Published : May 21, 2026, 07:07 AM ISTUpdated : May 21, 2026, 08:57 PM IST

Karnataka News Live: ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?

ಸಾರಾಂಶ

ಬಾಗಲಕೋಟೆ: ಮುಂಗಾರು ಮಳೆ ಆರಂಭವಾಗುವ ಮುನ್ಸೂಚನೆಗಳನ್ನು ಕಂಡ ಈ ಭಾಗದ ರೈತಾಪಿ ಜನತೆ ತಮ್ಮ ಸಂಭಾವ್ಯ ಬೆಳೆಗಳಿಗೆ ತಕ್ಕಂತೆ ಭೂಮಿಯನ್ನು ಹದ ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ಕಳೆದೆರಡು 3 ದಿನಗಳಿಂದ ರಬಕವಿ ಬನಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಸಂಜೆ ಹಾಗೂ ರಾತ್ರಿ ಸಮಯ ಅಲ್ಪ ಪ್ರಮಾಣದಲ್ಲಿ ಆಗಾಗ ಮಳೆಯ ಸಿಂಚನಗಳು ಬೀಳುತ್ತಿವೆ. ಆದ್ದರಿಂದ ಈ ಭಾಗದ ರೈತರು ಮುಂಗಾರು ಬೆಳೆಗಳಾದ ಶೇಂಗಾ, ಮೆಕ್ಕೆಜೋಳ, ಅರಿಶಿಣ ಸೇರಿದಂತೆ ಇನ್ನಿತರ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಭೂಮಿಯನ್ನು ಹದ ಮಾಡುತ್ತಿದ್ದಾರೆ.

ತಾಲೂಕು ವ್ಯಾಪ್ತಿ ಸಂಪೂರ್ಣ ನೀರಾವರಿ ಜಮೀನುಗಳೇ ಹೆಚ್ಚಾಗಿರುರುವುದರಿಂದ ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿ ಕಬ್ಬು ಬೆಳೆಯುತ್ತಿದ್ದು, ವರ್ಷವಿಡಿ ಭೂಮಿಗೆ ಬಿಸಿಲಿನ ಸ್ಪರ್ಶವಾಗುವುದಿಲ್ಲ ಮತ್ತು ವಿಪರೀತ ರಾಸಾಯನಿಕೆ ಗೊಬ್ಬರಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಿದೆ. ಆದ್ದರಿಂದ ಕೆಲವೇ ಕೆಲವು ರೈತ ಬಾಂಧವರು ಮಾತ್ರ ಪ್ರತಿ ವರ್ಷ ಅಲ್ಪಪ್ರಮಾಣದಲ್ಲಿಯಾದರೂ ತಿಪ್ಪೆಗೊಬ್ಬರವನ್ನು ಭೂಮಿಗೆ ಬಳಸಿ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ಪಡೆಯುತ್ತಿದ್ದಾರೆ

08:57 PM (IST) May 21

ಕಾವ್ಯಾ ಮಾರನ್-ಅನಿರುದ್ಧ್ ರವಿಚಂದರ್ ಕಲ್ಯಾಣ ಫಿಕ್ಸ್.. ಸನ್‌ ರೈಸರ್ಸ್‌ ಹೈದರಾಬಾದ್ ಓನರ್-‌ಮ್ಯೂಸಿಕ್ ಡೈರೆಕ್ಟರ್‌ 'ಏನಿಲ್ಲ' ಅಂದಿದ್ದು ಸುಳ್ಳು?

