Asianet Suvarna News Asianet Suvarna News

ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?

ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?

Special Bhavishya 24 Novembr 2018
Author
Bengaluru, First Published Nov 24, 2018, 7:12 AM IST

ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?

24-11-18 - ಶನಿವಾರ
=======================
ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಕೃಷ್ಣ ಪಕ್ಷ
ಪ್ರತಿಪತ್ 
ರೋಹಿಣಿ ನಕ್ಷತ್ರ 
====================
ರಾಹುಕಾಲ  09.15 ರಿಂದ 10.41
ಯಮಗಂಡ ಕಾಲ  01.32 ರಿಂದ 02.58
ಗುಳಿಕ ಕಾಲ  06.23 ರಿಂದ 07.49
 
==========================================
ಮೇಷ - ಇಂದು ತಾಯಿಯಿಂದ ಧನ ಸಹಾಯ, ನಿಮ್ಮ ಸಂಗಾತಿ ನಿಮ್ಮ ಸಮಸ್ಯೆ ನಿವಾರಣೆ ಮಾಡುವುದಲ್ಲದೆ, ಧನಾಗಮನಕ್ಕೆ ದಾರಿ ತೋರುತ್ತಾರೆ, ಹಣ್ಣು-ಹೂವಿನ ವ್ಯಾಪಾರಿಗಳಿಗೆ ಉತ್ತಮ ದಿನ. ಶುಭದಿನವಾಗಿರಲಿದೆ. 

ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ ಹೂವು ಸಮರ್ಪಣೆ ಮಾಡಿ.

ವೃಷಭ - ನಿಮ್ಮವ್ಯಾಪಾರದಲ್ಲಿ ಉತ್ತಮರ ಸಹಕಾರ, ವ್ಯಾಪಾರ ವೃದ್ಧಿ, ಸ್ನೆಹಿತರಿಂದ ಸಹಾಯವಾಗುವ ದಿನ, ನಿಮ್ಮ ಎಷ್ಟೋದಿನದ ಆಕಾಂಕ್ಷೆ ಇಂದು ಈಡೇರುವ ಸಾಧ್ಯತೆ ಇದೆ. ಉತ್ತಮ ದಿನ. 

ದೋಷ ಪರಿಹಾರ : ಶ್ರೀಸೂಕ್ತ ಪಠಿಸಿ. 

ಮಿಥುನ : ಉದ್ಯೋಗದಲ್ಲಿ ಪ್ರಶಂಸೆ, ಮಕ್ಕಳಿಂದ ಉದ್ಯೋಗಕ್ಕೆ ಸಹಾಯ, ಓರ್ವ ಸ್ತ್ರೀಯಿಂದ ಧನಾಗಮನ, ತಾಯಿಯಿಂದ ಅನುಕೂಲವಾಗಲಿದೆ. ಜೀವನ ಸುಗಮ.

ಕಟಕ : ಸಹೋದರಿಯರಿಂದ ಸ್ವಲ್ಪ ಕಿರಿಕಿರಿ, ದ್ವೇಷ ಸಾಧನೆಗೆ ಅವಕಾಶವಿಲ್ಲ, ಹೆಚ್ಚು ಚಿಂತೆ ಬೇಡ. ಮಾನಸಿಕವಾಗಿ ಸ್ವಲ್ಪ ಹತಾಶರಾಗುವ ಸಾಧ್ಯತೆ ಇದೆ, ಉದ್ಯೋಗಿಗಳಿಗೆ ಸಮಾಧಾನದ ದಿನ.

ದೋಷ ಪರಿಹಾರ : ಶಿವ ಪಾರ್ವತಿಯರ ದರ್ಶನ ಮಾಡಿ

ಸಿಂಹ : ಧನಾಗಮನ, ಮನೆ ವಿಚಾರದಲ್ಲಿ ಉತ್ತಮ ಚಿಂತನೆ, ಭೂ ವ್ಯಾಪಾರಿಗಳಿಗೆ ಉತ್ತಮ ಲಾಭ, ಅನುಕೂಲ ವಾತಾವರಣ, ನಿಮ್ಮ ಆಲೋಚನೆಗಳಿಗೆ ಉತ್ತಮ ವೇದಿಕೆ ಸಿಗಲಿದೆ.  

ದೋಷ ಪರಿಹಾರ : ಮಹಾಲಕ್ಷ್ಮಿಗೆ 5 ನಮಸ್ಕಾರ ಮಾಡಿ.

