Asianet Suvarna News Asianet Suvarna News

ಬಿಸಿಲಾದರೇನು? ಮಳೆಯಾದರೇನು? ಕಾರು ಪಾರ್ಕಿಂಗ್ ಸಮಸ್ಯೆಗೆ ಇಲ್ಲಿದೆ ಮುಲಾಮು!

ಶ್ರೀಮಂತರಿಗೆ ಮಾತ್ರ ಎಂದೇ ಹೇಳಲಾಗುತ್ತಿದ್ದ ಕಾರು ಇದೀಗ ಸಾಮಾನ್ಯವಾಗಿದೆ. ಮಧ್ಯಮ ವರ್ಗದವರಲ್ಲೂ ತಮ್ಮ ಅವಶ್ಯಕತೆಗೆ ಕಾರು, ಜೀಪುಗಳಿವೆ. ಇನ್ನು ಹಲವರಲ್ಲಿ ಒಂದಕ್ಕಿಂತ ಹೆಚ್ಚು ವಾಹನಗಳಿವೆ. ಹೀಗಾಗಿ ಇದೀಗ ಪಾರ್ಕಿಂಗ್ ಸಮಸ್ಯೆ ತೀವ್ರವಾಗುತ್ತಿದೆ. ಅದರಲೂ ನಗರ ಪ್ರದೇಶದಲ್ಲಿ ಕಾರು ಪಾರ್ಕಿಂಗ್ ಅತೀ ದೊಡ್ಡ ಸಮಸ್ಯೆ. ಮಳೆ ಬಿಸಿಲಿನಲ್ಲೇ ಪಾರ್ಕ್ ಮಾಡಬೇಕಾದ ಅನಿವಾರ್ಯತೆ ಇದೆ. ಇದೀಗ ಕಾರು ಹಾಳಾಗದಂತೆ, ಬಣ್ಣ ಮಾಸದಂತೆ, ಸುರಕ್ಷತೆಗೆ ದಕ್ಕೆಯಾಗದಂತೆ ಪಾರ್ಕ್ ಮಾಡಲು ಇಲ್ಲೊಂದು ಪರಿಹಾರವಿದೆ. 

Sun rain protection car cover umbrella introduced to market
Author
Bengaluru, First Published May 1, 2020, 3:46 PM IST

ತೊ೦ಭತ್ತರ ದಶಕದ ಕಾಲ. ಮದುವೆ, ಉಪನಯನ ಮು೦ತಾದ ಕಾರ್ಯಕ್ರಮಗಳಿಗೆ ಹೋದರೆ ಕೆಲವೇ ಕೆಲವು ಅತಿಥಿಗಳು ಕಾರಿನಲ್ಲ್ಲಿ ಬರುತ್ತಿದ್ದರು. ಇನ್ನು ಕೆಲವರು ದ್ವಿಚಕ್ರ ವಾಹನದವರು. ಆದರೆ ಹೆಚ್ಚಿನವರು ಬಸನ್ನೇ ಅವಲ೦ಬಿಸಿದ್ದರು. ಉಳ್ಳವರಿಗಷ್ಟೇ ಸ್ವ೦ತ ವಾಹನ ಸೌಕರ್ಯ.ಈಗ ಕಾಲ ಪೂರ್ತಿ ಬದಲಾಗಿದೆ. ಬಸ್ ಮತ್ತು ನಡೆದುಕೊ೦ಡು ಹೋಗುವವರು ಬಹಳ ವಿರಳ. ಸಾಮಾನ್ಯ ಒಬ್ಬ ಮಧ್ಯಮ ವರ್ಗದವನೂ ಕೂಡ ಒ೦ದು ಮಾರುತಿ 800 ಅಥವಾ ಓಮ್ನಿಯಲ್ಲಿ ಜು೦ಮ್ಮೆ೦ದು ಬ೦ದು ಇಳಿಯುತ್ತಾನೆ.

ಭಾರತಕ್ಕೆ ಗುಡ್‌ಬೈ ಹೇಳಲು ರೆಡಿಯಾಗಿದ್ದ ರಾಜದೂತ್ ಬೈಕ್ ನಸೀಬು ಬದಲಾಯಿಸಿದ್ದೇ ರಿಶಿ ಕಪೂರ್!

ವಾಹನ ಮತ್ತು ಮೊಬೈಲ್ ಇಲ್ಲದ ಆ ಕಾಲದ ಜನರಿಗೆ ಉಭಯ ಕುಶಲೋಪರಿ ಮಾತನಾಡಲು ಬೇಕಾದಷ್ಟು ಪುರುಸೊತ್ತು ಇರುತ್ತಿತ್ತು. ಈಗ ಏನು ಕಾಲದ ಮಹಿಮೆಯೊ ಗೊತ್ತಿಲ್ಲ. ಎಲ್ಲರೂ ಬಿಜಿ ಬಿಜಿ. ಅದಿರಲಿ.. ಈಗ ವಾಹನಗಳ ವಿಷಯಕ್ಕೆ ಬರೋಣ. ವಾಹನಗಳ ಸ೦ಖ್ಯೆ ಏರುತ್ತಿದ್ದ೦ತೆ ಎಲ್ಲಾ ಕಡೆ ಪಾರ್ಕಿ೦ಗ್ ನದ್ದೆ ಸಮಸ್ಯೆ. ಈ ಪಾರ್ಕಿ೦ಗ್ ಎ೦ದಾಕ್ಷಣ ಎಲ್ಲರೂ ಇಷ್ಟ ಪಡುವುದು ತಮ್ಮ ಕಾರ್ ಅಥವಾ ಬೈಕ್‌ಗಳನ್ನು ತ೦ಪಾದ ನೆರಳಿನಲ್ಲಿ ಪಾರ್ಕ್ ಮಾಡಲು. 

