LIVE NOW
Published : Jul 27, 2026, 07:28 AM ISTUpdated : Jul 27, 2026, 02:38 PM IST

Karnataka News Live: Amruthadhaare Serial - ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?

ಸಾರಾಂಶ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯುಸಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಅವರು ಹೈಕಮಾಂಡ್‌ ನಾಯಕರೊಂದಿಗೆ ಸೋಮವಾರ ಇಲ್ಲವೇ ಮಂಗಳವಾರ ಮಹತ್ವದ ಸಭೆ ನಡೆಸಲಿದ್ದಾರೆ. ಹೈಕಮಾಂಡ್‌ ನಾಯಕರೊಂದಿಗೆ ಸಭೆಗೆ ಇನ್ನೂ ನಿರ್ದಿಷ್ಟ ಸಮಯ ನಿಗದಿಯಾಗಿಲ್ಲ, ಸೋಮವಾರ ನಿಗದಿಯಾಗಲಿದೆ. ಒಂದು ವೇಳೆ ಸೋಮವಾರ ಸಮಯ ನಿಗದಿಯಾಗದಿದ್ದಲ್ಲಿ ಮಂಗಳವಾರ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ. ಹೈಕಮಾಂಡ್‌ ಬುಲಾವ್‌ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಮೂವರೂ ನಾಯಕರು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ರಾಜ್ಯ ಎಂಪಿಗಳ ಜತೆ ಸಿಎಂ ಸಭೆ

ಇನ್ನೊಂದೆಡೆ ಕೇಂದ್ರ ಸರ್ಕಾರದಲ್ಲಿ ಬಾಕಿ ಇರುವ ರಾಜ್ಯದ ಯೋಜನೆಗಳು ಸೇರಿ ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕರ್ನಾಟಕದ ಎಲ್ಲಾ ಸಂಸದರು, ರಾಜ್ಯಸಭಾ ಸದಸ್ಯರೊಂದಿಗೆ ನವದೆಹಲಿಯಲ್ಲಿ ಸೋಮವಾರ ಸಂಜೆ ಸಭೆ ನಡೆಸಲಿದ್ದಾರೆ. ಸೋಮವಾರ ಬೆಳಗ್ಗೆಯೇ ಬೆಂಗಳೂರಿನಿಂದ ದೆಹಲಿಗೆ ತೆರಳುವ ಮುಖ್ಯಮಂತ್ರಿ ಅವರು, ಸಂಜೆ ಸಂಸದರೊಂದಿಗೆ ಸಭೆ ನಡೆಸಲಿದ್ದಾರೆ.

02:38 PM (IST) Jul 27

Amruthadhaare Serial - ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?

"ಕಥೆ ಎಳೆಯೋ ಬದಲು, ಎಲ್ಲರೂ ಸುಖವಾಗಿದ್ದಾಗಲೇ ಮುಗಿಸಿಬಿಡಿ" ಎಂಬ ಕೂಗು ಒಂದೆಡೆಯಾದರೆ, "ಭೂಮಿಕಾ ಸಾವನ್ನಪ್ಪಬಾರದು, ಚಮತ್ಕಾರ ನಡೆಯಬೇಕು" ಎನ್ನುವ ಹಂಬಲ ಇನ್ನೊಂದೆಡೆ. ಮುಂದೇನಾಗುತ್ತೆ? ಈ ಸ್ಟೋರಿ ನೋಡಿ..

Read Full Story

02:14 PM (IST) Jul 27

ಸತ್ಯ ಹೇಳಿದ್ದೇ ಮುಳುವಾಯ್ತಾ, ಕೋಟಿ ಸಂಬಳದ ಉದ್ಯೋಗ ಕಳೆದುಕೊಂಡ ನೆಟ್‌ಫ್ಲಿಕ್ಸ್ ಎಕ್ಸಿಕ್ಯೂಟಿವ್!

