ಹೊನ್ನಾವರ (ಉತ್ತರ ಕನ್ನಡ): ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಪಾದಿಸಿದ್ದಾರೆ. ಜನಗಣಮನ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಗೆ 150ನೇ ವರ್ಷದ ಆಚರಣೆ ನಡೆಯುತ್ತಿದೆ. ವಂದೇ ಮಾತರಂ ಗೀತೆ ರಾಷ್ಟ್ರವನ್ನು ಜಾಗೃತಗೊಳಿಸಿ, ರಾಷ್ಟ್ರೀಯತೆ ಬಿತ್ತಿದ ಮಂತ್ರವಾಗಿದೆ ಎಂದು ತಿಳಿಸಿದರು. ಅಲ್ಲದೆ ಜನಗಣಮನಕ್ಕೆ ಸರಿ ಸಮನಾಗಿ ವಂದೇ ಮಾತರಂ ಇತ್ತು. ವಂದೇ ಮಾತರಂ ದೇಶದ ರಾಷ್ಟ್ರಗೀತೆ ಆಗಬೇಕಿತ್ತು ಎಂದು ಹೇಳಿದರು. ಸ್ವದೇಶಿ ಆಚರಣೆ ಬೆಳೆಸೋಣ. ವಂದೇ ಭಾರತ್ ಶ್ರೇಷ್ಠ ಭಾರತ್ ಎಂಬುದನ್ನು ಜಗತ್ತಿಗೆ ಸಾರೋಣ ಎಂದು ಅವರು ನುಡಿದರು.

11:07 PM (IST) Nov 06
ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಅಮೃತಧಾರೆ', 'ಲಕ್ಷ್ಮೀ ಬಾರಮ್ಮ' ದಿಂದ ಹಿಡಿದು 'ನಾ ನಿನ್ನ ಬಿಡಲಾರೆ'ಯವರೆಗೂ, ಪಾತ್ರಗಳು ಪ್ರೀತಿ ನಿವೇದನೆ ಮಾಡಿಕೊಳ್ಳಲು ಮದ್ಯ ಸೇವನೆಯ ಮೊರೆ ಹೋಗುತ್ತಿವೆ. ಪತಿ ಅಥವಾ ಪತ್ನಿಯ ನಿಜವಾದ ಪ್ರೀತಿಯನ್ನು ತಿಳಿಯಲು ಕುಡಿತದ ದೃಶ್ಯ ಸೀರಿಯಲ್ಗಳಲ್ಲಿ ಸಾಮಾನ್ಯ ತಂತ್ರವಾಗಿದೆ
10:38 PM (IST) Nov 06
ಬಿಗ್ ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ತಮ್ಮ ಸೀರೆಗೆ ತಾವೇ ಪಿನ್ ಹಾಕಿಕೊಂಡಿದ್ದು ಅವರ ಸ್ವಾಭಿಮಾನದ ಸಂಕೇತ ಎಂಬ ಪೋಸ್ಟ್ ವೈರಲ್ ಆಗಿದೆ. ಈ ಪೋಸ್ಟ್ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಏನಿದು ವಿಷ್ಯ?
10:02 PM (IST) Nov 06
09:52 PM (IST) Nov 06
ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ಪ್ರಯುಕ್ತ 3 ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ಸುರಿಯುವ ಮಳೆಯಲ್ಲೇ ಹುಲಿಗೆಮ್ಮದೇವಿ ದರ್ಶನ ಪಡೆದರು. ಸುರಿಯುವ ಮಳೆ ಲೆಕ್ಕಿಸದೆ ದರ್ಶನಕ್ಕೆ ಆಗಮಿಸಿದ ಭಕ್ತಾದಿಗಳು..
09:23 PM (IST) Nov 06
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಮಲ್ಲಮ್ಮ ಅವರಿಗೆ ಸಖತ್ ಬೇಡಿಕೆ ಬಂದಿದೆ. ತಮ್ಮ ಎಲಿಮಿನೇಷನ್ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸಾಲ ತೀರಿಸಲು ಇನ್ನಷ್ಟು ದಿನ ಇರಬೇಕಿತ್ತು ಎಂದು ಮಲ್ಲಮ್ಮ ಕೂಡ ನೋವು ತೋಡಿಕೊಂಡಿದ್ದಾರೆ. ರೀ ಎಂಟ್ರಿ ಬಗ್ಗೆ ಮಲ್ಲಮ್ಮ ಹೇಳಿದ್ದೇನು?
