Asianet Suvarna News Asianet Suvarna News

ಗುಡ್ ನ್ಯೂಸ್:  ರಾಜೀವ್‌ ಗಾಂಧಿ ವಿವಿಯಿಂದ ಬೆಂಗಳೂರಿನಲ್ಲಿ 'ಸೆಂಟರ್‌ ಆಫ್‌ ಎಕ್ಸಲೆನ್ಸ್‌' ಸ್ಥಾಪನೆ

ರಾಜೀವ್‌ ಗಾಂಧಿ ಆರೋಗ್ಯ ವಿವಿಯಿಂದ 'ಸೆಂಟರ್‌ ಆಫ್‌ ಎಕ್ಸಲೆನ್ಸ್‌'/ ಬೆಂಗಳೂರು ಕೆಂಗೇರಿ ಬಳಿಯ ಭೀಮನಕಯಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ ಕೇಂದ್ರ ಸ್ಥಾಪನೆ

rajiv-gandhi-health-university-launching-center-for-excellence in Bengaluru
Author
Bengaluru, First Published Nov 19, 2019, 10:39 PM IST

ಬೆಂಗಳೂರು[ನ. 19]  ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ  ಆರೋಗ್ಯ ಸೇವೆಯ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರಿನಲ್ಲಿ ಸೆಂಟರ್‌ ಆಫ್‌ ಎಕ್ಸಲೆನ್ಸ್‌  ಸ್ಥಾಪಿಸಲಿದೆ. 

ಆರೋಗ್ಯ ವಿಶ್ವವಿದ್ಯಾಲಯದ ಸಹ ಕುಲಪತಿ, ಡಿಸಿಎಂ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಮಂಗಳವಾರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್‌. ಸಚ್ಚಿದಾನಂದ ಈ ವಿಷಯ ಘೋಷಿಸಿದರು.  ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಬೆಂಗಳೂರು ತಾಂತ್ರಿಕ ಶೃಂಗಸಭೆಯ ವೇಳೆ ಈ ಶುಭ ಸುದ್ದಿ ಸಿಕ್ಕಿದೆ.

ಮಗುವಿನ ಅಳುವಿಗೆ ಕಾರಣವೇನು?

ನಮ್ಮಲ್ಲೇ  ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಈ ಉತ್ತಮ ಪ್ರಯತ್ನಕ್ಕೆ ಮುಂದಾಗಿದೆ. ಜೈವಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು.  ಔಷಧ, ವಂಶವಾಹಿ ಚಿಕಿತ್ಸೆ (ಜೀನ್‌ ಥೆರಪಿ), ಮೆಡಿಕಲ್‌ ಎಂಜನಿಯರಿಂಗ್‌ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆಗೆ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಕೇಂದ್ರ ಸ್ಥಾಪನೆಯಾಗಲಿದ್ದು, ಇಲ್ಲಿಂದ ಬೇರೆ ಬೇರೆ ವೈದ್ಯಕೀಯ ಕಾಲೇಜುಗಳಿಗೆ  ಜ್ಞಾನ ವಿಸ್ತರಣೆ ಆಗುವುದು,"ಎಂದು ಡಾ. ಅಶ್ವತ್ಥನಾರಾಯಣ ವಿವರಿಸಿದರು.  

ಆರೋಗ್ಯ ವಿವಿ ಕೇವಲ ಪರೀಕ್ಷೆ ನಡೆಸಿ, ಸರ್ಟಿಫಿಕೇಟ್‌ ನೀಡಲಷ್ಟೇ ಸೀಮಿತವಾಗಿರಬಾರದು.  ಆರೋಗ್ಯ ಕ್ಷೇತ್ರದ ಭವಿಷ್ಯದ ಬಗ್ಗೆ ಹೆಚ್ಚಿನ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ವಿವಿ ಹೊಸ ಹೆಜ್ಜೆ ಇಟ್ಟಿದೆ.   ಯುವ ಜನರು ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುವಂತಾಗಬೇಕು.  ಸೃಜನಶೀಲತೆಗೆ ಒತ್ತು ನೀಡಬೇಕು.  ರೋಗಿಗಳ ತಪಾಸಣೆಗೆ ಹೊರತಾಗಿ ವೈದ್ಯರು  ಸಂಶೋಧನೆಯಲ್ಲಿ ತೊಡಗುವಂತಾಗಬೇಕು.  ಸೀಮಿತ ಚೌಕಟ್ಟಿನಿಂದ ಹೊರಬಂದು ಹೊಸತನ್ನು ಜಗತ್ತಿಗೆ ಪರಿಚಯಿಸುವಂತಾಗಬೇಕು. ಇದೇ ಉದ್ದೇಶದಿಂದ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಸ್ಥಾಪಿಸಲಾಗುತ್ತಿದೆ,"ಎಂದು ಡಾ. ಸಚ್ಚಿದಾನಂದ ತಿಳಿಸಿದರು.  

