Asianet Suvarna News Asianet Suvarna News

ಈ ರಾಶಿಗೆ ಬಂಪರ್ ಲಾಭವೊಂದು ಎದುರಾಗಲಿದೆ

ಈ ರಾಶಿಗೆ ಬಂಪರ್ ಲಾಭವೊಂದು ಎದುರಾಗಲಿದೆ

Special Bhavishya 18 December 2018
Author
Bengaluru, First Published Dec 18, 2018, 6:52 AM IST

ಈ ರಾಶಿಗೆ ಭರ್ಜರಿ ಲಾಭವೊಂದು ಎದುರಾಗಲಿದೆ


ಮೇಷ ರಾಶಿ : ತಂತ್ರವಿದ್ಯೆಯನ್ನು ಕಲಿಯುವ ಆಸಕ್ತಿ, ದಕ್ಷಿಣ ದಿಕ್ಕಿನತ್ತ ಪ್ರವಾಸ ಮಾಡಲಿದ್ದೀರಿ, ಮಿತ್ರರು ಸಲಹೆ ಕೇಳಲು ಬರುತ್ತಾರೆ, ರಾಜಕಾರಣಿಗಳಿಗೆ ಆಪತ್ತು, ಸರ್ಕಾರಿ ಕೆಲಸದಲ್ಲಿ ಜಯ, ಜವಾಬ್ದಾರಿ ಹೆಚ್ಚಲಿದೆ.

ದೋಷಪರಿಹಾರ :  ವಾಗ್ದೇವಿ ಸ್ಮರಣೆ ಮಾಡಿ
 
ವೃಷಭ : ಮಿತ್ರರಿಂದ ಗುರುತರ ಸಲಹೆ, ಔಷಧಿ ವ್ಯಾಪಾರಿಗಳಿಗೆ ಪ್ರೋತ್ಸಾಹ, ಸುಖ ಸಹೋದರಿಯಿಂದ ಕಿರಿಕಿರಿ, ದೈವ ದರ್ಶನ, ಶತ್ರುಗಳ ಕಾಟದಿಂದ ತೊಂದರೆ, ಶುಭಾಶುಭ ಮಿಶ್ರಫಲ.

ದೋಷ ಪರಿಹಾರ : ಭೂತರಾಜರ ಆರಾಧನೆ ಮಾಡಿ

ಮಿಥುನ : ಕಾರ್ಯವಾಸಿ ಅನ್ಯರ ಮಾತು ಕೇಳಬೇಕು, ಕುಳಿತಲ್ಲೇ ಕೆಲಸ ಸಾಧನೆ, ಯಾವುದನ್ನೂ ಉಪೇಕ್ಷೆ ಮಾಡಬೇಡಿ, ಗೃಹಕಾರ್ಯಗಳಲ್ಲಿ ಆಸಕ್ತಿ, ಕೃಷಿಕರಿಗೆ ಆನಂದದ ದಿನ, ನೌಕರಿ ಬದಲಾವಣೆ.

ದೋಷ ಪರಿಹಾರ : ಯಂತ್ರೋದ್ಧಾರ ಹನುಮ ದರ್ಶನ ಮಾಡಿ

ಕಟಕ : ಹತ್ತಿರದ ಕ್ಷೇತ್ರ ದರ್ಶನ, ನುಡಿದಂತೆ ನಡೆಯುವ ಮನಸ್ಸು, ಸಹೋದ್ಯೋಗಿಗಳಿಂದ ಸಹಾಯ,ವರಮಾನಕ್ಕೆ ತಕ್ಕ ಖರ್ಚು, ವಿವಾಹದ ವಿಷಯದಲ್ಲಿ ಬೇಸರ, ವಾಹನ ಬದಲಾವಣೆ. 

ದೋಷ ಪರಿಹಾರ : ದುರ್ಗಾ ದೇವಿಗೆ ಒಂಭತ್ತು ನಮಸ್ಕಾರ ಹಾಕಿ.

ಸಿಂಹ : ರೇಷ್ಮೆ ವ್ಯಾಪಾರಿಗಳಿಗೆ ತೊಂದರೆ, ಆಕಸ್ಮಿಕ ಧನಲಾಭ, ಉಡುಗೊರೆ ಲಭ್ಯ,  ಶ್ರಮದ ಜೀವನ, ಕಾರ್ಯಕ್ಕೆ ಮಹಾ ಪ್ರಶಂಸೆ, ತಂದೆ ಮಕ್ಕಳಲ್ಲಿ ಅನ್ಯೋನ್ಯ ಭಾವ, ಉತ್ತಮ ದಿನವಾಗಿರಲಿದೆ.

ದೋಷ ಪರಿಹಾರ : ಶಿವನಿಗೆ ಗೋಧಿ ಅಭಿಷೇಕ ಮಾಡಿಸಿ.

ಕನ್ಯಾ : ರಾಜಕೀಯದಲ್ಲಿ ಆಸಕ್ತಿ, ಮುತ್ಸದ್ದಿಗಳೊಡನೆ ಮಾತುಕತೆ, ಬಂಧು ಕಲಹ, ನಿಮ್ಮ ಕಾರ್ಯದಲ್ಲಿ ವಿವೇಕದ ನಡೆ, ಹಿರಿಯರಿಂದ ಪ್ರಶಂಸೆ, ಮನೆ ಮುಂಭಾಗದಲ್ಲಿ ಎಡವಿ ಬೀಳುವ ಸಾಧ್ಯತೆ ಎಚ್ಚರವಾಗಿರಿ.

ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ

ತುಲಾ : ಸ್ತ್ರೀಯರ ಆರೋಗ್ಯ ಸುಧಾರಣೆ, ಅಲಂಕಾರ ಸಾಮಗ್ರ ಖರೀದಿ, ಸ್ತ್ರೀಯರಿಗೆ ಉಡುಗೊರೆ ಲಭ್ಯ, ಆರೋಗ್ಯದಲ್ಲಿ ಸುಧಾರಣೆ, ಮಿತ್ರರ ಸಹಾಯ, ಸಂಗಾತಿ ನಿಮ್ಮ ಮನಸ್ಸನ್ನು ಅನುಸರಿಸುತ್ತಾರೆ.

ದೋಷ ಪರಿಹಾರ : ಗಾಯತ್ರೀ ಮಂತ್ರ ಪಠಿಸಿ

ವೃಶ್ಚಿಕ : ಮಾತಿನಿಂದ ತೊಂದರೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಧೈರ್ಯದಿಂದ ಕಾರ್ಯ ಸಾಧನೆ, ವಾಹನದಲ್ಲಿ ತೊಡಕು, ಹೃದಯ ಭಾಗದಲ್ಲಿ ಶಸ್ತ್ರಚಿಕಿತ್ಸೆಗಳಾಗುವ ಸಾಧ್ಯತೆ, ಆರೋಗ್ಯ ಸುಧಾರಣೆಯೂ ಇದೆ.

ದೋಷ ಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಧನಸ್ಸು : ಕಾಮನೆಗಳಿಂದ ಕೀರ್ತಿ ವ್ಯಯ, ರೋಗ ಉಪಶಮನ, ತಾಯಿ ಕಡೆ ಗಮನ, ತಂದೆ - ಮಕ್ಕಳಲ್ಲಿ, ರಾಜಕಾರಣಿಗಳಲ್ಲಿ ಭಿನ್ನಾಭಿಪ್ರಾಯ, ಕಿತ್ತಾಟಗಳು ಸಂಭವ, ವೃಥಾ ಅನ್ಯ ಕಾರ್ಯದಲ್ಲಿ ಸಮಸಯ ವ್ಯರ್ಥ.

ದೋಷ ಪರಿಹಾರ : ಶಿವನಿಗೆ ಭಸ್ಮ ಸಮರ್ಪಣೆ ಮಾಡಿ.

ಮಕರ : ನಿಮ್ಮ ಮನಸ್ಸು ದುರ್ಬಲವಾಗುವ ದಿನ, ನಿಮ್ಮ ಚಿಂತನೆಗಳೇ ಆರೋಗ್ಯ ಹಾಳುಮಾಡಲಿವೆ, ಮಾತಿನಿಂದ ಮೂರ್ಖರಾಗುವ ಸಾಧ್ಯತೆ ಇದೆ, ಜಾಗ್ರತೆಯಿಂದ ಮಾತನಾಡಿ.

ದೋಷ ಪರಿಹಾರ : ಮೃತ್ಯುಂಜಯ ಮಂತ್ರ ಪಠಿಸಿ

ಕುಂಭ : ಸಂತಾನ ಭಾಗ್ಯ, ಶತ್ರಗಳಿಂದ ಜಯ, ದೇವರ ಕಾರ್ಯಕ್ಕೆ ಧನ ವಿನಿಯೋಗ, ಸ್ಥಿರಾಸ್ತಿ ಖರೀದಿ, ಸೈನಿಕರಿಗೆ ಲಾಭದ ದಿನ, ಆರಕ್ಷಕರಿಗೆ ಉತ್ತಮ ದಿನ, ಅಭಿವೃದ್ಧಿಯ ದಿನ, ಉದ್ಯೋಗದಲ್ಲಿ ಅಭಿವೃದ್ಧಿ.

ದೋಷ ಪರಿಹಾರ : ಶನಿದೇವರ ಆರಾಧನೆ ಮಾಡಿ

ಮೀನ : ಮತ್ಸ ವ್ಯಾಪಾರಿಗಳಿಗೆ ಶುಭ ಲಾಭ, ನಿರೀಕ್ಷೆಗಳ ಸಾಕಾರ, ಶೃಂಗಾರ ಸಾಮಗ್ರಿ ಖರೀದಿ, ಇಂಜಿನಿಯರ್ ಗಳಿಗೆ ಉತ್ತಮ ದಿನ, ಅಧ್ಯಾಪಕರಲ್ಲಿ ನಿರಾಸಕ್ತಿ. ಉತ್ತಮ ಫಲಗಳನ್ನ ನಿರೀಕ್ಷಿಸುತ್ತೀರಿ. 

ದೋಷ ಪರಿಹಾರ : ಕುಲದೇವತಾ ಪ್ರಾರ್ಥನೆ ಮಾಡಿ.


ವಾಞ್ಮಯೀ

Special Bhavishya 18 December 2018

Follow Us:
Download App:
  • android
  • ios