Published : Jun 03, 2025, 06:32 AM ISTUpdated : Jun 03, 2025, 11:53 PM IST

Karnataka News Live 3rd June 2025: ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ: ರಾಜ್ಯದಲ್ಲಿ ಬ್ಯಾಂಕ್ ಹಾಗೂ ಎಟಿಎಂ ರಾಬರಿ ಪ್ರಕರಣಗಳು ಮುಂದುವರೆದಿದ್ದು, ಇದೀಗ ವಿಜಯಪುರ ಜಿಲ್ಲೆ ಮನಗೂಳಿಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಅಂದಾಜು 52.26 ಕೋಟಿ ಮೌಲ್ಯದ 58 ಕೆಜಿ 976 ಗ್ರಾಂ ಚಿನ್ನಾಭರಣ ಮತ್ತು 5.20 ಲಕ್ಷ ನಗದು ಕಳ್ಳತನ ತಡವಾಗಿ ಬೆಳಕಿಗೆ ಬಂದಿದೆ. ಮೇ 23ರಂದೇ ಕೃತ್ಯ ಎಸಗಿರುವ ಶಂಕೆ ಇದ್ದು, ಕಳ್ಳರು ಈವರೆಗೂ ಪತ್ತೆಯಾಗಿಲ್ಲ. ಇದು ಚಿನ್ನದ ಮೌಲ್ಯದ ರೂಪದಲ್ಲಿ ರಾಜ್ಯದಲ್ಲಿ ನಡೆದ ಅತಿ ದೊಡ್ಡ ಬ್ಯಾಂಕ್ ಕಳ್ಳತನ ಎನ್ನಲಾಗುತ್ತಿದೆ. ಈ ಸಂಬಂಧ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಕಲ್ಲೇಶ ಪೂಜಾರಿಯವರು ಮನಗೂಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಬಗ್ಗೆ ಮಾಹಿತಿ ನೀಡಿದರು. ಮೇ 23ರ ಸಂಜೆ 6 ಗಂಟೆಯಿಂದ ಮೇ 25ರ ಬೆಳಗ್ಗೆ 11.30ರ ಅವಧಿಯಲ್ಲಿ ಕೃತ್ಯ ಎಸಗಿರುವ ಶಂಕೆ ಇದೆ. ಕಳ್ಳರ ಪತ್ತೆಗೆ ಎಂಟು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

11:53 PM (IST) Jun 03

ಸೋಲು ಟ್ರೋಲು ಎಲ್ಲವನ್ನೂ ನೋಡಿ 18ನೇ ವರ್ಷದಲ್ಲಿ ಟ್ರೋಫಿ, ಕಣ್ಣೀರಾದ ವಿರಾಟ್ ಕೊಹ್ಲಿ

ಸೋಲು, ಟ್ರೋಲು ಸೇರಿದಂತೆ ಎಲ್ಲವನ್ನು ನೋಡಿದ ಕೊಹ್ಲಿ 18ನೇ ವರ್ಷದಲ್ಲಿ ಟ್ರೋಫಿ ಸಿಹಿ ಕಂಡಿದ್ದಾರೆ. ಆರ್‌ಸಿಬಿ ಗೆಲುವಿನ ದಡ ಸೇರುತ್ತಿದ್ದಂತೆ ವಿರಾಟ್ ಕೊಹ್ಲಿ ಭಾವುಕರಾಗಿದ್ದಾರೆ. ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.

Read Full Story

11:47 PM (IST) Jun 03

ಈ ಮೂವರೇ ನೋಡಿ RCB ಐತಿಹಾಸಿಕ ಗೆಲುವಿನ ನಿಜವಾದ ಹೀರೋಗಳು!

17 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ನಲ್ಲಿ ಮಣಿಸಿದ ಆರ್‌ಸಿಬಿ ತಂಡದ ಗೆಲುವಿನಲ್ಲಿ ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್ ಮತ್ತು ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Read Full Story

11:24 PM (IST) Jun 03

ನಮ್ಮದಾಯ್ತು ಕಪ್, ಪಂಜಾಬ್ ಮಣಿಸಿ ಟ್ರೋಫಿ ಗೆದ್ದ ಆರ್‌ಸಿಬಿ, ಭಾವುಕರಾದ ಕೊಹ್ಲಿ

ಪಂಜಾಬ್ ಕಿಂಗ್ಸ್ ಮಣಿಸಿದ ಆರ್‌ಸಿಬಿ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಈ ಸಲ್ ಕಪ್ ನಮ್ದಾಗಿದೆ. ಇತ್ತ ಅಭಿಮಾನಿಗಳ ಸಂಭ್ರಮಾಚರಣೆ ಡಬಲ್ ಆಗಿದೆ.

