ಬೆಂಗಳೂರು: ಮನೆಗೆಲಸದ ಮಹಿಳೆ ಮೇಲಿನ ಅತ್ಯಾ*ಚಾರ ಪ್ರಕರಣದಲ್ಲಿ ಜೀವಾವಧಿ/ಜೀವನಪರ್ಯಂತ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಹೊರಡಿಸಿರುವ ಆದೇಶ ಹಾಗೂ ಅದರ ರದ್ದು ಕೋರಿ ಮಾಜಿ ಸಂಸದ ಪ್ರಜ್ವಲ್ ಸಲ್ಲಿಸುವ ಕ್ರಿಮಿನಲ್ ಮೇಲ್ಮನವಿ ಇತಿಹಾಸದಲ್ಲಿ ಹಲವು ಪ್ರಥಮಗಳಿಗೆ ಕಾರಣವಾಗಲಿದೆ. ಹಾಲಿ, ಮಾಜಿ ಜನಪ್ರತಿನಿಧಿಗಳ ವಿಚಾರಣೆಗೆ ರಾಜ್ಯದಲ್ಲಿ ಜನಪ್ರತಿನಿ ಧಿಗಳ ನ್ಯಾಯಾಲಯ ಸ್ಥಾಪನೆ ಯಾದ ಬಳಿಕ ಜೀವಾವಧಿ ಶಿಕ್ಷೆ ವಿಧಿಸಿರುವುದು ಇದೇ ಮೊದಲು. ತೀರ್ಪಿನ ವಿರುದ್ಧ ಹೈಕೋರ್ಟ್ 2 ಪ್ರಜ್ವಲ್ ಮೇಲ್ಮನ ಸಲ್ಲಿಸಲಿದ್ದಾರೆ. ಜೀವಾವಧಿಶಿಕ್ಷೆ ಪ್ರಶ್ನಿಸಿಹೈ ಕೋರ್ಟ್ ಮೊರೆ ಹೋದ ರಾಜ್ಯದ ಮೊದಲ ವ್ಯಕ್ತಿ ಪ್ರಜ್ವಲ್ ರೇವಣ್ಣ ಆಗಲಿದ್ದಾರೆ. ಈವರೆಗೆ ರಾಜ್ಯದ ಜನಪ್ರತಿನಿಧಿ ವಿಶೇಷ ನ್ಯಾಯಾಲಯವು ಒಬ್ಬ ಮಾಜಿ/ಹಾಲಿ ಜನಪ್ರತಿನಿಧಿಗೆ ವಿಧಿ ಸಿರುವ ಗರಿಷ್ಠ ಶಿಕ್ಷೆ ಅಂದರೆ ಏಳು ವರ್ಷ ಜೈಲು. ಬೇಲೆಕೇರಿ ಕೇಸಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ಗೆ ಆ ಶಿಕ್ಷೆ ಕೊಡಲಾಗಿತ್ತು.
10:57 PM (IST) Aug 04
ಲಾರ್ಡ್ಸ್ನಲ್ಲಿ ಆದ ಹಾರ್ಟ್ಬ್ರೇಕ್ ಬಳಿಕ ಮೊಹಮ್ಮದ್ ಸಿರಾಜ್ ಓವಲ್ ಟೆಸ್ಟ್ ಗೆಲ್ಲಿಸಿದ್ದು ಮಾತ್ರವಲ್ಲ, ದಾಖಲೆ ಬರೆದಿದ್ದಾರೆ. ಓವಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ರೋಚಕ ಗೆಲುವಿನ ಹಿಂದಿ ಮೊಹಮ್ಮದ್ ಸಿರಾದ್ ಮಾರಕ ದಾಳಿ ಪ್ರಮುಖ ಕಾರಣ. ಅದ್ಭುತ ಬೌಲಿಂಗ್ ಮೂಲಕ ಸಿರಾಜ್ ವಿಶೇಷ ದಾಖಲೆ ಬರೆದಿದ್ದಾರೆ.
10:25 PM (IST) Aug 04
ಹೇರ್ಸ್ಟೈಲ್ಗಾಗಿ ಬ್ಯೂಟಿ ಸಲೂನ್ಗಳಿಗೆ ಹೋಗ್ತಿದ್ದೀರಾ? ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಅಪಾಯ? ಏನಿದು ಎಚ್ಚರಿಕೆ? ಇಲ್ಲಿದೆ ನೋಡಿ ಡಿಟೇಲ್ಸ್...
