Asianet Suvarna News Asianet Suvarna News

ಇಂದಿನ ದಿನ ಅತ್ಯಂತ ಲಾಭದಾಯಕ ಯಾವ ರಾಶಿಗೆ..?

ಇಂದಿನ ದಿನ ಅತ್ಯಂತ ಲಾಭದಾಯಕ ಯಾವ ರಾಶಿಗೆ..?

Special Bhavishya 15 November 2018
Author
Bengaluru, First Published Nov 15, 2018, 6:52 AM IST

ಇಂದಿನ ದಿನ ಅತ್ಯಂತ ಲಾಭದಾಯಕ ಯಾವ ರಾಶಿಗೆ..?

15-11-18 - ಗುರುವಾರ

ಶ್ರೀ ವಿಲಂಬಿ ನಾಮ ಸಂವತ್ಸರ
ದಕ್ಷಿಣಾಯನ
ಶರದೃತು
ಕಾರ್ತಿಕ ಮಾಸ
ಶುಕ್ಲ ಪಕ್ಷ
ಅಷ್ಟಮಿ ತಿಥಿ
ಧನಿಷ್ಠ ನಕ್ಷತ್ರ 

ರಾಹುಕಾಲ  07.44 ರಿಂದ 09.11
ಯಮಗಂಡ ಕಾಲ  10.37 ರಿಂದ 12.04
ಗುಳಿಕ ಕಾಲ  01.30 ರಿಂದ 02.56

ಮೇಷ ರಾಶಿ : ನಿಮ್ಮ ವ್ಯಾಪಾರ ಲಾಭದಾಯಕವಾಗಿರುತ್ತದೆ, ಹೃದಯ ಸಂಬಂಧಿ ಸಮಸ್ಯೆ ಕಾಡಬಹುದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ, ಸ್ವಲ್ಪದರಲ್ಲಿ ನಿಮ್ಮ ಅದೃಷ್ಟ ಕೈಕೊಡುತ್ತದೆ. 

ದೋಷಪರಿಹಾರ : ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ : ಸ್ತ್ರೀಯರ ಮಾತು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತದೆ, ಶತ್ರುಗಳ ದೃಷ್ಟಿ ನಿಮ್ಮ ಮೇಲಿರುವುದರಿಂದ ಎಚ್ಚರವಾಗಿರಿ, ಉದ್ಯೋಗದಲ್ಲಿ ಮಿತ್ರರೇ ಶತ್ರುಗಳಾಗುತ್ತಾರೆ, ನಿಮ್ಮ ಮಾತಿಗೆ ಮೌಲ್ಯವಿಲ್ಲದಾಗುತ್ತದೆ.   
      
ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ

ಮಿಥುನ :  ಅನ್ಯೋನ್ಯ ಮಿತ್ರರೂ ದೂರವಾಗುತ್ತಾರೆ, ನಿಮ್ಮ ಮಾತು-ಚತುರತೆ ಶತ್ರುಗಳನ್ನೂ ಮಿತ್ರರನ್ನಾಗಿಸುತ್ತದೆ, ಮಿಶ್ರಫಲದ ದಿನವಾಗಿರಲಿದೆ, ಕಾರ್ಯ ಪ್ರಾರಂಭಕ್ಕೂ ಮುನ್ನ ಯೋಚಿಸಿ. ವೃಥಾ ತಿರುಗಾಟ, ವ್ಯಾಪಾರದಲ್ಲಿ ಶತ್ರುತ್ವ ಬೇಸರ ಉಂಟುಮಾಡಲಿದೆ.
 
ದೋಷ ಪರಿಹಾರ : ವಿಷ್ಣುವಿಗೆ ತುಳಸಿಹಾರ ಸಮರ್ಪಣೆ ಮಾಡಿ

ಕಟಕ : ನಿಮ್ಮ ಆಲೋಚನೆ ಫಲ ರಹಿತವಾಗಬಹುದು, ದೃಢ ನಿರ್ಧಾರ ಸಾಧ್ಯವಾಗದು, ಗೊಂದಲದ ವಾತಾವರಣ, ಉದ್ಯೋಗದಲ್ಲಿ ಕಿರಿಕಿರಿ, ಹಿರಿಯ ಅಧಿಕಾರಿಗಳು ನಿಮ್ಮನ್ನು ಕಾಡಲಿದ್ದಾರೆ. ಎಚ್ಚರ ಇರಲಿ.  
  
ದೋಷ ಪರಿಹಾರ : ದೇವಿ ಕವಚ ಪಠಿಸಿ

ಸಿಂಹ :  ಕಿಬ್ಬೊಟ್ಟೆ ಭಾಗದಲ್ಲಿ ಸ್ವಲ್ಪ ನೋವು ಕಾಣಿಸಿಕೊಳ್ಳಬಹುದು, ತಾಯಿಯಿಂದ, ಹಿರಿಯರಿಂದ ಧನಾನುಕೂಲ,  ಕುಟುಂಬ ಸೌಖ್ಯ, ನಿಮ್ಮ ಮನಸ್ಸಿಗೆ ಸಾಮಾಧಾನದ ದಿನ, ಆದರೆ ಕೊಂಚ ಸಮಸ್ಯೆಗಳೂ ಇವೆ.  

ದೋಷ ಪರಿಹಾರ : ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ : ನಿಮ್ಮ ಸಹೋದರರಿಂದ ಸಮಾಧಾನದ ಮಾತುಗಳು, ಧನ ಸಹಾಯವೂ ಇದೆ, ಓರ್ವ ಸ್ತ್ರೀ ಆಪದ್ಧನವನ್ನು ಕೊಡುತ್ತಾರೆ, ಮನಸ್ಸು ನಿರಾಳವಾಗುತ್ತದೆ, ಆದರೆ ತಂದೆಯಿಂದ ಸ್ವಲ್ಪ ವಿರೋಧದ ಮಾತು ಕೇಳುತ್ತೀರಿ.
  
ದೋಷ ಪರಿಹಾರ : ಸುಮಂಗಲೆಯರಿಗೆ ಮಂಗಲದ್ರವ್ಯ ದಾನ ಮಾಡಿ

ತುಲಾ : ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ, ನಿಮ್ಮ ಮಾತು ಉತ್ಕೃಷ್ಟ ಫಲ ತರಲಿದೆ, ಉಪನ್ಯಾಸಕರಿಗೆ ಕವಿಗಳಿಗೆ ಉತ್ತಮ ದಿನ, ಬರಹಗಾರರಿಗೆ ವಿವಿಧ ಮೂಲದ ಆದಾಯ ಬರಲಿದೆ, ಬಟ್ಟೆ ವ್ಯಾಪಾರಿಗಳಿಗೆ  ಧನ ಸಮೃದ್ಧಿ.

ದೋಷ ಪರಿಹಾರ : ವಿಷ್ಣು ದೇವಸ್ಥಾನಕ್ಕೆ ಕ್ಷೀರ ದಾನ ಮಾಡಿ

ವೃಶ್ಚಿಕ :  ಅಗ್ನಿ, ಲೋಹ ವ್ಯಾಪಾರಿಗಳಿಗೆ, ಬಂಗಾರ ತಯಾರಕರಿಗೆ ಲಾಭದ ದಿನ, ಗೃಹ ಸೌಖ್ಯ, ವಾಹನ ಖರೀದಿ, ನಿಮ್ಮಸೇವಕರಿಂದ ಸಹಾಯವಾಗುವ ದಿನ, ಮನೆ ಕೆಲಸದವರ ಜೊತೆ ಕಲಹ, ಸಣ್ಣ ಪುಟ್ಟ ಅವಘಡ. ಎಚ್ಚರವಿರಲಿ.      
ದೋಷ ಪರಿಹಾರ : ಶನಿ ದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ

ಧನಸ್ಸು : ನಿಮ್ಮ ಮನಸ್ಸಿಗೆ ಸಮಾಧಾನ, ಅತ್ಯತ್ತಮರ ಭೇಟಿ, ಸ್ತ್ರೀಯರಿಂದಾಗಿ ಕಲಹ ಪ್ರಾಪ್ತಿ, ಮನೋ ಕಾಮನೆ ಈಡೇರುವ ಮುನ್ನ ನಿಮ್ಮ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ದೋಷ ಪರಿಹಾರ : ಕುಲ ದೇವರ ಪ್ರಾರ್ಥನೆ ಮಾಡಿ

ಮಕರ : ಈ ದಿನ ನಿಮ್ಮ ಸಂಪೂರ್ಣಕಾರ್ಯಗಳಲ್ಲಿ ಜಯ ಹಾಗೂ ಲಾಭ ಸಿಗಲಿದೆ. ನಿಮ್ಮ ಮಕ್ಕಳಿಂದ ಸ್ವಲ್ಪ ದಿನದ ಕಾರ್ಯಗಳಲ್ಲಿ ವ್ಯತ್ಯಾಸವಾಗಲಿದೆ. ಉಗ್ರ ಸ್ವಭಾವ ಸ್ವಲ್ಪ ಶಾಂತವಾಗಲಿ. ನಿಮ್ಮ ಯೋಚನೆ ಸರಿ ಇರಬಹುದು ಆದರೂ ಅಭಿಪ್ರಾಯ ಹಂಚಿಕೆಯಾಗುವಾಗ ಸ್ವಲ್ಪ ಸಮಾಧಾನವಿರಲಿ
ದೋಷ ಪರಿಹಾರ : 
ಕುಂಭ :   ಉಪಾಸನಾ ಶಕ್ತಿಯಿಂದ ಈ ದಿನ ವಿಶೇಷವೊಂದನ್ನು ಸಾಧಿಸುತ್ತೀರಿ. ಶಿವ ದರ್ಶನ, ಶಿವಧ್ಯಾನವೇ ನಿಮ್ಮ ದಿನವನ್ನು ಅದ್ಭುತಗೊಳಿಸಲಿದೆ. ಶುಭವಾಗಲಿ.


ದೋಷ ಪರಿಹಾರ : ದುರ್ಗಾದೇವಿಗೆ ತುಪ್ಪದ ದೀಪ ಹಚ್ಚಿ
  
ಮೀನ : ಉದ್ಯೋಗದಲ್ಲಿ, ವ್ಯಾಪಾರದಲ್ಲಿ ಲಾಭದ ದಿನ, ನಿಮ್ಮ ಅನುಕೂಲಕ್ಕೆ ಕಾರ್ಯ ಸಿದ್ಧಿಸುತ್ತದೆ, ಪ್ರಯಾಣ ಸುಖಕರವಾಗಿರಲಿದೆ, ಉತ್ತಮರ ಸಹವಾಸ ಒದಗಲಿದೆ, ದೂರ ದೇಶಕ್ಕೆ ಪ್ರಯಾಣ ಸಾಧ್ಯತೆ. ಮಂಗಲ ಕಾರ್ಯ ಯೋಜನೆ.  

ದೋಷ ಪರಿಹಾರ : ದಕ್ಷಿಣಾಮೂರ್ತಿ ದರ್ಶನ ಮಾಡಿ.

ವಾಞ್ಮಯೀ.

Follow Us:
Download App:
  • android
  • ios