Read Full Story

10:40 PM (IST) Jun 03

ಫೈನಲ್ ಪಂದ್ಯದಲ್ಲಿ ವಿರಾಟ್ ದಾಖಲೆ, ಐಪಿಎಲ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು

ಪಂಜಾಬ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ದಾಖಲೆಗೆ ಧವನ್ ದಾಖಲೆ ಪುಡಿಯಾಗಿದೆ. ಇದೀಗ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿಯೇ ಬಾಸ್

Read Full Story

09:58 PM (IST) Jun 03

ಆರ್‌ಸಿಬಿಗೆ ಗೆಲುವು ಸಾಧ್ಯತೆ ಎಷ್ಟು? ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ

190 ರನ್ ಆರ್‌ಸಿಬಿ ಢಿಪೆಂಡ್ ಮಾಡಿಕೊಳ್ಳುತ್ತಾ? ಈ ಮೊತ್ತವನ್ನು ಪಂಜಾಬ್ ಚೇಸ್ ಮಾಡುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ. ಇಧರ ನಡುವೆ ಆರ್‌ಸಿಬಿ ಅಭಿಮಾನಿಗಳಿಗೆ ಮತ್ತೊಂದು ಅಂಕಿ ಅಂಶ ಸಮಾಧಾನ ತಂದಿದೆ. ಜೋಶ್ ಹೇಜಲ್‌ವುಡ್ ಆಡಿದ ಯಾವುದೇ ಫೈನಲ್ ಪಂದ್ಯ ಸೋತಿಲ್ಲ.

Read Full Story

09:31 PM (IST) Jun 03

ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!

ಚಾಮರಾಜನಗರದ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಒಳಜಗಳದಿಂದಾಗಿ ಈ ವರ್ಷ ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ, ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Read Full Story

09:26 PM (IST) Jun 03

ಆರ್‌ಸಿಬಿ ಸಿಡಿಸಿದ 190 ರನ್ ಗೆಲುವಿಗೆ ಸಾಕೇ? ಉಸಿರು ಬಿಗಿ ಹಿಡಿಯುವ ಅಗತ್ಯವಿಲ್ಲ ಇದೆ ಚಾನ್ಸ್

ಫೈನಲ್ ಪಂದ್ಯದ ಆರಂಭದಲ್ಲಿ ಆರ್‌ಸಿಬಿ ಅಬ್ಬರ ಇರಲಿಲ್ಲ. ವಿಕೆಟ್ ಕಳೆದಕೊಂಡು ಆತಂಕ ಎದುರಿಸಿತ್ತು. ಕೊನೆಗೆ 190 ರನ್ ಸಿಡಿಸಿದೆ. ಈ ಮೊತ್ತ ಪಂಜಾಬ್ ಕಿಂಗ್ಸ್ ಕಟ್ಟಿ ಹಾಕಿ ಟ್ರೋಫಿ ಗೆಲ್ಲಲು ಸಾಕೇ? ಅಹಮ್ಮದಾಬಾದ್ ಟಿ20 ಅಂಕಿ ಅಂಶ ಏನು?

Read Full Story

09:12 PM (IST) Jun 03

ಆರ್‌ಸಿಬಿ-ಪಂಜಾಬ್ ಫೈನಲ್ ಫೈಟ್ - ಮೋದಿ ಸ್ಟೇಡಿಯಂ ಯಾರಿಗೆ ಗೆಲುವಿನ ಫೇವರೇಟ್?

ಐಪಿಎಲ್ 2025ರ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಮುಖಾಮುಖಿ. ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ಉಭಯ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ಗೆಲುವಿನ ದಾಖಲೆ ಹೇಗಿದೆ?
Read Full Story

08:59 PM (IST) Jun 03

ಕೆಎಸ್‌ಡಿಎಲ್ 108 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ; ಒಂದೇ ತಿಂಗಳಲ್ಲಿ ₹186 ಕೋಟಿ ವಹಿವಾಟು!

ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರು ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಅವರು 1916ರಲ್ಲಿ ಸ್ಥಾಪಿಸಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು 2025ರ ಮೇ ತಿಂಗಳಲ್ಲಿ ₹186 ಕೋಟಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

Read Full Story

08:42 PM (IST) Jun 03

ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಕರ್ನಾಟಕದಲ್ಲಿ ರ‍್ಯಾಂಕ್ 1, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಗರಿ

ದೀಕ್ಷಾ ವೇದಾಂತು ಸಂಸ್ಥೆಯ ದಕ್ಷ್ ಮಹತ್ವದ ಸಾಧನೆ ಮಾಡಿದ್ದಾರೆ. ಕರ್ನಾಟಕದಲ್ಲಿ ರ‍್ಯಾಂಕ್ 1 ಪಡೆದರೆ, JEE ಅಡ್ವಾನ್ಸ್ಡ್ 2025ರಲ್ಲಿ AIR 15 ಪಡೆದಿದ್ದಾರೆ. ಇನ್ನೂ 137 ವಿದ್ಯಾರ್ಥಿಗಳು ಟಾಪ್ 10,000 ರ‍್ಯಾಂಕ್‌ಗಳಲ್ಲಿ ಸ್ಥಾನ ಪಡೆದಿದ್ದಾರೆ   

Read Full Story

08:07 PM (IST) Jun 03

ಮಧ್ಯರಾತ್ರಿ ಸೊಸೆಯ ಬೆಡ್ ರೂಮಿಗೆ ಬಂದುಹೋಗುವ ಅತ್ತೆ; ನಿಮ್ಮನೆಲೂ ಹಿಂಗೇನಾ ಎಂದ ನೆಟ್ಟಿಗರು!

ರಾತ್ರಿ ವೇಳೆ ಮಗ-ಸೊಸೆ ಮಲಗಿದ್ದಾಗ ಅತ್ತೆ ಕೋಣೆಗೆ ನುಸುಳುತ್ತಿರುವ ವಿಡಿಯೋ ವೈರಲ್ ಆಗಿದೆ. ಅತ್ತೆಯ ನಡೆಯನ್ನು ಕಂಡು ನೆಟ್ಟಿಗರು ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ.

Read Full Story

07:57 PM (IST) Jun 03

ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಬ್ಯಾಟಿಂಗ್ ಫಸ್ಟ್, ಈ ಸಲ ಕಪ್ ಗೆಲ್ಲೋದು ಫಿಕ್ಸ್!

ಐಪಿಎಲ್ ಫೈನಲ್‌ನಲ್ಲಿ RCB ಮತ್ತು PBKS ಮುಖಾಮುಖಿ. ಟಾಸ್ ಗೆದ್ದ PBKS ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ RCB ಮೊದಲು ಬ್ಯಾಟಿಂಗ್ ಮಾಡಲಿದೆ. ಚೇಸಿಂಗ್‌ನಲ್ಲಿ 3 ಬಾರಿ ಫೈನಲ್ ಸೋತಿರುವ RCBಗೆ ಈ ಬಾರಿ ಗೆಲುವು ಸಿಗುತ್ತಾ?
Read Full Story

07:38 PM (IST) Jun 03

ಆರ್‌ಸಿಬಿ ಟ್ರೋಫಿ ಗೆಲ್ಲಲು ವಿಶ್ ಮಾಡಿದ ಅಂಬಾಟಿ ರಾಯುಡುಗೆ ಫ್ಯಾನ್ಸ್‌ನಿಂದ ಮಂಗಳಾರತಿ

ಸಿಎಸ್‌ಕೆ ಪರ ನಿಷ್ಠೆ, ಆರ್‌ಸಿಬಿ ವಿರುದ್ಧ ಕೆಂಡಕಾರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಶುಭ ಹಾರೈಕ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿ ಎಂದು ರಾಯುಡು ವಿಶ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಈ ಆಟ ಇಲ್ಲಿ ಬೇಡ ಎಂದಿದ್ದಾರೆ.

Read Full Story

07:04 PM (IST) Jun 03

ಐಪಿಎಲ್ 2025 ಫೈನಲ್ - ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

2025ರ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. 9 ವರ್ಷಗಳ ಬಳಿಕ ಆರ್‌ಸಿಬಿ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಪಂಜಾಬ್ ತಂಡ 2ನೇ ಬಾರಿಗೆ ಫೈನಲ್ ಆಡಲಿದೆ.
Read Full Story

06:53 PM (IST) Jun 03

ಅನ್ಯ ಜಾತಿಯ ಪ್ರೇಮಿಯೊಂದಿಗೆ ಓಡಿ ಹೋಗಿದ್ದ ಪತ್ನಿಯ ಅಟ್ಟಾಡಿಸಿ ಕೊಂಡ ಪತಿ!

