ಬದುಕಿಗೆ ಹೊಸ ತಿರುವು, ಶುಭ ಸುದ್ದಿಯೂ ಇದೆ:: ಹೀಗಿದೆ ಇಂದಿನ ಭವಿಷ್ಯ
ಸೆಪ್ಟೆಂಬರ್ 21, ಶನಿವಾರ ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ?
ಮೇಷ: ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಮ್ಮ ಅನುಕೂಲಕ್ಕಾಗಿ ಮತ್ತೊಬ್ಬರ ಜೀವನದಲ್ಲಿ ಆಟ ಆಡುವುದು ಬೇಡ.
ವೃಷ್ಭ: ಪಕ್ಕಾ ಲೆಕ್ಕಾಚಾರ ಇಟ್ಟುಕೊಂಡು ಹೊಸ ಉದ್ಯಮವನ್ನು ಶುರು ಮಾಡಿ. ಸಮಯಕ್ಕೆ ಬೆಲೆ ನೀಡಿದರೆ ಬದುಕು ಸುಂದರವಾಗುತ್ತದೆ.
ಮಿಥುನ: ಎಲ್ಲರೂ ತಪ್ಪು ಮಾಡುತ್ತಾರೆ. ಹಾಗಾಗಿ ನೀವು ತಪ್ಪುಗಳನ್ನು ಖಂಡಿಸಿ, ತಪ್ಪು ಮಾಡಿದ ವ್ಯಕ್ತಿಯನ್ನಲ್ಲ. ಮುಂದಾಲೋಚನೆ ಇರಲಿ.
ಕಟಕ: ಭವಿಷ್ಯದ ಬಗ್ಗೆ ಸೂಕ್ತ ಆಲೋಚನೆ ಮಾಡಿ ಅದಕ್ಕೆ ತಕ್ಕಂತೆ ಇಂದಿನಿಂದ ಕಾರ್ಯ ಆರಂಭಿಸಿ. ಸಂಬಂಧಿಗಳು ನೆರವಾಗಲಿದ್ದಾರೆ.
ಸಿಂಹ: ಆತುರಕ್ಕೆ ಬಿದ್ದು ಅನಾಹುತ ಮಾಡಿಕೊಳ್ಳ ಬೇಡಿ. ನಿಧಾನಕ್ಕೆ, ಆಲೋಚನೆ ಮಾಡಿ ಯಾವುದೇ ಕಾರ್ಯವನ್ನಾದರೂ ಕೈಗೊಳ್ಳಿ.
ಕನ್ಯಾ: ಗಾಯ ವಾಸಿಯಾದರೂ ಕಲೆ ಹಾಗೆಯೇ ಉಳಿಯುವಂತೆ ಹಳೆಯ ನೆನಪುಗಳು ಇಂದು ನಿಮ್ಮನ್ನು ಕಾಡಲಿವೆ. ಶುಭ ಸುದ್ದಿಯೂ ಇದೆ.
ತುಲಾ: ನಿಮ್ಮ ಏಳಿಗೆಗಾಗಿ ಶ್ರಮಿಸುವ ಜೀವಗಳಿಗೆ ಸೂಕ್ತ ಗೌರವ ನೀಡಿ. ಹಣಕಾಸಿನ ವ್ಯವಹಾರದಲ್ಲಿ ಹೆಚ್ಚು ನಿಗಾ ಇಟ್ಟುಕೊಂಡರೆ ಒಳಿತು.
ವೃಶ್ಚಿಕ: ಬದುಕು ನಿಮ್ಮ ಇಷ್ಟದಂತೆಯೇ ಇರುವುದಿಲ್ಲ. ಅಪರಿಚಿತರಿಂದ ಬದುಕಿಗೆ ಹೊಸ ತಿರುವು ದೊರೆಯಲಿದೆ. ಆತ್ಮವಿಶ್ವಾಸ ಇರಲಿ.
ಧನುಸ್ಸು: ಮುಂದೆ ಸಾಗುವಾಗ ಹಿಂದೆ ನಡೆದು ಬಂದ ದಾರಿಯನ್ನು ಮರೆಯಬೇಡಿ. ನಿಮ್ಮ ಮೇಲೆ ಆರೋಪ ಬಂದಾಗ ಮೌನವಾಗಿ ಎದುರಿಸಿ.
ಮಕರ: ಒಳಗೆ ನೋವು ಇಟ್ಟುಕೊಂಡು ಹೊರಗೆ ನಗು ನಗುತ್ತಾ ಇಡೀ ದಿನ ಕಳೆಯಲಿದ್ದೀರಿ. ನಿಮ್ಮ ಬೆನ್ನಿಗೆ ನಿಂತವರ ಋಣವನ್ನು ಮರೆಯದಿರಿ.
ಕುಂಭ: ಎಲ್ಲರ ಭಾವನೆಗಳಿಗೂ ನೀವು ಬೆಲೆ ನೀಡಲು ಸಾಧ್ಯವಾಗದೇ ಇದ್ದರೂ ಮತ್ತೊಬ್ಬರ ಭಾವನೆಗಳಿಗೆ ನಿಮ್ಮಿಂದ ಘಾಸಿಯಾಗದಿರಲಿ
ಮೀನ: ಹಳೆಯ ಗೆಳೆಯರು ಇಂದು ತುಂಬಾ ಹತ್ತಿರವಾಗಲಿದ್ದಾರೆ. ಆರೋಗ್ಯದ ಕಡೆಗೆ ಗಮನ ನೀಡಿ. ನೆಮ್ಮದಿ ಹೆಚ್ಚಾಗಲಿದೆ.