ಬೆಂಗಳೂರು (ಜ.27): ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ಗಡಿ ಭಾಗವಾದ ಚೋರ್ಲಾ ಘಾಟ್ನಲ್ಲಿ ದರೋಡೆಯಾದ 400 ಕೋಟಿ ರೂಪಾಯಿ ಹಣ ಯಾರಿಗೆ ಸೇರಿದ್ದು ಅನ್ನೋ ವಿಚಾರ ರಾಜಕೀಯಕ್ಕೆ ತಿರುಗಿದೆ. ಈ ಹಣ ಕಾಂಗ್ರೆಸ್ನದ್ದು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ನೇರ ಆರೋಪ ಮಾಡಿದ್ದರೆ, ಕರ್ನಾಟಕದ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ರಾಜ್ಯ ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಇನ್ನು ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಸತೀಶ್ ಜಾರಕಿಹೊಳಿ ಆಧಾರ ಇಲ್ಲದೆ ಯಾವುದೇ ಆರೋಪ ಮಾಡಬೇಡಿ ಎಂದಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್ಲೈವ್ ಬ್ಲಾಗ್
04:31 AM (IST) Jan 28
ಅಮೆರಿಕ- ಚೀನಾ ನಡುವೆ ವ್ಯಾಪಾರ ಸಂಬಂಧ ಬಿಕ್ಕಟ್ಟು ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ವಿರುದ್ಧ ಕ್ಷಿಪ್ರಕ್ರಾಂತಿಗೆ ಯತ್ನ ನಡೆಸಿದ್ದರು ಎನ್ನಲಾದ ಅವರ ಬಲಗೈ ಬಂಟ, ಜನರಲ್ ಜಾಂಗ್ ಯೂಕ್ಸಿಯಾ ಅವರನ್ನು ಬಂಧಿಸಲಾಗಿದೆ.
10:47 PM (IST) Jan 27
ಬಿಗ್ ಬಾಸ್ನಿಂದ ಬದಲಾಯ್ತು ಮಲ್ಲಮ್ಮ ಅದೃಷ್ಠ, 12ನೇ ಆವೃತ್ತಿ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿ ಗಮನಸೆಳೆದ ಮಲ್ಮಮ್ಮಗೆ ಇದೀಗ ಅವಕಾಶಗಳ ಸುರಿಮಳೆಯಾಗಿದೆ. ಸಿನಿಮಾ, ಸೀರಿಯಲ್ ಆಫರ್ ಬಂದಿದೆ. ಇದೀಗ ಮಲ್ಲಮ್ಮ ಸಿನಿಮಾ ಒಪ್ಪಿಕೊಂಡಿದ್ದು, ಶೂಟಿಂಗ್ನಲ್ಲೂ ಪಾಲ್ಗೊಂಡಿದ್ದಾರೆ.
10:13 PM (IST) Jan 27
ಬಿಗ್ಬಾಸ್ ಸೀಸನ್ 12ರ ಬಳಿಕವೂ ಗಿಲ್ಲಿ ನಟನ ಹವಾ ಮುಂದುವರೆದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಇತರೆ ಸ್ಪರ್ಧಿಗಳಿಗಿಂತ ಭಿನ್ನವಾಗಿ, ಬಟ್ಟೆಗಾಗಿ ಖರ್ಚು ಮಾಡಿರುವ ಲೆಕ್ಕಾಚಾರವನ್ನು ಗಿಲ್ಲಿ ನಟ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದು ಕೇಳಿ ಫ್ಯಾನ್ಸ್ ಶಾಕ್!
09:10 PM (IST) Jan 27
ಬಿಳಿಕೂದಲನ್ನು ಮರೆಮಾಚಲು ಬಳಸುವ ಹೇರ್ ಡೈಗಳು ಕ್ಯಾನ್ಸರ್ನಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ವೇಳೆ, ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ವಯಸ್ಸಾದ ಪಾತ್ರಗಳನ್ನು ತೋರಿಸಲು ಕೇವಲ ಒಂದು ಎಳೆ ಬಿಳಿ ಕೂದಲನ್ನು ಬಳಸುವುದು ಹಾಸ್ಯಾಸ್ಪದವೆನಿಸಿದೆ.