10:04 PM (IST) Aug 04
ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ನಾಳೆಯಿಂದಲೇ ಮುಷ್ಕರ ನಡೆಸುವುದಾಗಿ ಘೋಷಿಸಿದ್ದಾರೆ. ಆದರೆ ಇಂದು ಎಂದಿನಂತೆ ಬಸ್ ಸೇವೆ ಇರಲಿದೆ. ಆದರೆ ನಾಳೆ ಬೆಳಗ್ಗೆ 6 ಗಂಟೆಯಿಂದ ಬಸ್ ಸೇವೆ ಸ್ಥಗಿತಗೊಳ್ಳಲಿದೆ.
09:19 PM (IST) Aug 04
ರಷ್ಯಾದಿಂದ ಇಂಧನ ಖರೀದಿಸಬೇಡಿ ಎಂದರೂ ಮತ್ತೆ ಮತ್ತೆ ಖರೀದಿಸುತ್ತೀರಾ? ನಿಮ್ಮ ಶೇಕಡಾ 25ರಷ್ಟು ತೆರಿಗೆಯನ್ನು ಡಬಲ್ ಮಾಡುತ್ತೇನೆ ಎಂದು ಡೋನಾಲ್ಡ್ ಟ್ರಂಪ್ ಭಾರತಕ್ಕೆ ಎಚ್ಚರಿಸಿದ್ದಾರೆ.
08:34 PM (IST) Aug 04
ಕೊಪ್ಪಳ ಹಿಂದೂ ಯುವಕ ಗವಿಸಿದ್ದಪ್ಪನ ಕೊಲೆ ಪ್ರಕರಣದ ಆರೋಪಿ ಸಾದಿಕ್ ಪೋಷಕರು ಘಟನೆ ಕುರಿತು ಮಾತನಾಡಿದ್ದಾರೆ. ಗವಿಸಿದ್ದಪ್ಪ ನನ್ನ ಮಗನಿಗಿಂತ ಹೆಚ್ಚು, ನನ್ನ ಮಗ ಸಾದಿಕ್ಗೆ ಶಿಕ್ಷೆಯಾಗಲಿ. ಆತ ನಮ್ಮ ಪಾಲಿಗೆ ಸತ್ತಿದ್ದಾನೆ ಎಂದು ಸಾದಿಕ್ ಪೋಷಕರು ಪ್ರತಿಕ್ರಿಯಿಸಿದ್ದಾರೆ.
08:01 PM (IST) Aug 04
07:38 PM (IST) Aug 04
ಭಾರತ ಇಂಗ್ಲೆಂಡ್ ಟೆಸ್ಟ್ ಸರಣಿ ಕುರಿತು ಆ್ಯಲಿಸ್ಟರ್ ಕುಕ್, ಮೈಕಲ್ ವಾನ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ನುಡಿದ ಸುಳ್ಳಾಗಿದೆ. ಆದರೆ ಆರ್ಸಿಬಿ ಕೋಚ್ ದಿನೇಶ್ ಕಾರ್ತಿಕ್ ನಿಖರವಾಗಿ ಸರಣಿ ಫಲಿತಾಂಶ ಊಹಿಸಿದ್ದಾರೆ.
07:00 PM (IST) Aug 04
06:49 PM (IST) Aug 04
ಸತ್ಯ ಹೊರತೆಗೆಯಲು ಪೊಲೀಸರು ಮತ್ತು ತನಿಖಾ ಸಂಸ್ಥೆಗಳು ಮಂಪರು ಪರೀಕ್ಷೆ ವಿಧಾನವನ್ನು ಅನುಸರಿಸುತ್ತಾರೆ. ಆದರೆ, ಈ ವಿಧಾನ ವಾಸ್ತವವಾಗಿ ನಿಜ ಹೊರತರಲು ನೆರವಾಗುತ್ತದೆಯೇ? ಅಥವಾ ಬುದ್ಧಿವಂತ ಅಪರಾಧಿಗಳು ಈ ವ್ಯವಸ್ಥೆಯನ್ನು ಮೋಸಗೊಳಿಸಲು ಸಾಧ್ಯವೇ?
