ಬಂಡೀಪುರ ಅರಣ್ಯದಲ್ಲಿ ಬ್ರಿಟೀಷ್‌ ಸಾಹಸಿ ಬೆಯರ್‌ ಗ್ರಿಲ್ಸ್‌ ಜತೆಗೆ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಭಾಗಿಯಾಗಿ ತೆರಳಿ ಬೆನ್ನಲ್ಲೇ, ಇನ್ನಿಬ್ಬರು ಖ್ಯಾತನಾಮರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುದ್ದಿ ಹೊರಬಿದ್ದಿದೆ. 

ನವದೆಹಲಿ (ಫೆ. 01): ಬಂಡೀಪುರ ಅರಣ್ಯದಲ್ಲಿ ಬ್ರಿಟೀಷ್‌ ಸಾಹಸಿ ಬೆಯರ್‌ ಗ್ರಿಲ್ಸ್‌ ಜತೆಗೆ ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮದಲ್ಲಿ ಸೂಪರ್‌ ಸ್ಟಾರ್‌ ರಜನೀಕಾಂತ್‌ ಹಾಗೂ ಬಾಲಿವುಡ್‌ ಆ್ಯಕ್ಷನ್‌ ಹೀರೋ ಅಕ್ಷಯ್‌ ಕುಮಾರ್‌ ಭಾಗಿಯಾಗಿ ತೆರಳಿ ಬೆನ್ನಲ್ಲೇ, ಇನ್ನಿಬ್ಬರು ಖ್ಯಾತನಾಮರು ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸುದ್ದಿ ಹೊರ ಬಿದ್ದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಡೀಪುರ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ತಲೈವಾ ವಾಪಸ್ ಹೋಗಿದ್ದೇಕೆ?

ಖ್ಯಾತ ನಟಿ ದೀಪಿಕಾ ಪಡುಕೋಣೆ ಮತ್ತು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ದೀಪಿಕಾ ಮತ್ತು ಕೊಹ್ಲಿ ಭಾಗಿಯಾಗುವ ದೃಶ್ಯಗಳ ಚಿತ್ರೀಕರಣ ಬಂಡೀಪುರದಲ್ಲಿ ನಡೆಯಲಿದೆಯೇ? ಅಥವಾ ಬೇರೆ ಅರಣ್ಯದಲ್ಲಿ ನಡೆಯಲಿದೆಯೇ? ಎಂಬುದರ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಈ ಚಿತ್ರದ ಶೂಟಿಂಗ್‌ಗಾಗಿ ಬಂಡೀಪುರಕ್ಕೆ ಆಗಮಿಸಿದ್ದರು. ಇಲ್ಲಿ ಮೂರು ದಿನಗಳ ಕಾಲ ತಂಗಿದ್ದು ದಿಢೀರನೇ ಶೂಟಿಂಗ್ ಸ್ಥಗಿತಗೊಳಿಸಿ ಚೆನ್ನೈಗೆ ತೆರಳಿದ್ದಾರೆ.