ಈ ರಾಶಿಯವರಿಗೆ ಧೈರ್ಯವೇ ಶಕ್ತಿಯಾಗಲಿದೆ: ಹೀಗಿದೆ ನೋಡಿ ಇಂದಿನ ಭವಿಷ್ಯ
ಇಂದಿನ ನಿಮ್ಮ ಭವಿಷ್ಯ ಹೇಗಿದೆ? ಹೀಗಿದೆ ನೋಡಿ ಇಂದಿನ ಭವಿಷ್ಯ
ಮೇಷ: ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡುವುದು ಬೇಡ. ಹೊಗಳುಭಟರ ಮಾತಿಗೆ ಹೆಚ್ಚು ಬೆಲೆ ನೀಡಬೇಡಿ. ಖರ್ಚು ಅಧಿಕ
ವೃಷಭ: ಸಂಗೀತದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಕಾರಾತ್ಮಕ ಆಲೋಚನೆಗಳನ್ನು ಇಟ್ಟುಕೊಂಡು ಮುಂದೆ ಸಾಗುತ್ತಿರಿ. ಧೈರ್ಯವೇ ನಿಮ್ಮ ಶಕ್ತಿಯಾಗಲಿದೆ.
ಮಿಥುನ: ನೆಮ್ಮದಿಯ ನಾಳೆಗಳಿಗಾಗಿ ಇಂದಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳಿ. ಆರೋಗ್ಯ ದಲ್ಲಿ ಚೇತರಿಕೆ. ಹೊಸ ವಸ್ತು ಕೊಳ್ಳಲಿದ್ದೀರಿ.
ಕಟಕ: ಕಷ್ಟದಲ್ಲಿ ಇರುವ ಸ್ನೇಹಿತರಿಗೆ ಸಹಾಯ ಮಾಡಲಿದ್ದೀರಿ. ಕೈ ಹಾಕಿದ ವ್ಯವಹಾರದಲ್ಲಿ ಹೆಚ್ಚು ಲಾಭ ಪಡೆದುಕೊಳ್ಳಲಿದ್ದೀರಿ. ಶುಭ ಫಲ.
ಸಿಂಹ: ಜೀವನ ಶೈಲಿಯಲ್ಲಿ ಬದಲಾವಣೆ ಏರ್ಪಡಲಿದೆ. ಹೊಸ ವ್ಯಕ್ತಿಗಳ ಪರಿಚಯ ವಾಗಲಿದೆ. ಆತ್ಮವಿಶ್ವಾಸ ಅಧಿಕವಾಗಲಿದೆ.
ಕನ್ಯಾ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಲಿದೆ. ತಂದೆಯ ಸಲಹೆಯಂತೆ ಮುನ್ನಡೆಯಿರಿ.
ತುಲಾ: ಮಾಡುವ ಕೆಲಸವನ್ನೇ ಮನಸಾರೆ ಮಾಡಿ. ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ತುಲಾ ಬೇಡ. ಇಡೀ ದಿನ ಹೆಚ್ಚು ಒತ್ತಡ ಇರಲಿ
ವೃಶ್ಚಿಕ: ನಿಮ್ಮ ಬಗ್ಗೆ ಬರುವ ಟೀಕೆಗಳಿಗೆ ಉತ್ತರ ನೀಡುತ್ತಾ ಕೂರುವುದು ಬೇಡ. ನಿಮ್ಮ ದಾರಿಯಲ್ಲಿ ನೀವು ಮುಂದೆ ಸಾಗುತ್ತಿರಿ.
ಧನುಸ್ಸೂಸು:ಕ್ತವಾದ ರೀತಿಯಲ್ಲಿ ಹಾಕಿದ ಶ್ರಮ ಖಂಡಿತ ಫಲ ನೀಡಿಯೇ ನೀಡುತ್ತದೆ. ಸಹೋ ದರನ ಗೆಲುವಿಗೆ ಸಹಾಯ ಮಾಡುವಿರಿ
ಮಕರ: ಬಾಲ್ಯದ ಗೆಳೆಯನ ಅನಿರೀಕ್ಷಿತ ಭೇಟಿ ಯಾಗಲಿದೆ. ನಿಮ್ಮ ಆಪ್ತರಿಂದಲೇ ನಿಮಗೆ ಮೋಸವಾಗಲಿದೆ. ನಿರಂತರ ಪರಿಶ್ರಮ ಇರಲಿ.
ಕುಂಭ: ಅನವಶ್ಯಕ ಮಾತುಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಮದುವೆ ಪ್ರಸ್ತಾಪ ಹೆಚ್ಚಾಗಲಿದೆ. ದೂರದ ಊರಿಗೆ ಭೇಟಿ.
ಮೀನ: ಸಂಬಂಧಗಳಲ್ಲಿ ಮನಸ್ತಾಪ ಉಂಟಾಗಲಿದೆ. ದೇವಸ್ಥಾನಕ್ಕೆ ಭೇಟಿ ನೀಡುವವರಿದ್ದೀರಿ. ಸಮಯಕ್ಕೆ ಹೆಚ್ಚಿನ ಮಾನ್ಯತೆ ನೀಡಿ.