ಕಂಪನಿಯ 'ವಿಶ್ವಾಸ ವೃದ್ಧಿ ವ್ಯಾಯಾಮ'ದ ವೇಳೆ ತಮ್ಮ ಖಿನ್ನತೆಯ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಮಾತನಾಡಿದ್ದ ನೆಟ್‌ಫ್ಲಿಕ್ಸ್‌ನ ಹಿರಿಯ ಅಧಿಕಾರಿಯೊಬ್ಬರನ್ನು ವಜಾಗೊಳಿಸಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ, ಅವರು ತಾರತಮ್ಯ ಮತ್ತು ಅನ್ಯಾಯದ ಆರೋಪದ ಮೇಲೆ ಈಗ ನೆಟ್‌ಫ್ಲಿಕ್ಸ್ ವಿರುದ್ಧ ಕಾನೂನು ಹೋರಾಟ ಆರಂಭಿಸಿದ್ದಾರೆ.
Read Full Story

01:31 PM (IST) Jul 27

ಕ್ರೆಡಿಟ್ ಕಾಡ್‌ ಬಿಲ್‌ ಕಟ್ಟಲು ವೀಕೆಂಡ್ ರ‍್ಯಾಪಿಡೋ ಚಾಲಕನಾದ ಟೆಕ್ಕಿ, ಆದ್ರೆ ಗಿಗ್ ಕಾರ್ಮಿಕರ ವಾಸ್ತವ ಹೇಳಿದ ಇಂಜಿನಿಯರ್!

ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ತಮ್ಮ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ವಾರಾಂತ್ಯದಲ್ಲಿ ರ್ಯಾಪಿಡೊ ಚಾಲಕರಾಗಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಗ್ರಾಹಕನೊಬ್ಬನಿಂದಾದ ಕಹಿ ಘಟನೆಯು, ಗಿಗ್ ಕಾರ್ಮಿಕರು ದಿನನಿತ್ಯ ಎದುರಿಸುವ ಸವಾಲುಗಳು ಮತ್ತು ಅಸಹಾಯಕತೆಯ ಕರಾಳ ಮುಖವನ್ನು ಅವರಿಗೆ ಪರಿಚಯಿಸಿತು.
Read Full Story

12:43 PM (IST) Jul 27

ಬೆಂಗಳೂರಿಗರಿಗೆ ಭರ್ಜರಿ ಸುದ್ದಿ - ಉದಯಪುರ ಬಳಿಕ ಪಿಂಕ್ ಸಿಟಿ ಜೈಪುರಕ್ಕೂ ನೇರ ವಿಮಾನ, ಟಿಕೆಟ್ ಬುಕ್ಕಿಂಗ್ ಆರಂಭ

ಆಕಾಶ ಏರ್ ಅಕ್ಟೋಬರ್ 11, 2026 ರಿಂದ ಬೆಂಗಳೂರು ಮತ್ತು ಜೈಪುರ ನಡುವೆ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸುತ್ತಿದೆ. ಈ ಹೊಸ ಸೇವೆಯು ಬೆಂಗಳೂರಿನಿಂದ ರಾಜಸ್ಥಾನಕ್ಕೆ ಪ್ರವಾಸ ಮತ್ತು ವ್ಯಾಪಾರವನ್ನು ಸುಲಭಗೊಳಿಸಲಿದ್ದು, ಟಿಕೆಟ್ ಬುಕ್ಕಿಂಗ್ ಈಗಾಗಲೇ ಪ್ರಾರಂಭವಾಗಿದೆ.
Read Full Story

12:40 PM (IST) Jul 27

12 ವರ್ಷಗಳಿಂದ ಆಗದಿರೋದು ಕೇವಲ 12 ದಿನದಲ್ಲಿ ಫಿನಿಶ್.. ಸೈಕಲ್ ಮೆಕ್ಯಾನಿಕ್ ಕಣ್ಣಲ್ಲಿ ಸುರಿದ ಆನಂದಬಾಷ್ಪ

12 ವರ್ಷಗಳ ಕಾಲ ಕತ್ತಲೆಯನ್ನು ಉಂಡಿದ್ದ ಆ ಕಣ್ಣುಗಳು ಅಂದು ಬೆಳಕನ್ನು ನೋಡಿ ಬೆರಗಾದವು. ನಮ್ಮ ಪಾಲಿಗೆ ಸುವೇಂದು ಅಧಿಕಾರಿ ಅವರು ಸಾಕ್ಷಾತ್ ದೇವರಂತೆ ಬಂದರು ಎಂದು ಕೃಷ್ಣ ಬೌರಿ ಕೈಮುಗಿದು ಕೃತಜ್ಞತೆ ಸಲ್ಲಿಸಿದರು. ಅಷ್ಟಕ್ಕೂ ಏನಾಗಿತ್ತು? ಈ ಸ್ಟೋರಿ ಓದಿ..