09:02 PM (IST) Jan 27
ವಿಧಾನಸಭೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಬಿಗ್ಬಾಸ್ 11ರ ವಿನ್ನರ್ ಗಿಲ್ಲಿ ಅಲ್ಲ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ನಿಜವಾದ ವಿಜೇತರು ಎಂದು ವ್ಯಂಗ್ಯವಾಡಿದ್ದಾರೆ. ಅವರ ಈ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
08:02 PM (IST) Jan 27
ಬೆಂಗಳೂರಿನ ಸಿಗ್ನಲ್ ಇನ್ನು ಎಷ್ಟು ಹೊತ್ತಿದೆ? ಈಗ ಸ್ವದೇಶಿ ನ್ಯಾವಿಗೇಶನ್ ಆ್ಯಪ್ ಮ್ಯಾಪಲ್ಸ್ನಲ್ಲಿ ಲಭ್ಯ, ಗೂಗಲ್ ಮ್ಯಾಪ್ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಮ್ಯಾಪಲ್ಸ್ ಬೆಂಗಳೂರಿನ ಪ್ರತಿ ಸಿಗ್ನಲ್ ಬಿದ್ದಿದೆಯಾ, ತೆರೆದಿದಾಯ ಎಲ್ಲಾ ಮಾಹಿತಿ ನೀಡುತ್ತೆ.
07:39 PM (IST) Jan 27
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ, ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಸಕಾಲದಲ್ಲಿ ಆಂಬುಲೆನ್ಸ್ ಸಂಪರ್ಕಿಸಲು ಸಾಧ್ಯವಾಗದೆ, ತೀವ್ರ ಕಾಲುನೋವಿನಿಂದ ಬಳಲುತ್ತಿದ್ದ ಬಾಣಂತಿಯೊಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮಗು ಕಳೆದುಕೊಂಡಿದ್ದ ತಾಯಿಯೂ ಸಾವು ಕಂಡಿದ್ದಾರೆ.
07:27 PM (IST) Jan 27
ಬೆಂಗಳೂರಿನಲ್ಲಿ ಸೈಕಲ್ ಬಳಕೆಯನ್ನು ಉತ್ತೇಜಿಸಲು, ಬಿಎಂಆರ್ಸಿಎಲ್ ನಗರದ 9 ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಸೈಕಲ್ಗಳಿಗೆ ಉಚಿತ ಪಾರ್ಕಿಂಗ್ ಸೌಲಭ್ಯವನ್ನು ಘೋಷಿಸಿದೆ. ಈ ನಿರ್ಧಾರವನ್ನು ಸೈಕಲ್ ಸವಾರರು ಸ್ವಾಗತಿಸಿದ್ದರೂ, ಶುಲ್ಕ ಮನ್ನಾ ಜೊತೆಗೆ ಸುರಕ್ಷಿತ ಪಾರ್ಕಿಂಗ್ ಒದಗಿಸಲು ಮನವಿ ಮಾಡಿದ್ದಾರೆ.
07:20 PM (IST) Jan 27
ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಹುಚ್ಚುನಾಯಿಯೊಂದು ಮಕ್ಕಳು, ವೃದ್ಧರು ಸೇರಿದಂತೆ 15ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ನಾಯಿಯ ಹಾವಳಿಯಿಂದ ಆತಂಕಗೊಂಡ ಗ್ರಾಮಸ್ಥರು ಅಂತಿಮವಾಗಿ ಅದನ್ನು ಹೊಡೆದು ಕೊಂದಿದ್ದಾರೆ.
06:51 PM (IST) Jan 27
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
06:34 PM (IST) Jan 27
06:12 PM (IST) Jan 27
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು, ಜಿಲ್ಲೆಯಲ್ಲಿ ಹದಿನೈದಕ್ಕೂ ಹೆಚ್ಚು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಶೀಘ್ರದಲ್ಲೇ ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ.
05:49 PM (IST) Jan 27
05:47 PM (IST) Jan 27
'ಕಾಂತಾರ' ಖ್ಯಾತಿಯ ನಟ ರಿಷಬ್ ಶೆಟ್ಟಿ ತಮ್ಮ ಪತ್ನಿ ಪ್ರಗತಿ ಶೆಟ್ಟಿ ಅವರೊಂದಿಗೆ ಉಡುಪಿಯ ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 'ಕಾಂತಾರ' ಚಿತ್ರದ ಮುಹೂರ್ತ ನೆರವೇರಿದ್ದ ಇದೇ ದೇಗುಲದಲ್ಲಿ ಅವರು 'ಮೂಡು ಗಣಪತಿ' ಸೇವೆ ಸಲ್ಲಿಸಿದರು.