06:30 PM (IST) Aug 04
06:30 PM (IST) Aug 04
ಹೈಕೋರ್ಟ್ ಆದೇಶದ ನಡುವೆಯೂ ಸಾರಿಗೆ ನೌಕರರು ಮುಷ್ಕರ ಆರಂಭಿಸಲು ಸಜ್ಜಾಗಿದ್ದಾರೆ. ಈ ಕುರಿತು ಸಾರಿಗೆ ಮುಖಂಡ ಅನಂತ ಸುಬ್ಬರಾವ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
05:50 PM (IST) Aug 04
ಬೆಂಗಳೂರಿನಲ್ಲಿ ಹಾಲಿನ ಗುಣಮಟ್ಟದ ಕುರಿತು ಆತಂಕ ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ದಾಳಿ ನಡೆಸಿ ಹಾಲಿನ ಮಾದರಿಗಳನ್ನು ಸಂಗ್ರಹಿಸಿದೆ. ರಾಜ್ಯಾದ್ಯಂತ 870 ಹಾಲಿನ ಕೇಂದ್ರಗಳಿಂದ ಮಾದರಿಗಳನ್ನು ಪಡೆದು, ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
05:48 PM (IST) Aug 04
ಸಾರಿಗೆ ನೌಕರರು ಮುಷ್ಕರಕ್ಕೆ ಸಜ್ಜಾಗಿದ್ದಾರೆ. ನಾಳೆ ಆರಂಭವಾಗಬೇಕಿದ್ದ ಮುಷ್ಕರಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದರೆ ಆಗಸ್ಟ್ 6ರಿಂದ ಮುಷ್ಕರ ಆರಂಭಗೊಳ್ಳುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಪರ್ಯಾವಾಗಿ ಸರ್ಕಾರ ಕೆಲ ಪ್ಲಾನ್ ಮಾಡಿದೆ.
04:52 PM (IST) Aug 04
ಬೆಂಗಳೂರಿನಲ್ಲಿ ನಾಳೆ ಕಾಂಗ್ರೆಸ್ ಆಯೋಜಿಸಿರುವ ಬೃಹತ್ ಪ್ರತಿಭಟನೆ ಮುಂದೂಡಿಕೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಇದೀಗ ಈ ಪ್ರತಿಭಟನೆ ಆ.8ಕ್ಕೆ ಮುಂದೂಡಿಕೆಯಾಗಿದೆ.
04:34 PM (IST) Aug 04
ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಶವವನ್ನು ಹೂತಿಡಲಾಗಿದೆ ಎಂದು ಸಮಾಜ ಸೇವಕ ಜಯನ್ ಟಿ ಆರೋಪಿಸಿದ್ದಾರೆ. ಈ ಆರೋಪದ ಮೇರೆಗೆ ಎಸ್ಐಟಿ ಸೂಚನೆ ಮೇರೆಗೆ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
04:03 PM (IST) Aug 04
ನೀವು ಕುಡಿಯುವ ಕಾಫಿಯಲ್ಲಿ ಶೇಕಡಾ ಜಿರಲೆ ಅಂಶ ಇರುವುದು ನಿಮಗೆ ಗೊತ್ತಾ? ಶೇಕಡಾ 10ರಷ್ಟು ಅನುಮತಿಯೂ ಇದಕ್ಕಿದೆ. ಏನಿದು ವಿಷ್ಯ? ಇಲ್ಲಿದೆ ಡಿಟೇಲ್ಸ್...
04:02 PM (IST) Aug 04
ಮುಕೇಶ್ ಅಂಬಾನಿ, ಅನಂತ್ ಅಂಬಾನಿ, ಅಕಾಶ್ ಅಂಬಾನಿ ಅಲ್ಲ, ನೀತಾ ಅಂಬಾನಿ ಬಳಿ ಇದೆ ವಿಶ್ವದ ಅತೀ ದುಬಾರಿ ಕಾರು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ನಿಜಕ್ಕೂ ನೀತಾ ಅಂಬಾನಿ ಬಳಿ 100 ಕೋಟಿ ರೂ ಆಡಿ ಚಮಿಲಿಯನ್ ಕಾರು ಇದೆಯಾ?
03:34 PM (IST) Aug 04
ಸಾರಿಗೆ ನೌಕರರು ಹಾಗೂ ಸಿಎಂ ಸಿದ್ದರಾಮಯ್ಯ ಜೊತೆ ನಡೆದ ಸಂಧಾನ ವಿಫಲದ ಬೆನಲ್ಲೇ ನಾಳೆಯಿಂದ ಮುಷ್ಕರಕ್ಕೆ ಮುಂದಾಗಿದ್ದ ನೌಕರರಿಗೆ ಹೈಕೋರ್ಟ್ ಬ್ರೇಕ್ ಹಾಕಿದೆ. ನಾಳೆಯ ವರೆಗೆ ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ ನೀಡಿದೆ.
03:20 PM (IST) Aug 04
ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅನುಮಾನಾಸ್ಪದ ಬೆಳವಣಿಗೆ ನಡೆದಿದ್ದು, ಉಪ್ಪು ಮತ್ತು ಅಳತೆ ಟೇಪನ್ನು ತೆಗೆದುಕೊಂಡು ಅರಣ್ಯದೊಳಗೆ ಕಾರ್ಮಿಕರು ತೆರಳಿದ್ದಾರೆ. ಇದರಿಂದ ಕಳೇಬರಹದ ಅವಶೇಷಗಳು ಸಿಕ್ಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
03:11 PM (IST) Aug 04
ಸಿಎಂ ಸಿದ್ದರಾಮಯ್ಯ ಮನವಿಗೆ ಮನವಿಗೂ ಸಾರಿಗೆ ನೌಕರರು ಕ್ಯಾರೇ ಎಂದಿಲ್ಲ. ಕರೆದಿದ್ದ ಮಹತ್ವದ ಸಂಧಾನ ಸಭೆ ವಿಫಲಗೊಂಡಿದೆ. ಇದರ ಪರಿಣಾಮ ನಾಳೆ ಬೆಳಗ್ಗೆಯಿಂದ ಸಾರಿಗೆ ಬಸ್ ಸೇವೆ ಲಭ್ಯವಿಲ್ಲ.
03:00 PM (IST) Aug 04
02:33 PM (IST) Aug 04
01:39 PM (IST) Aug 04
01:19 PM (IST) Aug 04
12:51 PM (IST) Aug 04
12:50 PM (IST) Aug 04
ನಟಿ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
12:18 PM (IST) Aug 04
ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಸ್ಥಾಪಕ ಶಿಬು ಸೊರೆನ್ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
11:55 AM (IST) Aug 04
ಬೆಳಗಾವಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಮಹಿಳೆಯೊಬ್ಬರು ಕೆಲಸ ಬಿಟ್ಟು ಆಲೆಮನೆಯಲ್ಲಿ ಬೆಲ್ಲ ತಯಾರಿಸಿ ಯಶಸ್ಸು ಕಂಡಿದ್ದಾರೆ. ಕೇವಲ ಎರಡೇ ವರ್ಷಗಳಲ್ಲಿ ₹2 ಕೋಟಿ ವಹಿವಾಟು ನಡೆಸಿರುವ ಇವರ ಬ್ರ್ಯಾಂಡ್ ಪಾವನಾ ಗುಡ್ನೆಸ್, ಸಗಟು ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಪಡೆದುಕೊಂಡಿದೆ.
11:53 AM (IST) Aug 04
KRS ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರದ ಬಗ್ಗೆ ಸಚಿವ ಎಚ್.ಸಿ. ಮಹದೇವಪ್ಪನವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶಿಲಾಫಲಕದಲ್ಲಿರುವ ಮಾಹಿತಿ ಮತ್ತು ಟಿಪ್ಪುವಿನ ಕನಸಿನ ಬಗ್ಗೆ ಚರ್ಚೆ ನಡೆಯುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಟಿಪ್ಪುವಿನ ಆಶಯಕ್ಕೆ ಗೌರವ ನೀಡಿದ್ದಾರೆ ಎಂಬ ಮಾಹಿತಿ ಇದೆ.
11:45 AM (IST) Aug 04
10:35 AM (IST) Aug 04
Gold And Silver Price Today: ಶ್ರಾವಣ ಮಾಸದಲ್ಲಿ ಚಿನ್ನ ಖರೀದಿ ಭರಾಟೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಾಹಿತಿ ಇಲ್ಲಿದೆ. 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ಪ್ರಮುಖ ನಗರಗಳಲ್ಲಿ ಹೋಲಿಸಲಾಗಿದೆ.
09:59 AM (IST) Aug 04
09:05 AM (IST) Aug 04
08:51 AM (IST) Aug 04
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರುಪಾಯಿಯನ್ನು ಆನ್ಲೈನ್ ಮೂಲಕ ವಂಚಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆನರಾ ಬ್ಯಾಂಕ್ ಶಾಖೆಯಲ್ಲಿ ಜರುಗಿದೆ.
08:43 AM (IST) Aug 04
08:36 AM (IST) Aug 04
08:34 AM (IST) Aug 04
ನಗರದಲ್ಲಿ ಎರಡು ದಿನ ಅದ್ಧೂರಿಯಾಗಿ ನಡೆದ 19ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಭಾನುವಾರ ತೆರೆ ಬಿತ್ತು.
08:21 AM (IST) Aug 04
ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಆ.5ರಂದು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 4,459 ಪೊಲೀಸರನ್ನು ನಿಯೋಜಿಸಲಾಗಿದೆ.
08:14 AM (IST) Aug 04
Neha Hiremath Case: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊ*ಲೆ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಇಂದು ತೀರ್ಪು ಪ್ರಕಟವಾಗಲಿದೆ. ಹಿಂದೂ ಸಂಘಟನೆಗಳು ಫಯಾಜ್ಗೆ ಜಾಮೀನು ನೀಡಬಾರದು ಎಂದು ಪ್ರತಿಭಟನೆ ನಡೆಸಲಿವೆ.
08:07 AM (IST) Aug 04