09:14 PM (IST) Nov 06
ಮಕ್ಕಳನ್ನು ನೋಡಿಕೊಳ್ಳುವುದು ಸುಲಭದ ಕೆಲಸವೇನಲ್ಲ. ಬಹಳಷ್ಟು ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಅಳುತ್ತಾರೆ. ಅವರು ಯಾಕೆ ಅಳುತ್ತಿದ್ದಾರೆಂದು ತಿಳಿಯದೆ ಪೋಷಕರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಕೆಲವು ಸರಳ ಸಲಹೆಗಳಿಂದ ಮಕ್ಕಳ ಅಳುವನ್ನು ನಿಲ್ಲಿಸಬಹುದು. ಹೇಗೆಂದು ಇಲ್ಲಿ ನೋಡೋಣ.
09:13 PM (IST) Nov 06
08:55 PM (IST) Nov 06
ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್ಗೆ ಹೋದ ಯುವಕ ಸಾವನಪ್ಪಿರುವ ಘಟನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದಿದೆ. ಇಂದು ಸಂಜೆ ಐದು ಗಂಟೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್ಗೆ ಸೊಂಟ ನೋವೆಂದು ಹೋಗಿದ್ದರು.
08:53 PM (IST) Nov 06
08:42 PM (IST) Nov 06
ಕರ್ನಾಟಕದ ಮಹಿಳೆಯರಿಗೆ, ನಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ. ಮುಂದಿನ ದಿನಗಳಲ್ಲಿ ನಮ್ಮ ಇಲಾಖೆಯನ್ನು ನಂಬರ್ ಒನ್ ಮಾಡುವುದೇ ನನ್ನ ಕನಸಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
08:32 PM (IST) Nov 06
ರೈತರು, ಕಾರ್ಖಾನೆಯವರು ಜಗಳವಾಡುತ್ತ ಕೂರಬಾರದು. ಇದರಿಂದ ರಾಜ್ಯದ ಉತ್ಪನ್ನ ಹಾಳಾಗುತ್ತದೆ. ಸಂಘರ್ಷದ ನಡುವೆ ಇಬ್ಬರಿಗೂ ಲಾಭವಾಗಲ್ಲ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಿವಿಮಾತು ಹೇಳಿದರು.
07:19 PM (IST) Nov 06
ಕೊರಿಯೋಗ್ರಾಫರ್, ನಟ ಪ್ರಭುದೇವ ಜೊತೆ ಅನಸೂಯಾ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು ಪ್ರಭುದೇವ, ಅನಸೂಯಾ ನಟಿಸುತ್ತಿರುವ ವುಲ್ಫ್ ಚಿತ್ರದ ಹಾಡು. ಇದರ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
06:50 PM (IST) Nov 06
ಪೆಟ್ರೋಲ್ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮ*ತ್ಯೆ ಮಾಡಿಕೊಂಡ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರು. ಪರಿಹಾರ ನೀಡಲಾಗುವುದು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
06:41 PM (IST) Nov 06
ಕೆರೆ ನೀರಿಗಾಗಿ ಕಾಲ್ನಡಿಗೆ ಜಾಥಾಗೆ ತಾಲೂಕಿನ ಶಿವಪುರ ಕಲ್ಕಟ್ಟೆ ಜಲಾಶಯದ ಬಳಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಚಾಲನೆ ನೀಡಿದರು.
