ಬೆಂಗಳೂರು: ನಮ್ಮ ಆದಾಯ ಮತ್ತು ನಿಮ್ಮ ಆರ್ಎಸ್ಎಸ್ ಆದಾಯಗಳ ಮೂಲಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯದಿಂದ ಆಡಿಟ್ ಹಾಗೂ ತನಿಖೆಯಾಗಲಿ. ಅದಕ್ಕೆ ನಾವು ಸಿದ್ಧ, ನಿಮ್ಮ ಆರ್ಎಸ್ಎಸ್ ಸಿದ್ಧವೇ ಎಂದು ಭಾನುವಾರ ಸಾಮಾಜಿಕ ಜಾಲತಾಣದ ಮೂಲಕ ಬಿಜೆಪಿ ನಾಯಕರನ್ನು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಕಳೆದ 100 ವರ್ಷಗಳಲ್ಲಿ ನಿಮ್ಮ ಮಾತೃ ಸಂಸ್ಥೆಯಾದ ಆರೆಸ್ಸೆಸ್ ನೋಂದಾಯಿಸಿಕೊಂಡಿಲ್ಲ, ತೆರಿಗೆ ಪಾವತಿಸಿಲ್ಲ ಮತ್ತು ವಿಶ್ವದ ಅತ್ಯಂತ ಶ್ರೀಮಂತ ಎನ್ಜಿಒ ಎನಿಸಿಕೊಂಡಿದೆ? ಇದೆಲ್ಲ ಸಾಧ್ಯವಾಗಿದ್ದು ಹೇಗೆ? ಎಂದಿದ್ದಾರೆ.

10:48 PM (IST) Oct 27
Gangster Lawrence Bishnoi's Name Graffitied on Tipu Sultan Palace in Nandi Hills ಚಿಕ್ಕಬಳ್ಳಾಪುರದ ನಂದಿಗಿರಿಧಾಮದಲ್ಲಿರುವ ಐತಿಹಾಸಿಕ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯ ಮೇಲೆ, ಕುಖ್ಯಾತ ಅಂತರಾಷ್ಟ್ರೀಯ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬರೆದು ವಿಕೃತಿ ಮೆರೆಯಲಾಗಿದೆ.
09:28 PM (IST) Oct 27
ಅನಾರೋಗ್ಯದ ಮೂಲಕ ನಟಿ ಸಮಂತಾ ಅವರು ಸಾಕಷ್ಟು ಬಳಲಿದ್ದಾರೆ. ಆದರೆ, ಆತ್ಮಸ್ಥೈರ್ಯ, ಸಿನಿಮಾ ಮೇಲಿನ ಪ್ರೀತಿ ಬಿಡದ ನಟಿ ಸಮಂತಾ ಅವರು ಮತ್ತೆ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟ ಸಂಗತಿಯಾಗಿದೆ. ಅವರೀಗ ಮತ್ತೆ ಶೂಟಿಂಗ್ನಲ್ಲಿ ಭಾಗಿಯಾಗಲು ಸಜ್ಜಾಗಿದ್ದಾರೆ..
08:47 PM (IST) Oct 27
08:02 PM (IST) Oct 27
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೆಹಲಿ ಭೇಟಿಯ ಕುರಿತಾದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಇದು ಸಂಪೂರ್ಣವಾಗಿ ಖಾಸಗಿ ಭೇಟಿಯೆಂದು ಸ್ಪಷ್ಟಪಡಿಸಿದ್ದಾರೆ. ಹಿರಿಯ ನಾಯಕಿ ಅಂಬಿಕಾ ಸೋನಿ ಅವರಿಗೆ ಸಾಂತ್ವನ ಹೇಳಲು ಹೋಗಿದ್ದಾಗಿ ತಿಳಿಸಿದರು.
07:41 PM (IST) Oct 27
Karnataka Minister Ramalinga Reddy Flags Poor E-Bus Performance ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬೆಂಗಳೂರಿನಲ್ಲಿ ಖಾಸಗಿ ನಿರ್ವಾಹಕರು ನಡೆಸುವ ಎಲೆಕ್ಟ್ರಿಕ್ ಬಸ್ಗಳ ಕಳಪೆ ಸೇವೆ, ಪದೇ ಪದೇ ಆಗುವ ಬ್ರೇಕ್ಡೌನ್ ಮತ್ತು ಸುರಕ್ಷತಾ ಲೋಪಗಳ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದಾರೆ.
