಗೆ 7ರಿಂದ 10ರವರೆಗೆ ಮಾತ್ರ ಅಗತ್ಯವಸ್ತು ಖರೀದಿಗೆ ಅವಕಾಶ
- ಮಿಕ್ಕ ಎಲ್ಲ ಸಮಯದಲ್ಲಿ ಮಾರುಕಟ್ಟೆ, ವ್ಯಾಪಾರ ವಹಿವಾಟು ಬಂದ್
- ರಾಜ್ಯದ ಎಲ್ಲ ಗಡಿಗಳು ಬಂದ್
- ಬಸ್, ಟ್ಯಾಕ್ಸಿ ಸೇವೆ ಸ್ಥಗಿತ
ಹರ್ಯಾಣ: ಪ್ರಕರಣ: 26
ಕೊರೋನಾ ತಡೆಗೆ ಕ್ರಮ:
-ಮಂಗಳವಾರದಿಂದ ಮಾ.31ರವರೆಗೆ ರಾಜ್ಯದ 22 ಜಿಲ್ಲೆಗಳು ಬಂದ್
-ಅಂತರ್ ರಾಜ್ಯಗಳ ಗಡಿಗಳಿಗೆ ಸೀಲ್, ಅಂತಾರಾಜ್ಯ ಬಸ್ ಸೇವೆಗೂ ಕಡಿತ
-ತುರ್ತು ಅಗತ್ಯ ಸೇವೆಗಳಿಗೆ ಮಾತ್ರವೇ ಅವಕಾಶ
ಹಿಮಾಚಲ ಪ್ರದೇಶ: ಪ್ರಕರಣ: 2: ಸಾವು: 1
ಕೊರೋನಾ ತಡೆಗೆ ಕ್ರಮ:
- ಅನಿರ್ದಿಷ್ಟಾವಧಿ ಸಂಪೂರ್ಣ ಲಾಕ್ಡೌನ್
- ಅಗತ್ಯ ವಸ್ತುಗಳ ಸೇವೆ ಅಭಾದಿತ
- ವೈದ್ಯಕೀಯ ಸೂಚನೆ ಪಾಲಿಸದಿದ್ದರೆ ಕ್ರಮ
- ಎಲ್ಲಾ ಆಚೇರಿ ಬಂದ್, ಆದರೆ ರಜೆ ನೆಪದಲ್ಲಿ ನೌಕರರ ಸಂಬಳ ಕಟ್ ಮಾಡುವಂತಿಲ್ಲ
ಕರ್ನಾಟಕ: ಪ್ರಕರಣ: 33: ಸಾವು: 1: ಗುಣಮುಖ: 2
ಕೊರೋನಾ ತಡೆಗೆ ಕ್ರಮ:
- ಮಾ.31ರವರೆಗೆ 9 ಜಿಲ್ಲೆಗಳಲ್ಲಿ ಸಂಪೂರ್ಣ ಕಫä್ರ್ಯ ಮಾದರಿ ಲಾಕ್ಡೌನ್
- ಮಿಕ್ಕ ಜಿಲ್ಲೆಗಳಲ್ಲಿ ಭಾಗಶಃ ಲಾಕ್ಡೌನ್ ಜಾರಿ
- ಅಗತ್ಯಸೇವೆ ಹೊರತುಪಡಿಸಿ ಮಿಕ್ಕೆಲ್ಲ ಸೇವೆಗಳು ಬಂದ್
- ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸೇವೆ ಮಾ.31ರವರೆಗೆ ಬಂದ್
ಮಧ್ಯಪ್ರದೇಶ: ಪ್ರಕರಣ: 6
ಕೊರೋನಾ ತಡೆಗೆ ಕ್ರಮ:
- 52 ಜಿಲ್ಲೆಗಳ ಪೈಕಿ 36 ಜಿಲ್ಲೆಗಳು ಲಾಕ್ಡೌನ್
- ಕೆಲ ಜಿಲ್ಲೆಗಳಲ್ಲಿ 4 ದಿನ, ಕೆಲ ಜಿಲ್ಲೆ ಮಾಚ್ರ್ 31ರವರೆಗೆ ಪ್ರತಿಬಂಧಕಾಜ್ಞೆ
- ಕೆಲ ಜಿಲ್ಲೆ ಏ.3, ಕೆಲ ಜಿಲ್ಲೆಗಳು ಅನಿರ್ದಿಷ್ಟಾವಧಿ ಸ್ತಬ್ಧ
- ತುರ್ತು ಸಂದರ್ಭದಲ್ಲಿ ಮಾತ್ರ ಜನರು ಮನೆಯಿಂದ ಹೊರಬರಬೇಕು
- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಸೇವೆಗಳು ಸ್ತಬ್ಧ
ಮಹಾರಾಷ್ಟ್ರ: ಪ್ರಕರಣ: 97: ಗುಣಮುಖ: 5: ಸಾವು: 3
ಕೊರೋನಾ ತಡೆಗೆ ಕ್ರಮ:
- ರಾಜ್ಯಾದ್ಯಂತ ಮುಂಜಾಗ್ರತಾ ಕ್ರಮವಾಗಿ ಕಫä್ರ್ಯ ಜಾರಿ
- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಎಲ್ಲ ಸೇವೆಗಳು ಬಂದ್
- ಎಲ್ಲ ಉದ್ದಿಮೆಗಳು, ಕಚೇರಿಗಳು, ಖಾಸಗಿ ಸಂಸ್ಥೆಗಳು, ಅಂಗಡಿಗಳು ಬಂದ್
- ಮನೆಯಿಂದ ಯಾರೂ ಹೊರಬರುವಂತಿಲ್ಲ
- ಅಂತಾರಾಜ್ಯ ಗಡಿಗಳೂ ಬಂದ್
ಒಡಿಶಾ: ಪ್ರಕರಣ: 2:
ಕೊರೋನಾ ತಡೆಗೆ ಕ್ರಮಗಳು
- 14 ಜಿಲ್ಲೆಗಳು ಲಾಕ್ಡೌನ್
- ಬಸ್ಸು ಹಾಗೂ ರೈಲು ಸೇವೆಗಳು ಸಂಪೂರ್ಣ ಸ್ತಬ್ಧ; ತುರ್ತು ಸೇವೆಗಳು ಮಾತ್ರ ಮುಕ್ತ
- ಕ್ವಾರಂಟೈನ್ನಲ್ಲಿರುವ ಜನರ ಮನೆ ಮೇಲೆ ಸ್ಟಿಕ್ಕರ್ ಅಂಟಿಸಿ ಜನರಲ್ಲಿ ಜಾಗೃತಿ ಮೂಡಿಸುವಿಕೆ
ರಾಜಸ್ಥಾನ: ಪ್ರಕರಣ: 29: ಗುಣಮುಖ: 2
ಕೊರೋನಾ ತಡೆಗೆ ಕ್ರಮ:
- ಭಾನುವಾರದಿಂದ ಮಾ.31ರ ವರೆಗೆ ರಾಜ್ಯವೇ ಲಾಕ್ಡೌನ್
- ಬಂದ್ ಪಾಲಿಸದಿದ್ದರೆ ಕೇಸ್
- ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕ್ರಮ
- ಸರ್ಕಾರಿ ಕಚೇರಿ, ಮಾಲ್, ಸಾರ್ವಜನಿಕ ಸಾರಿಗೆ ಸ್ತಬ್ಧ
- ಅಗತ್ಯ ಸೇವೆಗಳಿಗೆ ತೊಂದರೆ ಇಲ್ಲ
ಪಂಜಾಬ್: ಪ್ರಕರಣ: 21: ಸಾವು: 1
ಕೊರೋನಾ ತಡೆಗೆ ಕ್ರಮ:
- ಮಂಗಳವಾರದಿಂದ ಮಾಸಾಂತ್ಯದವರಗೆ ಕಫä್ರ್ಯ
- ಅಗತ್ಯ ಸೇವೆ ಮಾತ್ರ ಲಭ್ಯ, ಸಾರ್ವಜನಿಕ ಸಾರಿಗೆ ಇಲ್ಲ
- ಸರ್ಕಾರಿ ಕಚೇರಿಗೆ ಸಾರ್ವಜನಿಕರ ಪ್ರವೇಶ ಇಲ್ಲ
- 10, 12ನೇ ತರಗತಿ ಪರೀಕ್ಷೆ ಮುಂದಕ್ಕೆ
ತಮಿಳುನಾಡು: ಪ್ರಕರಣ: 8: ಗುಣಮುಖ: 1
ಕೊರೋನಾ ತಡೆಗೆ ಕ್ರಮ:
