ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?
ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?
ಈ ರಾಶಿಗೆ ಹರಿದು ಬರಲಿದೆ ಹಣ : ಉಳಿದ ರಾಶಿ ಹೇಗಿದೆ..?
24-11-18 - ಶನಿವಾರ
=======================
ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಕೃಷ್ಣ ಪಕ್ಷ
ಪ್ರತಿಪತ್
ರೋಹಿಣಿ ನಕ್ಷತ್ರ
====================
ರಾಹುಕಾಲ 09.15 ರಿಂದ 10.41
ಯಮಗಂಡ ಕಾಲ 01.32 ರಿಂದ 02.58
ಗುಳಿಕ ಕಾಲ 06.23 ರಿಂದ 07.49
==========================================
ಮೇಷ - ಇಂದು ತಾಯಿಯಿಂದ ಧನ ಸಹಾಯ, ನಿಮ್ಮ ಸಂಗಾತಿ ನಿಮ್ಮ ಸಮಸ್ಯೆ ನಿವಾರಣೆ ಮಾಡುವುದಲ್ಲದೆ, ಧನಾಗಮನಕ್ಕೆ ದಾರಿ ತೋರುತ್ತಾರೆ, ಹಣ್ಣು-ಹೂವಿನ ವ್ಯಾಪಾರಿಗಳಿಗೆ ಉತ್ತಮ ದಿನ. ಶುಭದಿನವಾಗಿರಲಿದೆ.
ದೋಷ ಪರಿಹಾರ : ದೇವಿ ದೇವಸ್ಥಾನಕ್ಕೆ ಹೂವು ಸಮರ್ಪಣೆ ಮಾಡಿ.
ವೃಷಭ - ನಿಮ್ಮವ್ಯಾಪಾರದಲ್ಲಿ ಉತ್ತಮರ ಸಹಕಾರ, ವ್ಯಾಪಾರ ವೃದ್ಧಿ, ಸ್ನೆಹಿತರಿಂದ ಸಹಾಯವಾಗುವ ದಿನ, ನಿಮ್ಮ ಎಷ್ಟೋದಿನದ ಆಕಾಂಕ್ಷೆ ಇಂದು ಈಡೇರುವ ಸಾಧ್ಯತೆ ಇದೆ. ಉತ್ತಮ ದಿನ.
ದೋಷ ಪರಿಹಾರ : ಶ್ರೀಸೂಕ್ತ ಪಠಿಸಿ.
ಮಿಥುನ : ಉದ್ಯೋಗದಲ್ಲಿ ಪ್ರಶಂಸೆ, ಮಕ್ಕಳಿಂದ ಉದ್ಯೋಗಕ್ಕೆ ಸಹಾಯ, ಓರ್ವ ಸ್ತ್ರೀಯಿಂದ ಧನಾಗಮನ, ತಾಯಿಯಿಂದ ಅನುಕೂಲವಾಗಲಿದೆ. ಜೀವನ ಸುಗಮ.
ಕಟಕ : ಸಹೋದರಿಯರಿಂದ ಸ್ವಲ್ಪ ಕಿರಿಕಿರಿ, ದ್ವೇಷ ಸಾಧನೆಗೆ ಅವಕಾಶವಿಲ್ಲ, ಹೆಚ್ಚು ಚಿಂತೆ ಬೇಡ. ಮಾನಸಿಕವಾಗಿ ಸ್ವಲ್ಪ ಹತಾಶರಾಗುವ ಸಾಧ್ಯತೆ ಇದೆ, ಉದ್ಯೋಗಿಗಳಿಗೆ ಸಮಾಧಾನದ ದಿನ.
ದೋಷ ಪರಿಹಾರ : ಶಿವ ಪಾರ್ವತಿಯರ ದರ್ಶನ ಮಾಡಿ
ಸಿಂಹ : ಧನಾಗಮನ, ಮನೆ ವಿಚಾರದಲ್ಲಿ ಉತ್ತಮ ಚಿಂತನೆ, ಭೂ ವ್ಯಾಪಾರಿಗಳಿಗೆ ಉತ್ತಮ ಲಾಭ, ಅನುಕೂಲ ವಾತಾವರಣ, ನಿಮ್ಮ ಆಲೋಚನೆಗಳಿಗೆ ಉತ್ತಮ ವೇದಿಕೆ ಸಿಗಲಿದೆ.
ದೋಷ ಪರಿಹಾರ : ಮಹಾಲಕ್ಷ್ಮಿಗೆ 5 ನಮಸ್ಕಾರ ಮಾಡಿ.