07:02 PM (IST) Oct 27
Viral whatsapp chat with father: ಐಐಟಿ ಪದವೀಧರನೊಬ್ಬನಿಗೆ ಅಮೆಜಾನ್ನಲ್ಲಿ ಉದ್ಯೋಗ ಸಿಕ್ಕಾಗ, ಆತ ತನ್ನ ತಂದೆಗೆ ಈ ವಿಷಯ ತಿಳಿಸುತ್ತಾನೆ. ಆದರೆ ಆತನ ತಂದೆಯ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಗಿದ್ರೆ ಅವರು ಹೇಳಿದ್ದೇನು?
06:57 PM (IST) Oct 27
ನೂರಾರು ಕೋಟಿ ಮೌಲ್ಯದ ನಾಯಿಗಳಿಂದ ಖ್ಯಾತರಾದ ಡಾಗ್ ಸತೀಶ್, ಬಿಗ್ ಬಾಸ್ ಮನೆಯಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ನಿರೂಪಕ ಸುದೀಪ್ ಅವರೊಂದಿಗಿನ ಸಂಭಾಷಣೆಯಲ್ಲಿ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ 100 ಕೋಟಿಯ ನಾಯಿಯ ಪ್ರೊಮೋ ಕತ್ತರಿಸಲಾಗಿದೆ ಎಂದು ಬೇಸರಿಸಿದ್ದಾರೆ
06:52 PM (IST) Oct 27
06:51 PM (IST) Oct 27
ಕಲ್ಕಡ್ಕ ಪ್ರಭಾಕರ್ ಭಟ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಕೋರ್ಟ್ ಸೂಚನೆ, ಪ್ರಚೋದನಕಾರಿ ಭಾಷಣ ಆರೋಪದಡಿ ಪ್ರಭಾಕರ್ ಭಟ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇದರ ವಿರುದ್ಧ ಪ್ರಭಾಕರ್ ಭಟ್ ಕೋರ್ಟ್ ಮೆಟ್ಟಿಲೇರಿದ್ದರು.
06:42 PM (IST) Oct 27
06:31 PM (IST) Oct 27
ಧರ್ಮಸ್ಥಳ ಬುರುಡೆ ಕೇಸಿನಲ್ಲಿ ಸುಳ್ಳಿನ ಕಥೆ ಕಟ್ಟಿ ಸರ್ಕಾರಕ್ಕೆ ರೈಲು ಬಿಟ್ಟಿದ್ದ ಸುಜಾತಾ ಭಟ್ ಮಾಧ್ಯಮಗಳ ಕ್ಯಾಮೆರಾ ಕಂಡು ಕೆಂಡಾಮಂಡಲವಾಗಿದ್ದಾರೆ. ಮಾಧ್ಯಮದವರನ್ನು ನೋಡಿ ಎಲ್ಲಾ ಬಟ್ಟೆ ಬಿಚ್ಕೊಂಡು ನಿಂತರೂ ವಿಡಿಯೋ ಶೂಟ್ ಮಾಡ್ತೀರೇನ್ರಿ? ಥೂ ನಿಮ್ಮ ಜನ್ಮಕ್ಕೆ ಎಂದು ಆಕ್ರೋಶ ಹೊರಹಾಕಿದ್ದಾರೆ.
06:07 PM (IST) Oct 27
'ಕರ್ಣ' ಸೀರಿಯಲ್ನಲ್ಲಿ ನಾಯಕ ಕರ್ಣನ ಪಾತ್ರದ ಇತ್ತೀಚಿನ ನಡೆಗೆ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿಯನ್ನು ನೋವಿನಲ್ಲಿಟ್ಟು ನಿತ್ಯಳ ಜೊತೆ ಕರ್ಣ ಸಂಭ್ರಮಿಸುವುದನ್ನು ಸಹಿಸದ ವೀಕ್ಷಕರು, ಇದು ಅತಿಯಾದ ಒಳ್ಳೆತನದ ಪ್ರದರ್ಶನ ಎಂದು ಕಿಡಿಕಾರುತ್ತಿದ್ದಾರೆ.