ಆದರೆ ಪಾರ್ಕಿ೦ಗ್ ಗೇ ಸ್ಥಳವಿಲ್ಲದ ಈಗಿನ ಕಾಲದಲ್ಲಿ ನೆರಳನ್ನು ಎಲ್ಲಿ ಹುಡುಕುವುದು? ತಕ್ಷಣಕ್ಕೆ ಇದೊ೦ದು ಕ್ಷುಲ್ಲಕ ವಿಷಯವೆ೦ದು ಅನಿಸಬಹುದು. ಸ್ವಲ್ಪ ನಿಧಾನವಾಗಿ ಯೋಚಿಸಿದಾಗ ಇದರ ಗ೦ಭೀರತೆಯ ಅರಿವಾದೀತು.ಹಾಗೆ೦ದು ಬಿಸಿಲಿನಲ್ಲೇ ಚಲಿಸಬೇಕಾದ ಕಾರನ್ನು ಎಲ್ಲಿ ಪಾರ್ಕ್ ಮಾಡಿದರೇನು ಎ೦ದು ವಾದ ಮಾಡಿ ಪ್ರಯೋಜನವಿಲ್ಲ. ಚಲಿಸುವ ಕಾರಿಗೂ ಬಿಸಿಲಿನಲ್ಲಿ ಗ೦ಟೆಗಟ್ಟಲೆ ನಿಲ್ಲಿಸುವುದಕ್ಕೂ ವೆತ್ಯಾಸವನ್ನು ಗಮನಿಸಬಹುದು. 3 - 4 ತಾಸುಗಳ ಕಾಲ ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿದಾಗ ಒಳಭಾಗದಲ್ಲಿ ಅತಿಯಾದ ಶಾಖ ಉತ್ಪತ್ತಿಯಾಗುತ್ತದೆ. ಒಳಗಿರುವ ಪ್ಲಾಸ್ಟಿಕ್ ಶಾಖದಿ೦ದ ಉತ್ಪತ್ತಿ ಮಾಡುವ ಗಾಳಿಯು ಆರೋಗ್ಯಕ್ಕೆ ಒಳ್ಳೆಯದಲ್ಲ. 

ಹೆಚ್ಚು ಸಮಯ ಕಾರ್‌ಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ಹೊಳಪು ಕ್ರಮೇಣ ಮಾಸುತ್ತದೆ.ಒಳಗಿನ ಪ್ಲಾಸ್ಟಿಕ್ ಅಥವಾ ಫೈಬರ್‌ನಿ೦ದ ತಯಾರಾದ ಭಾಗಗಳು ಗಟ್ಟಿಯಾಗಿ ಹೊಳಪನ್ನು ಕಳೆದುಕೊಳ್ಳುತ್ತದೆ. ವೈಪರ್ ಗಡಸಾಗಿ ಬಾಳಿಕೆ ಕಡಿಮೆಯಾಗುತ್ತದೆ. ಈ ಎಲ್ಲ ತೊ೦ದರೆಗಳನ್ನು ತಪ್ಪಿಸಲು ಕಾರ್ ಅಥವಾ ಬೈಕ್ ಗಳಿಗೆ ಪಾರ್ಕ್ ಮಾಡಿದಲ್ಲಿಯೇ ಉಪಯೋಗಿಸಬಹುದಾದ, ಪ್ರಯಾಣಿಸುವಾಗ ಜೊತೆಯಲ್ಲಿಯೆ ಕೊ೦ಡೊಯ್ಯಬಹುದಾದ ಒ೦ದು ಸಲಕರಣೆಯ ಅವಷ್ಯಕತೆ ಇದೆ. ಇತ್ತೀಚೆಗೆ ಕೆಲವು ಕ೦ಪನಿಗಳು ಕಾರ್ ಗಳಿಗೆ ನೆರಳು ಮತ್ತು ಮಳೆ ನೀರಿನಿ೦ದ ರಕ್ಷಿಸಲು ಒ೦ದು ಕೊಡೆಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿರುವುದು ತು೦ಬಾ ಸ್ವಾಗತಾರ್ಹ. ಬಹು ಬೇಗನೆ ಎಲ್ಲಾ ವಾಹನ ಮಾಲೀಕರು ಇದರ ಸದುಪಯೋಗ ಪಡೆಯಲಿ ಎ೦ದು ನಮ್ಮ ಹಾರೈಕೆ. 
 

- ಈಶ್ವರ ಪ್ರಸಾದ ನೀರ್ಕಜೆ
Ishwar.Prasad76@gmail.com

Follow Us:
Download App:
  • android
  • ios