ಚಾಮರಾಜನಗರದಲ್ಲಿ ಅನ್ಯಜಾತಿಯ ಪ್ರಿಯಕರನೊಂದಿಗೆ ಓಡಿಹೋಗಿದ್ದ ಪತ್ನಿಯನ್ನು ಪತಿ ಹಾಡಹಗಲೇ ಕೊಲೆ ಮಾಡಿದ್ದಾನೆ. ಪೊಲೀಸ್ ಠಾಣೆ ಸಮೀಪ ನಡೆದ ಈ ಘಟನೆಯಿಂದಾಗಿ ಸಾರ್ವಜನಿಕರಲ್ಲಿ ಭೀತಿ ಹೆಚ್ಚಾಗಿದೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Read Full Story

06:36 PM (IST) Jun 03

ಐಪಿಎಲ್‌ ಫೈನಲ್‌ನಲ್ಲಿ ಸೋತಿರೋ ಟಾಪ್ 5 ತಂಡಗಳಿವು!

ಐಪಿಎಲ್ ಇತಿಹಾಸದಲ್ಲಿ ಯಾವ ತಂಡಗಳು ಫೈನಲ್‌ನಲ್ಲಿ ಹೆಚ್ಚು ಸಲ ಸೋತಿವೆ? ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಮುಂಬೈ ಇಂಡಿಯನ್ಸ್‌ವರೆಗೆ, ಯಾವ ತಂಡಗಳಿಗೆ ಫೈನಲ್‌ನಲ್ಲಿ ನಿರಾಸೆ ಎದುರಾಗಿದೆ ಅನ್ನೋದನ್ನ ತಿಳ್ಕೊಳ್ಳಿ.
Read Full Story

06:35 PM (IST) Jun 03

ನಾಯಕ ರಜತ್ ಪಾಟಿದಾರ್ v ಶ್ರೇಯಸ್ ಅಯ್ಯರ್ 6 ತಿಂಗಳ ಹಿಂದಿನ ಟಿ20 ಫೈನಲ್‌ನಲ್ಲಿ ಏನಾಗಿತ್ತು?

ಕೆಲವೇ ಹೊತ್ತಲ್ಲಿ ಆರ್‌ಸಿಬಿ ಹಾಗೂ ಪಂಜಾಬ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಆದರೆ ಇದೇ ನಾಯಕರು ಇಬ್ಬರು 6 ತಿಂಗಳ ಹಿಂದೆ ಟಿ20 ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಈ ರೋಚಕ ಹೋರಾಟದಲ್ಲಿ ಗೆದ್ದಿದ್ದು ಯಾರು?

Read Full Story

06:23 PM (IST) Jun 03

ಬಸ್ಸಿನ ಕೊನೇ ಸೀಟಲ್ಲಿ ಮೈಮರೆತು ಹೈಸ್ಕೂಲ್ ಮಕ್ಕಳ ರೊಮ್ಯಾನ್ಸ್; ವಿಡಿಯೋ ವೈರಲ್

ಆರ್‌ಟಿಸಿ ಬಸ್ಸಿನಲ್ಲಿ ಸ್ಕೂಲ್ ಯೂನಿಫಾರ್ಮ್‌ನಲ್ಲಿರುವ ಇಬ್ಬರು ವಿದ್ಯಾರ್ಥಿಗಳ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ಟೀನೇಜ್ ಪ್ರೀತಿ ಮತ್ತು ಸಾರ್ವಜನಿಕ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

06:04 PM (IST) Jun 03

ಐಪಿಎಲ್ ಫೈನಲ್ - ಆರ್‌ಸಿಬಿ ತಂಡವಿದ್ದ ಹೋಟೆಲ್‌ಗೆ ಭೇಟಿಕೊಟ್ಟ ಜಯ್ ಶಾ! ವಿಡಿಯೋ ವೈರಲ್

ಇಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಚೊಚ್ಚಲ ಐಪಿಎಲ್ ಟ್ರೋಫಿಗಾಗಿ ಸೆಣಸಲಿವೆ. ಆರ್‌ಸಿಬಿ ನಾಲ್ಕನೇ ಬಾರಿಗೆ ಫೈನಲ್ ಪ್ರವೇಶಿಸಿದರೆ, ಪಂಜಾಬ್ 2014ರ ನಂತರ ಮೊದಲ ಬಾರಿಗೆ ಫೈನಲ್‌ನಲ್ಲಿದೆ.
Read Full Story