06:30 PM (IST) Nov 06
ಕೆರೆ ನೀರು ತುಂಬಿಸುವ ಯೋಜನೆಗೆ ₹670 ಕೋಟಿಗೂ ಅಧಿಕ ಬಿಡುಗಡೆ ಮಾಡಿದ್ದು, ಈ ಹಿಂದೆ ಇದ್ದ ಯಡಿಯೂರಪ್ಪ ಸರ್ಕಾರ ಆ ಅವಧಿಯಲ್ಲಿ ಶೇ. 95ರಷ್ಟು ಕಾಮಗಾರಿ ನಡೆದಿತ್ತು ಎಂದು ಶ್ರೀರಾಮುಲು ಆರೋಪಿಸಿದರು.
06:23 PM (IST) Nov 06
ಕಾಲಿವುಡ್ ನಟ ಅಜಿತ್ ಕುಮಾರ್ ಅವರ ಎಕೆ 64 ಚಿತ್ರದ ಅಪ್ಡೇಟ್ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ, ಅವರ ಎಕೆ 65 ಚಿತ್ರದ ನಿರ್ದೇಶಕರ ಬಗ್ಗೆ ಒಂದು ಅಪ್ಡೇಟ್ ಲೀಕ್ ಆಗಿದೆ.
05:52 PM (IST) Nov 06
ಅತ್ತ ಪತಿ ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ, ಇತ್ತ ಪತ್ನಿ ವಿಜಯಲಕ್ಷ್ಮೀ ಅವರು ಟ್ರಿಪ್ ಹೋಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದು ಸಂದೇಶ ಹಂಚಿಕೊಂಡಿದ್ದಾರೆ.
05:49 PM (IST) Nov 06
ರೈತರು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಧರಣಿನಿರತರೊಂದಿಗೆ ಮಾತುಕತೆ ನಡೆಸಿ, ವಿವಾದ ಇತ್ಯರ್ಥಕ್ಕೆ ಪ್ರಯತ್ನಿಸಿದ್ದಾರೆ.
05:28 PM (IST) Nov 06
ಜಾನಿ ಜಾನಿ ಯೆಸ್ ಪಪ್ಪ ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರ ತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಎಲ್ಲರೂ ಚಿತ್ರ ನೋಡಿ, ಪ್ರೋತ್ಸಾಹ ನೀಡಿ ಎಂದರು ರಚಿತಾ ರಾಮ್.
05:24 PM (IST) Nov 06
Bigg Boss Kannada 12: ಈ ಬಾರಿ ಬಿಗ್ ಬಾಸ್ ಕಂಪ್ಲೀಟ್ ಹಾರ್ಟ್ಗೆ ಕನೆಕ್ಟ್ ಆಗೋ ಥರ ಟಾಸ್ಕ್ಗಳನ್ನು ನೀಡುತ್ತಿದ್ದಾರೆ. ಮನೆಯವರಿಂದ ಪತ್ರಗಳು ಬರುತ್ತಿವೆ, ಆದರೆ ಆ ಪತ್ರಗಳು ಇಬ್ಬರಲ್ಲಿ ಒಬ್ಬರಿಗೆ / ಮೂವರಲ್ಲಿ ಒಬ್ಬರಿಗೆ ಸಿಗುತ್ತಿದೆ. ಈಗ ಇದೇ ವಿಚಾರವು ಅಶ್ವಿನಿ, ಜಾನುರನ್ನು ಒಂದು ಮಾಡಿತಾ?
05:03 PM (IST) Nov 06
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯ ನಿಶ್ಚಿತಾರ್ಥವು ಅಕ್ಟೋಬರ್ 2025 ರಲ್ಲಿ ಹೈದರಾಬಾದ್ನಲ್ಲಿ ಖಾಸಗಿ ಸಮಾರಂಭದಲ್ಲಿ ನಡೆದಿತ್ತು. ಇದರಲ್ಲಿ ಅವರ ಆಪ್ತ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದರು. ಇದೀಗ ಮದುವೆಯ ಜಾಗವೂ ಫಿಕ್ಸ್ ಆಗಿದೆ.. ಡೇಟ್ ಬಗ್ಗೆ ನೋಡಿ…
04:55 PM (IST) Nov 06
Bigg Boss Kannada Season 12: ರಕ್ಷಿತಾ ಶೆಟ್ಟಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿದ್ದಾರೆ. ಈಗಾಗಲೇ ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ರಿಷಾ ಗೌಡ ಜೊತೆ ರಕ್ಷಿತಾ ಶೆಟ್ಟಿ ಜಗಳ ಆಗಿದೆ. ಈಗ ಇವರ ಮನೆಯವರು ರೆನಿತಾ ಸುಪ್ರಿಯಾ ಎನ್ನುವವರ ಜೊತೆ ಮಾತನಾಡಿದ್ದಾರೆ.
04:24 PM (IST) Nov 06
ನ.28ರಂದು ಪ್ರಧಾನಿ ನರೇಂದ್ರ ಮೋದಿ ಉಡುಪಿಯ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದು, ಉಡುಪಿ ಕೃಷ್ಣ ಸನ್ನಿಧಿಯಲ್ಲಿ ಭಗವದ್ಗೀತೆ ಶ್ಲೋಕವನ್ನು ಪಠಿಸಲಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಖಚಿತಪಡಿಸಿದ್ದಾರೆ.
03:22 PM (IST) Nov 06
Bigg Boss Kannada Season 12 Show: ಬಿಗ್ ಬಾಸ್ನಲ್ಲಿ ಈ ಬಾರಿ ಕ್ಯಾಪ್ಟನ್ ಟಾಸ್ಕ್ ನಡೆಯುತ್ತಿದೆ. ನಿಮ್ಮನ್ನು ಪ್ರೀತಿಸುವ ವೀಕ್ಷಕರು ಬಂದಿದ್ದಾರೆ. ವೀಕ್ಷಕರ ಮನಸ್ಸನ್ನು ಗೆಲ್ಲುವ ಅಭ್ಯರ್ಥಿಯೊಬ್ಬರು ಮುಂದಿನ ವಾರದ ಕ್ಯಾಪ್ಟನ್ ಆಗ್ತಾರೆ ಎಂದು ಬಿಗ್ ಬಾಸ್ ಹೇಳಿದ್ದರು.
02:52 PM (IST) Nov 06
Govindegowda house theft case: ಮಾಜಿ ಸಚಿವ ಗೋವಿಂದೇಗೌಡರ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಚ್ಚರಿಯೆಂದರೆ, ಎರಡು ತಿಂಗಳು ಪೊಲೀಸ್ ಠಾಣೆ ಆವರಣದಲ್ಲೇ ನಿಂತಿದ್ದ ಕಾರಿನ ಸ್ಟೆಪ್ನಿ ಜಾಗದಲ್ಲಿ ಸುಮಾರು 600 ಗ್ರಾಂ ಚಿನ್ನ, ಬೆಳ್ಳಿ ಹಾಗೂ ನಗದು ಪತ್ತೆ
02:18 PM (IST) Nov 06
Karnataka sugarcane Farmers Protest: ಕಬ್ಬು ಬೆಲೆ ನಿಗದಿ ವಿಚಾರದಲ್ಲಿ ರಾಜ್ಯ ಸರ್ಕಾರವು ಮಹಾರಾಷ್ಟ್ರದ ದರವನ್ನು ನೀಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
02:14 PM (IST) Nov 06
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ವೀಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದ ಆ ಮಧುರ ಗಳಿಗೆ ಬಂದೇ ಬಿಟ್ಟಿತು. ಒಂಟಿಯಾಗಿದ್ದ ಜಂಟಿ ಜೀವಗಳು ಇದೀಗ ಆನಿವರ್ಸರಿಯ ದಿನದಂದೇ ಮತ್ತೆ ಜೊತೆಯಾಗಿ, ಅಮೃತಧಾರೆ ಹರಿಸುವ ಕಾಲ ಬಂದೇ ಬಿಟ್ಟಿದೆ.
02:02 PM (IST) Nov 06
ಸಂಸದ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು 'ಜನಗಣಮನ' ಗೀತೆಯನ್ನು ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದು ಎಂಬ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೂರು ನೀಡಲಾಗಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ.
01:19 PM (IST) Nov 06
ಕಲಬುರಗಿ ಜಿಲ್ಲೆಯ ತೆಂಗಳಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರು ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ಪಂಚಾಯತ್ ಅಧ್ಯಕ್ಷೆ ಮತ್ತು ಪಿಡಿಓ ನಕಲಿ ಬಿಲ್ಗಳನ್ನು ಸೃಷ್ಟಿಸಿ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
12:16 PM (IST) Nov 06
12:01 PM (IST) Nov 06
11:48 AM (IST) Nov 06
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ತಮಗೆ ತಿಳಿದಿಲ್ಲವೆಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಸಚಿವ ಸ್ಥಾನ, ಸಂಪುಟ ವಿಸ್ತರಣೆ, ಸಿಎಂ ಹುದ್ದೆ ಆಕಾಂಕ್ಷಿಗಳ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ
11:35 AM (IST) Nov 06
ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರು, ಹಿಂದಿನ ಸಾಹಿತಿಗಳ ಮೆದುಳು ಕಂಪ್ಯೂಟರ್ನಂತೆ ಕೆಲಸ ಮಾಡುತ್ತಿತ್ತು, ಆದರೆ ಇಂದಿನ ವಿದ್ಯಾರ್ಥಿಗಳ ಮೆದುಳು ಕ್ರಿಯಾಶೀಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣಕ್ಕೆ ವಯಸ್ಸಿನ ಮಿತಿಯಿಲ್ಲ, ಆಳವಾದ ಅಧ್ಯಯನದಿಂದ ಮತ್ರ ಜ್ಞಾನ ಸಾಧ್ಯ ಎಂದು ಪ್ರತಿಪಾದಿಸಿದರು.
11:21 AM (IST) Nov 06
ಸರ್ಕಾರಿ ಜಾಗದಲ್ಲಿ ಖಾಸಗಿ ಸಂಸ್ಥೆಗಳು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯಬೇಕೆಂಬ ಸರ್ಕಾರದ ಆದೇಶಕ್ಕೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ.
11:19 AM (IST) Nov 06
10:25 AM (IST) Nov 06
10:19 AM (IST) Nov 06
Zee Kannada Karna Serial: ತೇಜಸ್ನಿಂದ ಗರ್ಭಿಣಿಯಾಗಿರುವ ನಿತ್ಯಾ, ಮಗುವನ್ನು ತೆಗೆಸುವ ನಿರ್ಧಾರ ಮಾಡಿ ಆಸ್ಪತ್ರೆಗೆ ಹೋಗಿದ್ದಾಳೆ. ಈ ವಿಷಯವನ್ನು ಪತ್ರದ ಮೂಲಕ ತಿಳಿದ ಕರ್ಣ ಆಘಾತಕ್ಕೊಳಗಾಗಿದ್ದು, ಅವಳನ್ನು ತಡೆಯಲು ಮುಂದಾಗಿದ್ದಾನೆ.
09:54 AM (IST) Nov 06
09:32 AM (IST) Nov 06
ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ಸೈಯ್ಯದ್ ಅಸ್ಲಾಂ ಪಾಷಾನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಹಗಲಿನಲ್ಲಿ ಐಷಾರಾಮಿ ಮನೆ ಗುರುತಿಸಿ, ರಾತ್ರಿ ಕಳ್ಳತನ ಮಾಡುತ್ತಿದ್ದ
09:00 AM (IST) Nov 06
ಕುಟುಂಬದ ಪತ್ರ ಪಡೆಯುವ ಸವಾಲು ಸ್ಪರ್ಧಿಗಳ ನಡುವೆ ದೊಡ್ಡ ಬಿರುಕನ್ನು ಸೃಷ್ಟಿಸಿದೆ. ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ಯಾರಿಗೆ ಪತ್ರ ನೀಡಬೇಕೆಂದು ನಿರ್ಧರಿಸಲು ಮನೆಯ ಸದಸ್ಯರು ವಿಫಲರಾಗಿದ್ದು, ಒಮ್ಮತದ ನಿರ್ಧಾರ ಬಾರದಿದ್ದರೆ ಇಬ್ಬರೂ ಪತ್ರ ಕಳೆದುಕೊಳ್ಳುವ ಸಾಧ್ಯತೆಯಿದೆ.