- ಮಂಗಳವಾರದಿಂದ ಮಾ.31ರ ವರೆಗೆ ಸಂಪೂರ್ಣ ಲಾಕ್ಡೌನ್
- ಸೆಕ್ಷನ್ 144 ಜಾರಿ, ಜಿಲ್ಲೆ ಹಾಗೂ ಅಂತಾರಾಜ್ಯ ಗಡಿಗಳು ಬಂದ್
- ಅಗತ್ಯ ಸೇವೆ ಬಿಟ್ಟು ಎಲ್ಲಾ ಉದ್ಯಮಗಳು ಸ್ಥಗಿತ
ಲಡಾಖ್: ಪ್ರಕರಣ: 13
ಕೊರೋನಾ ತಡೆಗೆ ಕ್ರಮ:
-ಮಾ.31ರವರೆಗೆ ಸಂಪೂರ್ಣ ಲಾಕ್ಡೌನ್
-ಲೇಹ್, ಕಾರ್ಗಿಲ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ
-ಅಗತ್ಯ ಸೇವೆಗಳಿಗೆ ಯಾವುದೇ ಬಾಧೆಯಿಲ್ಲ
ಉತ್ತರ ಪ್ರದೇಶ: ಪ್ರಕರಣ: 29: ಗುಣಮುಖ: 11
ಕೊರೋನಾ ತಡೆಗೆ ಕ್ರಮ:
- 16 ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಣೆ
- ಅಯೋಧ್ಯೆ, ವಾರಾಣಸಿ ಸೇರಿ ಎಲ್ಲ ತೀರ್ಥಕ್ಷೇತ್ರಗಳು ಪ್ರವಾಸಿಗರಿಗೆ ನಿರ್ಬಂಧ
- ಕಾಶಿ ವಿಶ್ವನಾಥ ಸೇರಿ ಅನೇಕ ಅನೇಕ ಪ್ರಸಿದ್ಧ ದೇವಾಲಯಗಳು ಬಂದ್
- ಲಾಕ್ಡೌನ್ ಆದ ಜಿಲ್ಲೆಗಳಲ್ಲಿ ಅಗತ್ಯ ಸೇವೆ ಬಿಟ್ಟು ಉಳಿದ ಸೇವೆಗಳು ಸ್ತಬ್ಧ
ಉತ್ತರಾಖಂಡ: ಪ್ರಕರಣ: 3
ಕೊರೋನಾ ತಡೆಗೆ ಕ್ರಮ:
- ರಾಜ್ಯಾದ್ಯಂತ ಮಾ.31ರ ವರೆಗೆ ಸಂಪೂರ್ಣ ಬಂದ್
- ದಿನಸಿ, ಔಷಧ, ಹಣ್ಣು-ತರಕಾರಿ, ಬ್ಯಾಂಕ್ ಮತ್ತು ಎಟಿಎಂಗಳನ್ನು ಹೊರತು ಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್
- ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ
- 5ಕ್ಕಿಂತ ಹೆಚ್ಚು ಮಂದಿ ಸಾರ್ವಜನಿಕ ಪ್ರದೇಶದಲ್ಲಿ ಯಾವ ಕಾರಣಕ್ಕೂ ಸೇರುವಂತಿಲ್ಲ
- ಬೇರೆ ರಾಜ್ಯಗಳಿಂದ ಬರುವ ಎಲ್ಲಾ ವಾಹನಗಳಿಗೆ ಪ್ರವೇಶ ನಿರ್ಬಂಧ
ಅಸ್ಸಾಂ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ದೀಮಾ ಹಸಾವೊ ಜಿಲ್ಲೆ ಮಂಗಳವಾರದಿಂದ 5 ದಿನ ಲಾಕ್ಡೌನ್