05:49 PM (IST) Jun 03

ಇದುವರೆಗಿನ ಭವಿಷ್ಯ ನಿಜವಾದ ಬೆನ್ನಲ್ಲೇ ಫೈನಲ್ ಪಂದ್ಯ ವಿನ್ನರ್ ಪ್ರಿಡಿಕ್ಟ್ ಮಾಡಿದ ಚಹಾಲ್ ಗೆಳತಿ

ಯಜುವೇಂದ್ರ ಚಹಾಲ್ ಗೆಳತಿ ಆರ್‌ಜೆ ಮಹ್ವಾಶ್ ಇದುವರೆಗೆ ಐಪಿಎಲ್ ವಿನ್ನರ್ ಕುರಿತು ಹೇಳಿದ ಭವಿಷ್ಯ ನಿಜವಾಗಿದೆ. ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗಲಿದೆ ಎಂದಿದ್ದ ಭವಿಷ್ಯ ಕೂಡ ನಿಜವಾಗಿದೆ. ಇದೀಗ ಫೈನಲ್ ಪಂದ್ಯದಲ್ಲಿ ಯಾರು ಪ್ರಶಸ್ತಿ ಗೆಲ್ಲಲಿದ್ದಾರೆ ಅನ್ನೋ ಭವಿಷ್ಯ ನುಡಿದಿದ್ದಾರೆ.

Read Full Story

04:48 PM (IST) Jun 03

ಕರಾಚಿ ಜೈಲಿನಿಂದ 200 ಕೈದಿಗಳು ಪರಾರಿ, ಹೇಗೆ ಗೊತ್ತಾ!

ಕರಾಚಿಯ ಮಾಲಿರ್ ಜಿಲ್ಲಾ ಕಾರಾಗೃಹದಲ್ಲಿ ಭೂಕಂಪದ ನಂತರ ಕೈದಿಗಳನ್ನು ಎಣಿಸಲು ಹೊರಗೆ ಕರೆತಂದಾಗ 200 ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ. 78 ಕೈದಿಗಳನ್ನು ಮರು ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಕೈದಿ ಮೃತಪಟ್ಟಿದ್ದಾನೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.  

Read Full Story

04:44 PM (IST) Jun 03

ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ ಎಂದು 6.4 ಕೋಟಿ ರೂ ಬೆಟ್ಟಿಂಗ್ ಕಟ್ಟಿದ ರ‍್ಯಾಪ್ ಸಿಂಗರ್ ಡ್ರೇಕ್

ಆರ್‌ಸಿಬಿ ಗೆದ್ದೆ ಗೆಲ್ಲುತ್ತೆ ಅನ್ನೋ ವಿಶ್ವಾಸದಲ್ಲಿದೆ. ಅಭಿಮಾನಿಗಳು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ಇದರ ನಡುವೆ ರ‍್ಯಾಪ್ ಸಿಂಗರ್ ಡ್ರೇಕ್ ಐಪಿಎಲ್ ಫೈನಲ್ ಪಂದ್ಯಕ್ಕೆ ಬರೋಬ್ಬರಿ 6.4 ಕೋಟಿ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾರೆ.

Read Full Story

04:24 PM (IST) Jun 03

ಕನ್ನಡಿಗರಿಗೆ ಕ್ಷಮೆ ಕೇಳದೆ, ಚಿತ್ರರಂಗಕ್ಕೆ ತುಪ್ಪ ಸವರುವ ಪತ್ರ ಬರೆದ ಕಮಲ್ ಹಾಸನ್!

ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಯ ಕುರಿತು ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ KFCCಗೆ ಪತ್ರ ಬರೆದು ಸ್ಪಷ್ಟನೆ ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿರುವ ಅವರು, ಕನ್ನಡ ಭಾಷೆ ಮತ್ತು ಜನರ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
Read Full Story

03:58 PM (IST) Jun 03

ಮನೆ ಯಾರ ಹೆಸರಲ್ಲಿದೆ ಅನ್ನೋದು ಮುಖ್ಯವಲ್ಲ ವಿಧವೆಗೆ ಗಂಡನ ಮನೆಯಲ್ಲಿರೋ ಹಕ್ಕಿದೆ - ಹೈಕೋರ್ಟ್

ಪತಿ ತೀರಿಕೊಂಡ ಮಹಿಳೆಗೆ ಪತಿಯ ಮನೆಯಲ್ಲಿ ವಾಸಿಸಲು ಅವಕಾಶ ನೀಡಿದ ಪಾಲಕ್ಕಾಡ್ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. 

