MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!

Karna ವಿರುದ್ಧ ತಿರುಗಿ ಬಿದ್ದ ಜನರು: ಭಾವನೆಗಳ ಜೊತೆ ಆಡ್ತಿದ್ದೀರಾ? ಯಾವ ಖುಷಿಗೆ ಈ ನಗು? Too Much, Stop It!

'ಕರ್ಣ' ಸೀರಿಯಲ್‌ನಲ್ಲಿ ನಾಯಕ ಕರ್ಣನ ಪಾತ್ರದ ಇತ್ತೀಚಿನ ನಡೆಗೆ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಧಿಯನ್ನು ನೋವಿನಲ್ಲಿಟ್ಟು ನಿತ್ಯಳ ಜೊತೆ ಕರ್ಣ ಸಂಭ್ರಮಿಸುವುದನ್ನು ಸಹಿಸದ ವೀಕ್ಷಕರು, ಇದು ಅತಿಯಾದ ಒಳ್ಳೆತನದ ಪ್ರದರ್ಶನ ಎಂದು  ಕಿಡಿಕಾರುತ್ತಿದ್ದಾರೆ.

2 Min read
Suchethana D
Published : Oct 27 2025, 06:07 PM IST
Share this Photo Gallery
  • FB
  • TW
  • Linkdin
  • Whatsapp
17
ಅತಿಯಾದ ಒಳ್ಳೆತನ
Image Credit : instagram

ಅತಿಯಾದ ಒಳ್ಳೆತನ

ಕರ್ಣ ಸೀರಿಯಲ್​ (Karna Serial) ವೀಕ್ಷಕರ ಪೈಕಿ ಬಹುತೇಕ ಮಂದಿ ಮೊದಲಿನಿಂದಲೂ ಹೇಳಿಕೊಳ್ತಾ ಇರೋದು ಒಂದೇ ಮಾತು. ಅದು ಕರ್ಣನ ಕ್ಯಾರೆಕ್ಟರ್​ ಅನ್ನು ಸ್ವಲ್ಪ ಅತಿಯಾಗಿ ತೋರಿಸ್ತಾ ಇದ್ದಾರೆ. ಇಷ್ಟು ಒಳ್ಳೆಯವರು ವಾಸ್ತವದಲ್ಲಿ ಇರಲು ಸಾಧ್ಯವಿಲ್ಲ ಎಂದು. ಆದರೆ, ಇದಾಗಲೇ ಕರ್ಣ ಪಾತ್ರಧಾರಿ ಕಿರಣ್​ ರಾಜ್​ ಅವರು, ಸುವರ್ಣ ಟಿವಿಯ ಜೊತೆಗಿನ ಸಂವಾದದಲ್ಲಿ ಈ ಬಗ್ಗೆಯೂ ಪ್ರಸ್ತಾಪ ಮಾಡಿದ್ದರು. ಒಬ್ಬೊಬ್ಬರಲ್ಲಿ ಒಂದೊಂದು ಅತಿರೇಕ ಇರುತ್ತೆ. ಕರ್ಣನಲ್ಲಿ ಎಲ್ಲ ಅತಿರೇಕವನ್ನೂ ತೋರಿಸಿದ್ದಾರೆ ಅಂದಿದ್ದರು.

