LIVE NOW
Published : Jan 31, 2026, 06:54 AM ISTUpdated : Jan 31, 2026, 12:36 PM IST

Karnataka News Live: ಶಾಲೆಗೆ ಹೋದ ಮಗಳು ಹೆಣವಾಗಿ ಬಂದಳು - ಕುಡಿಯುವ ನೀರಿನ ಘಟಕದಲ್ಲಿ ಕರೆಂಟ್ ಶಾಕ್ ತಗುಲಿ 5ನೇ ತರಗತಿ ವಿದ್ಯಾರ್ಥಿನಿ ಸಾವು!

ಸಾರಾಂಶ

ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ವೇಳೆ ಅನೇಕ ಪ್ರಶ್ನೆಗಳನ್ನ ಕೇಳುವಾಗ 5 ನಿಮಿಷ ಸಮಯಕೊಡಿ ಅಂತ ಕೇಳಿ ಒಳಗಡೆ ಹೋದ ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯಮಿ ಸಿ.ಜೆ.ರಾಯ್‌ ಒಬ್ಬ ಒಳ್ಳೆಯ ಉದ್ಯಮಿ. ಹೀಗೆ ಆಗಬಾರದಿತ್ತು. ಐಟಿ ತಂಡ ಕೇರಳದಿಂದ ಬಂದಿತ್ತು ಎಂಬ ಮಾಹಿತಿ ಇದೆ. ಈ ಘಟನೆ ಕುರಿತು ನಮಗೆ ದೆಹಲಿಯಿಂದ ಕೂಡ ವರದಿ ಕೇಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ನಾನು‌ ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳವನ್ನ ನಾನು ಖಂಡಿಸುತ್ತೇನೆ. ಇದು ಸರಿಯಲ್ಲ ಎಂದಿದ್ದಾ

12:36 PM (IST) Jan 31

ಶಾಲೆಗೆ ಹೋದ ಮಗಳು ಹೆಣವಾಗಿ ಬಂದಳು - ಕುಡಿಯುವ ನೀರಿನ ಘಟಕದಲ್ಲಿ ಕರೆಂಟ್ ಶಾಕ್ ತಗುಲಿ 5ನೇ ತರಗತಿ ವಿದ್ಯಾರ್ಥಿನಿ ಸಾವು!

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಶಾಲೆಯೊಂದರಲ್ಲಿ, 11 ವರ್ಷದ ವಿದ್ಯಾರ್ಥಿನಿ ತನುಶ್ರೀ ಕುಡಿಯುವ ನೀರಿನ ಘಟಕದ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾಳೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣವೆಂದು ಆರೋಪಿಸಲಾಗಿದ್ದು, ಮುಖ್ಯಶಿಕ್ಷಕರ ಅಮಾನತ್ತಿಗೆ ಶಿಫಾರಸು ಮಾಡಲಾಗಿದೆ.
Read Full Story

12:21 PM (IST) Jan 31

Bidar - ಬೆಳ್ಳಂಬೆಳಿಗ್ಗೆ ಅನುಮಾನಾಸ್ಪದ ವಸ್ತು ಸ್ಫೋಟ, 6 ಮಂದಿಗೆ ಗಾಯ..!

6 Injured in Mysterious Blast at Molakera Village in Bidar ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಐದನೇ ಸ್ಫೋಟವಾಗಿದೆ.

Read Full Story

12:20 PM (IST) Jan 31

ಬೆಂಗ್ಳೂರಿನಲ್ಲಿ ಪ್ಯಾಲೇಸ್‌ನಂಥ ಮನೆಯಿದ್ರೂ ಹೋಟೆಲ್ ರೂಮ್ ಫಿಕ್ಸ್; 24ನೇ ಮಹಡಿಯ ಕೋಣೆ ರಹಸ್ಯ

ಉದ್ಯಮಿ ಸಿ.ಜೆ.ರಾಯ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಅವರು ಉಳಿದುಕೊಳ್ಳುತ್ತಿದ್ದ ಬೆಂಗಳೂರಿನ ಕಾನ್ರಾಡ್ ಹೋಟೆಲ್‌ನ ಖಾಯಂ ಕೋಣೆಯನ್ನು ಪರಿಶೀಲಿಸಿದ್ದಾರೆ.  ಈ ತನಿಖೆಯಲ್ಲಿ, ರಾಯ್ ಅವರ ಐಷಾರಾಮಿ ಜೀವನ ಮತ್ತು ಸಾವಿನ ಹಿಂದಿನ ಸಂಭಾವ್ಯ ಕಾರಣಗಳನ್ನು ಶೋಧಿಸಲಾಗುತ್ತಿದೆ.

