Published : Aug 09, 2025, 07:25 AM ISTUpdated : Aug 09, 2025, 11:56 PM IST

Karnatata Latest News Live: 'ಅನಾಮಿಕ ಯಾರು? ಅವನ ಹಿನ್ನೆಲೆ ಏನು?..' ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕುಂದುತರಲು ಯತ್ನ; ಸಂಸದ ಕಾಗೇರಿ ಆಕ್ರೋಶ

ಸಾರಾಂಶ

ಬೆಂಗಳೂರು (ಆ.9): ಮತಗಳ್ಳತನ ಆರೋಪ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಮೆಗಾ ರ್ಯಾಲಿ ನಡೆಸಿದೆ. ಈ ವೇಳೆ ರಾಹುಲ್‌ ಗಾಂಧಿ ಚುನಾವಣಾ ಆಯೋಗಕ್ಕೆ ಐದು ಪ್ರಶ್ನೆ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗದ ಕಚೇರಿಗೆ ಹೋಗಿ ಪ್ರಮಾಣ ಮಾಡಲು ವಿಪಕ್ಷ ನಾಯಕ ನಕಾರ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿಯೇ ನಾನು ಪ್ರಮಾಣ ಮಾಡಿದ್ದೇನೆ. ಈಗ ಯಾಕೆ ಪ್ರಮಾಣ ಮಾಡಲಿ ಎಂದು ಪ್ರಶ್ನೆ ಮಾಡಿದ್ದಾರೆ. ಸಂವಿಧಾನದ ಮೇಲೆ ದಾಳಿ ಮಾಡಿದರೆ, ನಿಮ್ಮ ಮೇಲೆಯೇ ದಾಳಿ ಮಾಡಿದಂತೆ ಎಂದು ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ. ಅದರೊಂದಿಗೆ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

MP kageri on dharmasthala case

11:56 PM (IST) Aug 09

'ಅನಾಮಿಕ ಯಾರು? ಅವನ ಹಿನ್ನೆಲೆ ಏನು?..' ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕುಂದುತರಲು ಯತ್ನ; ಸಂಸದ ಕಾಗೇರಿ ಆಕ್ರೋಶ

ಧರ್ಮಸ್ಥಳದ ಘನತೆಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳ ಹಿಂದಿರುವವರನ್ನು ಬಹಿರಂಗಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

Read Full Story

10:49 PM (IST) Aug 09

ಭಾರತ ವಿಮಾನಕ್ಕೆ ವಾಯುಪ್ರದೇಶ ನಿರಾಕರಿಸಿ 2 ತಿಂಗಳಲ್ಲಿ 127 ಕೋಟಿ ರೂ ಕಳೆದುಕೊಂಡ ಪಾಕಿಸ್ತಾನ

ಪೆಹಲ್ಗಾಂ ಉಗ್ರ ದಾಳಿಯಿಂದ ಭಾರತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಪಾಕಿಸ್ತಾನ ಪ್ರತಿಯಾಗಿ ಭಾರತದ ವಿಮಾನಗಳಿಗೆ ವಾಯುಪ್ರದೇಶ ನಿರಾಕರಿಸಿತ್ತು. ಇದರಿಂದ ಪಾಕಿಸ್ತಾನ ಕೇವಲ 2 ತಿಂಗಳಲ್ಲಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

Read Full Story

10:20 PM (IST) Aug 09

ಚಿಕ್ಕಮಗಳೂರು - ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆ; 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ನಂತರ ಮಕ್ಕಳು ಚೇತರಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
Read Full Story

10:03 PM (IST) Aug 09

ಡೋನಾಲ್ಡ್ ಟ್ರಂಪ್‌ಗೆ ಎದುರಾಯ್ತು ಹೊಸ ಸಂಕಷ್ಟ, ಅಮೆರಿಕದಲ್ಲಿ ಕೋವಿಡ್ ವೈರಸ್ ಸ್ಫೋಟ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ತೆರಿಗೆ ವಿಧಿಸಿದ ಬೆನ್ನಲ್ಲೇ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸ್ಫೋಟಗೊಂಡಿದೆ. ಈ ಕುರಿತು ಯುಎಸ್ ಸಿಡಿಸಿ ಮಾಹಿತಿ ನೀಡಿದೆ.