ಕನ್ಯಾ : ಕುಟುಂಬದಲ್ಲಿ ಹಿರಿಯರಿಂದ ಸಲಹೆ. ಸಲಹೆ ಪಾಲಿಸಿದರೆ ಒಳಿತು. ಉದ್ಯೋಗದಲ್ಲಿರುವವರಿಗೆ ಉತ್ತಮ ಪ್ರಗತಿ. ಮಾತಿನಿಂದ ಕಾರ್ಯ ಸಾಧನೆ ಮಾಡುವ ದಿನ, ಮಕ್ಕಳಿಂದ ಚಿಂತೆ.
ದೋಷ ಪರಿಹಾರ : ನಾಗ ದೇವರಿಗೆ 5 ಪ್ರದಕ್ಷಿಣೆ ಹಾಕಿ
ತುಲಾ : ಉದ್ಯೋಗದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಸ್ವಲ್ಪ ಜಾಗರೂಕರಾಗಿರಿ. ಸಹೋದರರು ಸಹಾಯ ಮಾಡುತ್ತಾರೆ. ಧೈರ್ಯದ ಮನಸ್ಸಿರುವುದಿಲ್ಲ.
ದೋಷ ಪರಿಹಾರ : ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ.
ವೃಶ್ಚಿಕ : ನಿಮ್ಮಲ್ಲಿ ಅಂತ:ಶಕ್ತಿ ಪ್ರಕಟವಾಗುತ್ತದೆ, ಹೊಸ ಕಾರ್ಯಕ್ಕೆ ಮುನ್ನುಗ್ಗುತ್ತೀರಿ, ಆದರೆ ಸ್ವಲ್ಪ ಕಟು ಮಾತುಗಳನ್ನಾಡಿ ಜಗಳ ಮಾಡಿಕೊಳ್ಳುವ ಸಂದರ್ಭವೂ ಇದೆ. ಸಮಾಧಾನದಿಂದ ಕಾರ್ಯ ಸಾಧಿಸಿ.
ದೋಷ ಪರಿಹಾರ : ಕಬ್ಬಿಣದ ವಸ್ತುವನ್ನು ದಾನ ಮಾಡಿ
ಧನಸ್ಸು : ವಹಿವಾಟಿನಲ್ಲಿ ಲಾಭ ಸಿಗಲಿದೆ, ಮಡದಿಯೊಂದಿಗೆ ಸಣ್ಣ ಜಗಳ, ಮನಸ್ತಾಪ. ವ್ಯಾಪಾರದಲ್ಲಿ ಕಿರಿಕಿರಿಯಾಗಲಿದೆ, ಸ್ವಲ್ಪ ಮಟ್ಟಿಗೆ ಧನ ವ್ಯಯವೂ ಆಗಲಿದೆ.
ದೋಷ ಪರಿಹಾರ : ನಂಬಿದ ದೇವರಿಗೆ ಅನನ್ಯಭಾವದಲ್ಲಿ ಮೂರು ನಮಸ್ಕಾರ ಮಾಡಿ.
ಮಕರ : ವಾಹನ ಚಲಾಯಿಸುವಾಗ ಎಚ್ಚರದಿಂದಿರಿ. ಸ್ವಲ್ಪ ಅಪಾಯವಾಗುವ ಸಾಧ್ಯತೆ ಇದೆ. ಗಂಡ-ಹೆಂಡಿರಲ್ಲಿ ವೈಮನಸ್ಸಾಗುವ ಸಾಧ್ಯತೆ. ನಿಮ್ಮ ಕಾರ್ಯದಲ್ಲಿ ನಂಬಿಕೆ ಇರಲಿ. ವಾಗ್ವಾದಕ್ಕೆ ದಾರಿ ಮಾಡಿಕೊಡಬೇಡಿ.
ದೋಷ ಪರಿಹಾರ : ಶಿವನಿಗೆ ಹಾಲು-ಜೇನಿನ ಅಭಿಷೇಕ ಮಾಡಿಸಿ.
ಕುಂಭ : ಇಂದು ನಿಮಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ನಿರ್ಲಕ್ಷಿಸದೆ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೇದು. ಉಳಿದಂತೆ ಹೆಚ್ಚು ತೊಂದರೆ ಇಲ್ಲ.
ದೋಷ ಪರಿಹಾರ : ಸಂಜೀವಿನಿ ಮಂತ್ರ ಪಠಿಸಿ
ಮೀನ : ಗಂಡ ಹೆಂಡಿರಲ್ಲಿ ಅನ್ಯೋನ್ಯ ಭಾವ. ವ್ಯಾಪಾರಿಗಳಿಗೆ ಧನ ಲಾಭ, ಉಪನ್ಯಾಸಕರಿಗೆ, ಪ್ರವಚನಕಾರರಿಗೆ ಉತ್ತಮ ದಿನ, ವ್ಯಾಪಾರಿಗಳಿಗೆ ಲಾಭದ ದಿನ.
ದೋಷ ಪರಿಹಾರ : ಗುರು ದರ್ಶನ ಮಾಡಿ.
ವಾಞ್ಮಯೀ