05:05 PM (IST) Jan 27
Bengaluru Software Employees: ಬೆಂಗಳೂರಿನ ಸಾಫ್ಟ್ವೇರ್ ಉದ್ಯೋಗಿ ಜೋಡಿಯೊಂದು ಟೀ ಕುಡಿಯಲು ಹೋದಾಗ ಕಳ್ಳತನ ಆಗಿದೆ. ಹೌದು, ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಈ ಘಟನೆ ನಡೆದಿದೆ. ಹಾಗಾದರೆ ಏನಾಯ್ತು?
05:02 PM (IST) Jan 27
04:49 PM (IST) Jan 27
ಮಂಡ್ಯದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ, ಚುನಾವಣಾ ಸೋಲು ತನಗೆ ಪರಿಪಕ್ವತೆ ಕಲಿಸಿದೆ. ಸ್ವ ಹಿತಾಸಕ್ತಿಗೆ ಹಲವು ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ, ಜೆಡಿಎಸ್ ಕಾರ್ಯಕರ್ತರಿಂದಲೇ ಕಟ್ಟಿದ ಪಕ್ಷವಾಗಿದ್ದು, ಮುಂಬರುವ ದಿನಗಳಲ್ಲಿ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
04:34 PM (IST) Jan 27
Wall Decoration Ideas: ಲಿವಿಂಗ್ ರೂಮ್ ಮನೆಯ ಗುರುತು. ದೊಡ್ಡ ಬದಲಾವಣೆ ಇಲ್ಲದೆ ಹೊಸ ಲುಕ್ ನೀಡಲು ವಾಲ್ಪೇಪರ್ ಸುಲಭ ಆಯ್ಕೆ. ಸೋಫಾ ಹಿಂದೆ ವಾಲ್ಪೇಪರ್ ಹಾಕಿದರೆ ರೂಮ್ ಸ್ಟೈಲಿಶ್, ಐಷಾರಾಮಿ ಮತ್ತು ಮಾಡರ್ನ್ ಆಗಿ ಕಾಣುತ್ತದೆ.
04:19 PM (IST) Jan 27
ಬಿಗ್ ಬಾಸ್ ಗೆದ್ದ ನಂತರ ಗಿಲ್ಲಿ ನಟನ ಜನಪ್ರಿಯತೆ ಹೆಚ್ಚಾಗಿದ್ದು, ಸ್ಯಾಂಡಲ್ವುಡ್ನಲ್ಲಿ ಹೊಸ ಹಾಸ್ಯನಟನಾಗಿ ಮಿಂಚುವ ನಿರೀಕ್ಷೆಗಳಿವೆ. ಹಾಸ್ಯನಟ ಚಿಕ್ಕಣ್ಣ ನಾಯಕನಾದ ನಂತರ ತೆರವಾದ ಸ್ಥಾನವನ್ನು ಗಿಲ್ಲಿ ತುಂಬಬಲ್ಲರೇ ಎಂಬ ಚರ್ಚೆ ಶುರುವಾಗಿದೆ.
04:11 PM (IST) Jan 27
South Indian celebrity Stars: ವೈಯಕ್ತಿಕ ಭಿನ್ನಾಭಿಪ್ರಾಯ, ವೃತ್ತಿ ಬದುಕಿನ ಗುರಿಗಳು, ಅನಿರೀಕ್ಷಿತ ಕಾರಣಗಳಿಂದ ಈ ಬ್ರೇಕಪ್ಗಳು ಆಗಿವೆ. ಎಷ್ಟೇ ಅದ್ಧೂರಿ ಎನಿಸಿದ ಸಂಬಂಧಗಳೂ ಮುರಿದು ಬೀಳಬಹುದು ಎಂಬುದಕ್ಕೆ ಉದಾಹರಣೆ. ನಿಶ್ಚಿತಾರ್ಥದ ನಂತರ ಬೇರೆಯಾದ ಆರು ದಕ್ಷಿಣ ಭಾರತದ ತಾರೆಯರ ಲಿಸ್ಟ್ ಇಲ್ಲಿದೆ.
03:55 PM (IST) Jan 27
Unlimited 5g Jio Plan: ರಿಲಯನ್ಸ್ ಜಿಯೋ ₹198ಕ್ಕೆ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಈ ಪ್ಲಾನ್ನಲ್ಲಿ ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ಕರೆಗಳು ಸಿಗುತ್ತವೆ. ಈ ಯೋಜನೆಯ ಪೂರ್ಣ ವಿವರಗಳನ್ನು ಇಲ್ಲಿ ನೋಡೋಣ.
03:41 PM (IST) Jan 27
ಡಿಕೆ ಶಿವಕುಮಾರ್ ಅವರು ಗಣೇಶ ಹಾಗೂ ತ್ರಿವರ್ಣ ಧ್ವಜದ ಚಿತ್ರವಿದ್ದ ರಂಗೋಲಿಯ ಮೇಲೆ ಶೂ ಧರಿಸಿ ನಡೆದ ವಿಡಿಯೋ ವೈರಲ್ ಆಗಿದೆ. ಇದನ್ನು ದಾಳವಾಗಿ ಬಳಸಿಕೊಂಡಿರುವ ಜೆಡಿಎಸ್, ಡಿಕೆಶಿ ಅವರಿಗೆ ದೇವರ ಮೇಲೆ ಭಕ್ತಿ, ರಾಷ್ಟ್ರಧ್ವಜದ ಮೇಲೆ ಗೌರವವಿಲ್ಲ ಎಂದು ಟೀಕಿಸಿ 'ಬೂಟಾಟಿಕೆ ಶೂರ' ಎಂದು ವ್ಯಂಗ್ಯವಾಡಿದೆ.
03:40 PM (IST) Jan 27
ಪ್ರೀತಿ ಎಲ್ಲರ ಜೀವನದಲ್ಲೂ ಒಂದೇ ರೀತಿ ಇರಲ್ಲ. ಕೆಲವು ಪ್ರೀತಿ ಹೊರಗಿನಿಂದ ನೋಡಲು ಚೆನ್ನಾಗಿ ಕಾಣಿಸುತ್ತವೆ. ಒಳಗೊಳಗೆ ಆತ್ಮವಿಶ್ವಾಸ, ಸ್ಥಿರತೆಯನ್ನು ಹಾಳುಮಾಡುತ್ತವೆ. ಅಂತಹ ಪ್ರೀತಿಯನ್ನೇ ಟಾಕ್ಸಿಕ್ ಲವ್ ಎನ್ನುತ್ತಾರೆ. ಅಸಲಿಗೆ ಟಾಕ್ಸಿಕ್ ಲವ್ ಹೇಗಿರುತ್ತೆ? ಅವರ ಬಗ್ಗೆ ಸೈಕಾಲಜಿ ಏನು ಹೇಳುತ್ತೆ?
03:37 PM (IST) Jan 27
ಹುಮನಾಬಾದ್ನ ಶ್ರೀ ವೀರಭದ್ರೇಶ್ವರ ಜಾತ್ರೆಗೆ ತೆರಳುತ್ತಿದ್ದ ಬಸವಕಲ್ಯಾಣದ ಯುವಕನೋರ್ವ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ರಾಷ್ಟ್ರೀಯ ಹೆದ್ದಾರಿ 65ರಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ವಿಶ್ವಜೀತ್ (30) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
03:25 PM (IST) Jan 27
ರಾಯಚೂರಿನ ಲಿಂಗಸೂಗೂರು ತಾಲೂಕಿನಲ್ಲಿ, ಬೆಂಗಳೂರಿಗೆ ಹೋಗಲು 2 ಲಕ್ಷ ರೂಪಾಯಿ ನೀಡದ ತಾಯಿಯನ್ನು ಮಗನೇ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹ*ತ್ಯೆ ಮಾಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಮುದಗಲ್ ಪೊಲೀಸರು ಆರೋಪಿ ಮಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
02:56 PM (IST) Jan 27
ಕಿರುತೆರೆ ನಟಿ ಕಾವ್ಯಾ ಗೌಡ ಅವರ ಸಂಸಾರದ ಕಲಹ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತಿ ಸೋಮಶೇಖರ್ ಮೇಲೆ ಹಲ್ಲೆ ಹಾಗೂ ತಮಗೆ ಬೆದರಿಕೆ ಹಾಕಲಾಗಿದೆ ಎಂದು ದೂರು ನೀಡಿದ್ದಾರೆ. ಇದರ ನಡುವೆ, ಸೋಶಿಯಲ್ ಮೀಡಿಯಾದಲ್ಲಿ ಕಾವ್ಯಾ ಅವರ ದುಬಾರಿ ಜೀವನದ ಹಳೆಯ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
02:31 PM (IST) Jan 27
ಕೊಪ್ಪಳ ಜಿಲ್ಲೆಯ ವರಣಖೇಡ ಗ್ರಾಮದಲ್ಲಿ, ಮಗನ ವಿರುದ್ಧ ಆಸ್ತಿ ಕಿರುಕುಳದ ಬಗ್ಗೆ ಪೊಲೀಸ್ ದೂರು ನೀಡಿದ ಮರುದಿನವೇ ತಂದೆ ವೆಂಕೋಬಾ ಹಂಚಿನಾಳ ಅವರು ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಆಸ್ತಿಗಾಗಿ ಮಗನೇ ಮಾಡಿದ ಕೊಲೆ ಎಂದು ಮೃತನ ತಾಯಿ ಆರೋಪಿಸಿದ್ದಾರೆ.
02:08 PM (IST) Jan 27
Actress Kavya Gowda Controversy: ರಾಧಾ ರಮಣ ಹಾಗೂ ಗಾಂಧಾರಿ, ಮೀರಾ ಮಾಧವ ಧಾರಾವಾಹಿ ನಟಿ ಕಾವ್ಯಾ ಗೌಡ ಅವರು ಮನೆಗೋಸ್ಕರ ಹಿಂಸೆ ಕೊಟ್ಟಿದ್ದಾರೆ ಎಂದು ಪ್ರೇಮಾ ಅವರು ಮಾಧ್ಯಮದ ಮುಂದೆ ಬಂದು ಹೇಳಿದ್ದಾರೆ. ಹಾಗಾದರೆ ನಿಜಕ್ಕೂ ಏನಾಯ್ತು?
01:56 PM (IST) Jan 27
ದಾವಣಗೆರೆ: ಕೇವಲ ಎರಡೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಡೆತ್ ನೋಟ್ನಲ್ಲಿ ತಮ್ಮ ಸಾವಿಗೆ ಕಾರಣವೇನು ಎನ್ನುವುದನ್ನು ಹರೀಶ್ ಎಂಬಾತ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
01:31 PM (IST) Jan 27
ಮಾಜಿ ಸಚಿವ ಎಸ್.ಎಸ್. ಪಾಟೀಲ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪ್ರತಿ ವರ್ಷ 'ಲಕ್ಕುಂಡಿ ಉತ್ಸವ'ವನ್ನು ಆಚರಿಸಬೇಕೆಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಮತ್ತು ರೈತರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
01:04 PM (IST) Jan 27
Actress Kavya Gowda Case: ಮೀರಾ ಮಾಧವ, ಗಾಂಧಾರಿ, ರಾಧಾ ರಮಣ ಮುಂತಾದ ಧಾರಾವಾಹಿ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಬೀದಿಗೆ ಬಿದ್ದಿದೆ. ಕಾವ್ಯ ಗೌಡ ಈ ಬಗ್ಗೆ ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
12:43 PM (IST) Jan 27
ದಾವಣಗೆರೆಯ ಗುಮ್ಮನೂರು ಗ್ರಾಮದಲ್ಲಿ, ಮದುವೆಯಾದ ಎರಡೂವರೆ ತಿಂಗಳಲ್ಲೇ ಪತ್ನಿ ಓಡಿಹೋದಳೆಂಬ ಕಾರಣಕ್ಕೆ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿ ಮತ್ತು ಆಕೆ ಕುಟುಂಬವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದು, ನಂತರ ಆಕೆಯ ಸೋದರಮಾವ ಕೂಡ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ.
12:28 PM (IST) Jan 27
Actress Kavya Gowda Controversy: ರಾಧಾ ರಮಣ ಧಾರಾವಾಹಿ ನಟಿ ಕಾವ್ಯಾ ಗೌಡ ಮನೆಯ ಕಲಹ ಬೀದಿಗೆ ಬಿದ್ದಿದೆ. ಕಾವ್ಯಾ ಗೌಡ ಅವರು ರವಿಕುಮಾರ್ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:02 PM (IST) Jan 27
ದಾವಣಗೆರೆ ಜಿಲ್ಲೆಯ ಗುಮ್ಮನೂರಲ್ಲಿ ಮದುವೆಯಾದ ಎರಡೂವರೆ ತಿಂಗಳಲ್ಲೇ ನವವಿವಾಹಿತ ಹರೀಶ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಈ ಸುದ್ದಿ ಕೇಳಿ ಆಘಾತಗೊಂಡ, ಮದುವೆ ಮಾಡಿಸಿದ್ದ ಯುವತಿಯ ಸೋದರ ಮಾವ ರುದ್ರೇಶ್ ಕೂಡಾ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ.
11:56 AM (IST) Jan 27
jay bhanushali ex wife Mahhi: ಕಿರುತೆರೆ ನಟಿ ಮಾಹಿ ವಿಜ್ ಇತ್ತೀಚೆಗೆ ಪತಿ ಜಯ್ ಭಾನ್ಶುಲಿ ಅವರಿಂದ ಡಿವೋರ್ಸ್ ತಗೊಂಡಿರೋದಾಗಿ ಹೇಳಿದ್ದರು. ಈಗ ಅವರು ಮನೆ, ಕಾರ್ ಕೂಡ ಖರೀಸಿದ್ದಾರೆ. ಮಾಹಿ ಅವರು ಕೆಲ ಸಮಯದಿಂದ ತೆರೆ ಮೇಲೆ ಕಾಣಿಸಿಕೊಳ್ಳುತ್ತಿಲ್ಲ.
11:55 AM (IST) Jan 27
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಜಾರಿಗೊಳಿಸಿದೆ. ಸರ್ಕಾರ ಬಡವರ, ಹಿಂದುಳಿದವರಿಗೆ, ವಸತಿ ರಹಿತರ ಕಾಳಜಿಗೆ ವಿಶೇಷವಾಗಿ ಒತ್ತು ನೀಡಿದ್ದು, 2026ರ ಅಂತ್ಯದೊಳಗೆ ವಸತಿ ರಹಿತರಿಗೆ ಸೂರು ಕಲ್ಪಿಸಲಾಗುತ್ತದೆ
11:42 AM (IST) Jan 27
11:18 AM (IST) Jan 27
ಕರ್ನಾಟಕ–ಗೋವಾ ಗಡಿ ಭಾಗದಲ್ಲಿ ನಡೆದ ₹400 ಕೋಟಿ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮತ್ತು ಆರೋಪಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
11:11 AM (IST) Jan 27
ಬ್ರಹ್ಮಗಂಟು ಸೀರಿಯಲ್ನಲ್ಲಿ ಪ್ರಣಯ ಪರ್ವ ಶುರವಾಗಿದೆ. ದೀಪಾ-ಚಿರು ಬಾಳಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ. ಆದರೆ, ಈ ಸೀನ್ ಪ್ರೋಮೋ ನೋಡಿದ ನಿರ್ದೇಶಕರಿಗೆ ಹೊಸ ಬೇಡಿಕೆ ಇಟ್ಟಿದ್ದಾರೆ ನೆಟ್ಟಿಗರು.
11:05 AM (IST) Jan 27
Actress Kavya Gowda Family Case: ರಾಧಾ ರಮಣ ಧಾರಾವಾಹಿಯಲ್ಲಿ ಶ್ವೇತಾ ಆರ್ ಪ್ರಸಾದ್ ನಂತರ ರಾಧಾ ಮಿಸ್ ಪಾತ್ರಕ್ಕೆ ಜೀವ ತುಂಬಿದ್ದ ನಟಿ ಕಾವ್ಯಾ ಗೌಡ ಅವರು ಇದಕ್ಕೂ ಮೊದಲು ಗಾಂಧಾರಿ, ಮೀರಾ ಮಾಧವ ಸೀರಿಯಲ್ಗಳಲ್ಲಿ ನಟಿಸಿದ್ದರು. ಈಗ ಇವರ ಹಾಗೂ ಪತಿ ಮೇಲೆ ಹಲ್ಲೆ ಆಗಿದೆ.