ಕನ್ಯಾ : ಕುಟುಂಬದಲ್ಲಿ ಹಿರಿಯರಿಂದ ಸಲಹೆ. ಸಲಹೆ ಪಾಲಿಸಿದರೆ ಒಳಿತು. ಉದ್ಯೋಗದಲ್ಲಿರುವವರಿಗೆ ಉತ್ತಮ ಪ್ರಗತಿ. ಮಾತಿನಿಂದ ಕಾರ್ಯ ಸಾಧನೆ ಮಾಡುವ ದಿನ, ಮಕ್ಕಳಿಂದ ಚಿಂತೆ. 

ದೋಷ ಪರಿಹಾರ :  ನಾಗ ದೇವರಿಗೆ 5 ಪ್ರದಕ್ಷಿಣೆ ಹಾಕಿ

ತುಲಾ : ಉದ್ಯೋಗದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ವಲ್ಪ ಜಾಗರೂಕರಾಗಿರಿ. ಸಹೋದರರು ಸಹಾಯ ಮಾಡುತ್ತಾರೆ. ಧೈರ್ಯದ ಮನಸ್ಸಿರುವುದಿಲ್ಲ. 

ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ವೃಶ್ಚಿಕ : ನಿಮ್ಮಲ್ಲಿ ಅಂತ:ಶಕ್ತಿ ಪ್ರಕಟವಾಗುತ್ತದೆ, ಹೊಸ ಕಾರ್ಯಕ್ಕೆ ಮುನ್ನುಗ್ಗುತ್ತೀರಿ, ಆದರೆ ಸ್ವಲ್ಪ ಕಟು ಮಾತುಗಳನ್ನಾಡಿ ಜಗಳ ಮಾಡಿಕೊಳ್ಳುವ ಸಂದರ್ಭವೂ ಇದೆ. ಸಮಾಧಾನದಿಂದ ಕಾರ್ಯ ಸಾಧಿಸಿ. 

ದೋಷ ಪರಿಹಾರ :  ಕಬ್ಬಿಣದ ವಸ್ತುವನ್ನು ದಾನ ಮಾಡಿ

ಧನಸ್ಸು : ವಹಿವಾಟಿನಲ್ಲಿ ಲಾಭ ಸಿಗಲಿದೆ, ಮಡದಿಯೊಂದಿಗೆ ಸಣ್ಣ  ಜಗಳ, ಮನಸ್ತಾಪ. ವ್ಯಾಪಾರದಲ್ಲಿ ಕಿರಿಕಿರಿಯಾಗಲಿದೆ, ಸ್ವಲ್ಪ ಮಟ್ಟಿಗೆ ಧನ ವ್ಯಯವೂ ಆಗಲಿದೆ.

ದೋಷ ಪರಿಹಾರ : ನಂಬಿದ ದೇವರಿಗೆ ಅನನ್ಯಭಾವದಲ್ಲಿ ಮೂರು ನಮಸ್ಕಾರ ಮಾಡಿ.

ಮಕರ :  ವಾಹನ ಚಲಾಯಿಸುವಾಗ ಎಚ್ಚರದಿಂದಿರಿ. ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ. ಗಂಡ-ಹೆಂಡಿರಲ್ಲಿ ವೈಮನಸ್ಸಾಗುವ ಸಾಧ್ಯತೆ. ನಿಮ್ಮ ಕಾರ್ಯದಲ್ಲಿ ನಂಬಿಕೆ ಇರಲಿ. ವಾಗ್ವಾದಕ್ಕೆ ದಾರಿ ಮಾಡಿಕೊಡಬೇಡಿ.

ದೋಷ ಪರಿಹಾರ : ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ. 

ಕುಂಭ : ಇಂದು ನಿಮಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ನಿರ್ಲಕ್ಷಿಸದೆ  ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೇದು. ಉಳಿದಂತೆ ಹೆಚ್ಚು ತೊಂದರೆ ಇಲ್ಲ. 

ದೋಷ ಪರಿಹಾರ : ಸಂಜೀವಿನಿ ಮಂತ್ರ ಪಠಿಸಿ   

ಮೀನ : ಗಂಡ ಹೆಂಡಿರಲ್ಲಿ ಅನ್ಯೋನ್ಯ ಭಾವ. ವ್ಯಾಪಾರಿಗಳಿಗೆ ಧನ ಲಾಭ, ಉಪನ್ಯಾಸಕರಿಗೆ, ಪ್ರವಚನಕಾರರಿಗೆ ಉತ್ತಮ ದಿನ, ವ್ಯಾಪಾರಿಗಳಿಗೆ ಲಾಭದ ದಿನ. 

ದೋಷ ಪರಿಹಾರ : ಗುರು ದರ್ಶನ ಮಾಡಿ.

ವಾಞ್ಮಯೀ

Follow Us:
Download App:
  • android
  • ios