Asianet Suvarna News Asianet Suvarna News

ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

Weekly Horoscope 28 April 2019
Author
Bengaluru, First Published Apr 28, 2019, 7:25 AM IST

ಈ ವಾರದಲ್ಲಿ ನಿಮ್ಮ ಭವಿಷ್ಯ ಹೇಗಿದೆ..? ಯಾರಿಗೆ ಅನುಕೂಲವಿದೆ?

ಮೇಷ : ಕತ್ತಿ ಅಲುಗಿನ ನಡೆಗೆ ಸಿದ್ಧರಾಗಿ. ಸ್ವಲ್ಪ
ಯಾಮಾರಿದರೂ ಕಷ್ಟ. ಕೆಲಸದಿಂದ ಪಲಾಯನ
ಮಾಡಬೇಡಿ. ಎಂಥಾ ಸವಾಲೇ ಆದರೂ
ಎದುರಿಸಿ. ಸಂಸಾರದ ಜವಾಬ್ದಾರಿ ಹೆಚ್ಚಬಹುದು. ಹೆಚ್ಚಿನ
ತಾಳ್ಮೆ ಬೇಕು. ನಿಮ್ಮ ಸ್ವಭಾವದಲ್ಲಿರುವ ಸಿಟ್ಟನ್ನು ಈ ವಾರ
ನಿಯಂತ್ರಿಸಿ. ಜೂನ್ ನಂತರ ಎಲ್ಲ ಒಳ್ಳೆಯದಾಗುತ್ತೆ. 

ವೃಷಭ: ಮೈ ನವಿರೇಳಿಸುವ ಅನುಭವಗಳಿಗೆ ಸಿದ್ಧರಾಗಿ.
ಲೈಫ್‌ಅನ್ನು ತಿರುಗಿ ನೋಡುವ ಸಂದರ್ಭ
ಬರುತ್ತೆ. ಎಲ್ಲ ಬಗೆಯ ಸಂಬಂಧಗಳಲ್ಲೂ
ಹರ್ಷವಿದೆ. ಪ್ರವಾಸ ಹೋಗಲು, ಸಾಹಸದಲ್ಲಿ
ಪಾಲ್ಗೊಳ್ಳುವ ಅವಕಾಶ ಬರುತ್ತೆ. ಓದು, ವೃತ್ತಿಯ
ವಿಷಯಗಳಲ್ಲಿ ಬದಲಾವಣೆ ಆಗಬಹುದು

ಮಿಥುನ : ಹಣದ ವಿಚಾರದಲ್ಲಿ ಕಲಹಗಳಾಗಬಹುದು.
ಆರೋಗ್ಯದಲ್ಲಿ ಒಳಿತಾಗಬಹುದು. ನಿಮ್ಮ
ಫ್ರೆಂಡ್ಲಿ ಗುಣಕ್ಕೆ ಸಾಕಷ್ಟು ಪ್ರಶಂಸೆ ಬರಬಹುದು.
ಆದರೆ ನರಿಯಂಥ ಸ್ವಭಾವದವರು ಎದುರಿನಿಂದ ಚೆನ್ನಾಗಿ
ಮಾತನಾಡಿ ಹಿಂದಿಂದ ಬರೆ ಹಾಕಬಹುದು, ಎಚ್ಚರ.
ಆತ್ಮಸಾಕ್ಷಿಯಂತೆ ನಡೆಯಿರಿ. 

ಕಟಕ : ನಿಮ್ಮೊಳಗೆ ನೀವು ಬಂಧಿಯಾಗಿದ್ದರೆ ಜಗತ್ತನ್ನು
ನೋಡಲಿಕ್ಕಾಗಲ್ಲ. ಚಿಪ್ಪಿನೊಳಗಿಂದ ಹೊರಬನ್ನಿ.
ಈ ಸಂಕುಚಿತತೆ ಬಿಟ್ಟು ದೃಷ್ಟಿವಿಸ್ತರಿಸಿಕೊಂಡಷ್ಟೂ
ನಿಮಗೇ ಲಾಭ. ಗಡಿಬಿಡಿ ಬೇಡ, ಸಾವಧಾನತೆ ಬರಲಿ.
ಸಂಯಮ ಪರೀಕ್ಷೆಯಾಗಬಹುದು, ಹುಷಾರಾಗಿರಿ.
ಹಣವನ್ನು ವೃಥಾ ಪೋಲು ಮಾಡುವುದನ್ನು ನಿಲ್ಲಿಸಿ. 

ಸಿಂಹ : ಆಸ್ತಿ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಇದು ಸಕಾಲ.
ಹಿರಿಯರ ಸಲಹೆ ಪಡೆಯಿರಿ. ಹಳೆಯ
ಗೆಳೆಯರ ಜೊತೆಗೆ ಹೊಸ ಮಿತ್ರರು
ಸಿಗಬಹುದು. ಲೆಕ್ಕಾಚಾರದಲ್ಲಿ ಗೆಳೆತನ ಮಾಡಬೇಡಿ.
ನಿರುದ್ದೇಶದ ಸ್ನೇಹದಿಂದ ಒಳಿತಾಗುತ್ತದೆ. ನಿಮ್ಮೊಳಗಿನ
ಲೀಡರ್‌ಅನ್ನು ಬಡಿದೆಬ್ಬಿಸಿ. 

