ಯಾವ ರಾಶಿಗೆ ಲಾಭ - ಯಾರಿಗೆ ನಷ್ಟ? ರಾಶಿ ಫಲ
ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ
ಯಾವ ರಾಶಿಗೆ ಯಾವ ಫಲ ಹೇಗಿದೆ ಇಂದಿನ ಭವಿಷ್ಯ
ಮೇಷ: ನಿಮ್ಮ ತಾಳ್ಮೆ ಪರೀಕ್ಷೆ ಮಾಡುವಂತಹ ಹಲವಾರು ಘಟನೆಗಳು ಇಂದು ನಡೆಯಲಿವೆ. ಯಾವುದಕ್ಕೂ ಅಂಜದೇ ಮುಂದೆ ಸಾಗಿ.
ಕೃಷ್ಣ ಭಕ್ತೆ ಮೀರಾ ಬಾಯಿ ಹಿಂದಿನ ಜನ್ಮದಲ್ಲಿ ಯಾರಾಗಿದ್ದರು?
ವೃಷಭ: ಕಠಿಣ ಪರಿಶ್ರಮಕ್ಕಿಂತ ಬುದ್ಧಿವಂತಿಕೆಯಿಂದ ಮಾಡುವ ಕೆಲಸ ಬೇಗನೇ ಫಲ ನೀಡುತ್ತದೆ. ಆತ್ಮೀಯರೊಂದಿಗೆ ಸಣ್ಣ ವಿರಸ ಉಂಟಾಗಲಿದೆ.
ಮಿಥುನ: ನಿಮ್ಮ ಮೇಲೆ ಇತರರು ಇಟ್ಟಿರುವ ನಂಬಿಕೆಗೆ ದ್ರೋಹ ಬಗೆಯುವ ಪ್ರಯತ್ನ ಬೇಡ.ತಾಳ್ಮೆಯಿಂದ ಮುಂದೆ ಸಾಗಿದರೆ ಫಲವಿದೆ.
ಕಟಕ: ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗಲಿದೆ. ಇಡೀ ದಿನ ತುಂಬಾ ಚಟುವಟಿಕೆಯಿಂದ ಇರಲಿದ್ದೀರಿ. ಉತ್ಸಾಹವೇ ಉನ್ನತಿಗೆ ದಾರಿ.
ಸಿಂಹ: ಹಿಡಿದ ಕೆಲಸವನ್ನು ಎಷ್ಟೇ ಕಷ್ಟವಾದರೂ ಇಂದೇ ಮಾಡಿ ಮುಗಿಸಿ. ನಾಳೆ ಎನ್ನುವುದು ಯಾವತ್ತೂ ನಿಮ್ಮ ಕೈಯಲ್ಲಿ ಇರುವುದಿಲ್ಲ.
ಕನ್ಯಾ: ನೀವು ಮಾಡುವ ಎಲ್ಲಾ ಕಾರ್ಯಗಳೂ ಇಂದು ಫಲ ನೀಡದೇ ಇದ್ದರೂ ಮುಂದಿನ ದಿನಗಳಲ್ಲಿ ಅವುಗಳಿಂದ ಫಲ ಇದ್ದೇ ಇದೆ.
ರುದ್ರಾಕ್ಷಿ ಧರಿಸುವುದರಿಂದೇನು ಲಾಭ?
ತುಲಾ : ನಾಳಿನ ಚಿಂತೆಯನ್ನು ಇಂದು ಮಾಡುತ್ತಾ ಕೂರುವುದಕ್ಕೆ ಬದಲಾಗಿ, ಇಂದು ಆಗಬೇಕಾದ ಕಾರ್ಯಗಳನ್ನು ಮಾಡಿ ಮುಗಿಸಿ.
ವೃಶ್ಚಿಕ: ಮಾಡುವ ಕೆಲಸದಿಂದ ಪರಿಣಾಮ ಏನಾಗಲಿದೆ ಎನ್ನುವುದನ್ನು ಅಂದಾಜು ಮಾಡಿ ಕಾರ್ಯರಂಗಕ್ಕೆ ಇಳಿಯುವುದು ಲೇಸು.
ಧನುಸ್ಸು: ಸಾಧ್ಯವಾದರೆ ಒಳಿತು ಮಾಡಿ, ಇಲ್ಲದೇ ಇದ್ದರೆ ಸುಮ್ಮನೆ ಇದ್ದು ಬಿಡುವುದು ಲೇಸು. ಸವಾಲು ಗಳಿಗೆ ಬೆನ್ನು ಮಾಡಿ ಓಡುವುದು ಬೇಡ.
ಮಕರ:ಹತ್ತು ಮಂದಿಯನ್ನು ಕೇಳಿ ಶುಭ ಕಾರ್ಯ ವನ್ನು ನಿರ್ಧರಿಸುವುದು ಸಾಧ್ಯವಿಲ್ಲ. ನಿಮ್ಮ ಮನಸ್ಸಿಗೆ ಸರಿ ಎನ್ನಿಸಿದನ್ನು ಮಾಡಿ ಮುಗಿಸಿ.
"
ಕುಂಭ: ವ್ಯಕ್ತಿ ವ್ಯಕ್ತಿಗಳ ನಡುವೆ ವ್ಯತ್ಯಾಸ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಅವರ ಯೋಗ್ಯತೆಯನ್ನು ತಿಳಿದರೆ ನಿಮಗೆ ಒಳಿತು.
ಮೀನ : ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳಿತು. ದೂರದ ಸಂಬಂಧಿಗಳ ಆಕಸ್ಮಿಕ ಭೇಟಿಯಾಗಲಿದೆ. ಗೆಲುವಿಗಾಗಿ ಹಂಬಲಿಸುವಿರಿ.