Read Full Story

09:22 PM (IST) Aug 09

ಕೇವಲ 11 ಸಾವಿರಕ್ಕೆ ಬುಕ್ ಮಾಡಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಶನ್ ಕಾರು

ನಿಸ್ಸಾನ್ ಬ್ರ್ಯಾಂಡ್‌ನ ಅತೀ ಕಡಿಮೆ ಬೆಲೆಯ, ಗರಿಷ್ಠು ಸುರಕ್ಷತೆಯ ಬೇಡಿಕೆಯ ಕಾರು ಮ್ಯಾಗ್ನೈಟ್ ಇದೀಗ ಸ್ಪಷಲ್ ಎಡಿಶನ್ ರೂಪದಲ್ಲಿ ಬಿಡುಗಡೆಯಾಗಿದೆ. ಕುರೊ ಸ್ಪೆಷಲ್ ಎಡಿಶನ್ ಮ್ಯಾಗ್ನೈಟ್ ಕಾರು ಕೇವಲ 11,000 ರೂಗೆ ಬುಕಿಂಗ್ ಮಾಡಿಕೊಳ್ಳಬಹುದು.

Read Full Story

09:05 PM (IST) Aug 09

ರಾತ್ರಿ ಊಟದ ನಂತರ ಹೊಟ್ಟೆಮೇಲೆ ಮಲಗ್ತೀರಾ? ಈ 6 ಅಪಾಯಗಳು ತಪ್ಪಿದ್ದಲ್ಲ, ಕೆಟ್ಟ ಅಭ್ಯಾಸ ಇಂದಿನಿಂದಲೇ ಬಿಟ್ಟುಬಿಡಿ!

ಹೊಟ್ಟೆಯ ಮೇಲೆ ಮಲಗುವುದರಿಂದ ಬೆನ್ನುನೋವು, ಉಸಿರಾಟದ ತೊಂದರೆ, ಜೀರ್ಣಕಾರಿ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ಗರ್ಭಿಣಿಯರಿಗೆ ಅಪಾಯ ಮತ್ತು ನರಗಳ ತೊಂದರೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬದಿಯಲ್ಲಿ ಅಥವಾ ಬೆನ್ನಿನ ಮೇಲೆ ಮಲಗುವುದು ಆರೋಗ್ಯಕರ ನಿದ್ರೆಗೆ ಸಹಾಯಕ.
Read Full Story

08:54 PM (IST) Aug 09

ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಅಕಾಶ್ ದೀಪ್ ಹೊಸ ಕಾರು ಖರೀದಿ, ಇದರ ಬೆಲೆ ಎಷ್ಟು?

ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ ಅಕಾಶ್ ದೀಪ್ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ಕಾರು ಯಾವುದು? ಇದರ ಬೆಲೆ ಎಷ್ಟು?

Read Full Story

07:48 PM (IST) Aug 09

ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಪತಿಗೆ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ದೆಹಲಿಗೆ ಆಹ್ವಾನ. ಸಂಜೀವಿನಿ ಯೋಜನೆಯಡಿ ಚಿತ್ತಾರ ಕಲೆ ಪ್ರದರ್ಶಿಸಿದ್ದಕ್ಕೆ ಈ ಗೌರವ. ರಾಷ್ಟ್ರಪತಿಗಳ ಭೇಟಿಗೆ ಅವಕಾಶ.
Read Full Story

07:46 PM (IST) Aug 09

ಕಡಿಮೆ ಆದಾಯದಲ್ಲಿ ಕಾರು ಖರೀದಿ ಕನನಸು ನನಸಾಗಿಸುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ

ಕಾರು ಖರೀದಿಸಬೇಕು, ಕಾರಿನಲ್ಲಿ ಓಡಾಡಬೇಕು ಅನ್ನೋದು ಬಹುತೇಕರ ಆಸೆ. ಕಾಸಿಲ್ವಮ್ಮ, ಕಾರು ಹೇಗೆ ಖರೀದಿ ಎಂದು ಚಿಂತೆ ಮಾಡಬೇಕಿಲ್ಲ. ಈ 10 ಮಾರ್ಗದ ಮೂಲಕ ಹಣ ಉಳಿತಾಯ ಮಾಡಿ ಎಲ್ಲರೂ ಕಾರು ಖರೀದಿಸಲು ಸಾಧ್ಯವಿದೆ.

Read Full Story

06:54 PM (IST) Aug 09

ಧರ್ಮಸ್ಥಳದ ರತ್ನಗಿರಿ ಬೆಟ್ಟದ ಎರಡೂ ಕಡೆ ಸಿಗಲಿಲ್ಲ ಅಸ್ಥಿಪಂಜರ, ಇಂದಿನ ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳದ ರತ್ನಗಿರಿ ಬೆಟ್ಟದ ಕಾರ್ಯಾಚರಣೆ ಅಂತ್ಯಗೊಂಡಿದೆ. 16 ಹಾಗೂ 16ಎ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇಂದಿನ ಕಾರ್ಯಚಾರಣೆ ಹೈಲೈಟ್ಸ್ ಏನು?