27
ಕರ್ಣನ ವಿರುದ್ಧ ಪ್ರೇಕ್ಷಕರು
Image Credit : Instagram

ಕರ್ಣನ ವಿರುದ್ಧ ಪ್ರೇಕ್ಷಕರು

ಅದೇನೇ ಇದ್ದರೂ ಇಲ್ಲಿಯವರೆಗೆ ಕರ್ಣ ಮತ್ತು ಆತನ ಒಳ್ಳೆಯತನವನ್ನು ಸಹಿಸಿಕೊಂಡು ಬರುತ್ತಿದ್ದ ವೀಕ್ಷಕರು ಇದೇ ಮೊದಲ ಬಾರಿಗೆ ಕರ್ಣನ ವಿರುದ್ಧ ತಿರುಗಿ ಬಿದ್ದಿದ್ದಾರೆ. This is too much, ಮದುವೆಯೇನು ಆಟ ಅಂದುಕೊಂಡ್ಯಾ? ನೀನು ಹೇಗೆ ಹೀಗಾಗಲು ಸಾಧ್ಯ? ಇಬ್ಬರನ್ನೂ ಒಟ್ಟಿಗೇ ಇಟ್ಟುಕೊಂಡು ಮಜಾ ನೋಡ್ತಿದ್ಯಾ? ನಿಧಿಯನ್ನೇಕೆ ಅಲ್ಲಿಯೇ ಇಟ್ಟುಕೊಂಡಿರುವೆ, ಅವಳು ಅಳುವುದನ್ನು ನೋಡಲು ಆಗ್ತಿಲ್ಲ... ಹೀಗೆ ಸೋಷಿಯಲ್​ ಮೀಡಿಯಾದ ಪ್ರೊಮೋಗಳಲ್ಲಿ ಕರ್ಣನ ವಿರುದ್ಧ ವಿಪರೀತ ಎನ್ನುವಷ್ಟು ಕಮೆಂಟ್​ಗಳ ಸುರಿಮಳೆಯಾಗುತ್ತಿದೆ.

Related Articles

Related image1
Karna Serial: ನಿತ್ಯಾಳಿಗೆ ಕರ್ಣನ ಮೇಲೆ ಲವ್​ ಹುಟ್ಟತ್ತಾ? ಮನೆಯಲ್ಲೇ ಇರೋ ನಿಧಿ ಕಥೆಯೇನು- ಏನಿದು ಟ್ವಿಸ್ಟ್​?
Related image2
Bigg Boss: ಪಕ್ಕದಲ್ಲಿ ನೋಡಿದ್ರೂ ಕಾವ್ಯಾ ಇದ್ರು, ಎದುರಲ್ಲೂ ಅವ್ರೇ, ಏನ್ಮಾಡ್ಲಿ? ಸುದೀಪ್​ ಮುಂದೆ ಗಿಲ್ಲಿ ಫುಲ್​ ಕನ್​ಫ್ಯೂಷನ್​
37
ನುಂಗಲಾಗದ ತುತ್ತು
Image Credit : Zee Kannada

ನುಂಗಲಾಗದ ತುತ್ತು

ತಾವು ನೋಡ್ತಿರೋದು ಸೀರಿಯಲ್​​ ಎನ್ನೋದನ್ನು ಮರೆತು ವೀಕ್ಷಕರು ಬಹುತೇಕರು ಅದನ್ನು ತಮ್ಮ ಸ್ವಂತದ್ದು ಎಂದುಕೊಳ್ಳುವುದು ಇದೆ. ಇಲ್ಲವೇ ಸೀರಿಯಲ್​​ ಎಂದು ತಿಳಿದಿದ್ದರೂ ತೀರಾ ವಾಸ್ತವಕ್ಕೆ ದೂರ ಎನ್ನಿಸುವುದನ್ನು ನೋಡಲು ಇಷ್ಟಪಡುವುದಿಲ್ಲ. ಇದೀಗ ಕರ್ಣ ಸೀರಿಯಲ್​ನಲ್ಲಿ ನಿಧಿಯ ನೋವನ್ನು ಆಕೆಯ ಅಭಿಮಾನಿಗಳಿಗೆ ನೋಡಲು ಆಗ್ತಿಲ್ಲ. ಅವಳು ಅಲ್ಲಿ ಕಣ್ಣೀರು ಹಾಕುತ್ತಿದ್ದರೂ ಏನೂ ಆಗಲೇ ಇಲ್ಲ ಎನ್ನುವಂತೆ ಕರ್ಣ ರಿಯಾಕ್ಟ್​ ಮಾಡ್ತಿರೋದು ಯಾಕೋ ವೀಕ್ಷಕರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

47
ಚಿತ್ರಹಿಂಸೆ ಕೊಡಬೇಡಿ
Image Credit : Zee Kannada

ಚಿತ್ರಹಿಂಸೆ ಕೊಡಬೇಡಿ

ಇಲ್ಲಿಯವರೆಗೆ ಕರ್ಣ ಮತ್ತು ನಿಧಿಯನ್ನು ಒಟ್ಟಿಗೆ ಮಾಡಿ ಅಂತಿದ್ದ ಹಲವು ನೆಟ್ಟಿಗರು, ಈಗ ಕರ್ಣನ ಮದುವೆ ಹೇಗೋ ನಿತ್ಯಳ ಜೊತೆ ಆಗಿದೆ. ನಿಧಿಯನ್ನು ಮನೆಯಲ್ಲಿಯೇ ಇಟ್ಟುಕೊಂಡು ಚಿತ್ರಹಿಂಸೆ ಕೊಡಬೇಡಿ, ಅವಳ ಪಾಡಿಗೆ ಅವಳು ಬದುಕಲಿ. ಒಂದಿಷ್ಟು ದಿನ ನೋವು ಅನುಭವಿಸಿದರೂ ಕ್ರಮೇಣ ಅವಳ ಜೀವನ ಅವಳು ನೋಡಿಕೊಳ್ಳುವಂತೆ ಮಾಡಿ. ಇದ್ಯಾಕೋ ತುಂಬಾ ಅತಿಯಾಯಿತು ಎನ್ನುತ್ತಿದ್ದಾರೆ.

57
ಯಾವ ಖುಷಿಗೆ ಈ ನಗು?
Image Credit : Instagram

ಯಾವ ಖುಷಿಗೆ ಈ ನಗು?

ನಿಜವಾಗಿಯೂ ಕರ್ಣನಿಗೆ ನೋವಾಗಿದೆಯೇ ಎನ್ನುವುದೇ ಡೌಟು ಎಂದು ಮತ್ತೆ ಕೆಲವರು ಗರಂ ಆಗಿದ್ದಾರೆ. ಖುಷಿಯಾಗಿರುವಂತೆ ಆ್ಯಕ್ಟ್​ ಮಾಡಿದ್ರೂ ನೋವಿನ ಛಾಯೆ ಮುಖದಲ್ಲಿ ಇಲ್ಲವೇ ಇಲ್ಲ. ಅತ್ತ ನಿಧಿ ಮತ್ತು ಇತ್ತ ನಿತ್ಯ ಇಬ್ಬರನ್ನೂ ಆತ ಮೆಂಟೇನ್​ ಮಾಡುವ ಅಗತ್ಯವಿಲ್ಲ. ನಿಧಿ ಅವಳ ಜೀವನದಲ್ಲಿ ಮುಂದುವರೆಯಲು ಬಿಡಿ ಎನ್ನುತ್ತಿದ್ದಾರೆ.

67
ಕಾರಣ ತಿಳಿಯಬಹುದೆ?
Image Credit : Instagram

ಕಾರಣ ತಿಳಿಯಬಹುದೆ?

vibexmuse ಎನ್ನುವ ನೆಟ್ಟಿಗರು, ದಯವಿಟ್ಟು ಕರ್ಣನ ಈ ಸಂತೋಷ ಮತ್ತು ಸಂಭ್ರಮದ ಹಿಂದಿನ ಕಾರಣವನ್ನು ನಾವು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ. ಈ ನಗು ನಕಲಿ ಮದುವೆಗಾಗಿಯೇ? ನಿತ್ಯಾಳ ಗರ್ಭಧಾರಣೆಗಾಗಿಯೇ? ನಿಧಿಯ ಹೃದಯವನ್ನು ಚೂರು ಚೂರು ಮಾಡಿದ್ದಕ್ಕಾಗಿಯೇ ಅಥವಾ ಕರ್ಣ ತನ್ನ ನಿಜವಾದ ಪ್ರೀತಿಯನ್ನು ಕಳೆದುಕೊಳ್ಳುವುದಕ್ಕಾಗಿಯೇ ಎನ್ನುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.

77
ಉರಿ ಹೊತ್ತಿದೆ...
Image Credit : Zee Kannada

ಉರಿ ಹೊತ್ತಿದೆ...

ನಿಧಿಯ ಜಗತ್ತು ಗಂಭೀರವಾಗಿ ಉರಿಯುತ್ತಿರುವಾಗ ನಿತ್ಯಾಳೊಂದಿಗೆ "ಸಂತೋಷದ ದಾಂಪತ್ಯ" ಜೀವನವನ್ನು ತೋರಿಸುವುದು ಎಂದರೆ ಏನರ್ಥ? ಈ ಎಲ್ಲಾ ಗೊಂದಲಗಳಲ್ಲಿ, ಕರ್ಣ ಹೇಗೆ ಸಂತೋಷವಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಸಂಬಂಧಗಳು
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved