ಒಂದು ಭರಪೂರ ರಸಸಂಜೆಗೆ ಸಾಕ್ಷಿಯಾಗುವ ಅವಕಾಶ ನಿಮ್ಮ ಮುಂದೆ ಇದೆ. ಎಲ್ಲಿ ಅಂತೀರಾ? ಈ ವರದಿ  ಓದಿ

ಬೆಂಗಳೂರು[ಜೂ. 16] ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ರೋಟರಿ ಕ್ಲಬ್ ನೆಲಮಂಗಲ ‘ರೋಟರಿ ರಸಸಂಜೆ ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೂನ್ 17, ಸೋಮವಾರ ಸಂಜೆ 5.30ಕ್ಕೆ ತುಮಕೂರು ರಸ್ತೆಯ ಎಂವಿಎಂ ಕನ್ವೆಷನ್ ಹಾಲ್ ನಲ್ಲಿ ರಸಸಂಜೆ ಅನಾವರಣವಾಗಲಿದೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ಕಲಾವಿದರು ಪಾಲ್ಗೊಂಡು ಭರಪೂರ ಮನರಂಜನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ನಟಿ ಶುಭಾ ಪೂಂಜಾ, ಮಜಾ ಟಾಕೀಸ್​ನ ನಯನಾ, ರೆಮೋ, ಗಾಯಕರಾದ ಚೈತ್ರಾ ಹಾಗೂ ಗೋವಿಂದ್, ಟಿವಿ ರಿಯಾಲಿಟಿ ಶೋ ವಿನ್ನರ್​​ ಮಧುಸೂಧನ್ ಹಾಗೂ ಕನ್ನಡ ಕೋಗಲೆ ಖ್ಯಾತಿಯ ಅರ್ಜುನ್ ಇಟಗಿ , ವಾಸಿಮ್, ಮಿಮಿಕ್ರಿ ಗೋಪಿ ಸೇರಿದಂತೆ ಅನೇಕರು ಮನರಂಜಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಂಜುನಾಥ್ ಪಾಟೀಲ್-9845147054, ಇಟಿ ಕೇರ್ ರಾಜು-9448000064, ಕೆ. ಮಂಜುನಾಥ್-9902885888, ಸಿಜಿ ಮಂಜುನಾಥ ಗೌಡ-9844044788, ಲೊಕೇಶ್- 9513336626, ಎಂ.ಎನ್ ಹರೀಶ್ ಕುಮಾರ್- 9845165732ಗೆ ಸಂಪರ್ಕಿಸಬಹುದು. ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸುವುದುದಾಗಿ ಸಂಘಟಕರು ತಿಳಿಸಿದ್ದಾರೆ.

"