ಆಂಧ್ರದ ಅಮರಾವತಿ ಯೋಜನೆಯ ಕನಸಿಗೆ ವಿಘ್ನ| ಅಮರಾವತಿ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆ| 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್| ಕಾರಣ ತಿಳಿಸದೇ ಯೋಜನೆಯಿಂದ ಹೊರಬಂದ ವಿಶ್ವ ಬ್ಯಾಂಕ್| ವಿಶ್ವ ಬ್ಯಾಂಕ್ ನಿರ್ಧಾರದ ಹಿಂದೆ ಅಮರಾವತಿ ವಿರುದ್ಧದ ರೈತರ ದೂರು ಕಾರಣ ಎಂಬ ಶಂಕೆ| 

ಅಮರಾವತಿ(ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಅಮರಾವತಿ ಯೋಜನೆಯಿಂದ ವಿಶ್ವ ಬ್ಯಾಂಕ್ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್, ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿರುವ ವಿಶ್ವಬ್ಯಾಂಕ್, ಅಮರಾವತಿ ಯೋಜನೆಯಿಂದ ಹಿಂದೆ ಸರಿಯುವ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ.

ಮೂಲಗಳ ಪ್ರಕಾರ, ಅಮರಾವತಿ ಯೋಜನೆ ವಿರುದ್ಧ ರೈತರು ಭಾರೀ ಪ್ರಮಾಣದಲ್ಲಿ ದೂರು ನೀಡುತ್ತಿರುವದರಿಂದ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಯೋಜನೆಗೆ ಹೂಡಿಕೆ ಮಾಡದಿರಲು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎನ್ನಲಾಗಿದೆ.