Read Full Story

03:48 PM (IST) Jun 03

ಕರಿಮಣಿ ಸೀರಿಯಲ್ ಗೆ ಎಂಟ್ರಿ ಕೊಟ್ಟ ನನ್ನರಸಿ ರಾಧೆಯ ಅಗಸ್ತ್ಯ…. ವೀಕ್ಷಕರು ಖುಷ್!

ನನ್ನರಸಿ ರಾಧೆ, ತ್ರಿಪುರ ಸುಂದರಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದ ನಟ ಅಭಿನವ್ ವಿಶ್ವನಾಥನ್ ಕರಿಮಣಿ ಸೀರಿಯಲ್ ಗೆ ಎಂಟ್ರಿ ಕೊಟ್ಟಿದ್ದಾರೆ.

Read Full Story

03:46 PM (IST) Jun 03

ಬೆಂಗಳೂರಲ್ಲಿ ಆರ್‌ಸಿಬಿ ಫೈನಲ್ ಜ್ವರ - ಪಬ್ ಬಾರ್ ರೆಸ್ಟೋರೆಂಟ್‌ಗಳಲ್ಲಿ 1+1 ಬಿಯರ್ ಆಫರ್

ಆರ್‌ಸಿಬಿ ಫೈನಲ್ ಪಂದ್ಯ ಹಾಗೂ ಪ್ರಶಸ್ತಿಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಫುಲ್ ಆರ್‌ಸಿಬಿಯದ್ದೇ ಹವಾ. ಇಂದಿನ ಆರ್‌ಸಿಬಿ ಫೈನಲ್ ಪಂದ್ಯಕ್ಕೆ ಬೆಂಗಳೂರಿನ ಕೆಲ ಪಬ್, ರೆಸ್ಟೋರೆಂಟ್ ಭರ್ಜರಿ ಆಫರ್ ನೀಡುತ್ತಿದೆ. ಉಚಿತ ಬಿಯರ್, 1+1 ಕಾಕ್‌ಟೈಲ್ ಡೀಲ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ.

Read Full Story

03:33 PM (IST) Jun 03

8ನೇ ವೇತನ ಆಯೋಗ - ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಳ ಆಗುತ್ತೆ?

8ನೇ ವೇತನ ಆಯೋಗ ರಚನೆ ಬಗ್ಗೆ ಮೋದಿ ಸರ್ಕಾರ ಘೋಷಿಸಿದಾಗಿನಿಂದ, ನೌಕರರು ಮತ್ತು ಪಿಂಚಣಿದಾರರಲ್ಲಿ ವೇತನ ಹೆಚ್ಚಳ ಎಷ್ಟಿರುತ್ತದೆ ಎಂಬ ಕುತೂಹಲ ಹೆಚ್ಚಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Read Full Story

03:12 PM (IST) Jun 03

ಬ್ಯಾಕ್ ಲೆಸ್ ಗೌನ್, ಬೋಲ್ಡ್ ಮಿರರ್ ಸೆಲ್ಫಿ ಮೂಲಕ ಕಿಚ್ಚು ಹಚ್ಚಿದ ಮಲೈಕಾಗೆ ಛೀಮಾರಿ ಹಾಕಿದ ಜನ!

ಬಾಲಿವುಡ್ ನಟಿ ಮತ್ತು ಡ್ಯಾನ್ಸರ್ ಮಲೈಕಾ ಅರೊರಾ ಸಖತ್ ಬೋಲ್ಡ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಈ ಕುರಿತು ಕುಡಿ ಕಾರಿದ್ದಾರೆ.

Read Full Story

03:12 PM (IST) Jun 03

ಬರೋಬ್ಬರಿ 1 ಕೋಟಿ ಲೀಟರ್ ಗಡಿ ದಾಟಿ ಕೆಎಂಎಫ್ ಹಾಲು ಸಂಗ್ರಹದಲ್ಲಿ ದಾಖಲೆ!