05:50 PM (IST) Oct 27
ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ 'ಕಾಂತಾರ ಎ ಲೆಜೆಂಡ್ ಚಾಪ್ಟರ್ 1' ಚಿತ್ರವು ಅಕ್ಟೋಬರ್ 31 ರಿಂದ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರವು ಪಂಜುರ್ಲಿ ದೈವದ ದಂತಕಥೆಯ ಮೂಲವನ್ನು ಅನಾವರಣಗೊಳಿಸುತ್ತದೆ.
05:17 PM (IST) Oct 27
Bison Movie: ತಮಿಳು ನಟ ವಿಕ್ರಮ್ ಅವರ ಮಗ ಧ್ರುವ ನಟನೆಯ ‘ಬೈಸನ್’ ಸಿನಿಮಾ ರಿಲೀಸ್ ಆಗಿದ್ದು, ಕಂಟೆಂಟ್ ವಿಚಾರವಾಗಿ ಅನೇಕರು ಈ ಸಿನಿಮಾವನ್ನು ಹೊಗಳಿದ್ದಾರೆ. ಈ ಸಿನಿಮಾ ನೋಡಿದ ವೀರೇಂದ್ರ ಮಲ್ಲಣ್ಣ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
05:11 PM (IST) Oct 27
05:04 PM (IST) Oct 27
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತ್ಯೇಕವಾಗಿ ದೆಹಲಿಗೆ ಭೇಟಿ ನೀಡುತ್ತಿದ್ದು, ಹೈಕಮಾಂಡ್ ನಾಯಕರೊಂದಿಗೆ ಸಚಿವ ಸಂಪುಟ ಪುನರ್ರಚನೆ, ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ.
04:55 PM (IST) Oct 27
ಸಂಸದ ತೇಜಸ್ವಿ ಸೂರ್ಯ ಅವರ ತಮಿಳು ಮೂಲದ ಪತ್ನಿ ಸಿವಶ್ರೀ, ಕೆಲವೇ ತಿಂಗಳುಗಳಲ್ಲಿ ನಿರರ್ಗಳವಾಗಿ ಕನ್ನಡ ಕಲಿತು ಅಚ್ಚರಿ ಮೂಡಿಸಿದ್ದಾರೆ. ಪತಿಯಿಂದ ಅವರು ಕನ್ನಡ ಕಲಿತಿರಬಹುದು ಎಂಬುದು ಅನೇಕರ ನಂಬಿಕೆ ಅದರೆ ಅಲ್ಲ, ಹಾಗಿದ್ರೆ ಸಿವಶ್ರೀ ಕನ್ನಡ ಕಲಿತಿದ್ದು ಹೇಗೆ?
04:30 PM (IST) Oct 27
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಅಕ್ರಮ ನಾಡ ಬಂದೂಕಿನಿಂದ ಸೆಲ್ಫಿ ಫೈರಿಂಗ್ ಮಾಡಿಕೊಳ್ಳಲು ಯತ್ನಿಸಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಐದು ವರ್ಷಗಳ ಹಿಂದೆ ಕದ್ದಿದ್ದ ಈ ಬಂದೂಕಿನಿಂದ ಫೈರಿಂಗ್ ಮಾಡಲು ಸೈಕಲ್ ಬೇರಿಂಗ್ ಬಳಸಿದ್ದಾನೆ
04:19 PM (IST) Oct 27
Ayodhya Ram Mandir Complete Announces Shri Ram Janmabhoomi Teerth Kshetra Trust ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಅಯೋಧ್ಯೆಯ ಪ್ರಭು ಶ್ರೀ ರಾಮಲಲ್ಲಾ ಮಂದಿರ ನಿರ್ಮಾಣದ ಎಲ್ಲಾ ಪ್ರಮುಖ ಕಾರ್ಯಗಳು ಪೂರ್ಣಗೊಂಡಿವೆ.
04:14 PM (IST) Oct 27
ಅಮೃತಧಾರೆ ಧಾರಾವಾಹಿಯು ರೋಚಕ ಹಂತ ತಲುಪಿದ್ದು, ಗೌತಮ್ ದತ್ತುಪುತ್ರಿ ಮಿಂಚು ಮತ್ತು ಭೂಮಿಕಾ ಭೇಟಿಯಾಗಿದ್ದಾರೆ. ಮಿಂಚುವಿನ ಡೈರಿ ಅಭ್ಯಾಸ ಹಾಗೂ ಕೈ ಮೇಲಿನ ಮಚ್ಚೆಯು ಭೂಮಿಕಾಗೆ ಹಳೆಯ ನೆನಪುಗಳನ್ನು ತರುತ್ತಿದ್ದು, ಈ ಬಾಲಕಿಯೇ ಗೌತಮ್-ಭೂಮಿಕಾರನ್ನು ಒಂದುಗೂಡಿಸುವ ಲಕ್ಷಣಗಳು ಕಾಣಿಸುತ್ತಿವೆ.
