ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?
ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?
ಶುಭ ದಿನವಾಗಿರಲಿದೆ ನಿಮಗೆ : ಉಳಿದ ರಾಶಿ ಹೇಗಿದೆ..?
ಮೇಷ ರಾಶಿ : ದಾಂಪತ್ಯದಲ್ಲಿ ಹೊಂದಾಣಿಕೆ, ಸಾಮರಸ್ಯ, ರಾಜಕಾರಣಿಗಳಿಂದ ಕ್ಷೇತ್ರ ಸಂಬಂಧಿ ಕೆಲಸಗಳ ಅನುಕೂಲ, ಶುಭ ದಿನವಾಗಿರಲಿದೆ. ಮನಸ್ಸಿನಲ್ಲಿ ಉಲ್ಲಾಸ ಸಂಗಾತಿಯಿಂದ ಸಂತಸದ ಮಾತುಗಳು.
ದೋಷಪರಿಹಾರ : ತೊಗರಿ ಬೇಳೆಯನ್ನು ದಾನ ಮಾಡಿ.
ವೃಷಭ : ಇಂದು ನಿಮ್ಮ ಸಹೋದರಿ ನಿಮ್ಮ ಹಣ ವ್ಯಯಕ್ಕೆ ಕಾರಣವಾಗಬಹುದು, ನಿಮ್ಮ ಮಕ್ಕಳಿಗೆ ಸ್ವಲ್ಪ ಮಟ್ಟಿಗೆ ತೊಂದರೆಯೂ ಆಗಬಹುದು. ಮಂಡಿ ಹಾಗು ತೊಡೆ ಭಾಗದಲ್ಲಿ ನೋವಾಗುವ ಸಾಧ್ಯತೆ ಇರುತ್ತದೆ. ವೈದ್ಯರನ್ನು ಭೇಟಿ ಮಾಡಿ.
ದೋಷ ಪರಿಹಾರ : ದುರ್ಗಾ ಸಪ್ತಶತಿ ಪಾರಾಯಣ ಮಾಡಿ.
ಮಿಥುನ : ಇಂದು ನಿಮ್ಮ ಹಣ ದ್ವಿಗುಣವಾಗಿ ಬರಲಿದೆ. ನೀರಿನ ವ್ಯಾಪಾರಿಗಳಿಗೆ ವಿಶೇಷ ಲಾಭ, ನಿಮ್ಮ ಮಕ್ಕಳು ನಿಮಗೆ ಸಹಾಯಕವಾಗುತ್ತಾರೆ. ಕುಟುಂಬದಲ್ಲಿ ಸ್ವಲ್ಪ ಮಾತಿನ ಘರ್ಷಣೆಯೂ ಆಗಬಹುದು ಎಚ್ಚರವಾಗಿರಿ.
ದೋಷ ಪರಿಹಾರ : ಮಹಾಕಾಳೇಶ್ವರ ದರ್ಶನ ಮಾಡಿ
ಕಟಕ : ಇಂದು ನಿಮ್ಮ ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ಸ್ವಲ್ಪಮಟ್ಟಿಗೆ ವಿರಸ ಭಿನ್ನಾಭಿಪ್ರಾಯಗಳು ಮೂಡಬಹುದು. ಮಾನಸಿಕವಾಗಿ ನೀವು ಎದೆಗುಂದುವ ಸಾಧ್ಯತೆಯೂ ಇದೆ. ದುರ್ಗಾ ದೇವಿ ದರ್ಶನ ಮಾಡಿ
ದೋಷ ಪರಿಹಾರ : ಲಲಿತಾ ಸಹಸ್ರನಾಮ ಪಠಿಸಿ
ಸಿಂಹ : ನಿಮ್ಮ ಮನಸ್ಸಿಗೆ ಭಾರವಾಗುವ ದಿನ, ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ, ಆರೋಗ್ಯದಲ್ಲಿ ವ್ಯತ್ಯಯ, ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟವಾಗಬಹುದು, ಮಾತಿನಲ್ಲಿ ಹಿಡಿತವಿರಲಿ.
ದೋಷ ಪರಿಹಾರ : ಶಿವನಿಗೆ ಬಿಲ್ವಾರ್ಚನೆ ಮಾಡಿಸಿ
ಕನ್ಯಾ : ಇಂದು ನಿಮ್ಮ ಪಾಲಿಗೆ ಧನಾಗಮನ, ನಿಮ್ಮ ಬಂಧುಗಳ ಆಗಮನವೂ ಇದೆ, ಪ್ರಯಾಣದಲ್ಲಿ ಸಹಾಯ, ನಿಮ್ಮ ವ್ಯಾಪಾರದಲ್ಲಿ ಸ್ವಲ್ಪ ನಷ್ಟ ಸಂಭವಿಸುತ್ತದೆ. ಹಣದ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ.
ದೋಷ ಪರಿಹಾರ : ಪಂಚಾಕ್ಷರಿ ಜಪ ಪಠಿಸಿ
ತುಲಾ : ನಿಮ್ಮ ದೇಹದಲ್ಲಿ ಚೇತರಿಕೆ, ಆರೋಗ್ಯ ವೃದ್ಧಿ ಕೂಡ ಇದೆ. ಆದರೆ ಸಹೋದರರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯ ಮೂಡಲಿದೆ, ಜೊತೆಗೆ ನಿಮ್ಮ ಮನೆ ಜಾಗದಲ್ಲಿ ಅಥವಾ ನಿಮ್ಮ ವಾಹನದಲ್ಲಿ ಅವಘಡ ಸಂಭವಿಸುವ ಸಾಧ್ಯತೆ ಇದೆ.
ದೋಷ ಪರಿಹಾರ : ಗಣಪತಿಗೆ ಮೋದಕ ಸಮರ್ಪಣೆ ಮಾಡಿ
ವೃಶ್ಚಿಕ : ಮನಸ್ಸಿಗೆ ಸಮಾಧಾನದ ದಿನ, ಮನೆ ಕೆಲಸಗಳಲ್ಲಿ ನಿರಾಸಕ್ತಿ ಇದ್ದು ನಿಮ್ಮ ಸುಖ ಸಂತೋಷಕ್ಕೆ ಹೆಚ್ಚು ಗಮನ ಕೊಟ್ಟು ವಿಹಾರ ಹಾಗೂ ಮನೋರಂಜನೆಗಳಲ್ಲಿ ಭಾಗಿಯಾಗುತ್ತೀರಿ.
ದೋಷ ಪರಿಹಾರ : ನಾಗ ದೇವರ ಪ್ರಾರ್ಥನೆ ಮಾಡಿ
ಧನಸ್ಸು : ನಿಮ್ಮ ಮಗಳು ನಿಮ್ಮ ಸಹಕಾರಕ್ಕೆ ಬರುತ್ತಾಳೆ, ನಿಮ್ಮ ಆದಾಯ ವೃದ್ಧಿಸುತ್ತದೆ, ನಿಮ್ಮ ಅಕ್ಕಪಕ್ಕದವರು ನಿಮ್ಮ ಅನುಕೂಲಕ್ಕೆ ಬರುತ್ತಾರೆ. ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡುವ ಸಮಯ ಒದಗಲಿದೆ.
ದೋಷ ಪರಿಹಾರ : ಗುರು ಚರಿತ್ರೆ ಪಾರಾಯಣ ಮಾಡಿ
ಮಕರ : ಇಂದು ನಿಮ್ಮ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ, ನಿಮ್ಮ ಮನೆ ಜಾಗದಲ್ಲಿ ನೀರು ಲಭ್ಯವಾಗುತ್ತದೆ, ಜೊತೆಗೆ ಉದ್ಯೋಗದಲ್ಲಿ ಅಭಿವೃದ್ಧಿ ಲಾಭವೂ ಇರಲಿದೆ. ಉತ್ತಮದಿನವಾಗಿರಲಿದೆ.
ದೋಷ ಪರಿಹಾರ : ಎಳ್ಳು ದಾನ ಮಾಡಿ
ಕುಂಭ : ನಿಮ್ಮ ಆದಾಯ ವೃದ್ಧಿಯಾಗಲಿದೆ. ನಿಮ್ಮ ಸಹೋದರಿ ಸಮಾನರು ನಿಮಗೆ ಅನುಕೂಲ ಮಾಡುವುದಕ್ಕಿಂತ ಕಿರಿಕಿರಿ ಮಾಡುತ್ತಾರೆ. ಉದ್ಯೋಗದಲ್ಲಿ ಭರವಸೆ ಮೂಡುವ ದಿನಗಳು. ಗೆಳೆಯರಿಂದ ಸಹಕಾರ ದೊರೆಯುವ ದಿನ.
ದೋಷ ಪರಿಹಾರ : ಶಿವನಿಗೆ ಜಲಾಭಿಷೇಕ ಮಾಡಿಸಿ.
ಮೀನ : ಇಂದು ನಿಮ್ಮ ಪಾಲಿದೆ ಧನಾಗಮನ, ಕುಟುಂಬ ಸೌಖ್ಯ, ತಾಯಿ ಕಡೆಯಿಂದ ಅನುಕೂಲ, ಮಕ್ಕಳಿಂದಲೂ ಧನ ಲಾಭ, ಉತ್ತಮ ದಿನವಾಗಿರಲಿದೆ. ಸ್ತ್ರೀಯರಿಂದ ಅನುಕೂಲ.
ದೋಷ ಪರಿಹಾರ : ದುರ್ಗಾ ದೇವಿ ದರ್ಶನ ಮಾಡಿ
ವಾಞ್ಮಯೀ.