ಯಾವುದೇ ಆವಿಷ್ಕಾರಗಳು ಸಾಮಾನ್ಯವಾಗಿ ಆಗುವಂಥದ್ದು ತಂತ್ರಜ್ಞಾನ ಕ್ಷೇತ್ರದಲ್ಲಿ, ವೃತ್ತಿ ನಿರತ  ವೈದ್ಯರು ಆವಿಷ್ಕಾರದಲ್ಲಿ ತೊಡಗಬೇಕು. ಅವರಿಂದ ಸಂಶೋಧನೆಗಳಾಗಬೇಕು. ಈ ಅವಕಾಶ ಸೃಷ್ಟಿಸಲು 'ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌' ಸ್ಥಾಪಿಸಲು ಉದ್ದೇಶಿಸಿದ್ದೇವೆ.  ವೈದ್ಯರು ತಮಗೆ ಬೇಕಾದ ತಂತ್ರಜ್ಞಾನವನ್ನು ರೂಪಿಸಿಕೊಳ್ಳುವಂತಾಗಬೇಕು. ವೈದ್ಯಕೀಯ ಮತ್ತು ತಂತ್ರಜ್ಞಾನದ ಒಂದೆಡೆ ಸೇರಿದಾಗ ಹೊಸ ವೈದ್ಯಕೀಯ ಸಲಕರಣೆಗಳನ್ನು ಆವಿಷ್ಕರಿಸಬಹುದು.  ಆರೋಗ್ಯ ಕ್ಷೇತ್ರದಲ್ಲಿ ಹೊಸದನ್ನು ತರಬೇಕು.  ಯಾವುದೇ ಹೊಸ ಸಂಶೋಧನೆ 5-10 ವರ್ಷಗಳು ಆಗುತ್ತದೆ. ನಮ್ಮ ಈ ಪ್ರಯತ್ನದಿಂದ  ಪ್ರಯೋಗಾಲಯದಿಂದ ಮಾರುಕಟ್ಟೆಗೆ ತಲುಪುವ ಸಮಯ ಕಡಿಮೆ ಆಗುವುದು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ  ದೊಡ್ಡ ಬದಲಾವಣೆ ನಿರೀಕ್ಷಿಸಬಹುದು,"ಎಂದು ಸಚ್ಚಿದಾನಂದ ತಿಳಿಸಿದರು.   

ಕೆಂಗೇರಿ ಬಳಿಯ ಭೀಮನಕಯಪ್ಪೆಯಲ್ಲಿ 50 ಎಕರೆ ಪ್ರದೇಶದಲ್ಲಿ 'ಸೆಂಟರ್‌ ಆಫ್‌ ಎಕ್ಸಲೆನ್ಸ್‌'  ಕೇಂದ್ರ ತಲೆ ಎತ್ತಲಿದೆ.   ಅಲ್ಲೇ ಪುನರ್‌ ವಸತಿ ಕೇಂದ್ರಗಳು ಇರಲಿವೆ.  ಸಂಶೋಧನೆ, ವಂಶವಾಹಿಯ ಅಧ್ಯಯನ ನಡೆಯುವ ಸಂಸ್ಥೆಗಳ ಸಂಖ್ಯೆ  ಭಾರತದಲ್ಲಿ ಕಡಿಮೆ ಇದ್ದು,  ನಮ್ಮ ರಾಜ್ಯದಲ್ಲಿ  ಇಂಥ ಕೇಂದ್ರ ಬರುತ್ತಿರುವುದು ಸಂತಸದ ವಿಷಯ ಎಂದು ಡಾ. ಸಚ್ಚಿದಾನಂದ ಹೇಳಿದರು

Follow Us:
Download App:
  • android
  • ios