Read Full Story

06:40 PM (IST) Aug 09

ಟ್ರೇಡಿಂಗ್ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಿ ₹63.30 ಲಕ್ಷ ಕಳೆದುಕೊಂಡ ಧಾರವಾಡ ವ್ಯಕ್ತಿ!

ಹೂಡಿಕೆ ಆಮಿಷವೊಡ್ಡಿ ₹63.30 ಲಕ್ಷ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಬಲೆಗೆ ಬಿದ್ದ ವ್ಯಕ್ತಿಯಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Read Full Story

06:25 PM (IST) Aug 09

ಧರ್ಮಸ್ಥಳದಲ್ಲಿ ಕಳೇಬರ ಸಿಗದಿದ್ದರೆ ಭೀಮನ ಲೋಪವಲ್ಲ ಎಂದ ವಕೀಲ, 16ನೇ ಸ್ಥಳದ ಶೋಧ ಅಂತ್ಯ

ಧರ್ಮಸ್ಥಳ ರತ್ನಗಿರಿ ಬೆಟ್ಟದ 16ರ ಶೋಧ ಕಾರ್ಯ ಅಂತ್ಯಗೊಂಡಿದೆ. ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆದರೆ ಸುಜಾತ್ ಭಟ್ ಪರ ವಕೀಲ ಹೊಸ ಆಕ್ಷೇಪ ತೆಗೆದಿದ್ದಾರೆ. ಸಾಕ್ಷಿ ಸಿಗಬಾರದು ಎಂದು ಒಳಸಂಚು ನಡೆದಿದೆ ಎಂದು ವಕೀಲ ಆರೋಪಿಸಿದ್ದಾರೆ. ವಕೀಲರ ಆರೋಪವೇನು?

Read Full Story

05:50 PM (IST) Aug 09

ವೀಕೆಂಡ್ ಅಂತಾ ನಂದಿ ಬೆಟ್ಟಕ್ಕೆ ಹೋಗೋರು ಗಮನಿಸಿ, ನಾಳೆ ಪ್ರವಾಸಿಗರಿಗೆ ನಿರ್ಬಂಧ, ಇಲ್ಲಿದೆ ವಿವರ

ಆಗಸ್ಟ್ 10 ರಂದು ನಂದಿ ಬೆಟ್ಟದಲ್ಲಿ ‘ನಂದಿ ಹಿಲ್ಸ್ ಮಾನ್ಸೂನ್ ರನ್’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ರವರೆಗೆ ಖಾಸಗಿ ವಾಹನಗಳ ಸಂಚಾರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. 

Read Full Story

05:40 PM (IST) Aug 09

ಆನ್‌ಲೈನ್ ವಂಚನೆ - ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಪ್ರತಿ ದಿನ ಆನ್‌ಲೈನ್ ವಂಚನೆಗಳಿಂದ ಹಣ ಮಾತ್ರವಲ್ಲ, ಮಾನಸಿಕ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸೈಬರ್ ಅಪರಾಧಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಆನ್‌ಲೈನ್ ವಂಚನೆ, ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

Read Full Story

05:40 PM (IST) Aug 09

ವಿಷ್ಣು ಸ್ಮಾರಕ ತೆರವಿಗೆ ಅನಿರುದ್ಧ್ ಅಸಮಾಧಾನ, ವಿಷ್ಣುವರ್ಧನ್ ಹೆಸರಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್

ವಿಷ್ಣುವರ್ಧನ್ ಸ್ಮಾರಕ ತೆರವು ವಿಚಾರವಾಗಿ ಅನಿರುದ್ಧ ಜಟ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಕುಟುಂಬದ ವಿರುದ್ಧ ಮಾತನಾಡುವವರನ್ನು ವಿರೋಧಿಸುವುದಾಗಿ ಹೇಳಿದ್ದಾರೆ.
Read Full Story

05:31 PM (IST) Aug 09

ಬಾಲಕೃಷ್ಣ ಸಮಾಧಿ ಒಡೆದ್ರಂತೆ, ಈಗ ವಿಷ್ಣುವರ್ಧನ್‌ ಸಮಾಧಿ ನೆಲಸಮ, ಭೂಮಿ ವ್ಯವಹಾರ ದೊಡ್ಡದಾಯ್ತಾ? Kiccha Sudeep

Dr Vishnuvardhan Memorial: ಡಾ ವಿಷ್ಣುವರ್ಧನ್‌ ಸಮಾಧಿ ವಿಚಾರವಾಗಿ ನಟ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. ಈ ಘಟನೆಯನ್ನು ಖಂಡಿಸಿದ್ದಲ್ಲದೆ, ನಾನು ಕೋರ್ಟ್‌ಗೆ ಬರಲು ರೆಡಿಯಿದ್ದೇನೆ ಎಂದಿದ್ದಾರೆ. 