Read Full Story

12:15 PM (IST) Jan 31

ಮರೆಯಾದ ಇತಿಹಾಸ ತಜ್ಞ ಲಕ್ಕುಂಡಿ ಉತ್ಖನನ ನಿರ್ದೇಶಕ ಟಿ.ಎನ್. ಕೇಶವ್, ಉತ್ಖನನ ಸ್ಥಳದಲ್ಲಿಯೇ ಶ್ರದ್ಧಾಂಜಲಿ ಸಭೆ

ಹಿರಿಯ ಇತಿಹಾಸ ತಜ್ಞ ಹಾಗೂ ಲಕ್ಕುಂಡಿ ಉತ್ಖನನ ನಿರ್ದೇಶಕ ಟಿ.ಎನ್. ಕೇಶವ್ (74) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಹಂಪಿ, ಅಜಂತಾ-ಎಲ್ಲೋರಾದಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದ ಅವರ ಅಗಲಿಕೆಗೆ ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

Read Full Story

12:14 PM (IST) Jan 31

'ಕಾನ್ಫಿಡೆಂಟ್'​ ಎನ್ನೋ ಹೆಸ್ರು ಹೊಳೆದದ್ದೇ ಟಾಯ್ಲೆಟ್​ನಲ್ಲಿ - ಹೆಸರಿಗಾಗಿ ಪಟ್ಟ ಕಷ್ಟ ತಿಳಿಸಿದ್ದ CJ Roy

ಕಾನ್ಫಿಡೆಂಟ್ ಗ್ರೂಪ್​ನ ಸಂಸ್ಥಾಪಕ ಸಿ.ಜೆ.ರಾಯ್​ ಅವರ ಸಾವಿನ ಸುತ್ತ ಹಲವು ಸಂದೇಹಗಳು ಮೂಡಿವೆ. ಈ ನಡುವೆ, ತಮ್ಮ ಸಾವಿರಾರು ಕೋಟಿ ಸಾಮ್ರಾಜ್ಯಕ್ಕೆ 'ಕಾನ್ಫಿಡೆಂಟ್' ಎಂದು ಹೆಸರು ಬಂದಿದ್ದು ಹೇಗೆ ಎಂಬುದನ್ನು ಅವರು ಹಳೆಯ ಸಂದರ್ಶನವೊಂದರಲ್ಲಿ ವಿವರಿಸಿದ್ದರು.  

Read Full Story

12:02 PM (IST) Jan 31

'ಏನ್‌ ರೌಡಿಸಂ ಮಾಡ್ತೀಯಾ..' ಬೋರ್ಡ್‌ ಕಿತ್ತು ಹಾಕಿ ಮತ್ತೆ ಕಂಪೌಂಡ್‌ ಹಾಕಲು ಬಂದ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌!

Yash's Mother Pushpa Confronts GPA Holder Over Site Dispute in Hassan ಹಾಸನದ ವಿದ್ಯಾನಗರದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಹಾಗೂ ಜಿಪಿಎ ಹೋಲ್ಡರ್ ದೇವರಾಜ್ ನಡುವೆ ನಡೆಯುತ್ತಿರುವ ಸೈಟ್ ವಿವಾದ ಮತ್ತೆ ಸದ್ದು ಮಾಡಿದೆ.