- ತುರ್ತು ಅಗತ್ಯ ಸೇವೆಗಳಾದ ಹಾಲು, ಪತ್ರಿಕೆ, ವೈದ್ಯಕೀಯ ಸೇರಿ ಇನ್ನಿತರ ಸೇವೆಗಳು ಲಭ್ಯ
- ಅಸ್ಸಾಂನ ಇತರ ಜಿಲ್ಲೆಗಳಿಂದ ಯಾವುದೇ ವಾಹನಕ್ಕೆ ದೀಮಾ ಜಿಲ್ಲೆಗೆ ಪ್ರವೇಶವಿಲ್ಲ
- ಈ ಭಾಗದ ಸರ್ಕಾರಿ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ
ನಾಗಾಲ್ಯಾಂಡ್: ಪ್ರಕರಣ: 0
- ಮಾ.22ರಿಂದ ಮುಂದಿನ ಆದೇಶದವರೆಗೆ ಲಾಕೌಟ್
- ಕೈಗಾರಿಕೆಗಳು ಸೇರಿದಂತೆ ಇನ್ನಿತರ ಚಟುವಟಿಕೆಗಳಿಗೆ ನಿಷೇಧ
- ಮೆಡಿಕಲ್, ಪೆಟ್ರೋಲ್ ಪಂಪ್, ದಿನಸಿ ಅಂಗಡಿಗಳು, ಡೈರಿ, ಮಾಧ್ಯಮ ಕಚೇರಿಗಳಿಗೆ ವಿನಾಯ್ತಿ
- ಮುಂದಿನ ಆದೇಶದವರೆಗೂ ಖಾಸಗಿ, ಸಾರ್ವನಿಕ ಸಂಚಾರ ಸೇವೆಯೂ ಇಲ್ಲ
- ಮಣಿಪುರ, ಅಸ್ಸಾಂ, ಅರುಣಾಚಲ ಪ್ರದೇಶದ 14 ಅಂತರ್ ರಾಜ್ಯ ಗಡಿಗಳು ಬಂದ್
ಅರುಣಾಚಲ ಪ್ರದೇಶ: ಪ್ರಕರಣ: 0
- ಸೋಮವಾರ ಸಂಜೆಯಿಂದ ಮಾ.31ರ ವರೆಗೆ ಫುಲ್ ಲಾಕ್ಡೌನ್
- ಎಟಿಎಂ, ಆಹಾರೋತ್ಪನ್ನ, ವೈದ್ಯಕೀತ ಸೇವೆ ಎಂದಿನಂತೆ
- ಸಾರ್ವಜನಿಕ ಸಾರಿಗೆ, ಟಾಕ್ಸಿ, ಆಟೋ ಬಂದ್, ಅಂಗಡಿ, ಕಚೇರಿ, ಉದ್ದಿಮೆ ಬಂದ್
- ಸಾಮಾಜಿಕ ಅಂತರ ಕಡ್ಡಾಯ, ಅತ್ಯಗತ್ಯ ಹೊರೆತು ಮನೆಯಿಂದ ಹೊರ ಬರುವ ಹಾಗಿಲ್ಲ
- ಖಾಸಗಿ ಉದ್ಯೋಗಿಗಳೂ ಮನೆಯಲ್ಲೇ ಇರಬೇಕು. ಅವರ ವೇತನ ಕಡಿತ ಮಾಡುವಂತಿಲ್ಲ
ಮಿಜೋರಂ: ಪ್ರಕರಣ 0:
ಕೊರೋನಾ ತಡೆಗೆ ಕ್ರಮ:
- ಕಚೇರಿಗಳಲ್ಲಿ ಅರ್ಧದಷ್ಟುಜನರು ಕಾರ್ಯನಿರ್ವಹಿಸಲು ಮಾತ್ರ ಅವಕಾಶ. ಉಳಿದವರಿಗೆ ವರ್ಕ್ ಫ್ರಂ ಹೋಮ್
- ಕೊರೋನಾ ವೈರಸ್ ಕಾಣಿಸಿಕೊಂಡ ರಾಜ್ಯಗಳಿಂದ ಬಂದ ಜನರಿಗೆ ಸಾಮೂಹಿಕ ಕ್ವಾರಂಟೈನಲ್ಲಿ ಇಡಲು ವ್ಯವಸ್ಥೆ
- ಹೊರ ರಾಜ್ಯಗಳ ಜನರಿಗೆ ಸೋಂಕು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ವಾಸ್ತವ್ಯಕ್ಕೆ ಅವಕಾಶ.
- ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ತಾಪಸಣೆ
- ಅಗತ್ಯ ಸೇವೆಗಳು, ಹೊರ ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡ ಜನರನ್ನು ಕರೆತರುವ ವಾಹನಗಳಿಗಷ್ಟೇ ಅವಕಾಶ
ಜಾರ್ಖಂಡ್: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ರಾಜ್ಯದಲ್ಲಿ ಯಾವುದೇ ಪ್ರಕರಣ ವರದಿಯಾಗದಿದ್ದರೂ ಮುಂಜಾಗ್ರತೆ ಕ್ರಮವಾಗಿ ಲಾಕ್ಡೌನ್
- ಲಾಕ್ಡೌನ್ ವೇಳೆ ಜನರಿಗೆ ತೊಂದರೆ ಆಗದಂತೆ ಊಟಕ್ಕೆ ರಾಜ್ಯಾದ್ಯಂತ 350 ಖಿಚಡಿ ಕೇಂದ್ರಗಳು
- ಅಗತ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕ ಸೇವೆಗಳು ಬಂದ್
- ಸಾರ್ವಜನಿಕ ಸಾರಿಗೆ, ರೈಲು ಸಂಪರ್ಕ ಸ್ಥಗಿತ
- ವದಂತಿ ಹರಡಿಸುವವರ ವಿರುದ್ಧ ಪೊಲೀಸರಿಂದ ಕೇಸು
ಮಣಿಪುರ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ಮಾಚ್ರ್ 31ರವರೆಗೆ ರಾಜ್ಯ ಸಂಪೂರ್ಣ ಲಾಕ್ಡೌನ್
- ಲಾಕ್ಡೌನ್ ವ್ಯಾಪ್ತಿಯಿಂದ ಅಗತ್ಯ ಸೇವೆಗಳು ಹೊರಕ್ಕೆ
- ಏಪ್ರಿಲ್ ತಿಂಗಳಿನ ಪಡಿತರ ಅಕ್ಕಿ ಈಗಲೇ ಉಚಿತ ವಿತರಣೆ
- ಕಚೇರಿ ಬಂದ್; ಮನೆಯಲ್ಲೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚನೆ
ಸಿಕ್ಕಿಂ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ಸಿಕ್ಕಿಂಗೆ ವಿದೇಶೀಯರ ಪ್ರವೇಶ ನಿಷೇಧ
- ಚೀನಾ ಗಡಿಯಾದ ನಾಥು ಲಾ ಪಾಸ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ
ತ್ರಿಪುರಾ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ಮಾಚ್ರ್ 31ರವರೆಗೆ ರಾಜ್ಯ ಸಂಪೂರ್ಣ ಲಾಕ್ಡೌನ್
- ಅಗತ್ಯ ಸೇವೆ ಹೊರತುಪಡಿಸಿ ಮಿಕ್ಕ ಎಲ್ಲ ಸೇವೆ ಸ್ತಬ್ಧ
- ಮನೆಯಿಂದ ಜನರು ಹೊರಬರದಂತೆ ತಾಕೀತು, ಶಾಲೆ-ಕಚೇರಿಗಳಿಗೆ ರಜೆ
ಮೇಘಾಲಯ: ಪ್ರಕರಣ: 0
ಕೊರೋನಾ ತಡೆಗೆ ಕ್ರಮ:
- ಶನಿವಾರದಿಂದಲೇ ರಾಜ್ಯದಲ್ಲಿ ಲಾಕ್ಡೌನ್
- 12ನೇ ತರಗತಿಯ ಪರೀಕ್ಷೆಗಳು ರದ್ದು
- ವೈದ್ಯರು, ಯೋಧರನ್ನು ಹೊರತುಪಡಿಸಿದರೆ ಮಿಕ್ಕವರ ಸಂಚಾರಕ್ಕೆ ನಿರ್ಬಂಧ
- ಅಗತ್ಯ ವಸ್ತುಗಳ ಮಾರಾಟ ಬಿಟ್ಟರೆ ಮಿಕ್ಕ ಮಾರುಕಟ್ಟೆಬಂದ್