ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ! ವಿವರಣೆ ನೀಡಲು ರಾಜನ್‌ಗೆ ಮನವಿ! ರಾಜನ್‌ಗೆ ಮನವಿ ಮಾಡಿದ ಸಂಸದೀಯ ಸಮಿತಿ! ರಘುರಾಮ್ ರಾಜನ್ ಮಾರ್ಗದರ್ಶನ ಅಗತ್ಯ ಎಂದ ಸಮಿತಿ 

ನವದೆಹಲಿ(ಆ.19): ಹೆಚ್ಚುತ್ತಿರುವ ಅನುತ್ಪಾದಕ ಆಸ್ತಿ(ಎನ್​ಪಿಎ)ಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರಿಗೆ ಸಂಸದೀಯ ಸಮಿತಿ ಕೇಳಿಕೊಂಡಿದೆ.

Add Asianetnews Kannada as a Preferred SourcegooglePreferred

ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅಂದಾಜುಗಳ ಸಂಸದೀಯ ಸಮಿತಿ ಮುಂದೆ ರಘುರಾಮ್ ರಾಜನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ನಂತರ, ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್ ಜ್ಯೋಶಿ ನೇತೃತ್ವದ ಸಂಸದೀಯ ಸಮಿತಿ ರಾಜನ್ ಅವರಿಗೆ ಆಹ್ವಾನ ನೀಡಿದೆ. 

ಸರ್ಕಾರ ಎನ್‌ಪಿಎ ಬಿಕ್ಕಟ್ಟಗುಳನ್ನು ಗುರುತಿಸಿ, ಅದಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿದ್ದು, ಇದಕ್ಕೆ ರಘುರಾಮ್ ರಾಜನ್ ಅವರ ಮಾರ್ಗದರ್ಶನದ ವಶ್ಯಕತೆ ಇದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ರಾಜನ್ ಅವರಿಗೆ ಮುರಳಿ ಮನೋಹರ್ ಜ್ಯೋಶಿ ಪತ್ರ ಬರೆದಿದ್ದು, ಸಂಸದೀಯ ಸಮಿತಿ ಮುಂದೆ ಹಾಜರಾಗಿ ಹೆಚ್ಚುತ್ತಿರುವ ಎನ್‌ಪಿಎಗಳ ಬಗ್ಗೆ ಸದಸ್ಯರಿಗೆ ವಿವರಣೆ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

2016ರ ವರೆಗೆ ಮೂರು ವರ್ಷಗಳ ಕಾಲ ಆರ್‌ಬಿಐ ಗವರ್ನರ್ ಆಗಿದ್ದ ರಾಜನ್, ಇದೀಗ ಶಿಕಾಗೋದ ಬೂತ್‌ ಸ್ಕೂಲ್‌ ಆಫ್‌ ಬ್ಯುಸಿನೆಸ್‌ನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.