Asianet Suvarna News Asianet Suvarna News

ಒಂದು ರಾಶಿಗೆ ಈ ವಾರವು ಹೆಚ್ಚು ಶುಭ ಲಾಭದಾಯ : ಉಳಿದ ರಾಶಿಗಳ ವಾರ ಭವಿಷ್ಯ?

ಸೆಪ್ಟೆಂಬರ್ 15ರ ವಾರ ಭವಿಷ್ಯ, ಹೇಗಿದೆ ಈ ವಾರದ ರಾಶಿಗಳ ಫಲಾ ಫಲ

Weekly Horoscope 15 September 2019
Author
Bengaluru, First Published Sep 15, 2019, 7:18 AM IST

ಮೇಷ

ಬೇರೆಯವರನ್ನು ಮೆಚ್ಚಿಸಲೆಂದು ಯಾವ ಕೆಲಸ
ವನ್ನೂ ಮಾಡದಿರಿ. ನಿಮ್ಮ ಮನಸ್ಸಿಗೆ ಸರಿ ಎಂದು
ತೋರಿದರಷ್ಟೇ ಮುಂದುವರಿಯಿರಿ. ಅದರಿಂದ
ಮುಂದಿನ ಕೆಲಸಕ್ಕೂ ನಿಮಗೆ ಇನ್ನಷ್ಟು ಪ್ರೇರಣೆ ಸಿಕ್ಕಂತಾಗು
ತ್ತದೆ. ಹೊಸ ಆಲೋಚನೆಗಳು ಹೊಳೆದಲ್ಲಿ ಅದನ್ನು
ಹಿರಿಯರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಿ.

ವೃಷಭ 

ನಿಮ್ಮೆದುರು ಬರುವ ಸವಾಲುಗಳನ್ನು
ಧೈರ್ಯದಿಂದಲೇ ಎದುರಿಸಿ. ಆಗ ಕಷ್ಟಗಳು
ಬಂದರೆ ಹೇಗೆ ಬಗೆಹರಿಸಿಕೊಳ್ಳಬಹುದು ಎಂದು
ನಿಮಗೇ ತಿಳಿಯುತ್ತೆ. ಕಷ್ಟಗಳು ಬಂತೆಂದು ಅದಕ್ಕೆ ಬೆನ್ನು
ತೋರಿಸಿ ಓಡಿದರೆ ಹೇಡಿಯಾಗುತ್ತೀರಿ. ಸಿಹಿ-ಕಹಿ ಎರಡೂ
ಇದ್ದಲ್ಲಿ ಸುಂದರ ಜೀವನ ನಡೆಸಬಹುದು.

ಮಿಥುನ

ಕೆಲವೊಮ್ಮೆ ಸಮಯ ಸಂದರ್ಭಕ್ಕೆ
ಅನುಗುಣವಾಗಿ ನಡೆದುಕೊಳ್ಳುವುದು
ಅನಿವಾರ್ಯ. ಈಗ ಬೇಸರ ಮೂಡಿಸಿದರೂ,
ಮುಂದಿನ ದಿನಗಳಲ್ಲಿ ನೆಮ್ಮದಿ ಜೀವನ ನಡೆಸಬಹುದು.
ಯಾರೂ ನಿಮ್ಮ ಕಷ್ಟಗಳಿಗೆ ಕಿವಿಗೊಡದಿದ್ದಾಗ ನಿಮ್ಮಷ್ಟಕ್ಕೆ
ನೀವು ಧೈರ್ಯ ತಂದುಕೊಂಡು ಮುನ್ನಡೆಯಿರಿ.

ಕಟಕ

ಬದುಕಲ್ಲಿ ಇನ್ನಬ್ಬರ ಅನುಭವ ಕೇಳಿ ನಾವು
ಕಲಿಯುವುದಕ್ಕಿಂತೆ ನಮ್ಮ ಅನುಭವಗಳೇ
ಕಲಿಸುವ ಪಾಠ ಹೆಚ್ಚು ಪರಿಣಾಮಕಾರಿ
ಯಾಗಿರುತ್ತೆ. ಇದಕ್ಕೆ ಯಾವ ಗುರುವೂ ಬೇಡ. ಪೆಟ್ಟು
ತಿಂದ ಮನುಷ್ಯ ಮತ್ತೊಮ್ಮೆ ಆ ತಪ್ಪು ಮಾಡುವುದಿಲ್ಲ.
ಯೋಚಿಸಿಯೇ ಒಂದೊಂದೇ ಹೆಜ್ಜೆ ಇಡುತ್ತಾನೆ.

ಸಿಂಹ

ಇಬ್ಬರ ಜಗಳದಲ್ಲಿ ಮೂರನೆಯವರಿಗೆ
ಲಾಭವಂತೆ. ಯಾರೋ ಕಿತ್ತಾಡುವಾಗ ನೀವು
ಮೂಗು ತೂರಿಸುವುದು. ಹಾಗೊಮ್ಮೆ
ಮುಂದಾದಲ್ಲಿ ನಿಮಗೇ ಆಪತ್ತು ಕಟ್ಟಿಟ್ಟಬುತ್ತಿ. ಮನೆಗೆ
ಬಂಧುಗಳ ಆಗಮನ ಸಾಧ್ಯತೆ. ಮಕ್ಕಳಿಂದ ಪೋಷಕರಿಗೆ
ಗೌರವ ಹೆಚ್ಚಲಿದೆ. ಸೇವಾ ಕಾರ್ಯದಲ್ಲಿ ತೊಡಗುವಿರಿ.

ಕನ್ಯಾ

ಆರ್ಥಿಕ ಚಟುವಟಿಕೆಯಲ್ಲಿ ಹೆಚ್ಚು ಆಸಕ್ತಿ
ಹಾಗೂ ವಾರಾಂತ್ಯದಲ್ಲಿ ಲಾಭ ತಂದುಕೊಡ
ಲಿದೆ. ಆಮೀಷಗಳಿಂದ ದೂರ ಇರಿ. ನಿಮ್ಮ
ಒತ್ತಡದ ಕೆಲಸವನ್ನು ಮನೆಯವರ ಮೇಲೆ ಹೇರದಿರಿ.
ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಕೈಲಾದವರಿಗೆ
ಸೇವಾ ಕಾರ್ಯ ಮಾಡಿ. ಮನಸ್ಸಿಗೂ ನೆಮ್ಮದಿ ಸಿಗಲಿದೆ.

ತುಲಾ

ಒಬ್ಬರನ್ನು ಇನ್ನೊಬ್ಬರನ್ನು ಹೋಲಿಸಿ ಮಾತನಾ
ಡದಿರಿ. ಅದರಿಂದ ಅವರ ಮನಸ್ಸಿಗೆ ಬೇಸರ
ಮೂಡಿಸಬಹುದು. ನಿಮಗೂ ಇನ್ನೊಬ್ಬರನ್ನು
ಹೋಲಿಸಿ ಮೂರನೆಯವರು ಮಾತನಾಡಬಹುದು
ಎಂಬುದು ನೆನಪಿರಲಿ. ಭಾವನಾತ್ಮಕ ಮನಸ್ಸುಳ್ಳ ನಿಮಗೆ
ವಾರಾತ್ಯಂದಲ್ಲಿ ಹೆಚ್ಚು ತಳಮಳಕ್ಕೆ ಒಳಗಾಗಲಿದ್ದೀರಿ.

ವೃಶ್ಚಿಕ

ಒಳ್ಳೆಯ ಕೆಲಸಗಳಿಗೆ ಅಡೆತಡೆಗಳು ಬರುವುದು
ಸಹಜ. ಅದನ್ನು ಸೂಕ್ತವಾಗಿ ಬುದ್ಧಿ
ಉಪಯೋಗಿಸಿ ಸರಿಪಡಿಸಿಕೊಳ್ಳಿ. ಕಲ್ಲಿನ ಹಾದಿ
ಇದ್ದಾಗ ಮುಳ್ಳುಗಳೂ ಇರುತ್ತವೆ ಎನ್ನುವುದು ನೆನಪಿರಲಿ.
ಏಕೆಂದರೆ ನೀವು ಆಯ್ಕೆ ಮಾಡಿಕೊಳ್ಳುವ ಕೆಲಸವೇ
ಹಾಗಿದ್ದಾಗ ಎಲ್ಲವನ್ನೂ ಎದುರಿಸಲೇಬೇಕಾಗುತ್ತದೆ.

ಧನಸ್ಸು

ಕೆಲ ವಿಚಾರಗಳಿಗೆ ಈಗಾಗಲೇ ಮುಂದಡಿಯಿ
ಟ್ಟಾಗಿದೆ. ಮತ್ತೆ ಹಿಂದೆ ನೋಡುವ ಪ್ರಶ್ನೆ ನಿಮ್ಮ
ಮುಂದಿಲ್ಲ. ಅಲ್ಪ ಕಾಲದಲ್ಲಿ ಮಾಡಬಹುದಾದ
ಕೆಲಸಗಳನ್ನು ಮಾಡಿ ಮುಗಿಸಿಬಿಡಿ. ವಾರಾಂತ್ಯದಲ್ಲಿ ದೂರ
ಪ್ರಯಾಣ ಸಾಧ್ಯತೆ. ಸಹಜ ಆಯಾಸ ಇರಲಿದೆ.

ಮಕರ

ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ
ಶುಭ ಕಾರ್ಯಗಳು ನಡೆಯುವ ಸಾಧ್ಯತೆಗಳಿವೆ.
ಕೆಲಸದಲ್ಲಿ ಒತ್ತಡ ಹೆಚ್ಚಿರಲಿದ್ದು, ವಾರಾಂತ್ಯದಲ್ಲಿ
ನಿಮಗೆ ಹಾಯ್ ಎನಿಸುವ ಕಡೆ ದೂರ ಪ್ರಯಾಣ ಬೆಳೆಸಿ.
ಧ್ಯಾನ, ಯೋಗದಿಂದಲೂ ಇದು ಸಾಧ್ಯ. 

ಕುಂಭ

ನಿಮ್ಮ ಸನ್ನಡತೆ ಹಾಗೂ ಒಳ್ಳೆಯ ಮಾತುಗಳು
ಇನ್ನೊಬ್ಬರಿಗೆ ಪ್ರೇರಣೆಯಾಗಲಿದೆ. ಅನಿರೀಕ್ಷಿತ
ಘಟನೆಗಳು ನಡೆಯಲಿದ್ದು, ಚಾಣಾಕ್ಷತನದಿಂದ
ಎದುರಿಸಿ ಹೊರಬರಲಿದ್ದೀರಿ. ಹೊಸ ಸ್ನೇಹಿತರ ಪ್ರರಿಚಯ
ಸಾಧ್ಯತೆ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆಯ ನಡೆ
ಈ ಸಮಯದಲ್ಲಿ ಬಹಳ ಮುಖ್ಯ. 

ಮೀನ

ಸಣ್ಣ ವಿಚಾರಗಳಲ್ಲಿ ಹೇರಳವಾದ ಖುಷಿ
ಇರುವಾಗ ಯಾವುದೋ ಮನಸ್ಥಾಪ ಇಟ್ಟು
ಕೊಂಡು ದೊಡ್ಡ ವಿಷಯ ಮಾಡಿ ಹಟ
ಸಾಧಿಸುವುದು ಸರಿಯಲ್ಲ. ಈಗಿನ ಕಾಲದಲ್ಲಿ ಸಂತೋಷ
ಸಿಗುವುದೇ ವಿರಳ. ಅದನ್ನು ಉಳಿಸಿಕೊಳ್ಳಬೇಕು ಅಷ್ಟೆ.

Follow Us:
Download App:
  • android
  • ios