Read Full Story

12:27 PM (IST) Jul 27

Heart Attack - ಹೃದಯಾಘಾತ ಆಗ್ತಿದ್ದಂತೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.. ವೈದ್ಯರೇ ಹೇಳೋ ಏಕೈಕ ಮದ್ದು ಇದು!

ನಮ್ಮ ಪುರಾತನ ಆಯುರ್ವೇದ ಮತ್ತು ಮನೆಮದ್ದುಗಳಲ್ಲಿ ಅನೇಕ ರಹಸ್ಯಗಳಿವೆ. ಹಿರಿಯರು ಹೇಳುವ ಪ್ರಕಾರ ಮತ್ತು ಕೆಲವು ಜೀವನಶೈಲಿ ತಜ್ಞರ ಅಭಿಪ್ರಾಯದಂತೆ, ಹೃದಯಾಘಾತದ ಲಕ್ಷಣಗಳು ಕಂಡುಬಂದ ತಕ್ಷಣ ಈ ಎಲೆಯನ್ನು ಬಳಸಬಹುದು.

Read Full Story

12:21 PM (IST) Jul 27

ಬೆಂಗಳೂರು - ಥಣಿಸಂದ್ರದಲ್ಲಿ ಭೀಕರ ಅಗ್ನಿ ದುರಂತ, ಕೋಟಿ ಕೋಟಿ ಮೌಲ್ಯದ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸುಟ್ಟು ಭಸ್ಮ!

ಬೆಂಗಳೂರಿನ ಥಣಿಸಂದ್ರದಲ್ಲಿರುವ ಕಾರು ಗ್ಯಾರೇಜ್‌ವೊಂದರಲ್ಲಿ ಸೋಮವಾರ ಮುಂಜಾನೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಜಾಗ್ವಾರ್, ಆಡಿ ಸೇರಿದಂತೆ 25ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

Read Full Story

12:06 PM (IST) Jul 27

Bank of Baroda ಗ್ರಾಹಕರಿಗೆ ಬಿಗ್ ಶಾಕ್.. ಟೆನ್ಷನ್ ಬೇಡ, ಈಗಲೇ ನೀವು ಈ ಕೆಲಸ ಮಾಡಲೇಬೇಕು!

ಬ್ಯಾಂಕ್ ಆಫ್ ಬರೋಡಾ ಬೃಹತ್ ಸೈಬರ್ ದಾಳಿಗೆ ತುತ್ತಾಗಿದ್ದು, ಹ್ಯಾಕರ್‌ಗಳು ಸುಮಾರು 1TB ಗ್ರಾಹಕರ ಸಂವೇದನಾಶೀಲ ಡೇಟಾವನ್ನು ಕದ್ದಿದ್ದಾರೆ. ಈ ಡೇಟಾವನ್ನು ಡಾರ್ಕ್ ವೆಬ್‌ನಲ್ಲಿ ಉಚಿತವಾಗಿ ಹಂಚಿಕೊಳ್ಳಲಾಗಿದ್ದು, ಇದರಲ್ಲಿ ಗ್ರಾಹಕರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ವಿವರಗಳು ಸೇರಿವೆ. ಈ ಘಟನೆಯು ಬ್ಯಾಂಕಿಂಗ್ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
Read Full Story

11:55 AM (IST) Jul 27

ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮೋದಿಯಿಂದ ಮಾತ್ರ ಸಾಧ್ಯ - ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ

ಪರೀಕ್ಷಾ ಪತ್ರಿಕೆ ಸೋರಿಕೆಯನ್ನು ಶಾಶ್ವತವಾಗಿ ತಡೆಯುವುದು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೀಟ್ ಪರೀಕ್ಷೆ ವಿಚಾರದಲ್ಲಿ ಯುವಕರಿಗೆ ನ್ಯಾಯ ಸಿಗಬೇಕು ಎಂದ ಅವರು, ಶಿವಮೊಗ್ಗದಲ್ಲಿ ನಡೆದ ಮನ್ ಕಿ ಬಾತ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.
Read Full Story

11:45 AM (IST) Jul 27

ಶಿವಗಂಗೆ ಬೆಟ್ಟದಲ್ಲಿ ಯುವತಿಯ ಮೊಬೈಲ್ ಕಸಿದು ಗೋಪುರ ಏರಿದ ಮಂಗ - ಯುವತಿ ಪರದಾಡುವ ವಿಡಿಯೋ ವೈರಲ್!