Read Full Story

05:29 PM (IST) Aug 09

ವಿವಾಹ ವಾರ್ಷಿಕೋತ್ಸವಕ್ಕೆ ಹಾವಿನ ಖಾದ್ಯ ಸವಿದ ಸಸ್ಯಾಹಾರಿ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ?

ಸಸ್ಯಾಹಾರಿಗಳಾಗಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾವಿನ ಖಾದ್ಯ ಸವಿದಿದ್ದಾರೆ. ಅಸಲಿಗೆ ಏನಿದು?

 

Read Full Story

05:26 PM (IST) Aug 09

Kumudvathi rejuvenation - ಆರ್ಟ್ ಆಫ್ ಲಿವಿಂಗ್ & ಟಾರಸ್ ಟಾರಸ್ ಪರಿಶ್ರಮದಿಂದ ಮಹಿಮಾಪುರ ಗುಡ್ಡೆ ಈಗ ಹಸಿರು ಕಾಡು!

ಆರ್ಟ್ ಆಫ್ ಲಿವಿಂಗ್ ಮತ್ತು ಟಾರಸ್ ಟಾರಸ್ ಪವರ್‌ಟ್ರಾನಿಕ್ಸ್ ಸಂಸ್ಥೆಗಳು ಕುಮುದ್ವತಿ ನದಿ ಪುನಶ್ಚೇತನಕ್ಕಾಗಿ 800 ಸಸಿಗಳನ್ನು ನೆಟ್ಟಿವೆ. ಈ ಯೋಜನೆಯು ನೀಲಗಿರಿ ಮರಗಳಿಂದ ಆವೃತವಾಗಿದ್ದ ಮಹಿಮಾಪುರ ಗುಡ್ಡವನ್ನು ಸ್ಥಳೀಯ ಕಾಡಾಗಿ ಪರಿವರ್ತಿಸಿದೆ.
Read Full Story

05:05 PM (IST) Aug 09

ಮಾಡಬಾರದನ್ನ ಮಾಡಿ, ವೋಟರ್ ಲಿಸ್ಟ್ ಬದಲಾವಣೆ ಪ್ರಧಾನಿಯಾಗಿದ್ದಾರೆ, ಮೋದಿ ವಿರುದ್ಧ ರಾಜಣ್ಣ ಕಿಡಿ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳದ್ದೇ ಅಂತಿಮ ತೀರ್ಮಾನ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. 

Read Full Story

04:42 PM (IST) Aug 09

ವಿಜಯ ರಾಘವೇಂದ್ರ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾನಾ? ನಟನಿಂದ ಬಂತು ಹೀಗೊಂದು ಪ್ರತಿಕ್ರಿಯೆ

ನಟ ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಾ ಇದ್ದಾನಾ? ಈ ಕುರಿತು ನಟ ಹೇಳಿದ್ದೇನು?

 

Read Full Story

04:28 PM (IST) Aug 09

ಐಸಿಐಸಿ ಬ್ಯಾಂಕ್ ಖಾತೆ ಮಿನಿಮಮ್ ಬ್ಯಾಲೆನ್ಸ್ ₹50,000ಕ್ಕೆ ಏರಿಕೆ, ಹೊಸ ನಿಯಮ ಜಾರಿ

ಐಸಿಐಸಿ ಹೊಸ ನಿಯಮ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಹೊಸ ಖಾತೆದಾರರ ಕನಿಷ್ಟ ಬ್ಯಾಲೆನ್ಸ್ ಬರೋಬ್ಬರಿ 50,000 ರೂಪಾಯಿಗೆ ಏರಿಕೆ ಮಾಡಲಾಗಿದೆ.

Read Full Story

04:22 PM (IST) Aug 09

ದೇಶದಲ್ಲಿ ನುಡಿದಂತೆ ನಡೆದ ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ - ಸಿಎಂ

ಸಿಎಂ ಸಿದ್ದರಾಮಯ್ಯ ಅವರು ನುಡಿದಂತೆ ನಡೆದ ಸರ್ಕಾರ ನಮ್ಮದೇ ಎಂದು ಹೇಳಿದ್ದಾರೆ. ಮತಗಳ್ಳತನದ ಆರೋಪ, ಕರ್ನಾಟಕದ ಆರ್ಥಿಕ ಪ್ರಗತಿ ಮತ್ತು ಕೇಂದ್ರದಿಂದ ತೆರಿಗೆ ಹಣದ ಕೊರತೆ ಬಗ್ಗೆಯೂ ಚರ್ಚಿಸಿದ್ದಾರೆ. ಅಂಬೇಡ್ಕರ್ ಸಂವಿಧಾನದ ಬಗ್ಗೆಯೂ ಮಾತನಾಡಿದ್ದಾರೆ.
Read Full Story

03:57 PM (IST) Aug 09

ಉಡುಪಿಯಲ್ಲಿ ಪಾತ್ರೆ ತೊಳೆದು ನಿರ್ಮಲಾ ಸೀತಾರಾಮನ್‌ ಸರಳತೆ, ವಿತ್ತ ಸಚಿವೆಗೆ ಭಾರತ ಲಕ್ಷ್ಮಿ ಬಿರುದು ಪ್ರಧಾನ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 'ಭಾರತ ಲಕ್ಷ್ಮಿ' ಬಿರುದು ಪ್ರಧಾನ. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳು ಈ ಬಿರುದನ್ನು ಘೋಷಿಸಿದರು. ಸಚಿವರ ಸರಳತೆ ಮತ್ತು ಭಕ್ತಿ ಎಲ್ಲರ ಮನಸೂರೆಗೊಂಡಿತು.
Read Full Story

03:42 PM (IST) Aug 09

ಪ್ರಧಾನಿ ಮೋದಿ ಮೆಟ್ರೋ ಉದ್ಘಾಟನೆ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಅಶೋಕ್‌ಗೆ ಇಲ್ಲ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಹಳದಿ ಮೆಟ್ರೋ ಉದ್ಘಾಟನೆಯನ್ನು ನಾಳೆ ಮಾಡಲಿದ್ದಾರೆ. ಆದರೆ ಈ ಕಾರ್ಯಕ್ರಮಕ್ಕೆ ಪ್ರತಿಪಕ್ಷ ನಾಯಕ ಆರ್ ಅಶೋಕ್‌ಗೆ ಆಹ್ವಾನ ನೀಡಿಲ್ಲ, ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಆಹ್ವಾನ ನೀಡಲಾಗಿದ್ದು ಇದೀಗ ಬಿಜೆಪಿಯಲ್ಲೇ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

Read Full Story

03:26 PM (IST) Aug 09

ಮಂಡ್ಯದಲ್ಲಿ ವ್ಯಕ್ತಿಯ ಪ್ರಾಣಕ್ಕೆ ಕುತ್ತು ತಂದ ವೈಟ್‌ ಶರ್ಟ್‌!

ಮಂಡ್ಯದಲ್ಲಿ ವೈಟ್ ಶರ್ಟ್‌ನಿಂದಾಗಿ ತಪ್ಪು ಗುರಿಯನ್ನು ಹೊಡೆದು ಕೊಲೆ ಮಾಡಲಾಗಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಊರಿಗೆ ಬಂದಿದ್ದ ಬೆಂಗಳೂರು ಕ್ಯಾಬ್ ಚಾಲಕ ಅರುಣ್ ಕೊಲೆಯಾಗಿದ್ದಾನೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
Read Full Story

03:04 PM (IST) Aug 09

ಸಾಲು ಸಾಲು ಹಬ್ಬಕ್ಕೆ ರೈಲ್ವೇಯಿಂದ ಗುಡ್ ನ್ಯೂಸ್, ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆ 20% ಡಿಸ್ಕೌಂಟ್

ಸಾಲು ಸಾಲು ಹಬ್ಬಗಳ ಋತು ಆರಂಭಗೊಳ್ಳುತ್ತಿದೆ. ಹಬ್ಬ ಆಚರಿಸಲು ಊರುಗಳಿಗೆ ತೆರಳುವ ಬಹುತೇಕರಿಕಾಗಿ ಭಾರತೀಯ ರೈಲ್ವೇ ಇದೀಗ ಗುಡ್ ನ್ಯೂಸ್ ನೀಡಿದೆ. ಹಬ್ಬದ ಸೀಸನ್‌ಗೆ ರೌಂಡ್ ಟ್ರಿಪ್ ಪ್ಯಾಕೇಜ್ ಜೊತೆಗೆ ಟಿಕೆಟ್ ಬುಕಿಂಗ್‌ನಲ್ಲಿ ಶೇಕಡಾ 20 ರಷ್ಟು ಡಿಸ್ಕೌಂಟ್ ನೀಡಿದೆ.

Read Full Story

02:53 PM (IST) Aug 09

'ಒಬ್ಬ ಸಾಧಕನಿಗೆ ಈ ಅಪಮಾನ ಸರಿಯಲ್ಲ..' ವಿಷ್ಣು ಸಮಾಧಿ ನೆಲಸಮ ಕುರಿತು ಧ್ರುವ ಸರ್ಜಾ ಆಕ್ರೋಶ

ಡಾ. ವಿಷ್ಣುವರ್ಧನ್ ಅವರ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಮಾಧಿಯನ್ನು ತೆರವುಗೊಳಿಸಿದ್ದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ನಟ ಧ್ರುವ ಸರ್ಜಾ ಅವರು ಅಭಿಮಾನಿಗಳ ಪರ ನಿಂತಿದ್ದು, 'ಸಾಧಕನಿಗೆ ಈ ಅಪಮಾನ ಸರಿಯಲ್ಲ' ಎಂದು ಹೇಳಿದ್ದಾರೆ. 

Read Full Story

01:42 PM (IST) Aug 09

ಧರ್ಮಸ್ಥಳ ಸಮಾಧಿ ಪ್ರಕರಣ - ಬಾಹುಬಲಿ ಇರುವ ರತ್ನಗಿರಿ ಬೆಟ್ಟದ ಕೆಳಗೆ ಶೋಧ, ಪಾಯಿಂಟ್‌ ನಂ 16!

ಧರ್ಮಸ್ಥಳದ ರತ್ನಗಿರಿ ಬೆಟ್ಟದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಶಂಕೆ ವ್ಯಕ್ತವಾಗಿದ್ದು, ನಿಗೂಢ ಮುಸುಕುದಾರಿಯೊಬ್ಬರ ಮಾರ್ಗದರ್ಶನದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸ್ಪಾಟ್ ನಂ. 16  , ಮಾಧ್ಯಮಗಳಿಂದ ಗೌಪ್ಯತೆ ಕಾಪಾಡಲು ಬಿಗಿ ಕ್ರಮ ಕೈಗೊಳ್ಳಲಾಗಿದೆ.

Read Full Story

01:05 PM (IST) Aug 09

ಕಲಾಸಿಪಾಳ್ಯ ಸ್ಫೋಟಕ ಪತ್ತೆ ಪ್ರಕರಣ - ಮತ್ತಿಬ್ಬರು ಆರೋಪಿಗಳ ಬಂಧನ, ಬ್ಲಾಕ್ ಮಾರ್ಕೆಟ್ ಲಿಂಕ್!

ಕಲಾಸಿಪಾಳ್ಯ ಬಸ್ ನಿಲ್ದಾಣದ ಸ್ಫೋಟಕ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೋಲಾರ ಮೂಲದ ಶಿವಕುಮಾರ್ ಮತ್ತು ನವೀನ್ ಬಂಧಿತರು. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
Read Full Story

12:50 PM (IST) Aug 09

ವರಮಹಾಲಕ್ಷ್ಮಿ ಹಬ್ಬದ ಕುಂಕುಮಕ್ಕೆ ಹೋಗಿದ್ದ ನವವಿವಾಹಿತೆ ಆಕ್ಸಿಡೆಂಟ್‌ನಲ್ಲಿ ಸಾವು, ಸುದ್ದಿ ಕೇಳಿ ಅಜ್ಜಿಯೂ ಕೊನೆಯುಸಿರು!

ವರಮಹಾಲಕ್ಷ್ಮಿ ಹಬ್ಬದಂದು ಬೆಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನವವಿವಾಹಿತೆ ಮೃತಪಟ್ಟಿದ್ದಾರೆ. ಈ ದುರ್ಘಟನೆಯ ಆಘಾತದಿಂದ ಅವರ ಅಜ್ಜಿ ಕೂಡ ಸಾವನ್ನಪ್ಪಿದ್ದಾರೆ. ಲಗ್ಗೆರೆ ಬ್ರಿಡ್ಜ್ ಬಳಿ ನಡೆದ ಈ ದುರ್ಘಟನೆಯಲ್ಲಿ ಪತಿ ತೀವ್ರವಾಗಿ ಗಾಯಗೊಂಡಿದ್ದಾರೆ.
Read Full Story

12:43 PM (IST) Aug 09

'ಅಮೃತಧಾರೆ' ಭಾಗ್ಯಮ್ಮ ಕೇಳ್ತಿರೋ ಈ ಒಗಟಿಗೆ ನಿಮ್ಗೆ ಉತ್ತರ ಗೊತ್ತಾ? ಮಲ್ಲಿ ಪಾಸ್​... ನೀವು?

ಅಮೃತಧಾರೆ ಸೀರಿಯಲ್​ನಲ್ಲಿ ಭಾಗ್ಯಮ್ಮನ ಪಾತ್ರ ಮಾಡುತ್ತಿರೋ ನಟಿ ಚಿತ್ಕಳಾ ಬಿರಾದಾರ್​ ಅವರು ಒಂದು ಒಟಗನ್ನು ಕೇಳಿದ್ದಾರೆ. ಅದಕ್ಕೆ ನೀವು ಉತ್ತರಿಸಬಲ್ಲಿರಾ?

 

Read Full Story

12:37 PM (IST) Aug 09

ಧರ್ಮಸ್ಥಳ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್, ಅನಾಮಿಕ ಶವ ಹೂತಿದ್ದನ್ನು ನೋಡಿದ್ದೇವೆ ಇಬ್ಬರಿಂದ ದೂರು!

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೊಸ ಸಾಕ್ಷಿದಾರರು ಎಸ್ಐಟಿಗೆ ದೂರು ನೀಡಿದ್ದಾರೆ. ಮುಸುಕುಧಾರಿ ವ್ಯಕ್ತಿಯೊಬ್ಬ ರಹಸ್ಯವಾಗಿ ಶವಗಳನ್ನು ಹೂತಿಟ್ಟಿರುವುದನ್ನು ನೋಡಿದ್ದಾಗಿ ಅವರು ಹೇಳಿದ್ದಾರೆ.  

Read Full Story

12:30 PM (IST) Aug 09

ಬಾದಾಮಿಯಲ್ಲಿ ಮತ ಖರೀದಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ ಎಂದ ಸಿಎಂ ಸಿದ್ದರಾಮಯ್ಯ

ಬಾದಾಮಿ ಚುನಾವಣೆಯಲ್ಲಿ ಮತ ಖರೀದಿ ಆರೋಪದ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತಮಗೆ ಈ ವಿಚಾರ ತಿಳಿದಿಲ್ಲ ಎಂದಿದ್ದಾರೆ. 'ಸತ್ತವರು, ಕೆಟ್ಟವರು ಮತ ಹಾಕಿದ್ದಾರೆ' ಎಂಬ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
Read Full Story

12:14 PM (IST) Aug 09

Su From So Part-2 ಬರ್ತಿದ್ಯಾ? ಸಿನಿಮಾಕ್ಕೆ ನಿಜವಾಗಿ ಖರ್ಚಾಗಿದ್ದೆಷ್ಟು, ಗಳಿಸಿದ್ದೆಷ್ಟು? ರಾಜ್​ ಶೆಟ್ಟಿ ಹೇಳಿದ್ದೇನು ಕೇಳಿ...

ಗಲ್ಲಾಪೆಟ್ಟಿಗೆಯಲ್ಲಿ ಚಿಂದಿ ಉಡಾಯಿಸುತ್ತಿರೋ ಸು ಫ್ರಂ ಸೋಗೆ ನಿಜವಾಗಿ ಖರ್ಚು ಆಗಿದ್ದೆಷ್ಟು? ಚಿತ್ರದ ಪಾರ್ಟ್​-2 ಬರುತ್ತಿದ್ಯಾ? ನಟ ರಾಜ್​ ಬಿ.ಶೆಟ್ಟಿ ಹೇಳಿದ್ದೇನು?

 

Read Full Story

12:09 PM (IST) Aug 09

ಚಿಕ್ಕಬಾಣಾವರದಲ್ಲಿ ಬಾರ್‌ ಬಳಿ ಗಲಾಟೆ - ರೌಡಿಶೀಟರ್ ಹತ್ಯೆ, ಮೂವರು ಆರೋಪಿಗಳ ಬಂಧನ

ಸೋಲದೇವನಹಳ್ಳಿಯ ಚಿಕ್ಕಬಾಣಾವರದ ಬಾರ್‌ ಬಳಿ ನಡೆದ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 27 ವರ್ಷದ ರೌಡಿಶೀಟರ್ ಪ್ರತಾಪ್‌ನನ್ನು ಹತ್ಯೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

Read Full Story

11:52 AM (IST) Aug 09

ಕಲ್ಲಂಗಡಿ ಬೆಲೆ ಹೆಚ್ಚಿಸಿರೋ ಪೌಡರ್, ಪಪ್ಪಾಯಿ ಎಲೆಗೂ ಇದೆ ಡಿಮ್ಯಾಂಡ್ - ಕಾವೇರಿ ಆಗ್ರೋ ಯಶೋಗಾಥೆ

ಕಾರವಾರ ತಾಲೂಕಿನಲ್ಲಿರುವ ಕಾವೇರಿ ಆಗ್ರೋ ಕಂಪನಿ ಕಟ್ಟಿ ಬೆಳೆಸುತ್ತಿರುವ ಸುದೇಶ್ ಕೊಯ್ರ ನಾಯಕ್​​ ಈ ಕತೆಯ ನಾಯಕ. ಸುದೇಶ್ ಕೊಯ್ರ ನಾಯಕ್​, ಅನೇಕ ಔಷಧ ಕಂಪನಿಗಳಲ್ಲಿ 13 ವರ್ಷ ಕೆಲಸ ಮಾಡಿದ್ರು.

Read Full Story

11:44 AM (IST) Aug 09

ಬಾದಾಮಿಯಲ್ಲಿ ಸಿದ್ಧರಾಮಯ್ಯ ಗೆದ್ದಿದ್ದು ಮತ ಖರೀದಿಯಿಂದ, ಸಿಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ

ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಸಿದ್ದರಾಮಯ್ಯನವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬಾದಾಮಿ ಕ್ಷೇತ್ರದ ಗೆಲುವಿಗೆ ಹಣದ ವ್ಯವಹಾರ ನಡೆದಿದೆ ಎಂದು ಹೇಳಿದ್ದಾರೆ. ದಲಿತರನ್ನು ಮುಖ್ಯಮಂತ್ರಿ ಮಾಡುವಂತೆಯೂ ಒತ್ತಾಯಿಸಿದ್ದಾರೆ.
Read Full Story

11:36 AM (IST) Aug 09

ನಟ ಧ್ರುವ ಸರ್ಜಾ ವಿರುದ್ಧ ಬಹು ಕೋಟಿ ವಂಚನೆ ಆರೋಪ, ಮುಂಬೈನಲ್ಲಿ ಎಫ್ಐಆರ್ ದಾಖಲು!

ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ನಟ ಧ್ರುವ ಸರ್ಜಾ ವಿರುದ್ಧ ₹3.15 ಕೋಟಿ ವಂಚನೆ ಆರೋಪದ ಮೇಲೆ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಚಿತ್ರ ನಿರ್ಮಾಣಕ್ಕೆ ಹಣ ಪಡೆದು ಸರ್ಜಾ ಕೆಲಸ ಮಾಡದೆ ವಂಚಿಸಿದ್ದಾರೆ ಎಂಬುದು ಆರೋಪ.
Read Full Story

11:03 AM (IST) Aug 09

ಎಸ್‌ಐಟಿಗೆ ಪೊಲೀಸ್‌ ಠಾಣೆಯ ಮಾನ್ಯತೆ - ಸರ್ಕಾರದಿಂದ ಮಹತ್ವದ ಆದೇಶ

ಎಸ್ಐಟಿಗೆ ಪೊಲೀಸ್ ಠಾಣೆ ಹಾಗೂ ಪೊಲೀಸ್ ನಿರೀಕ್ಷಕರ ದರ್ಜೆ ಅಥವಾ ಮೇಲ್ಮಟ್ಟದ ದರ್ಜೆಯ ಅಧಿಕಾರಿಯನ್ನು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ (ಬಿಎನ್‌ಎಸ್‌ಎಸ್‌) 2023ರ ಕಲಂ 2 (1)ರಡಿ ಪ್ರದತ್ತ ಅಧಿಕಾರದನ್ವಯ ಠಾಣಾಧಿಕಾರಿ ಎಂದು ಘೋಷಿಸಲಾಗಿದೆ.

Read Full Story

10:47 AM (IST) Aug 09

ಸಹಪಾಠಿಗಳ ಕಿರುಕುಳ, ಬಾಗಲಕೋಟೆಯಲ್ಲಿ ಕಾಲೇಜ್‌ ವಿದ್ಯಾರ್ಥಿನಿ ಆತ್ಮಹತ್ಯೆ!

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಅಂಜಲಿ ಸಹಪಾಠಿಗಳ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್‌ನಲ್ಲಿ ಸಹಪಾಠಿಗಳ ಹೆಸರು ಉಲ್ಲೇಖಿಸಿದ್ದಾರೆ.

Read Full Story

More Trending News