ಕನ್ಯಾ :ಮನಃಶಾಂತಿ ಬಗ್ಗೆ ಕಾಳಜಿ ಇರಲಿ.
ನೆರೆಹೊರೆಯವರ ಬಗ್ಗೆ, ಕೊಂಕು ತೆಗೆಯುವ
ಸಂಬಂಧಿಕರ ಬಗ್ಗೆ ಹುಷಾರಾಗಿರಿ. ಎಲ್ಲೂ ಅಳತೆ
ತಪ್ಪಿ ಮಾತಾಡಬೇಡಿ. ಅಪರಿಚಿತರಿಂದ ಹಾನಿಯಿದೆ.
ಆಧ್ಯಾತ್ಮದ ಬಗ್ಗೆ ಆಸಕ್ತಿ ಬರಬಹುದು. ಸಂಸಾರದಲ್ಲಿ
ಭಿನ್ನಾಭಿಪ್ರಾಯ ಬಂದರೂ ಬೇಗ ಸರಿಹೋಗುತ್ತದೆ. 

ತುಲಾ :ಶುಕ್ರನ ದೆಸೆಯಿಂದ ಹಣ ಹರಿವು
ಚೆನ್ನಾಗಿರುತ್ತದೆ. ಹಣದ ಜೊತೆಗೆ ಯಶಸ್ಸೂ
ಸಿಗುತ್ತದೆ. ಬುಧ ಹಾಗೂ ಶುಕ್ರರ ದೆಸೆಯಿಂದ
ಅಧಿಕಾರವೂ ಸಿಗಬಹುದು. ಉದ್ಯೋಗದಲ್ಲಿದ್ದವರಿಗೆ
ಭಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು.
ಹಾಗಂತ ಯಶಸ್ಸಿನ ಮದ ತಲೆಗೇರಿಸಿಕೊಳ್ಳಬೇಡಿ. 

ವೃಶ್ಚಿಕ : ಆತ್ಮೀಯರು ಜೊತೆಗಿರಬೇಕು ಅಂದರೆ ನೀವು
ನಗುನಗುತ್ತಿರಬೇಕು. ಗುರುಬಲವಿರುವ ಕಾರಣ
ಹೆಸರು ಬರಬಹುದು. ಶನಿಯ ಪ್ರಭಾವ
ಕಡಿಮೆಯಾಗಬಹುದು. ಆದರೂ ಸ್ಪಷ್ಟ ನಿರ್ಧಾರಕ್ಕೆ
ಬರಲು ಸಾಧ್ಯವಾಗದಿರಬಹುದು. ಜೂನ್‌ನಲ್ಲಿ ಒಳಿತಿದೆ.
ನಿಮ್ಮ ಶಕ್ತಿಯ ಬಗ್ಗೆ ನಂಬಿಕೆ ಇರಲಿ. 

ಧನಸ್ಸು : ಇದು ಪರೀಕ್ಷಾ ಕಾಲ. ಜಾಗೃತರಾಗಿರಿ. ಒಂದು
ಹಂತದಲ್ಲಿ ಇನ್ನು ತಡೆದುಕೊಳ್ಳುವುದು ನನ್ನಿಂದ
ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಬರಬಹುದು.
ಮೇ೧೦ರ ಬಳಿಕ ಎಲ್ಲ ತಿಳಿಯಾಗುತ್ತದೆ. ಕಷ್ಟಗಳ ದಿನ
ಕಳೆದು ಖುಷಿಯ ದಿನ ಬರುತ್ತದೆ. 

ಮಕರ : ಒಬ್ಬ ಸಮರ್ಥ ಮಾರ್ಗದರ್ಶಿಯನ್ನು
ಹುಡುಕುವ ಸಮಯ. ಅವರಿಂದ ನಿಮ್ಮ
ಮನೋಬಲ ವೃದ್ಧಿಸುತ್ತದೆ. ಆಗಾಗ ಸುಸ್ತು,
ಆಯಾಸ ಕಾಡಬಹುದು. ಬಂದ ಅವಕಾಶ ಬಳಸಿ
ಶ್ರಮಪಟ್ಟರೆ ಉತ್ತಮ ಫಲವಿದೆ. 

ಕುಂಭ :ಇನ್ನೊಬ್ಬರ ಟೀಕೆಗೆ ಬೆಲೆ ಕೊಡುವುದೇ ನಿಮ್ಮ
ಹಿನ್ನಡೆಗೆ ಮುಖ್ಯ ಕಾರಣ. ಕೆಲವೊಂದು
ಘಟನೆಗಳು ಕಣ್ಣೀರು ತರಿಸಬಹುದು. ಅತಿ
ಭಾವುಕತೆ, ಬೇಡದ ಕಡೆ ಮೃದುತ್ವ, ಗೊಂದಲ,
ಗಡಿಬಿಡಿಗಳಿಂದ ಹೊರಬರಲು ಪ್ರಯತ್ನಿಸಿ. ವಿವೇಕಿಗಳಾಗಿ
ವರ್ತಿಸಿದರೆ ಒಳಿತಿದೆ. 

ಮೀನ : ತಪ್ಪನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದು
ಖಂಡಿತಾ ಹಿನ್ನಡೆಯಲ್ಲ. ನಿಮ್ಮ ಒಳ್ಳೆಯತನಕ್ಕೆ
ಬೆಲೆ ಸಿಕ್ಕೇ ಸಿಗುತ್ತದೆ. ಆದರೆ ಸ್ವಲ್ಪ ತಾಳ್ಮೆ ಇರಲಿ.
ನೀವೇನು ಅನ್ನೋದನ್ನು ಜಗತ್ತಿಗೆ ತೋರಿಸಲು ಇದು
ಸಕಾಲ. ಶ್ರದ್ಧೆಯಿಂದ ಮುಂದುವರಿಯಿರಿ. 

Follow Us:
Download App:
  • android
  • ios