ಪ್ರಸಿದ್ಧ ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟದಲ್ಲಿ, ಯುವತಿಯೊಬ್ಬಳ ಮೊಬೈಲ್ ಫೋನ್‌ ಅನ್ನು ಮಂಗವೊಂದು ಕಸಿದುಕೊಂಡು ದೇವಾಲಯದ ಗೋಪುರದ ಮೇಲೆ ಕುಳಿತು ಸುಮಾರು ಒಂದು ಗಂಟೆ ಕಾಲ ಆಟವಾಡಿದೆ. ಬಹಳಷ್ಟು ಹರಸಾಹಸದ ನಂತರ ಮಂಗವು ಫೋನ್ ಅನ್ನು ಕೆಳಗೆ ಹಾಕಿದ್ದು, ಯುವತಿ ನಿಟ್ಟುಸಿರು ಬಿಟ್ಟರೂ ಫೋನ್‌ಗೆ ಸಣ್ಣಪುಟ್ಟ ಹಾನಿಯಾಗಿತ್ತು.

Read Full Story

11:33 AM (IST) Jul 27

ಶಿವಮೊಗ್ಗ - ಮಕ್ಕಳಿಗೆ ಪೌಷ್ಟಿಕ ಮೊಟ್ಟೆ ಖರೀದಿ - ಶಿಕ್ಷಕರ ಜೇಬಿಗೆ ಕತ್ತರಿ..!

ಹೊಸನಗರ ತಾಲೂಕಿನ ಶಾಲೆಗಳಲ್ಲಿ ಸರ್ಕಾರದ ಮೊಟ್ಟೆ ವಿತರಣೆ ಯೋಜನೆಯಿಂದಾಗಿ ಶಿಕ್ಷಕರು ತಮ್ಮ ಕೈಯಿಂದ ಹಣ ಹಾಕುವಂತಾಗಿದೆ. ಇದರ ಜೊತೆಗೆ, ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳಾದರೂ 60ಕ್ಕೂ ಹೆಚ್ಚು ಶಾಲೆಗಳಿಗೆ ಇನ್ನೂ ಪಠ್ಯಪುಸ್ತಕಗಳು ತಲುಪಿಲ್ಲ, ಇದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Read Full Story

11:27 AM (IST) Jul 27

Haveri - ಸಾವಿನಲ್ಲೂ ಒಂದಾದ ಸತಿ-ಪತಿ - ಪತ್ನಿಯ ಅಗಲಿಕೆ ತಾಳಲಾರದೆ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟ ಪತಿ!

ಹಾವೇರಿ ಜಿಲ್ಲೆಯ ಹೆಸರೂರು ಗ್ರಾಮದಲ್ಲಿ 45 ವರ್ಷಗಳ ಕಾಲ ಅನ್ಯೋನ್ಯವಾಗಿ ಬಾಳಿದ ದಂಪತಿಗಳು ಸಾವಿನಲ್ಲೂ ಒಂದಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಪತ್ನಿ ನಿಧನರಾದ ಕೆಲವೇ ಗಂಟೆಗಳಲ್ಲಿ, ಅವರ ಅಗಲಿಕೆಯ ದುಃಖ ತಾಳಲಾರದೆ ಪತಿಯೂ ಕೊನೆಯುಸಿರೆಳೆದಿದ್ದಾರೆ. ಈ ಹೃದಯವಿದ್ರಾವಕ ಘಟನೆ ಇಡೀ ಗ್ರಾಮಸ್ಥರನ್ನು ಭಾವುಕರನ್ನಾಗಿಸಿದೆ.
Read Full Story

11:16 AM (IST) Jul 27

ಬಿಗ್‌ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ? 'ಶಾಕಿಂಗ್' ಸತ್ಯ ಇಲ್ಲಿದೆ!

