ಈ ರಾಶಿಯವರು ಇಂದು ಅತ್ಯಂತ ಎಚ್ಚರಿಕೆಯಿಂದಿರುವುದು ಒಳಿತು
ಈ ರಾಶಿಯವರು ಇಂದು ಅತ್ಯಂತ ಎಚ್ಚರಿಕೆಯಿಂದಿರುವುದು ಒಳಿತು
ಈ ರಾಶಿಯವರು ಇಂದು ಅತ್ಯಂತ ಎಚ್ಚರಿಕೆಯಿಂದಿರುವುದು ಒಳಿತು
ಮೇಷ
ಬೇರೆಯವರ ಮಾತಿನ ಮೇಲೆ ನೀವು ಹಣ
ಹೂಡುವುದು ಉಚಿತವಲ್ಲ. ಆತ್ಮವಿಶ್ವಾಸವನ್ನು
ಕಳೆದುಕೊಳ್ಳದೇ ಧೈರ್ಯದಿಂದ ವ್ಯವಹರಿಸಿ.
ವೃಷಭ
ಆರೋಗ್ಯದತ್ತ ಮುಖ ಮಾಡಲಿದ್ದೀರಿ. ಈ
ದಿನಗಳಲ್ಲಿ ಉತ್ತಮ ಸಂಬಂಧ ಕೂಡಿ ಬರುತ್ತೆ.
ಮನೆ ಕಟ್ಟಲು ಆರಂಭ. ಸಾಲಕ್ಕಾಗಿ ಓಡಾಟ.
ಮಿಥುನ
ಆಸ್ತಿಯ ವಿವಾದಗಳು ಸುಲಭವಾಗಿ ಬಗೆಹರಿ
ಯುವುದಲ್ಲ. ನಿರ್ಧಾರಗಳು ಖಚಿತವಾಗಿರಲಿ.
ಇದಕ್ಕೇ ಮೊದಲ ಆದ್ಯತೆ ಕೊಟ್ಟರೆ ಒಳಿತು.
ಕಟಕ
ನಿಮ್ಮ ನಿಲುವುಗಳು ನಿಮಗೆ ಬೇಕಾದವರಿಗೆ
ಆದರ್ಶವಾಗುತ್ತವೆ. ವಿದ್ಯಾರ್ಥಿಗಳಿಗೆ
ಅಧ್ಯಯನದಲ್ಲಿ ಆಸಕ್ತಿಯು ಹೆಚ್ಚಲಿದೆ.
ಸಿಂಹ
ಚಮ್ಮಾರ, ಬಡಗಿಗಳಿಗೆ ಉತ್ತಮ ಅವಕಾಶ.
ವಾಹನಗಳ ವ್ಯಾಪಾರಿಗಳಿಗೂ ಒಳ್ಳೆಯ ಲಾಭ.
ಸರ್ಕಾರಿ ಹಣವು ನಿಮ್ಮ ಖಾತೆಗೆ ಸೇರಲಿ
ಕನ್ಯಾ
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಲಿದೆ.
ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ.
ಒತ್ತಡವು ಅನಾರೋಗ್ಯಕ್ಕೆ ಕಾರಣವಾಗಲಿದೆ.
ತುಲಾ
ಸಾಹಸಿ ಮನೋಭಾವದ ನಿಮ್ಮಲ್ಲಿ ಎಂದೂ
ಭಯವಿಲ್ಲ. ಆದರಿಂದು ಅಲ್ಪ ಸ್ವಲ್ಪ ಭಯವೂ
ಕಾಡಲಿದೆ. ತಪ್ಪು ಮಾಡದಿದ್ದರೆ ಅಂಜಿಕೆ ಏಕೆ?
ವೃಶ್ಚಿಕ
ಮನೆಯ ಹಿರಿಯರ ಆರೋಗ್ಯದ ಕಡೆಗೆ
ಗಮನವಿರಲಿ. ನಿಮ್ಮ ಜವಾಬ್ದಾರಿಯನ್ನು
ಬೇರೊಬ್ಬರ ಮೇಲೆ ಹೇರದಂತೆ ವರ್ತಿಸಿ.
ಧನುಸ್ಸು
ದೂರದ ನೆಂಟರು ನಿಮ್ಮ ಮನೆಗೆ ಬರಲಿದ್ದಾರೆ.
ಹಳೆಯ ನೆಂಟಸ್ತಿಕೆಯು ಮತ್ತೆ ಚಿಗುರಲಿದೆ.
ಮಗನಿಗೆ ಸಂಬಂಧವೂ ಕೂಡಿ ಬರಲಿದೆ.
ಮಕರ
ಚಳಿಯ ವಾತಾವರಣವು ನಿಮ್ಮ ಆರೋಗ್ಯದ
ಮೇಲೆ ದುಷ್ಪರಿಣಾಮ ಬೀರಲಿದೆ. ಆರೋಗ್ಯ
ತಪಾಸಣೆಯ ಅಗತ್ಯವಿದೆ. ಜೋಪಾನ!
ಕುಂಭ
ನಿನ್ನೆಯವರೆಗೂ ಇದ್ದ ನಿಮ್ಮ ಮನೆಯ ಸ್ಥಿತಿ
ಇಂದಿನಿಂದ ಬದಲಾಗಲಿದೆ. ಅದರಿಂದ
ನಿಮ್ಮ ಮನೆಯ ಎಲ್ಲರಿಗೂ ಶಾಂತಿ ಸಿಗಲಿದೆ.
ಮೀನ
ನೀವು ಹಿಂದೆ ಮಾಡಿದ್ದ ಕಠಿಣ ಶ್ರಮಕ್ಕೆ ಸೂಕ್ತ
ಪ್ರತಿಫಲವನ್ನೀಗ ಪಡೆಯುವಿರಿ. ಆಸ್ತಿ ವಿವಾದ
ಬಗೆಹರಿಯಲಿದೆ. ನೆಮ್ಮದಿಯ ದಿನವಿದು.