03:57 PM (IST) Oct 27
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು, ಹೈಕಮಾಂಡ್ ಸೂಚನೆಯಂತೆ ಸಚಿವ ಸಂಪುಟ ಪುನರ್ರಚನೆ ನಡೆಯುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ಗೆ ಅನಿವಾರ್ಯ ನಾಯಕ ಎಂದಿರುವ ಅವರು, ಡಿಕೆಶಿ ದೆಹಲಿ ಭೇಟಿ ಮತ್ತು ದಲಿತ ಸಿಎಂ ಬೇಡಿಕೆಯಂತಹ ವಿಷಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದೆ.
03:33 PM (IST) Oct 27
ರಾಜ್ಯ ರಾಜಕೀಯದಲ್ಲಿ ಹೆಚ್ಚುತ್ತಿರುವ ವೈಯಕ್ತಿಕ ನಿಂದನೆ ಮತ್ತು ಅಸಭ್ಯ ಭಾಷಾ ಬಳಕೆಯಿಂದ ಬೇಸತ್ತ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಲ್ ಅವರು, ಪ್ರದೀಪ್ ಈಶ್ವರ್ ಮತ್ತು ಪ್ರತಾಪ ಸಿಂಹ ಅವರ ಮಾತುಗಳಿಗೆ ಕಡಿವಾಣ ಹಾಕುವಂತೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
03:25 PM (IST) Oct 27
Kannada Serial TRP List: ಕನ್ನಡ ಕಿರುತೆರೆಯಲ್ಲಿ ಪ್ರತಿ ವಾರ ಹೊಸ ಟ್ವಿಸ್ಟ್ ಜೊತೆಯಲ್ಲಿ ಸೀರಿಯಲ್ಗಳು, ಶೋಗಳು ಪ್ರಸಾರ ಆಗುತ್ತಿವೆ. ಇನ್ನೊಂದು ಕಡೆ ಟ್ವಿಸ್ಟ್ಗಳಿಂದ ಸೀರಿಯಲ್ ಟಿಆರ್ಪಿ ಕೂಡ ಬದಲಾಗುವುದು. ಈ ವಾರ ರಿಲೀಸ್ ಟಿಆರ್ಪಿ ರಿಪೋರ್ಟ್ನಲ್ಲಿ ಯಾವ ಧಾರಾವಾಹಿಗೆ ಎಷ್ಟು TRP ಸಿಕ್ಕಿದೆ?
03:25 PM (IST) Oct 27
Kappe Kara Kara animated song: 'ಕಪ್ಪೆ ಕರ ಕರ' ಎಂಬ ಜನಪ್ರಿಯ ಜಾನಪದ ಹಾಡಿಗೆ 3D ಅನಿಮೇಷನ್ ಸ್ಪರ್ಶ ನೀಡಲಾಗಿದ್ದು,ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು 90ರ ದಶಕದ ಮಕ್ಕಳ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
02:59 PM (IST) Oct 27
Body found in Dudhganga river: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಬಳಿ ದೂಧಗಂಗಾ ನದಿ ತೀರದಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದು ಶವವನ್ನು ಎಸೆಯಲಾಗಿದ್ದು, ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
02:48 PM (IST) Oct 27
ಚಿಂಚೊಳ್ಳಿ ತಾಲೂಕಿನಲ್ಲಿ, ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ 15 ವರ್ಷದ ಅಪ್ರಾಪ್ತ ಮಗಳ ಮೇಲೆ ಅತ್ಯಾ*ಚಾರ ಎಸಗಿದ ಪಾಲಿಶಿಂಗ್ ಘಟಕದ ಮಾಲೀಕನನ್ನು ಬಂಧಿಸಲಾಗಿದೆ. ಈ ಕೃತ್ಯದಿಂದ ಬಾಲಕಿ ಗರ್ಭಿಣಿಯಾಗಿದ್ದಾಳೆ
02:45 PM (IST) Oct 27
02:43 PM (IST) Oct 27
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ಹೊಸ ರೀತಿಯ ಟಾಸ್ಕ್ ನೀಡಲಾಗಿತ್ತು. ಕಾಲೇಜು ಮಕ್ಕಳ ಜೊತೆ ಸ್ಪರ್ಧಿಗಳು ನಟಿಸಬೇಕಿತ್ತು. ಕಾಲೇಜಿನಲ್ಲಿರುವ ವಿಷಯಗಳು ದೊಡ್ಮನೆಯಲ್ಲಿ ಇರಬೇಕಿತ್ತು. ರೋಗಿ ಬಯಸಿದ್ದು ಹಾಲು ಅನ್ನ, ಬಿಗ್ ಬಾಸ್ ಕೊಟ್ಟಿದ್ದು ಹಾಲು ಎನ್ನ ಎನ್ನೋ ಥರ ಆಯ್ತು ಇದು.