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ದಿನಕ್ಕೆ 1.06 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ. ಮುಂಗಾರು ಪೂರ್ವ ಮಳೆ ಮತ್ತು ಹಸಿರು ಚಾರದ ಲಭ್ಯತೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ. ಕೆಎಂಎಫ್ 18 ಹೊಸ ಬಗೆಯ ಕೇಕ್ ಮತ್ತು ಮಫಿನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
Read Full Story

02:51 PM (IST) Jun 03

ನಮೀಬಿಯಾ - ಐಷಾರಾಮಿ ಶೌಚಾಲಯದಲ್ಲಿ ಕುಳಿತಿದ್ದ ಉದ್ಯಮಿ ಮೇಲೆ ಸಿಂಹದ ದಾಳಿ, ಸಾವು

ನಮೀಬಿಯಾದಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಉದ್ಯಮಿಯೊಬ್ಬರು ಸಿಂಹದ ದಾಳಿಗೆ ಬಲಿಯಾಗಿದ್ದಾರೆ. ಐಷಾರಾಮಿ ಲಾಡ್ಜ್‌ವೊಂದರ ಶೌಚಾಲಯದಲ್ಲಿ ಕುಳಿತಿದ್ದ ವೇಳೆ ಈ ಘಟನೆ ನಡೆದಿದ್ದು, ದಾಳಿ ಮಾಡಿದ ಸಿಂಹವನ್ನು ನಂತರ ಕೊಲ್ಲಲಾಗಿದೆ.
Read Full Story

02:43 PM (IST) Jun 03

ಕೊನೆ ಕ್ಷಣದಲ್ಲಿ ಆರ್‌ಸಿಬಿಗೆ ಗುಡ್‌ ನ್ಯೂಸ್, ಬೆಂಗಳೂರು ತಂಡ ಕೂಡಿಕೊಂಡ ಬಿಗ್ ಹಿಟ್ಟರ್!

ಅಹಮದಾಬಾದ್‌: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಆರ್‌ಸಿಬಿ ತಂಡದ ಪಾಲಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸ್ಪೋಟಕ ಬ್ಯಾಟರ್ ತಂಡ ಕೂಡಿಕೊಂಡಿರುವುದು ಬೆಂಗಳೂರು ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

Read Full Story

02:31 PM (IST) Jun 03

RCB ಫೈನಲ್ ಪಂದ್ಯ ನೋಡಲು ಹೊರಟವರಿಗೆ ಟೈಮ್ ತಪ್ಪಿಸಿದ ಸ್ಪೈಸ್ ಜೆಟ್ ವಿಮಾನ; ಅಭಿಮಾನಿಗಳ ಆಕ್ರೋಶ!

ಐಪಿಎಲ್ ಫೈನಲ್ ವೀಕ್ಷಿಸಲು ಅಹಮದಾಬಾದ್‌ಗೆ ತೆರಳಬೇಕಿದ್ದ RCB ಅಭಿಮಾನಿಗಳು ಸ್ಪೈಸ್ ಜೆಟ್ ವಿಮಾನ ವಿಳಂಬದಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಹೊರಡಬೇಕಿದ್ದ ವಿಮಾನ ವಿಳಂಬವಾಗಿದ್ದರಿಂದ ಅಭಿಮಾನಿಗಳು ಪಂದ್ಯ ವೀಕ್ಷಣೆ ತಪ್ಪಸಿಕೊಳ್ಳಬಹುದು.

Read Full Story

02:08 PM (IST) Jun 03

ಗದಗ ಕೈ ಕಾರ್ಯಕರ್ತರ ಮಧ್ಯೆ ಪೋಸ್ಟರ್ ವಾರ್! ಸಿದ್ದರಾಮಯ್ಯ, ಡಿಕೆಶಿಗೆ ಎಚ್ಚರಿಕೆ!

ಲಕ್ಕುಂಡಿ ಗ್ರಾಮದಲ್ಲಿ ನಡೆಯಲಿರುವ ಉತ್ಖನನ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಮಾಜಿ ಸಚಿವ ಬಿ.ಆರ್. ಯಾವಗಲ್ ಅವರ ಹೆಸರು ಕೈಬಿಟ್ಟಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

01:24 PM (IST) Jun 03

ಭಾರತ 20 ಅಲ್ಲ, 28 ಪ್ರದೇಶ ನಾಶ ಮಾಡಿದೆ ಎಂದ ಪಾಕ್; 'ಖರ್ಗೆಯವ್ರೇ ಸರಿಯಾಗಿ ಕೇಳಿಸಿಕೊಳ್ಳಿ' ಎಂದ ನೆಟಿಜೆನ್ಸ್!

ಆಪರೇಷನ್ ಸಿಂದೂರ್‌ನಲ್ಲಿ ಭಾರತವು 9ಕ್ಕಿಂತ ಹೆಚ್ಚು ಭಯೋತ್ಪಾದಕ ಅಡಗುತಾಣಗಳನ್ನು ಧ್ವಂಸಗೊಳಿಸಿದೆ ಎಂದು ಪಾಕಿಸ್ತಾನದ ದಾಖಲೆಗಳು ಬಹಿರಂಗಪಡಿಸಿವೆ. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ.
Read Full Story

01:03 PM (IST) Jun 03

ಟಿಮ್ ಡೇವಿಡ್ ಐಪಿಎಲ್ ಫೈನಲ್ ಆಡ್ತಾರಾ? - ಕ್ಯಾಪ್ಟನ್ ರಜತ್ ಪಾಟೀದಾರ್ ಹೇಳಿದ್ದೇನು?

ಅಹಮದಾಬಾದ್: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‌ನಲ್ಲಿಂದು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೀಗಿರುವಾಗಲೇ ಟಿಮ್ ಡೇವಿಡ್ ಅವರ ಕುರಿತಂತೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

Read Full Story

12:46 PM (IST) Jun 03

ವಿಪತ್ತು ನಿರ್ವಹಣೆಗೆ ಧರ್ಮಸ್ಥಳದ ಶೌರ್ಯ ತಂಡ ಸಜ್ಜು!

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಸಭೆ ಮಂಗಳೂರಿನಲ್ಲಿ ನಡೆಯಿತು. ಮಳೆಗಾಲದ ಅನಾಹುತಗಳನ್ನು ಎದುರಿಸಲು ಸ್ವಯಂಸೇವಕರಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
Read Full Story

12:46 PM (IST) Jun 03

ವಿಮಾನ ಪೈಲೆಟ್‌ನ ಹೆಮ್ಮೆಯ ಕ್ಷಣ; ತಾತನ TVS50 ಸ್ಕೂಟರ್‌ನಲ್ಲಿ ಹೋಗಿದ್ದೇನೆ, ಈಗ ತಾತನಿಗೊಂದು ರೈಡ್ ಕೊಡಲು ನನ್ನ ಸರದಿ!

ಚೆನ್ನೈನಿಂದ ಕೊಯಮತ್ತೂರಿಗೆ ಹೋಗುವ ಇಂಡಿಗೋ ವಿಮಾನದಲ್ಲಿ ಪೈಲಟ್ ಪ್ರದೀಪ್ ಕೃಷ್ಣನ್ ತಮ್ಮ ಅಜ್ಜ-ಅಜ್ಜಿ ಮತ್ತು ತಾಯಿಯೊಂದಿಗೆ ವಿಮಾನ ಹಾರಾಟ ನಡೆಸಿದ್ದಾರೆ. ಪ್ರಯಾಣಿಕರೊಂದಿಗೆ ಮಾತನಾಡಿ, ತಮ್ಮ ಕುಟುಂಬದೊಂದಿಗಿನ ಈ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ.
Read Full Story

12:31 PM (IST) Jun 03

ಇಂಥಾ ಮಕ್ಕಳು ಬೇಕಾ? ಅಪ್ಪ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಸಾವಿಗೆ ಶರಣಾದ 21 ವರ್ಷದ ಯುವಕ

ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ಐಷಾರಾಮಿ ಕಾರು ಕೊಡಿಸಿಲ್ಲ ಅಂತ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

Read Full Story

12:29 PM (IST) Jun 03

ಮೈಸೂರು ರಸ್ತೆ ಫ್ಲೈಓವರ್‌ನಲ್ಲಿ ಭೀಕರ ಅಪಘಾತ - ಇಬ್ಬರು ಯುವಕರು ಸಾವು

ಬೆಂಗಳೂರಿನ ಮೈಸೂರು ರಸ್ತೆಯ ಮಾರ್ಕೆಟ್ ಫ್ಲೈಓವರ್‌ನಲ್ಲಿ ತಡರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

12:28 PM (IST) Jun 03

ರಾಜ್ಯದ ತಾಂತ್ರಿಕ ಶಿಕ್ಷಣಕ್ಕೆ ₹2,600 ಕೋಟಿ ADB ಸಾಲದ ಬಲ - ಸಚಿವ ಸುಧಾಕರ್

ರಾಜ್ಯದ ತಾಂತ್ರಿಕ ಶಿಕ್ಷಣವನ್ನು ಬಲಪಡಿಸಲು ಏಷ್ಯಾ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ) ನಿಂದ ₹2,600 ಕೋಟಿ ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಈ ಹಣವನ್ನು ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಸುಧಾರಿಸಲು ಮತ್ತು ಕೌಶಲ್ಯಧಾರಿತ ಶಿಕ್ಷಣಕ್ಕೆ ಒತ್ತು ನೀಡಲು ಬಳಸಲಾಗುವುದು.
Read Full Story

More Trending News