Read Full Story

11:56 AM (IST) Jan 31

ಐಟಿ ಅಧಿಕಾರಿಗಳ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದ ಸಿ.ಜೆ ರಾಯ್ ಆತ್ಮ*ಹತ್ಯೆ ಮಾಡಿಕೊಂಡದ್ದೇಕೆ? ಕೊನೆ ಕ್ಷಣದಲ್ಲಿ ಆಗಿದ್ದೇನು?

ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್, ಐಟಿ ದಾಳಿ ನಡೆಯುತ್ತಿದ್ದ ವೇಳೆ ತಮ್ಮ ಕಚೇರಿಯಲ್ಲೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದರೂ, ಅವರು ಈ ಅಂತಿಮ ನಿರ್ಧಾರ ತೆಗೆದುಕೊಂಡಿದ್ದು ಉದ್ಯಮ ವಲಯದಲ್ಲಿ ಆಘಾತ ಮೂಡಿಸಿದೆ.
Read Full Story

11:40 AM (IST) Jan 31

ಯುವಕನ ಬೆನ್ನು ಕಚ್ಚಿ ವಿಕೃತಿ ಮೆರೆದ ಶಿಂಧೋಗಿ ಗ್ರಾಪಂ ಅಧ್ಯಕ್ಷ!

ಗ್ರಾಮದ ಸಮಸ್ಯೆ ಬಗ್ಗೆ ಪ್ರಶ್ನೆ ಮಾಡಿದ ಕಾರಣಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷನೇ ಸಾರ್ವಜನಿಕವಾಗಿ ಯುವಕನೋರ್ವನ ಬೆನ್ನು ಕಚ್ಚಿ ಹಲ್ಲೆ ನಡೆಸಿ ವಿಕೃತ ವರ್ತನೆ ತೋರಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶಿಂಧೋಗಿ ಗ್ರಾಮದಲ್ಲಿ ನಡೆದಿದೆ.

Read Full Story

11:36 AM (IST) Jan 31

50 ಲಕ್ಷ ನೀಡಿ ಬದುಕಿಗೆ ದಾರಿಯಾಗಿದ್ರಿ, ಋಣ ಯಾವತ್ತೂ ಮರೆಯಲ್ಲ - Bigg Boss ಹನುಮಂತು ಕಣ್ಣೀರು

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ ರಾಯ್ ಅವರು ಪದೇ ಪದೇ ನಡೆಯುತ್ತಿದ್ದ ಐಟಿ ದಾಳಿಯಿಂದಾಗಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ.  , ರಿಯಾಲಿಟಿ ಶೋಗಳ ಮೂಲಕ ಹಲವರಿಗೆ ನೆರವಾಗಿದ್ದ ಅವರ ನಿಧನಕ್ಕೆ ಗಾಯಕ ಹನುಮಂತ ಲಮಾಣಿ ಕಂಬನಿ ಮಿಡಿದಿದ್ದಾರೆ.

Read Full Story

11:25 AM (IST) Jan 31

ಉದ್ಯಮಿ ಸಿಜೆ ರಾಯ್ ಪ್ರಕರಣ - ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು

ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೋದರನ ಆರೋಪಗಳ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಗೃಹ ಸಚಿವಾಲಯಕ್ಕೆ ಸ್ಪಷ್ಟೀಕರಣ ಪತ್ರವನ್ನು ಕಳುಹಿಸಿದ್ದು, ತಾವು ಯಾವುದೇ ಒತ್ತಡ ಹೇರಿಲ್ಲ ಮತ್ತು ತೆರಿಗೆ ವಂಚನೆ ತನಿಖೆ ನಡೆಸುತ್ತಿದ್ದೆವು ಎಂದು ತಿಳಿಸಿದೆ.
Read Full Story

11:22 AM (IST) Jan 31

ಸಿ.ಜೆ ರಾಯ್ ಆತ್ಮ*ಹತ್ಯೆ ಕೇಳಿ ಕಣ್ಣೀರಿಟ್ಟ ಬಿಗ್ ಬಾಸ್ ವಿನ್ನರ್ ಹನುಮಂತ! ಕೊನೆಗೂ ಈಡೇರಲಿಲ್ಲ ಅದೊಂದು ಆಸೆ

ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್, ಐಟಿ ದಾಳಿಯ ನಂತರ ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ದುರಂತಕ್ಕೆ ಬಿಗ್ ಬಾಸ್ ವಿಜೇತ ಹನುಮಂತ ಲಮಾಣಿ ಕಂಬನಿ ಮಿಡಿದಿದ್ದು, ತಮಗೆ ಫ್ಲಾಟ್ ಹಾಗೂ ತಂಗಿಯ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದನ್ನು ಸ್ಮರಿಸಿದ್ದಾರೆ.  

Read Full Story

10:40 AM (IST) Jan 31

ಸಿ.ಜೆ ರಾಯ್ ಸಾವು - ಕೊಠಡಿ ಹೊರಗಡೆ ನಿಂತಿದ್ದ ಸಿಬ್ಬಂದಿಗೆ ಗುಂಡಿನ ಶಬ್ಧ ಕೇಳಿಸಲಿಲ್ಲ! ಯಾಕೆ?

ಖ್ಯಾತ ಉದ್ಯಮಿ ಡಾ. ಸಿ.ಜೆ. ರಾಯ್ ಅವರು ತಮ್ಮ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬಳಸಿದ 0.25 ಎನ್‌ಪಿ ಬೋರ್ ಪಿಸ್ತೂಲ್‌ನಿಂದ ಕಡಿಮೆ ಶಬ್ದ ಬಂದಿದ್ದರಿಂದ, ಘಟನೆ ನಡೆದ 15 ನಿಮಿಷಗಳ ನಂತರವಷ್ಟೇ ಈ ವಿಷಯ ಬೆಳಕಿಗೆ ಬಂದಿದೆ.  

Read Full Story

10:13 AM (IST) Jan 31

CJ Roy Case - ಸಾಲ, ಬೆದರಿಕೆ, ಒತ್ತಡ - ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?

ಉದ್ಯಮಿ ಸಿ.ಜೆ.ರಾಯ್ ಅವರ ಸಾವಿನ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಅವರ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯ ಒತ್ತಡವೇ ಸಾವಿಗೆ ಕಾರಣ ಎಂದು ಸಹೋದರ ಬಾಬು ರಾಯ್ ಆರೋಪಿಸಿದ್ದು, ಸರ್ಕಾರ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ.
Read Full Story

09:47 AM (IST) Jan 31

ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ ಕೊಡ್ತೇನೆ - ಸಚಿವರ ಸವಾಲ್

ನನ್ನ ಮೇಲೆ ಬಂದಿರುವ ಎಲ್ಲಾ ಆರೋಪಗಳು ಆಧಾರ ರಹಿತ. ಯಾರೋ ಅಧಿಕಾರಿ ಹೇಳಿದ್ದಾನೆಂಬ ಆರೋಪ ಹೊರಿಸಿ ರಾಜೀನಾಮೆ ಕೇಳುವುದು ಸರಿಯಲ್ಲ. ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದೇನೆ ಎನ್ನುವುದಕ್ಕೆ ಸಾಕ್ಷ್ಯಾಧಾರ ಕೊಟ್ಟರೆ ಈ ಕ್ಷಣದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

Read Full Story

09:20 AM (IST) Jan 31

ಸಂಗಾತಿ ಅರಸಿಕೊಂಡು ಬಂದಿದ್ದ 12 ಅಡಿ ಉದ್ದದ, 42 ಕೆಜಿ ತೂಕದ ಬೃಹತ್ ಹೆಣ್ಣು ಹೆಬ್ಬಾವು ರಕ್ಷಣೆ

ಸೋಲಾರ್ ಪ್ಲಾಂಟ್‌ನಲ್ಲಿ ಕಾಣಿಸಿಕೊಂಡಿದ್ದ 12 ಅಡಿ ಉದ್ದದ, 42 ಕೆಜಿ ತೂಕದ ಬೃಹತ್ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್ ಅವರು ರಕ್ಷಿಸಿದ್ದಾರೆ. ಸಂತಾನೋತ್ಪತ್ತಿ ಕಾಲವಾದ್ದರಿಂದ ಸಂಗಾತಿಯನ್ನು ಅರಸಿ ಬಂದಿರುವ ಸಾಧ್ಯತೆಗಳಿವೆ.