02:39 PM (IST) Oct 27
ಕಾರಟಗಿ ತಹಸೀಲ್ದಾರ್ ಕಚೇರಿಯಲ್ಲಿ ರೈತರ ಭೂ ದಾಖಲೆಗಳನ್ನು ಅಕ್ರಮವಾಗಿ ತಿದ್ದುಪಡಿ ಮಾಡಿ, ವ್ಯಾಜ್ಯ ಸೃಷ್ಟಿಸಿದ ಆರೋಪ ಮೇಲೆ ಹಿಂದಿನ ಶಿರಸ್ತೇದಾರ್ ಪ್ರಕಾಶ್ ಅಮಾನತು. ಕಲಬುರಗಿ ಪ್ರಾದೇಶಿಕ ಆಯುಕ್ತಾಲಯದ ತನಿಖೆಯ ನಂತರ, 123 ಪ್ರಕರಣದ ದಾಖಲೆ ತಿದ್ದುಪಡಿ 97 ಕಡತ ಮಾಯ ಆಗಿರುವುದು ಬಯಲಾಗಿದೆ.
02:19 PM (IST) Oct 27
ಬೀದರ್ನ ಬ್ರಿಮ್ಸ್ ಆಸ್ಪತ್ರೆಯಲ್ಲಿ, ಸುಮಾರು 40ಕ್ಕೂ ಹೆಚ್ಚು ಸ್ಪೆಷಲಿಸ್ಟ್ ವೈದ್ಯರನ್ನು ಯಾವುದೇ ನೋಟಿಸ್ ನೀಡದೆ ಮತ್ತು 8-9 ತಿಂಗಳ ಸಂಬಳ ಬಾಕಿ ಉಳಿಸಿಕೊಂಡು ಏಕಾಏಕಿ ವಜಾ.. ಈ ಅನ್ಯಾಯದ ವಿರುದ್ಧ ವೈದ್ಯರು ಆಡಳಿತ ಮಂಡಳಿ ಕಚೇರಿ ಬಳಿ ಧರಣಿ ನಡೆಸುತ್ತಿದ್ದು, ಅವರ ಜೀವನ ಸಂಕಷ್ಟಕ್ಕೆ ಸಿಲುಕಿದೆ.
01:58 PM (IST) Oct 27
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015 ರಿಂದ 2025 ರ ನಡುವೆ ದಾಖಲಾದ 295 ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಕೇವಲ 14 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಕಳವಳ ವ್ಯಕ್ತಪಡಿಸಿದೆ. ಎಸ್ಸಿ ಎಸ್ಟಿ ಕುಂದುಕೊರತೆ ಸಭೆಯಲ್ಲಿ ಈ ಅಂಕಿಅಂಶಗಳನ್ನು ಬಹಿರಂಗಪಡಿಸಲಾಗಿದೆ.
01:37 PM (IST) Oct 27
01:17 PM (IST) Oct 27
ಪಾರ್ಶ್ವವಾಯುಗೆ ಒಳಗಾದಂತೆ ನಟಿಸುತ್ತಿದ್ದ ವೀರಭದ್ರನ ನಾಟಕವನ್ನು ಪಾರು ಬಯಲು ಮಾಡಿದ್ದಾಳೆ. ವೈದ್ಯೆಯಾದ ಪಾರು, ಕರೆಂಟ್ ಶಾಕ್ ಟ್ರೀಟ್ಮೆಂಟ್ ನೀಡುವುದಾಗಿ ಹೆದರಿಸಿದಾಗ, ವೀರಭದ್ರ ತನ್ನ ನಾಟಕವನ್ನು ನಿಲ್ಲಿಸಿ ಎದ್ದು ಕುಳಿತುಕೊಳ್ಳುತ್ತಾನೆ.
12:56 PM (IST) Oct 27
12:49 PM (IST) Oct 27
ರಮೇಶ್ ಕತ್ತಿ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಾಗಲಕೋಟೆಯಲ್ಲಿ ವಾಲ್ಮೀಕಿ ಸಮುದಾಯದಿಂದ ಅಣುಕು ಶವಯಾತ್ರೆ ನಡೆಸಿ, ರಸ್ತೆಯಲ್ಲೇ ಅಂತ್ಯಕ್ರಿಯೆ ನಡೆಸಿದರು. ನಂತರ ರಮೇಶ್ ಕತ್ತಿ ಬಂಧನಕ್ಕೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯ ಸಂಪೂರ್ಣ ವರದಿ ಇಲ್ಲಿದೆ.
12:45 PM (IST) Oct 27
12:44 PM (IST) Oct 27
Low crime rate country: ಭಾರತದಲ್ಲಿ ಮನೆಯ ಹೊರಗಡೆ ಶೂ, ಗಿಡ ಇಟ್ಟರೂ ಕಳ್ಳತನ ಮಾಡ್ತಾರೆ. ಅಷ್ಟೇ ಅಲ್ಲದೆ, 100 ರೂಪಾಯಿ ಕೊಟ್ಟಿಲ್ಲ ಅಂದ್ರೂ ಕೊಲೆ ಮಾಡುವವರಿದ್ದಾರೆ. ಇದೊಂದು ದೇಶದಲ್ಲಿ ಕ್ರೈಮ್ ರೇಟ್ ತುಂಬ ತುಂಬ ಕಡಿಮೆ ಇದೆ, ಮನೆಗೆ ಬೀಗ ಹಾಕಲ್ಲ, ವಿಮಾನ ನಿಲ್ದಾಣ ಕೂಡ ಇಲ್ಲ, ಕಳ್ಳತನ ಆಗಿಲ್ಲ.
12:14 PM (IST) Oct 27
ಬೆಂಗಳೂರಿನ ಡಿ.ಜೆ.ಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುನಿಲ್, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರ ಮೇಲೆ ಅತ್ಯಾ*ಚಾರ ಎಸಗಿದ ಗಂಭೀರ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ, ಗೋವಿಂದಪುರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಆರೋಪಿ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಲಾಗಿದೆ.
11:44 AM (IST) Oct 27
15-20 ನಿಮಿಷದಲ್ಲಿ ಪಟ ಪಟನೆ ಮಾಹಿತಿ ಪಡೆದ ಮಹಿಳೆ ಥ್ಯಾಂಕ್ಸ್ ಎಂದು ಬುರ್ರೆಂದು ಕಾರಿನಲ್ಲಿ ಹೊರಟು ಹೋಗುವುದನ್ನು ನೋಡುತ್ತಾ ನಿಂತ ಸ್ನೇಹಿತ ಬೆಂಗಳೂರಿನಲ್ಲಿ ಮಾತ್ರ ಇದೆಲ್ಲ ಸಾಧ್ಯ ಎಂದು ಮನಸ್ಸಿನಲ್ಲಿ ಅಂದುಕೊಂಡಿದ್ದು ನಿಜ.
11:24 AM (IST) Oct 27
ಕೋಲಾರದ ಮಾಲೂರು ತಾಲೂಕಿನಲ್ಲಿ, ಬಾರ್ನಲ್ಲಿ ಸೈಡ್ಸ್ ನೀಡಲು ನಿರಾಕರಿಸಿದ ಕಾರಣಕ್ಕೆ ಕ್ಯಾಷಿಯರ್ ಕುಮಾರಸ್ವಾಮಿ ಎಂಬುವವರನ್ನು ಸುಭಾಷ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೆಲಸ ಮುಗಿಸಿ ಮನೆಗೆ ತೆರಳಿದಾಗ, ಹೆಂಡತಿ-ಮಕ್ಕಳ ಮುಂದೆಯೇ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ.