Published : Jan 31, 2026, 06:54 AM ISTUpdated : Feb 01, 2026, 12:07 AM IST

Karnataka News Live: ಲೇಡಿ ಸಿಪಿಐಯನ್ನೇ ಎಳೆದಾಡಿದ ರೌಡಿಶೀಟರ್ ಹುಸೇನ್, ಕೈ ಮುಖಂಡನ ಪುತ್ರನ ಅಟ್ಠಹಾಸಕ್ಕೆ ಪೇದೆಗಳು ಅಸ್ವಸ್ಥ!

ಸಾರಾಂಶ

ಬೆಂಗಳೂರು: ಐಟಿ ಇಲಾಖೆ ಅಧಿಕಾರಿಗಳು ಪರಿಶೀಲನೆ ವೇಳೆ ಅನೇಕ ಪ್ರಶ್ನೆಗಳನ್ನ ಕೇಳುವಾಗ 5 ನಿಮಿಷ ಸಮಯಕೊಡಿ ಅಂತ ಕೇಳಿ ಒಳಗಡೆ ಹೋದ ಉದ್ಯಮಿ ಸಿ.ಜೆ.ರಾಯ್‌ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉದ್ಯಮಿ ಸಿ.ಜೆ.ರಾಯ್‌ ಒಬ್ಬ ಒಳ್ಳೆಯ ಉದ್ಯಮಿ. ಹೀಗೆ ಆಗಬಾರದಿತ್ತು. ಐಟಿ ತಂಡ ಕೇರಳದಿಂದ ಬಂದಿತ್ತು ಎಂಬ ಮಾಹಿತಿ ಇದೆ. ಈ ಘಟನೆ ಕುರಿತು ನಮಗೆ ದೆಹಲಿಯಿಂದ ಕೂಡ ವರದಿ ಕೇಳಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ನಾನು‌ ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳವನ್ನ ನಾನು ಖಂಡಿಸುತ್ತೇನೆ. ಇದು ಸರಿಯಲ್ಲ ಎಂದಿದ್ದಾ

12:07 AM (IST) Feb 01

ಲೇಡಿ ಸಿಪಿಐಯನ್ನೇ ಎಳೆದಾಡಿದ ರೌಡಿಶೀಟರ್ ಹುಸೇನ್, ಕೈ ಮುಖಂಡನ ಪುತ್ರನ ಅಟ್ಠಹಾಸಕ್ಕೆ ಪೇದೆಗಳು ಅಸ್ವಸ್ಥ!

ದಾವಣಗೆರೆಯಲ್ಲಿ ಮಹಿಳಾ ಸಿಪಿಐ ಮತ್ತು ಪೇದೆಗಳ ಮೇಲೆ ನಡೆದ ಹಲ್ಲೆ ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹರಿಹರ ಶಾಸಕ ಬಿ.ಪಿ. ಹರೀಶ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿದ್ದಾರೆ.

Read Full Story

11:39 PM (IST) Jan 31

ದಾವಣಗೆರೆ - ಖಾಕಿ ಮೇಲೆಯೇ ಕೈ ಮುಖಂಡನ ಪುತ್ರನಿಂದ ಹಲ್ಲೆ; ಲೇಡಿ ಸಿಪಿಐ ಮೊಬೈಲ್ ಕಿತ್ತುಕೊಂಡ ಹುಸೇನ್ ಗ್ಯಾಂಗ್ ಅಸಭ್ಯ ವರ್ತನೆ!

ದಾವಣಗೆರೆಯಲ್ಲಿ, ಕಾಂಗ್ರೆಸ್ ಮುಖಂಡನ ಪುತ್ರನಾದ ರೌಡಿಶೀಟರ್ ಹುಸೇನ್, ತನ್ನನ್ನು ಬಂಧಿಸಲು ಬಂದ ಮಹಿಳಾ ಸಿಪಿಐ ಗಾಯತ್ರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಪೊಲೀಸರ ಮೇಲಿನ ಹಲ್ಲೆ ಮತ್ತು ರಾಜಕೀಯ ಪ್ರಭಾವದ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ, 

Read Full Story

11:03 PM (IST) Jan 31

ಫಿಲ್ಮ್ ಚೇಂಬರ್ ಗದ್ದುಗೆ ಏರಿದ ಜಯಮಾಲಾ - ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಜಯ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೈವೋಲ್ಟೇಜ್ ಚುನಾವಣೆಯಲ್ಲಿ, ರಾಜಕೀಯ ಮೇಲಾಟಗಳ ನಡುವೆ ನಟಿ ಜಯಮಾಲಾ ಭರ್ಜರಿ ಜಯ ಸಾಧಿಸಿದ್ದಾರೆ. ಮುಖ್ಯಮಂತ್ರಿ ಬಣದ ಬೆಂಬಲದೊಂದಿಗೆ, ಅವರು ಡಿಕೆಶಿ ಆಪ್ತ ಬಾ.ಮಾ. ಹರೀಶ್ ಅವರನ್ನು ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Read Full Story

10:34 PM (IST) Jan 31

ತುಮಕೂರಿನಲ್ಲಿ ಯುವತಿ ವಿಚಾರಕ್ಕೆ ಮಾರಮಾರಿ - ತಂಗಿಯ ಪ್ರೇಮಿಗೆ ಸಹೋದರನಿಂದ ಮಚ್ಚಿನೇಟು!

ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಯುವತಿಯೊಬ್ಬಳ ಪ್ರೇಮ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದಿದೆ. ನ್ಯಾಯ ಪಂಚಾಯ್ತಿ ವಿಫಲವಾದ ನಂತರ ನಡೆದ ಈ ದಾಳಿಯಲ್ಲಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು.

Read Full Story

09:39 PM (IST) Jan 31

ಅಮ್ಮ ಆಗ್ತಿದ್ದಾರ ಐಶ್ವರ್ಯ ಡಿಕೆಎಸ್ ಹೆಗ್ಡೆ? ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಪ್ರಶ್ನೆ

ಅಮ್ಮ ಆಗ್ತಿದ್ದಾರ ಐಶ್ವರ್ಯ ಡಿಕೆಎಸ್ ಹೆಗ್ಡೆ? ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಪ್ರಶ್ನೆ. ಐಶ್ವರ್ಯ ಡಿಕೆಎಸ್ ಹೆಗ್ಡೆ ಇತ್ತೀಚಿನ ಫೋಟೋ ಹಾಗೂ ವಿಡಿಯೋ ನೋಡಿದ ಜನ ಗುಡ್ ನ್ಯೂಸ್ ಪ್ರಶ್ನೆ ಆರಂಭಿಸಿದ್ದಾರೆ.

Read Full Story

09:39 PM (IST) Jan 31

ಪ್ಯಾಕರ್ಸ್ & ಮೂವರ್ಸ್‌ ಕಾರ್ಮಿಕರಿಗೆ ಲಿಫ್ಟ್ ಬಳಕೆಗೆ ನಿರಾಕರಿಸಿದ ರೆಸಿಡೆನ್ಸಿಯಲ್ ಸೊಸೈಟಿ ಸದಸ್ಯರು

ವಸತಿ ಸಮುಚ್ಚಯವೊಂದರಲ್ಲಿ ಪ್ಯಾಕರ್ಸ್ & ಮೂವರ್ಸ್ ಕಾರ್ಮಿಕರಿಗೆ ಲಿಫ್ಟ್ ಬಳಸಲು ನಿರಾಕರಿಸಿದ ಘಟನೆ ನಡೆದಿದೆ. ಇದರಿಂದಾಗಿ, ಅವರು ಆರನೇ ಮಹಡಿಗೆ ಭಾರವಾದ ವಸ್ತುಗಳನ್ನು ಮೆಟ್ಟಿಲುಗಳ ಮೂಲಕವೇ ಸಾಗಿಸಬೇಕಾಯಿತು.ಈ ವೀಡಿಯೋ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Read Full Story

09:38 PM (IST) Jan 31

ಜಿಯೋ, ಏರ್‌ಟೆಲ್‌ಗಿಂತ ಅಗ್ಗ; BSNLನ ಬೆಸ್ಟ್ ಪ್ಲಾನ್‌ಗಳು ಇವೇ ನೋಡಿ!

ಖಾಸಗಿ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ಗೆ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಕಠಿಣ ಸ್ಪರ್ಧೆ ನೀಡುತ್ತಿದೆ. ತನ್ನ ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ.

 

Read Full Story

08:25 PM (IST) Jan 31

ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರಕ್ಕೂ ಮೊದಲು ಪುತ್ರ ರೋಹಿತ್ ಮಹತ್ವದ ಸಂದೇಶ

ಉದ್ಯಮಿ ಸಿಜೆ ರಾಯ್ ಅಂತ್ಯಸಂಸ್ಕಾರಕ್ಕೂ ಮೊದಲು ಪುತ್ರ ರೋಹಿತ್ ಮಹತ್ವದ ಸಂದೇಶ ನೀಡಿದ್ದಾರೆ. ತಂದೆ ಅಗಲಿಕೆ ನೋವಿನಲ್ಲಿ ರೋಹಿತ್ ರಾಯ್ ರವಾನಿಸಿದ ಸಂದೇಶವೇನು? ಅಂತ್ಯಸಂಸ್ಕಾರ ಯಾವಾಗ?

Read Full Story

07:43 PM (IST) Jan 31

ಸಿನಿಮಾರಂಗದ ಕರಾಳ ಮುಖ ಬಿಚ್ಚಿಟ್ಟ ನಟಿ ಐಶ್ವರ್ಯಾ ರಾಜೇಶ್ ಆಘಾತಕಾರಿ ಹೇಳಿಕೆಗೆ ಭಾರೀ ಕಾಮೆಂಟ್ಸ್!

ಒಮ್ಮೆ ತಡವಾಗಿ ಸೆಟ್‌ಗೆ ಬಂದಿದ್ದಕ್ಕೆ ನಿರ್ದೇಶಕರೊಬ್ಬರು ಎಲ್ಲರ ಮುಂದೆ ಕಿರುಚಾಡಿ ಅವಮಾನ ಮಾಡಿದ್ದರಂತೆ. "ತಪ್ಪು ಮಾಡಿದರೂ ಎಲ್ಲರ ಮುಂದೆ ಅವಮಾನ ಮಾಡುವುದು ಸರಿಯಲ್ಲ. ಅವರು ಸದಾ ನನ್ನನ್ನು ಬೇರೆ ನಟಿಯರ ಜೊತೆ ಹೋಲಿಕೆ ಮಾಡುತ್ತಿದ್ದರು.

Read Full Story

07:36 PM (IST) Jan 31

ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್

ಅಕ್ರಮ ನಡೆಸಿತ್ತಾ ಕಾನ್ಫಿಡೆಂಟ್ ಗ್ರೂಪ್? ಸಿಜೆ ರಾಯ್ ಸಾವಿನಿಂದ ಮೃತ ಅಧಿಕಾರಿ ಡಿಕೆ ರವಿ ಹೇಳಿಕೆ ವೈರಲ್ ಆಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಅಕ್ರಮ ಪತ್ತೆ ಹಚ್ಚಿದ ಕಾರಣಕ್ಕೆ ದಕ್ಷ ಅಧಿಕಾರಿ ವರ್ಗಾವಣೆ ಶಿಕ್ಷೆಗೆ ಒಳಗಾಗಿದ್ರಾ?

Read Full Story

07:13 PM (IST) Jan 31

ಜನ ಕಸ ಹಾಕುವುದನ್ನು ತಪ್ಪಿಸಲು ರಂಗೋಲಿ ಮೊರೆ ಹೋದ ಪಾಲಿಕೆಯ ಸಿಬ್ಬಂದಿ!

ಬಳ್ಳಾರಿ ಮಹಾನಗರ ಪಾಲಿಕೆಯು ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಡೆಯಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ತುಂಬಿದ ಜಾಗಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ಬಣ್ಣಬಣ್ಣದ ರಂಗೋಲಿ ಬಿಡಿಸಿ "ಇಲ್ಲಿ ಕಸ ಹಾಕಬಾರದು" ಎಂದು ಬರೆಯುವ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ.  

Read Full Story

06:42 PM (IST) Jan 31

ಮೊಳಕೇರಾ ನಿಗೂಢ ಸ್ಫೋಟದ ಹಿಂದೆ ಸಂಚು? ಶಾಸಕ ಸಿದ್ದು ಪಾಟೀಲ್ ಸ್ಥಳಕ್ಕೆ ಭೇಟಿ, ಹೇಳಿದ್ದೇನು?

ಬೀದರ್ ಜಿಲ್ಲೆಯ ಮೊಳಕೇರಾ ಗ್ರಾಮದಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಶಾಸಕ ಸಿದ್ದು ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಳೆದ ಆರು ತಿಂಗಳಲ್ಲಿ ಇದು ಐದನೇ ಸ್ಫೋಟವಾಗಿದ್ದು, ಘಟನೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

06:16 PM (IST) Jan 31

ರಾಯಚೂರು - ಕರೆಂಟ್ ಶಾಕ್‌ಗೆ ವಿದ್ಯಾರ್ಥಿನಿ ಸಾವು ಪ್ರಕರಣ; ಡಿಸಿ ನಿತೀಶ್ ಕೆ. ಗರಂ, ಸಂಜೆಯೊಳಗೆ ವರದಿ ನೀಡಲು ಡೆಡ್‌ಲೈನ್!

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರಕುಂದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯುತ್ ಪ್ರವಹಿಸಿ 11 ವರ್ಷದ ತನುಶ್ರೀ ಎಂಬ ವಿದ್ಯಾರ್ಥಿನಿ ದಾರುಣವಾಗಿ ಮೃತಪಟ್ಟಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ.

Read Full Story

06:10 PM (IST) Jan 31

ಕರ್ಮ ಅನುಭವಿಸಲೇಬೇಕು - CJ Roy ನಿಧನಕ್ಕೆ Bigg Boss ಭುವನ್​ ಪೊನ್ನಣ್ಣ ಹೀಗೊಂದು ಪೋಸ್ಟ್​!

ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಬಿಗ್ ಬಾಸ್ ಪ್ರಾಯೋಜಕರಾಗಿದ್ದ ಸಿ.ಜಿ.ರಾಯ್ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿಯಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಸಾವಿಗೆ ನಟ ಭುವನ್ ಪೊನ್ನಣ್ಣ ಕರ್ಮದ ಬಗ್ಗೆ ಮಾತನಾಡುತ್ತಾ ಕಂಬನಿ ಮಿಡಿದಿದ್ದಾರೆ.

Read Full Story

05:24 PM (IST) Jan 31

ಕೊಟ್ಟ ಮಾತಿಗೆ ತಪ್ಪಿದ Bigg Boss ಗಿಲ್ಲಿ ನಟ? ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಕೆಂಡಾಮಂಡಲ

ಬಿಗ್​ಬಾಸ್​ 12 ವಿನ್ನರ್​ ಗಿಲ್ಲಿ ನಟ, ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ, ತನ್ನ ಟ್ಯಾಟೂ ಹಾಕಿಸಿಕೊಂಡಿದ್ದ ಅಭಿಮಾನಿಗೆ ನೀಡಿದ್ದ ಭೇಟಿಯ ಮಾತನ್ನು ಮರೆತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೊಂದ ಅಭಿಮಾನಿ, ಸಂದರ್ಶನವೊಂದರಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
Read Full Story

05:24 PM (IST) Jan 31

'ಮೈಸೂರಿನ ಕೋತಿ ಈಗ ಯಾಕೆ ಬಾಯಿ ಬಿಡ್ತಿಲ್ಲ?' - ಸಿಜೆ ರಾಯ್ ಸಾವು ಪ್ರಕರಣದಲ್ಲಿ ಪ್ರದೀಪ್ ಈಶ್ವರ್ ಕಿಡಿ!

Pradeep Eshwar Questions BJP over CJ Roy's Death & IT Harassment ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಹಣಕ್ಕಾಗಿ ಕಿರುಕುಳ ನೀಡಿದೆ ಎಂದು ಆರೋಪಿಸಿ ಎಸ್‌ಐಟಿ ತನಿಖೆಗೆ ಆಗ್ರಹಿಸಿದ್ದಾರೆ. 

Read Full Story

05:23 PM (IST) Jan 31

ಅಡಕೆ ಕ್ಯಾನ್ಸರ್‌ಕಾರಕ ಪಟ್ಟಿಗೆ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ!

ವಿಶ್ವ ಆರೋಗ್ಯ ಸಂಸ್ಥೆಯ ವೆಬಿನಾರ್‌ನಲ್ಲಿ ಅಡಕೆಯನ್ನು ಕ್ಯಾನ್ಸರ್‌ಕಾರಕ ಎಂದು ಪರಿಗಣಿಸಿ ನಿಷೇಧಿಸುವ ಬಗ್ಗೆ ಚರ್ಚಿಸಲಾಗಿದೆ. ಆದರೆ,ಭಾರತೀಯ ತಜ್ಞರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು,ಅಡಕೆಯ ಆಯುರ್ವೇದ ಬಳಕೆ, ಆರ್ಥಿಕ ಅವಲಂಬನೆ ಮತ್ತು ಹೆಚ್ಚಿನ ವೈಜ್ಞಾನಿಕ ಅಧ್ಯಯನದ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

Read Full Story

05:20 PM (IST) Jan 31

ಸಿಜೆ ರಾಯ್ ದುರಂತ ಸಾವು ಪ್ರಕರಣ, ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ರಚಿಸಿದ ಗೃಹ ಸಚಿವ

ಸಿಜೆ ರಾಯ್ ದುರಂತ ಸಾವು ಪ್ರಕರಣ, ಉನ್ನತ ಮಟ್ಟದ ತನಿಖೆಗೆ ಎಸ್ಐಟಿ ರಚಿಸಿದ ಗೃಹ ಸಚಿವ , ಒಂದಡೆ ಅನುಮಾನಗಳು ಹೆಚ್ಚಾಗುತ್ತಿದ್ದರೆ, ಮತ್ತೊಂದೆಡ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಎಸ್ಐಟಿ ರಚಿಸಲಾಗಿದೆ.

Read Full Story

05:17 PM (IST) Jan 31

ಬಿಗ್‌ಬಾಸ್‌ ಮನೆಗೆ ಹೋಗಲು ಗಿಲ್ಲಿ ನಟ ಖರ್ಚು ಮಾಡಿದ್ದೆಷ್ಟು? ಕೊನೆಗೂ ಬಯಲಾಯ್ತು ಆ ಸೀಕ್ರೇಟ್‌!

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ, ಕೇವಲ 10 ಸಾವಿರ ರೂಪಾಯಿ ಖರ್ಚು ಮಾಡಿ ಮನೆಗೆ ಪ್ರವೇಶಿಸಿದ್ದರು. ಇತರ ಸ್ಪರ್ಧಿಗಳು ಲಕ್ಷಾಂತರ ರೂಪಾಯಿ ಶಾಪಿಂಗ್ ಮಾಡಿದ್ದರೂ, ಗಿಲ್ಲಿ ತನ್ನ ಸರಳತೆಯಿಂದಲೇ ಆಟವಾಡಿ 60 ಲಕ್ಷ ನಗದು ಹಾಗೂ ಕಾರನ್ನು ಗೆದ್ದು ಕೋಟ್ಯಾಧಿಪತಿಯಾಗಿದ್ದಾರೆ.  

Read Full Story

05:14 PM (IST) Jan 31

ಕೊಟ್ಟೂರು ಮೂವರ ಕೊಲೆ ಪ್ರಕರಣ - ಬೆಂಗಳೂರಿಗೆ ಬಂದು 'ಮಿಸ್ಸಿಂಗ್' ಕತೆ ಕಟ್ಟಿದ್ದ ಪಾಪಿ, ಪೊಲೀಸರ ಏಟಿಗೆ ಬಾಯ್ಬಿಟ್ಟ ಹಂತಕ!

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ, ಹಣದ ಆಸೆಗಾಗಿ ಅಕ್ಷಯ್ ಎಂಬ ಯುವಕ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಸಾಕ್ಷ್ಯ ನಾಶಪಡಿಸಲು ಶವಗಳನ್ನು ಮನೆಯಲ್ಲೇ ಹೂತುಹಾಕಿ, ಬೆಂಗಳೂರಿನಲ್ಲಿ ಸುಳ್ಳು ದೂರು ನೀಡಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾನೆ.
Read Full Story

05:09 PM (IST) Jan 31

Karna Serial ತೇಜಸ್‌ ಬಾವ, ಯಾಕೆ ಹೀಗೆ ಮಾಡಿದ್ರಿ? ಸಿಕ್ಕಾಪಟ್ಟೆ ಕೆಂಡಾಮಂಡಲರಾದ ವೀಕ್ಷಕರು!

Karna Serial Tejas: ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಪಾತ್ರದಲ್ಲಿ ಚೇತನ್‌ ರಾಜ್‌ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಿತ್ಯಾ ಜೊತೆ ಪ್ರೀತಿಯಲ್ಲಿದ್ದ ತೇಜಸ್‌, ಅವಳನ್ನು ಗರ್ಭಿಣಿ ಮಾಡುತ್ತಾನೆ. ಆ ಬಳಿಕ ಯಾರದ್ದೋ ಮಾತು ಕೇಳಿ ಅವಳ ಕ್ಯಾರೆಕ್ಟರ್‌ ಬಗ್ಗೆ ಅನುಮಾನ ಪಡುತ್ತಾನೆ.

 

Read Full Story

04:55 PM (IST) Jan 31

ಅಮೆಜಾನ್ ಬೆನ್ನಲ್ಲೇ ಶಾಕ್ ಕೊಟ್ಟ ಓಲಾ ಎಲೆಕ್ಟ್ರಿಕ್, 620 ಉದ್ಯೋಗಿಗಳ ಕಡಿತಕ್ಕೆ ಮುಂದಾದ ಸಿಇಒ

ಅಮೆಜಾನ್ ಬೆನ್ನಲ್ಲೇ ಶಾಕ್ ಕೊಟ್ಟ ಓಲಾ ಎಲೆಕ್ಟ್ರಿಕ್, ಈಗಾಗಲೇ ಅಮೆಜಾನ್ ಉದ್ಯೋಗ ಕಡಿತ ಆರಂಭಿಸಿದೆ. ಇದರ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಶೇಕಡಾ 5ರಷ್ಟು ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ.

Read Full Story

04:54 PM (IST) Jan 31

ಜೈಲು ಅಕ್ರಮ ತಡೆಯಲು ಸೆಂಟ್ರಲ್ ಕಮಾಂಡ್ ಸೆಂಟರ್, ಬೆಂಗಳೂರಿನಿಂದಲೇ ಕಂಟ್ರೋಲ್!

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯದ ಜೈಲುಗಳಲ್ಲಿನ ಅಕ್ರಮಗಳನ್ನು ತಡೆಯಲು ಅತ್ಯಾಧುನಿಕ ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದರು. ಈ ಕೇಂದ್ರದ ಮೂಲಕ 8 ಕೇಂದ್ರ ಹಾಗೂ 4 ಜಿಲ್ಲಾ ಕಾರಾಗೃಹಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಬೆಂಗಳೂರಿನಿಂದಲೇ ನೇರವಾಗಿ ಮೇಲ್ವಿಚಾರಣೆ ನಡೆಸಬಹುದು.

Read Full Story

04:47 PM (IST) Jan 31

Bhagyalakshmi serial ಸುಷ್ಮಾ ರಾವ್‌ ಪತಿ ಯಾರು? ಮಾತು ತಪ್ಪಿದ ಗಂಡನನ್ನು ತರಾಟೆಗೆ ತಗೊಂಡ ನಟಿ!

Bhagyalakshmi Kannada Serial Actress Sushma K Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಆಗಿ ಎಲ್ಲರ ಮನಸ್ಸು ಗೆದ್ದಿರುವ ನಟಿ ಸುಷ್ಮಾ ಕೆ ರಾವ್‌ ಅವರು ಚಿತ್ರರಂಗಕ್ಕೆ ಬಂದು 25 ವರ್ಷಗಳು ಆಗಿವೆ. ಈ ಖುಷಿಯನ್ನು ಕಲರ್ಸ್‌ ಕನ್ನಡ ವಾಹಿನಿಯು ಅನುಬಂಧ ವೇದಿಕೆಯಲ್ಲಿ ಸಂಭ್ರಮಿಸಿದೆ.

 

Read Full Story

04:20 PM (IST) Jan 31

Bigg Boss ಬಳಿಕ ಮೊದಲ ವ್ಲಾಗ್​ನಲ್ಲೇ ಫ್ಯಾನ್ಸ್​ಗೆ ಭರ್ಜರಿ ಆಫರ್​ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ

ಬಿಗ್​ಬಾಸ್​ 12ರ ರನ್ನರ್​ ಅಪ್​ ರಕ್ಷಿತಾ ಶೆಟ್ಟಿ, ಶೋ ನಂತರ ಮತ್ತೆ ತಮ್ಮ ವ್ಲಾಗಿಂಗ್​ ಆರಂಭಿಸಿದ್ದಾರೆ. ತಮ್ಮ ಮೊದಲ ವ್ಲಾಗ್ ಅನ್ನು ಅಭಿಮಾನಿಗಳಿಗೆ ಅರ್ಪಿಸಿದ್ದು, ಬಿಗ್​ಬಾಸ್​ ಕುರಿತ ಯಾವುದೇ ಪ್ರಶ್ನೆಗಳನ್ನು ಕೇಳುವಂತೆ ಆಹ್ವಾನಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೇ ಪ್ರಶ್ನೆ ಹರಿದುಬಂದಿದೆ.

Read Full Story

04:17 PM (IST) Jan 31

ಕೆಆರ್ ಪುರ-ಹೊಸಕೋಟೆ - 16 ಕಿ ಮೀ ಡಬಲ್ ಡೆಕ್ಕರ್ ಮೆಟ್ರೋ ಯುಗ ಆರಂಭಕ್ಕೆ ಕಾರ್ಯಸಾಧ್ಯತಾ ಅಧ್ಯಯನ ಆರಂಭ

ಬೆಂಗಳೂರು ಮೆಟ್ರೋ ನಿಗಮವು ಕೆಆರ್ ಪುರದಿಂದ ಹೊಸಕೋಟೆವರೆಗೆ 16 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ ನಿರ್ಮಾಣದ ಸಾಧ್ಯತಾ ಅಧ್ಯಯನ ನಡೆಸುತ್ತಿದೆ. ಪರ್ಪಲ್ ಲೈನ್‌ನ ಈ ವಿಸ್ತರಣೆಯು ಹೊಸಕೋಟೆ ನಿವಾಸಿಗಳ ನಗರ ಪ್ರಯಾಣವನ್ನು ಸುಗಮಗೊಳಿಸುವ ನಿರೀಕ್ಷೆಯಿದೆ. 

Read Full Story

04:16 PM (IST) Jan 31

ಭಾಸ್ಕರ ಹೆಗಡೆ ನೆನಪು - ಎಚ್‌ಡಿಕೆ-ಬಿಎಸ್‌ವೈ ಧರ್ಮಸ್ಥಳ ಆಣೆ-ಪ್ರಮಾಣ - ಅಂದು ಧರ್ಮಕ್ಷೇತ್ರದಲ್ಲಿ ಆಗಿದ್ದೇನು?

Bhaskar Hegde Recalls HDK-BSY Dharmasthala Vow Incident ಧರ್ಮಸ್ಥಳ ಎಸ್‌ಡಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಅವರ ನಿವೃತ್ತಿ ಸಮಾರಂಭದಲ್ಲಿ ಹಂಚಿಕೊಂಡ ಎಚ್‌ಡಿಕೆ-ಬಿಎಸ್‌ವೈ ಆಣೆ ಪ್ರಮಾಣದ ಆ ರೋಚಕ ನೆನಪುಗಳು.

 

Read Full Story

04:08 PM (IST) Jan 31

Bhagyalakshmi Serial - ಕೊನೆಗೂ ದಿಗ್ಭ್ರಮೆ ಆಗುವಂತ ಘbhagyalakshmi kannada serial episode updateಟನೆ ನಡೀತು; ವೀಕ್ಷಕರಿಗೆ ಹೇಳಲಾರದಷ್ಟು ಬೇಸರ!

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ಅದ್ಭುತವೊಂದು ನಡೆದಿದೆ. ಹೌದು, ಇಷ್ಟು ವರ್ಷಗಳ ಕಾಲ ತಾನು ಮಾಡಿದ್ದು ತಪ್ಪು, ಶ್ರೇಷ್ಠ ಸರಿಯಿಲ್ಲ ಎಂದು ತಾಂಡವ್‌ಗೆ ಅರ್ಥ ಆಗಿದೆ, ಆದರೆ ಕಾಲ ಮಿಂಚಿ ಹೋಗಿದೆ.

 

Read Full Story

04:08 PM (IST) Jan 31

ಕಿಚ್ಚನಿಗೆ ಕೆಟ್ಟ ಪದ ಕಲಿಸಿದ್ದೇ ಪ್ರೇಮ್​​ ಅಂತೆ! ದಚ್ಚು-ಕಿಚ್ಚನ ಮಧ್ಯೆ ಸಿಲುಕಿ ಪ್ರೇಮ್ ವಿಲವಿಲ!

ನಟ ದರ್ಶನ್ ಈ ಹಿಂದೆ ನಿರ್ದೇಶಕ ಪ್ರೇಮ್ ಅವರನ್ನು 'ಪುಡಾಂಗ್' ಎಂದು ಕರೆದಿದ್ದರು. ಈಗ ನಟ ಸುದೀಪ್ ಕೂಡ ಸಿಸಿಎಲ್ ಪಂದ್ಯದ ವೈರಲ್ ವಿಡಿಯೋಗೆ ಪ್ರೇಮ್ ಅವರೇ ಗುರು ಎಂದು ತಮಾಷೆ ಮಾಡಿದ್ದಾರೆ.  

Read Full Story

03:23 PM (IST) Jan 31

ಚಿನ್ನದ ಬೆಲೆ ಇಳಿಯುತ್ತಿದೆ ಅಂತ ಖರೀದಿಸುತ್ತಿದ್ದೀರಾ? ಒಂದು ನಿಮಿಷ, ಇಲ್ಲಿದೆ ನೋಡಿ ಮತ್ತೊಂದು ಗುಡ್‌ ನ್ಯೂಸ್!

ಬಹಳ ದಿನಗಳ ನಂತರ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ಇಳಿಯಲು ಆರಂಭಿಸಿದೆ. ಆದರೆ, ಈ ಬೆಲೆಗಳು ಮತ್ತಷ್ಟು ಇಳಿಯಲಿವೆಯೇ? ತಜ್ಞರು ಏನು ಹೇಳುತ್ತಾರೆ ಗೊತ್ತಾ?

 

Read Full Story

03:09 PM (IST) Jan 31

ಬೆಂಗಳೂರು ಉದ್ಯಮಿ ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್? ಸ್ಫೋಟಕ ತಿರುವು

ಬೆಂಗಳೂರು ಉದ್ಯಮಿ ಸಿಜೆ ರಾಯ್ ಸಾವಿಗಿದೆಯಾ ಕೇರಳ ಎಲೆಕ್ಷನ್ ಲಿಂಕ್? ಸ್ಫೋಟಕ ತಿರುವು? ಐಟಿ ಅಧಿಕಾರಿಗಳು ಕಳೆದ ಒಂದು ತಿಂಗಳಿನಿಂದ ಸಿಜೆ ರಾಯ್ ಪ್ರತಿ ಟ್ರಾನ್ಸಾಕ್ಷನ್ ಮೇಲೆ ಕಣ್ಣಿಟ್ಟಿದ್ದರು. ದಾಳಿ ವೇಳೆ ಪತ್ತೆಯಾಗಿರುವ ದಾಖಲೆಗಳು ಕೆಲ ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ.

 

Read Full Story

03:03 PM (IST) Jan 31

ಉದ್ಯಮಿ ಸಿ ಜೆ ರಾಯ್ ವಿರುದ್ಧ ಐಟಿ ಅಧಿಕಾರಿಗಳು ಯಾವ ವಿಚಾರಕ್ಕೆ ಹಿಂದೆ ಬಿದ್ರು? ಅವರ ಮೇಲಿನ ಆರೋಪ ಏನು ಗೊತ್ತಾ?

ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಹಿಂದೆ ಆದಾಯ ತೆರಿಗೆ ಇಲಾಖೆಯ ತನಿಖೆ ಇರುವುದು ಬೆಳಕಿಗೆ ಬಂದಿದೆ. ಕೇರಳದಲ್ಲಿ 156ಕ್ಕೂ ಹೆಚ್ಚು ನಿವೇಶನಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿ, ನಗದು ರೂಪದಲ್ಲಿ ಹಣ ಪಡೆದಿದ್ದಾರೆಂಬ ಆರೋಪವಿದೆ.

Read Full Story

02:47 PM (IST) Jan 31

ಮೂವರು ತೆಲುಗು ನಟಿಯರು ಸಿಜೆ ರಾಯ್‌ನ ಹನಿಟ್ರ್ಯಾಪ್‌ ಮಾಡಲು ಪ್ರಯತ್ನ ಮಾಡಿದ್ರು - ಸ್ಫೋಟಕ ಹೇಳಿಕೆ ನೀಡಿದ ಚಂದ್ರಚೂಡ್‌

ಖ್ಯಾತ ಉದ್ಯಮಿ ಸಿ.ಜೆ. ರಾಯ್ ಅವರ ಸಾವು ಆತ್ಮ*ತ್ಯೆಯಲ್ಲ, ಇದೊಂದು ವ್ಯವಸ್ಥಿತ ಕೊ*ಲೆ ಎಂದು ಅವರ ಆಪ್ತ ಸ್ನೇಹಿತ ಚಕ್ರವರ್ತಿ ಚಂದ್ರಚೂಡ್ ಆರೋಪಿಸಿದ್ದಾರೆ. ರಾಯ್ ಅವರು ಕಾಂಗ್ರೆಸ್‌ಗೆ ಫಂಡಿಂಗ್ ಮಾಡುತ್ತಿದ್ದ ಕಾರಣ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಈ ಘಟನೆ ಆಗಿದೆ ಎಂದಿದ್ದಾರೆ.

Read Full Story

02:38 PM (IST) Jan 31

ಹುಬ್ಬಳ್ಳಿ - ಹೆಂಡತಿ ಇಲ್ಲವೆಂದು ಕುಡಿದ ಮತ್ತಿನಲ್ಲಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡ ಭೂಪ! ಆಸ್ಪತ್ರೆಯಲ್ಲಿ ನರಳಾಟ

ಹುಬ್ಬಳ್ಳಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಸಾಯಲು ಯತ್ನಿಸಿದ್ದಾನೆ. ಈ ಘಟನೆಯಲ್ಲಿ ಶೇ. 70ರಷ್ಟು ಸುಟ್ಟಗಾಯಗಳಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read Full Story

02:17 PM (IST) Jan 31

Annayya - ದೂರ ದೂರದವರೆಲ್ಲಾ ಬಂದ್ರು, ಮನೆಯವರೇ ಮಿಸ್ ಆಗಿದ್ದಕ್ಕೆ ನೊಂದಕೊಂಡ ವೀಕ್ಷಕರು!

ಅಣ್ಣಯ್ಯ ಸೀರಿಯಲ್‌ನಲ್ಲಿ ಮಾಕಾಳವ್ವನ ಪವಾಡದಿಂದಾಗಿ ಶಿವು, ತಾನು ದ್ವೇಷಿಸುವ ತಾಯಿ ಶಾರದಮ್ಮಳನ್ನು ಮನೆಗೆ ಕರೆತಂದಿದ್ದಾನೆ. ರತ್ನಾ ನಿಶ್ಚಿತಾರ್ಥದ ಸಂಭ್ರಮದ ನಡುವೆ, ತಂಗಿ ರಮ್ಯಾ ಕಾಣದಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದ್ದು, ತಾಯಿ-ಮಕ್ಕಳ ನಡುವಿನ ಸಂಘರ್ಷ ಕಥೆಗೆ ಹೊಸ ತಿರುವು ನೀಡಿದೆ.