Read Full Story

09:00 AM (IST) Jan 31

ಕೇರಳ ಟು ದುಬೈವರೆಗೆ ರಾಯ್‌ ಕಟ್ಟಿದ್ದ ಕಾನ್ಫಿಡೆಂಟ್‌ ಸಾಮ್ರಾಜ್ಯ! ಸೇಲ್ಸ್ ಮ್ಯಾನ್ ಬೈದಿಕ್ಕೆ ಶಪಥ ಮಾಡಿದ್ದ ರಾಯ್

ಯಶಸ್ವಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ.ರಾಯ್‌, ಜನರ ಕನಸಿನ ಮೇಲೆ ಸಾಲ ಮಾಡದೆ ಸ್ವಂತ ಬಂಡವಾಳದಿಂದ 'ಕಾನ್ಫಿಡೆಂಟ್‌' ಸಾಮ್ರಾಜ್ಯವನ್ನು ಕಟ್ಟಿದರು. ಆದರೆ, ಐ.ಟಿ. ಅಧಿಕಾರಿಗಳ ಕಿರುಕುಳದಿಂದಾಗಿ ಅವರ ಬದುಕು ದುರಂತ ಅಂತ್ಯ ಕಂಡಿದೆ ಎಂದು ಅವರ ಸಹೋದರ ಆರೋಪಿಸಿದ್ದಾರೆ.

Read Full Story

08:59 AM (IST) Jan 31

ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರನ್ನು ಅಲೆದಾಡಿಸಿದ ಭೂ ಮಾಪನ ಇಲಾಖೆ

ಹಿರಿಯ ರಂಗಕರ್ಮಿ ಮಾಜಿ ರಾಜ್ಯಸಭಾ ಸದಸ್ಯೆ ಬಿ. ಜಯಶ್ರೀ ಅವರನ್ನು ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮೂರನೇ ಬಾರಿ ಅಲೆದಾಡಿಸಿದ ಘಟನೆ ಗುಬ್ಬಿ ತಾಲೂಕಿನ ಭೂಮಾಪನ ಕಚೇರಿಯಲ್ಲಿ ನಡೆದಿದೆ.

Read Full Story

08:27 AM (IST) Jan 31

ಭಾರತದ ತೈಲೋದ್ಯಮ ಸಾಹಸ ಜಗತ್ತಿನೆದುರು ಅನಾವರಣ

ಅಮೆರಿಕದ ಅನೂಹ್ಯ ಅಪಾಯಕಾರಿ ನಿರ್ಧಾರಗಳು, ನಿಲ್ಲದ ರಷ್ಯಾ-ಉಕ್ರೇನ್ ಸಮರ, ಮಧ್ಯಪ್ರಾಚ್ಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯು ಪ್ರಕ್ಷುಬ್ಧ ಸಾಗರದಂತಾಗಿದ್ದರೂ ಅದರಲ್ಲಿ ಧೈರ್ಯವಾಗಿ ಈಜಬಲ್ಲೆ ಎಂಬ ಸಂದೇಶವನ್ನು ''ಇಂಡಿಯಾ ಎನರ್ಜಿ ವೀಕ್'' ಮೂಲಕ ಭಾರತ ಜಗತ್ತಿಗೆ ಸಾರುವಲ್ಲಿ ಸಫಲವಾಯಿತು.

Read Full Story

08:18 AM (IST) Jan 31

ಹೋಂ ವರ್ಕ್‌ ಮಾಡದ್ದಕ್ಕೆ ಬಾಲಕನಿಗೆ ಭಯಾನಕ ಶಿಕ್ಷೆ! ಬಲವಂತದಿಂದ ಶಾಲೆಗೆ ಕಳಿಸಿದರೆ ಸಾಯುವೆ ಎಂದ ವಿದ್ಯಾರ್ಥಿ

ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹೋಂ ವರ್ಕ್‌ ಮಾಡಿಲ್ಲವೆಂಬ ಕಾರಣಕ್ಕೆ 4ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಈ ಸಂಬಂಧ ವಿದ್ಯಾರ್ಥಿಯ ತಾಯಿ ಶಿಕ್ಷಕಿ ಹಾಗೂ ಶಾಲಾ ಆಡಳಿತದ ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.