ಬಿಗ್‌ ಬಾಸ್ ಗೆದ್ದ ಖುಷಿಯಲ್ಲಿರುವ ರಕ್ಷಿತಾ ಶೆಟ್ಟಿಗೆ ಅವರ ಹಳೆಯ ‘ಗೆಳೆಯರ’ ವರ್ತನೆ ಸ್ವಲ್ಪ ಬೇಸರ ತರಿಸಿರಬಹುದು. ಆದರೂ ರಕ್ಷಿತಾ ಒಬ್ಬ ಅದ್ಭುತ ಆಟಗಾರ್ತಿ ಎಂಬುದನ್ನು ಒಪ್ಪಿಕೊಂಡಿರುವ ಜಾಹ್ನವಿ, ಶೋ ಯಶಸ್ಸಿಗೆ ತಾವೆಲ್ಲರೂ ಕೊಟ್ಟ ‘ಮಸಾಲಾ’ ಕೂಡ ಕಾರಣ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

Read Full Story

11:03 AM (IST) Jul 27

ಕಾಮನ್‌ವೆಲ್ತ್ ಗೇಮ್ಸ್ 2026ರ ಭಾರತೀಯ ತಂಡದ ಫಿಸಿಯೋ ಆಗಿ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಪುತ್ರ ರೋಹನ್

ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರ ಪುತ್ರ ರೋಹನ್ ಆರ್. ಬಾರಿತ್ತಾಯ ಅವರು ಸ್ಕಾಟ್‌ಲ್ಯಾಂಡ್‌ನ ಗ್ಲಾಸ್ಕೋದಲ್ಲಿ ನಡೆಯಲಿರುವ 'ಕಾಮನ್‌ವೆಲ್ತ್ ಗೇಮ್ಸ್ - 2026'ರ ಭಾರತೀಯ ತಂಡದ ಅಧಿಕೃತ ಫಿಸಿಯೋ ಮತ್ತು ರಿಕವರಿ ಥೆರಪಿಸ್ಟ್ ಆಗಿ ಆಯ್ಕೆಯಾಗಿದ್ದಾರೆ. ಕ್ರೀಡಾ ವಿಜ್ಞಾನದಲ್ಲಿ ಉನ್ನತ ಶಿಕ್ಷಣ ಪಡೆದಿರುವ ರೋಹನ್ ಅವರ ಈ ಜಾಗತಿಕ ಸಾಧನೆಯು ಉಡುಪಿ ಹಾಗೂ ರಾಜ್ಯಕ್ಕೆ ಹೆಮ್ಮೆ ತಂದಿದೆ.
Read Full Story

10:49 AM (IST) Jul 27

'ನೀವು ನನಗಾಗಿ ಎಲ್ಲಾ ತ್ಯಾಗ ಮಾಡಿದ್ರಿ, ಕ್ಷಮಿಸಿ ಅಮ್ಮ' ಮತ್ತೊಂದು ಬಲಿ ಪಡೆದ NEET

ದೇಶಾದ್ಯಂತ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಯುವ ನೀಟ್ (NEET) ಪರೀಕ್ಷೆಯ ಫಲಿತಾಂಶದ ಒತ್ತಡ ಮತ್ತೊಂದು ಬಲಿಯನ್ನು ಪಡೆದಿದೆ.

Read Full Story

10:19 AM (IST) Jul 27

ಕುಡಿದ ಮತ್ತಿನಲ್ಲಿ ಬೆಂಗಳೂರಿನ ಪಬ್ ಮುಂದೆ ಯುವತಿ ಕಿರಿಕ್.. ಸುಮ್ಮನಿರಿಸಲು ಬಂದ ಯುವಕನಿಗೆ ಶಾಕ್!

ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಕುಡಿದ ಮತ್ತಿನಲ್ಲಿದ್ದ ಯುವತಿಯೊಬ್ಬಳು ನಡುರಸ್ತೆಯಲ್ಲಿ ಹೈಡ್ರಾಮಾ ಸೃಷ್ಟಿಸಿ, ಸಂಚಾರ ದಟ್ಟಣೆಗೆ ಕಾರಣಳಾಗಿದ್ದಾಳೆ. ಆಕೆಯ ವರ್ತನೆಯಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.
Read Full Story

10:08 AM (IST) Jul 27

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ದಂಧೆ - ಫಾರ್ಮ್ ಪ್ಲಾಟ್ ಹೆಸರಲ್ಲಿ ಅಕ್ರಮ ಮಿನಿ ಟೌನ್‌ಶಿಪ್!

ವರದಿ: ರಂಗೂಪುರ ಶಿವಕುಮಾರ್‌

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಅಂಚಿನಲ್ಲಿ, ರಿಯಲ್ ಎಸ್ಟೇಟ್ ಉದ್ಯಮಿಗಳು ಕೃಷಿ ಭೂಮಿಯನ್ನು ಅಕ್ರಮವಾಗಿ 'ಫಾರ್ಮ್ ಫ್ಲಾಟ್'ಗಳಾಗಿ ಪರಿವರ್ತಿಸಿ ಮಿನಿ ಟೌನ್‌ಶಿಪ್ ನಿರ್ಮಿಸುತ್ತಿದ್ದಾರೆ.

Read Full Story

09:37 AM (IST) Jul 27

ಕಡೂರಿನಲ್ಲಿ ಹಂದಿ ಬೇಟೆಗಾಗಿ ಹಾಕಿದ್ದ ಲೈನ್ ತುಳಿದು ವ್ಯಕ್ತಿ ಸಾವು.. ಸಾಕ್ಷ್ಯ ನಾಶಕ್ಕೆ ನಡೀತು ಮೈ ನಡುಗಿಸುವ ಕೃತ್ಯ

ಕಾಡುಹಂದಿ ಬೇಟೆಗಾಗಿ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ, ಕೊಲೆ ಪ್ರಕರಣದ ಮಾದರಿಯಲ್ಲೇ ತಿರುವು ಪಡೆದುಕೊಂಡಿದೆ. ಸಿಕ್ಕಿಬೀಳುವ ಭೀತಿಯಿಂದ ಬೇಟೆಗಾರರು ಶವವನ್ನೇ ಹೂತು ಹಾಕಿ, ಕೇಸ್ ಮುಚ್ಚಿ ಹಾಕಲು ನಡೆಸಿದ್ದ ಮಾಸ್ಟರ್ ಪ್ಲಾನ್ ಸಿಸಿ ಕ್ಯಾಮೆರಾದ ಒಂದು ದೃಶ್ಯದಿಂದ ವಿಫಲವಾಗಿದೆ

Read Full Story

09:34 AM (IST) Jul 27

ಬೆಂಗಳೂರು ಮಣ್ಣಲ್ಲಿ ಗಂಗರ ಕಾಲದ ಹುಲಿಬೇಟೆ ವೀರರಹಸ್ಯ! ಕ್ರಿ.ಶ 850ರ ಕಾಲಮಾನದ ಕನ್ನಡದ ಶಾಸನ ರಕ್ಷಣೆಗೆ ಒತ್ತಾಯ

ನೆಲಮಂಗಲ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಗಂಗರ ಕಾಲದ, ಕ್ರಿ.ಶ 850ಕ್ಕೆ ಸೇರಿದ ಅಪರೂಪದ ಹುಲಿಬೇಟೆ ವೀರಗಲ್ಲು ಪತ್ತೆಯಾಗಿದೆ. ಈ ಶಾಸನ ಸಹಿತ ವೀರಗಲ್ಲು, ಹುಲಿಯೊಂದಿಗೆ ಹೋರಾಡಿ ವೀರಮರಣ ಹೊಂದಿದ ಸಿವಮರೆನಾದಿ ಎಂಬ ವೀರನ ಕಥೆಯನ್ನು ಸಾರುತ್ತದೆ.
Read Full Story

08:33 AM (IST) Jul 27

ದಾವಣಗೆರೆ ದುರ್ಗಾಂಬಿಕಾ ದೇವಿ ಆಭರಣ ಕದ್ದು ಮಾರಿದ ಪೂಜಾರಿ; ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ವಾರ್ನಿಂಗ್!

ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಪೂಜಾರಿ ಆಕಾಶ್, ದೇವಿಯ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕದ್ದು, ಕರಗಿಸಿ ಮಾರಾಟ ಮಾಡಿದ್ದಾನೆ. ಈ ವಂಚನೆ ಬೆಳಕಿಗೆ ಬಂದ ನಂತರ, ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದ ದೇವಸ್ಥಾನ ಟ್ರಸ್ಟ್, ಕಳುವಾದ ಸಂಪೂರ್ಣ ಚಿನ್ನವನ್ನು ವಾಪಸ್ ನೀಡುವಂತೆ ಆರೋಪಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಸದ್ಯ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ.

Read Full Story

More Trending News