Read Full Story

02:14 PM (IST) Jan 31

ನಗರ ಸಾರಿಗೆ ಬಗ್ಗೆ ಉದ್ಯಮಿ ಮೋಹನ್‌ದಾಸ್ ಪೈ, ರಾಮಲಿಂಗಾ ರೆಡ್ಡಿ ವಾರ್! ಬಹಿರಂಗ ಚರ್ಚೆಗೆ ಸಚಿವರ ಆಹ್ವಾನ

ಬೆಂಗಳೂರು ಸಾರಿಗೆ ವ್ಯವಸ್ಥೆ ಕುರಿತು ಉದ್ಯಮಿ ಮೋಹನ್‌ದಾಸ್‌ ಪೈ ಅವರ ಟೀಕೆಗೆ ಪ್ರತಿಯಾಗಿ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖಾಮುಖಿ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಸೇವೆಯಾಗಿ ಪರಿಗಣಿಸುವುದಾಗಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Read Full Story

01:39 PM (IST) Jan 31

ಜಾಗತಿಕ ಸವಾಲುಗಳ ನಡುವೆ ಅಭಿವೃದ್ಧಿ ಬಜೆಟ್‌ ನಿರೀಕ್ಷೆ

ಭಾನುವಾರವಾದರೂ ಈ ಸಲ ಬಜೆಟ್‌ ಫೆ.1ರಂದು ಮಂಡನೆ ಆಗುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ, ಟ್ರಂಪ್‌ ಉಪಟಳದ ನಡುವೆ ಬಜೆಟ್‌ಗೆ ದೇಶ ಸಾಕ್ಷಿಯಾಗುತ್ತಿದೆ. ಜನರ ಚಿತ್ತ ಆಯವ್ಯಯ ಮಂಡನೆಯತ್ತ ನೆಟ್ಟಿದೆ

Read Full Story

01:38 PM (IST) Jan 31

ಮೈಸೂರು ಡ್ರಗ್ಸ್ ತಯಾರಿಕೆಗೆ ‘ಸೇಫ್ ಜೋನ್’ ಆಗುತ್ತಿದೆಯೇ? ಯಾಂದಹಳ್ಳಿ ಬಳಿ ದಂಪತಿಯ ಘಟಕ ಪತ್ತೆ!

ಮೈಸೂರು ತಾಲೂಕಿನ ಯಾಂದಹಳ್ಳಿ ಗ್ರಾಮದ ಬಳಿ ಪೊಲೀಸರು ಮತ್ತೊಂದು ಡ್ರಗ್ಸ್ ತಯಾರಿಕಾ ಘಟಕವನ್ನು ಪತ್ತೆಹಚ್ಚಿದ್ದಾರೆ. ಉತ್ತರ ಭಾರತದ ಮೂಲದ ದಂಪತಿಗಳು ಬಾಡಿಗೆ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಸುತ್ತಿದ್ದು, ಪೊಲೀಸರು ದಾಳಿ ನಡೆಸುವ ಮುನ್ನವೇ ಪರಾರಿಯಾಗಿದ್ದಾರೆ.

Read Full Story

01:31 PM (IST) Jan 31

ವನ್ಯಜೀವಿ ಸಂಘರ್ಷ ತಡೆಗೆ ಕೃಷಿ ಪ್ರವಾಸೋದ್ಯಮ ಆಸರೆ!

ಪ್ರವಾಸೋದ್ಯಮ ಕ್ಷೇತ್ರ ಬೆಳೆದಂತೆಲ್ಲ ಹೆಚ್ಚಿನ ಜನರು ಕಾಡಿನ ಮೇಲೆ ವ್ಯಾಮೋಹ ಬೆಳೆಸಿಕೊಳ್ಳುತ್ತಿದ್ದು, ಇದರಿಂದಾಗಿ ಕಾಡು ಪ್ರಾಣಿಗಳು ನಿತ್ಯವೂ ಒಂದಲ್ಲ ಒಂದು ಕಡೆ ಊರಿನತ್ತ ಮುಖ ಮಾಡುತ್ತಿವೆ.

Read Full Story

01:04 PM (IST) Jan 31

ಚಿತ್ರದುರ್ಗದ ಮುರುಘಾಶ್ರೀ ಸುತ್ತ ಮತ್ತೊಂದು ವಿವಾದದ ಹುತ್ತ! ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ

ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾಗಿರುವ ಮುರುಘಾಶ್ರೀ ವಿರುದ್ಧ ಇದೀಗ ಹೊಸ ಕಾನೂನು ಸಂಕಷ್ಟ ಎದುರಾಗಿದೆ. ನ್ಯಾಯಾಲಯದ ನಿರ್ಬಂಧದ ನಡುವೆಯೂ ಮಠಕ್ಕೆ ಸೇರಿದ ನಾಲ್ಕು ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ, ಮಠದ ಆಡಳಿತ ಸಮಿತಿಯು ಹೊಸದುರ್ಗ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
Read Full Story

More Trending News