Read Full Story

08:07 AM (IST) Jan 31

ಖ್ಯಾತ ನಟಿ, ಮಾಡೆಲ್ & ರೆಸಾರ್ಟ್ - ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ

ಎಸ್ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗಡೆಯವರ ದುರಂತ ಸಾವನ್ನು ಉಲ್ಲೇಖಿಸಿ, ಲೇಖನವು ಸಿ.ಜೆ. ರಾಯ್ ಅವರ ವಿವಾದಗಳು, ಹಗರಣಗಳು ಮತ್ತು ಅವರ ಮೇಲಿದ್ದ ಒತ್ತಡವನ್ನು ವಿವರಿಸುತ್ತದೆ. ಐಟಿ ದಾಳಿಯ ತೀವ್ರತೆ ಮತ್ತು ಅವರ ಅಜ್ಞಾತ ಸಹಾಯಗಳ ಬಗ್ಗೆ ಚಕ್ರವರ್ತಿ ಚಂದ್ರಚೂಡ ಮಾಹಿತಿ ಹಂಚಿಕೊಂಡಿದ್ದಾರೆ.
Read Full Story

07:39 AM (IST) Jan 31

ಶಬರಿಮಲೆ ಚಿನ್ನಕ್ಕೆ ಕನ್ನ ಕೇಸು - ‘ಕಾಂತಾರ’ ನಟನ ವಿಚಾರಣೆ

ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲು ಮತ್ತು ದ್ವಾರಪಾಲಕ ವಿಗ್ರಹಗಳ ಕವಚದ ಚಿನ್ನಕ್ಕೆ ಕನ್ನ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕನ್ನಡದ ‘ಕಾಂತಾರ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಶುಕ್ರವಾರ ವಿಚಾರಣೆ ನಡೆಸಿದ್ದಾರೆ.

Read Full Story

07:33 AM (IST) Jan 31

ಅಜಿತ್‌ ಪವಾರ್‌ ಪತ್ನಿ ಮಹಾ ಡಿಸಿಎಂ - ಇಂದು ಪ್ರಮಾಣ?

ಬುಧವಾರ ಬಾರಾಮತಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾದ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್‌, ಶನಿವಾರ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Read Full Story

07:27 AM (IST) Jan 31

12 ಅಡಿ ಆಳಕ್ಕೆ ಅಗೆತ; ಪುರಾತತ್ವ ಇಲಾಖೆಯ ಉತ್ಖನನಕ್ಕೆ ಲಕ್ಕುಂಡಿ ಜನರಿಂದ ದಿಢೀರ್ ವಿರೋಧ

ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಪುರಾತತ್ವ ಉತ್ಖನನಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾವುದೇ ಕುರುಹು ಸಿಗದ ಜಾಗದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಇದರ ನಡುವೆಯೇ ಉತ್ಖನನದ ನಿರ್ದೇಶಕ ಡಾ. ಟಿ.ಎಂ. ಕೇಶವ್ ನಿಧನರಾಗಿದ್ದಾರೆ.
Read Full Story

07:25 AM (IST) Jan 31

ಹಾದಿ ಬದಲಾಗಿದೆ - ಬೆಳ್ಳಿ ದರ ₹ 15 ಸಾವಿರ, ಚಿನ್ನ₹ 9650 ಇಳಿಕೆ

ಕೆಲದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದ್ದ ಅಮೂಲ್ಯ ಲೋಹಗಳ ಹಾದಿ ಬದಲಾಗಿದ್ದು, ಶುಕ್ರವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಕೆ.ಜಿ.ಗೆ 15,000 ರು. ಕಡಿಮೆಯಾಗಿದ್ದು, 3,95,000 ರು. ಆಗಿದೆ.

Read Full Story

More Trending News