LIVE NOW
Published : Dec 30, 2025, 06:46 AM ISTUpdated : Dec 30, 2025, 09:12 AM IST

Karnataka News Live: ಬಿಜೆಪಿ ಜೊತೆಗಿನ ಮೈತ್ರಿಗೆ ಬಿಗ್ ಟ್ವಿಸ್ಟ್ ಕೊಟ್ಟು ಹಾಸನದಲ್ಲಿ ರಣಕಹಳೆ ಮೊಳಗಿಸಿದ ಹೆಚ್‌ಡಿಡಿ

ಸಾರಾಂಶ

ಕೊಪ್ಪಳ: ಡಿಸಿಎಂ ಡಿಕೆಶಿ ಅವರು ಸಿಎಂ ಆಗುವುದು ಖಚಿತ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂದು ಶಾಸಕ ಗಾಲಿ ಜನಾರ್ದನ ರಡ್ಡಿ ಹೇಳಿದ್ದಾರೆ. ತಾಲೂಕಿನ ಮುನಿರಾಬಾದನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಂಡೂರ ಉಪಚುನಾವಣೆಯಿಂದ ಈವರೆಗೂ ಇದೇ ಮಾತನ್ನೇ ಹೇಳುತ್ತಿದ್ದೇನೆ. ಸಿದ್ದು-ಡಿಕೆ ನಡುವೆ 50:50 ಅಧಿಕಾರ ಹಂಚಿಕೆಯಾಗಿದೆ. ಸಂಕ್ರಮಣ ನಂತರ ಒಳ್ಳೆ ದಿನ, ಒಳ್ಳೆ ಮುಹೂರ್ತ ನೋಡಿಕೊಂಡು ತೀರ್ಮಾನ ಮಾಡಬಹುದು. ನಮಗೂ ಕೆಲವು ಅವರ ಆಂತರಿಕ ವಿಚಾರ ಗೊತ್ತಾಗುತ್ತವೆ ಎಂದರು.

HD Devegowda

09:12 AM (IST) Dec 30

ಬಿಜೆಪಿ ಜೊತೆಗಿನ ಮೈತ್ರಿಗೆ ಬಿಗ್ ಟ್ವಿಸ್ಟ್ ಕೊಟ್ಟು ಹಾಸನದಲ್ಲಿ ರಣಕಹಳೆ ಮೊಳಗಿಸಿದ ಹೆಚ್‌ಡಿಡಿ

ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಎಚ್‌.ಡಿ.ದೇವೇಗೌಡ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ಗೆ ಪ್ರತಿಯಾಗಿ ಜನವರಿ 24 ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

Read Full Story

08:52 AM (IST) Dec 30

ಧರ್ಮಸ್ಥಳ ಬುರುಡೆ ಕೇಸ್‌ - ಜ.3ಕ್ಕೆ ತೀರ್ಪು ಮುಂದೂಡಿಕೆ

ಧರ್ಮಸ್ಥಳ ಬುರುಡೆ ಪ್ರಕರಣದ ತೀರ್ಪನ್ನು ಬೆಳ್ತಂಗಡಿ ನ್ಯಾಯಾಲಯವು ಜ.3ಕ್ಕೆ ಮುಂದೂಡಿದೆ. ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು, ತೀರ್ಪನ್ನು ಜನವರಿ 3ಕ್ಕೆ ಮುಂದೂಡಿದರು.

Read Full Story

08:42 AM (IST) Dec 30

ನೇಣಿಗೆ ಕೊರಳೊಡ್ಡಿದ ಪತ್ನಿ, ವಿಷ ಸೇವಿಸಿದ ಗಂಡ; ಪ್ರೀತಿಸಿ ಮದ್ವೆಯಾದ ಜೋಡಿ ಬಾಳಲ್ಲಿ ದುರಂತ

ಪತ್ನಿ ನೇಣುಬಿಗಿದು ಆತ್ಮ*ಹತ್ಯೆ ಮಾಡಿಕೊಂಡಿದ್ದಕ್ಕೆ ನೊಂದು ಪತಿ ಕೂಡ ವಿಷ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದಾನೆ. ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಯ ನಡುವೆ ಕೌಟುಂಬಿಕ ಕಲಹ ಉಂಟಾಗಿತ್ತು ಎಂದು ಹೇಳಲಾಗಿದ್ದು, ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

08:12 AM (IST) Dec 30

ಡಿಸಿಎಂ ಏನಾದ್ರು ಹೇಳಲಿ ಎಂದು ಸ್ಫೋಟಕ ಭವಿಷ್ಯವಾಣಿ ನುಡಿದ ಶಾಸಕ ಇಕ್ಬಾಲ್ ಹುಸೇನ್

ರಾಮನಗರ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್‌ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜನವರಿಯಲ್ಲಿ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಪುನರುಚ್ಚರಿಸಿದ್ದಾರೆ. ಇದು ಶರಣರು ಮತ್ತು ಶಕ್ತಿವಂತರು ಹೇಳಿದ ಮಾತು ಎಂದಿರುವ ಅವರು, ಈ ಹಿಂದೆ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ ಎಂದು ಹೇಳಿದ್ದಾರೆ.
Read Full Story

08:04 AM (IST) Dec 30

ಬೆಂಗಳೂರು - ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ - ವ್ಯವಸ್ಥೆಗೆ ಆಕ್ಷೇಪ

ಹೊಸ ವರ್ಷಾಚರಣೆ ವೇಳೆಯಲ್ಲಿ (ಡಿ.31 ರ ರಾತ್ರಿ) ಮದ್ಯ ಸೇವಿಸುವವರನ್ನು ಪೊಲೀಸ್ ವಾಹನದಲ್ಲಿ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

Read Full Story

07:47 AM (IST) Dec 30

Bigg Boss Kannada 12 - ಕಣ್ಣೀರಿಟ್ಟು ರಕ್ಷಿತಾ ಕೇಳಿದ ಪ್ರಶ್ನೆಗೆ ಬಿಗ್‌ಬಾಸ್/ ಸುದೀಪ್ ಉತ್ತರ ಕೊಡ್ತಾರಾ?

Rakshitha Shetty: ಬಿಗ್‌ಬಾಸ್ ಮನೆಯಿಂದ ಮಾಳು ನಿಪನಾಳ ಹೊರಬಂದಿದ್ದಕ್ಕೆ ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಕಣ್ಣೀರು ಹಾಕಿದ್ದಾರೆ. ತಮ್ಮ ಎಲಿಮಿನೇಷನ್‌ ಬಗ್ಗೆ ಮಾಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

07:44 AM (IST) Dec 30

Karna Serial - ಕರ್ಣ, ನಿತ್ಯಾಗೆ ಮಹಾ ಕುತಂತ್ರಿಗಳ ಸತ್ಯ ಗೊತ್ತಾಯ್ತು; ಇನ್ನಿದೆ ಅಸಲಿ ಹಬ್ಬ

Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಳನ್ನು ಕೊಲ್ಲಲು ಸಂಜಯ್‌ ಪ್ಲ್ಯಾನ್‌ ಮಾಡಿದ್ದನು. ಕೊನೆಗೂ ಕರ್ಣ ಬಂದು, ಅವಳನ್ನು ಕಾಪಾಡಿದ್ದಾನೆ. ಹೀಗಿರುವಾಗ ಆ ಮಗು ಬದುಕಲಿದೆಯಾ ಎಂಬ ಪ್ರಶ್ನೆ ಕಾಡಿದೆ. ಇನ್ನೊಂದು ಕಡೆ ಕರ್ಣ, ನಿತ್ಯಾಗೆ ಸತ್ಯದ ಅರಿವು ಆಗುವ ಸಮಯ ಬಂದಂತೆ ಕಾಣ್ತಿದೆ.

 

Read Full Story

07:06 AM (IST) Dec 30

BBK 12 - ರಕ್ಷಿತಾ ಶೆಟ್ಟಿ ದನಿ ಅಡಗಿಸುವಷ್ಟು, ರೊಚ್ಚಿಗೆದ್ದು ಕೂಗಾಡಿದ ಸ್ಪಂದನಾ ಸೋಮಣ್ಣ! ಎಲ್ಲಿಂದ ಈ ಎನರ್ಜಿ?

Bigg Boss Kannada Season 12 Episode: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋ ಗ್ರ್ಯಾಂಡ್‌ ಫಿನಾಲೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಸ್ಪಂದನಾ ಸೋಮಣ್ಣ ಅವರು ರೊಚ್ಚಿಗೆದ್ದು, ಕಾವ್ಯ ಶೈವ ವಿರುದ್ಧ ಜಗಳ ಆಡಿದ್ದಾರೆ. ಹಾಗಾದರೆ ಏನಾಯ್ತು?

 

Read Full Story

06:58 AM (IST) Dec 30

ಮಹಿಳೆಯರ ಜತೆ ಅನುಚಿತ ವರ್ತನೆ - ವಾರದ ಬಳಿಕವೂ ಬೀಳುತ್ತೆ ಕೇಸ್

ಹೊಸ ವರ್ಷಾಚರಣೆ ಸಂಭ್ರಮದ ವೇಳೆ ಮತ್ತಿನಲ್ಲಿ ಮಹಿಳೆಯರ ಜತೆ ಅನುಚಿತ ವರ್ತನೆ ತೋರುವ ಪುಂಡರೇ ಎಚ್ಚರ. ನಿಮ್ಮ ಮೇಲೆ ಸಿಸಿಟಿವಿ ಬಿಗಿ ಕಣ್ಗಾವಲಿದ್ದು, ಸಂಭ್ರಮ ಮುಗಿದು ವಾರದ ಬಳಿಕವು ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ...!

Read Full Story

More Trending News