ಕಾವ್ಯಾ ಮಾರನ್‌ಗೆ ಈಗ 33 ವರ್ಷ ಮತ್ತು ಅನಿರುದ್ಧ್‌ಗೆ 35 ವರ್ಷ. ವಯಸ್ಸು ಮತ್ತು ಸ್ಟೇಟಸ್‌ಗೆ ಈ ಜೋಡಿ ಸಖತ್ ಮ್ಯಾಚ್ ಆಗುತ್ತದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಟ್ಟಿನಲ್ಲಿ, ಐಪಿಎಲ್ ಮೈದಾನದಲ್ಲಿ ಟೆನ್ಶನ್‌ನಲ್ಲಿ ಕಾಣಿಸಿಕೊಳ್ಳುವ ಕಾವ್ಯಾ ಮತ್ತು ಸ್ಟೇಜ್ ಮೇಲೆ ಬೆಂಕಿ ಹಚ್ಚುವ ಅನಿರುದ್ಧ್ ಆಗಸ್ಟ್‌ನಲ್ಲಿ ಒಂದಾಗ್ತಾರಾ?

Read Full Story

06:25 PM (IST) May 21

Darshan Tragedy - ಜೈಲಿನಲ್ಲಿ ದಿನಗಳನ್ನು ಎಣಿಸೋದು ಬಿಟ್ಟು ಇನ್ನೇನು ಮಾಡಬಹುದು ದರ್ಶನ್? ಆ ಚಾನ್ಸ್ ಇದೆಯಾ?

ಅಲ್ಲಿಗೆ ಕುಟುಂಬದ ಭೇಟಿ ದರ್ಶನ್​ಗೆ ಖುಷಿ ತರೋದಕ್ಕಿಂತ ಹೆಚ್ಚಾಗಿ ದುಃಖವನ್ನ ತಂದಿದೆ. ಜೊತೆಗೆ ಸುಪ್ರೀಂ ಕೋರ್ಟ್ ತೀರ್ಪು ಬೇರೆ ದರ್ಶನ್​ಭವಿಷ್ಯದ ಬಗ್ಗೆ ಅನಿಶ್ಚಿತತೆ ಮೂಡುವಂತೆ ಮಾಡಿದೆ. ಸೋ ಇದೇ ಆತಂಕದಲ್ಲೇ ಜೈಲಿನಲ್ಲಿ ದಾಸನ ಮೌನವೃತ ಶುರುವಾಗಿದೆ. ಜೈಲಿಂದು ಬಿಡುಗಡೆ ಎಂದು?

Read Full Story

06:22 PM (IST) May 21

ನೀಲವಣ್ಣವರ ಕೇಸ್ ಬೆನ್ನಲ್ಲೇ ಬೆಳಗಾವಿಯಲ್ಲಿ ಮತ್ತೊಂದು ಹೂಡಿಕೆ ಜಾಲ ಪತ್ತೆ - ಈ ಕಂಪನಿಲಿ 15 ತಿಂಗಳಿಗೆ ಹಣ ಡಬಲ್‌!

ಶಿವಂ ಇನ್ವೆಸ್ಟ್ಮೆಂಟ್ ಪ್ರಕರಣದ ಬೆನ್ನಲ್ಲೇ, ಬೆಳಗಾವಿ ಮೂಲದ ಆದಿತ್ಯರಾಜ್ ಕ್ಯಾಪಿಟಲ್ ಎಂಬ ಮತ್ತೊಂದು ಕಂಪನಿ ಬೆಳಕಿಗೆ ಬಂದಿದೆ. ಈ ಕಂಪನಿಯು ವರ್ಷಕ್ಕೆ ಶೇ. 60ರಷ್ಟು ಬಡ್ಡಿ ಹಾಗೂ 15 ತಿಂಗಳಲ್ಲಿ ಹಣ ಡಬಲ್ ಮಾಡುವ ಆಮಿಷವೊಡ್ಡಿ ನೂರಾರು ಕೋಟಿ ಸಂಗ್ರಹಿಸಿದೆ. ಕಾನೂನುಬದ್ಧ ಒಪ್ಪಂದಗಳ ಮೂಲಕ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದು ಮತ್ತೊಂದು ದೊಡ್ಡ ವಂಚನೆಯ ಅನುಮಾನಕ್ಕೆ ಕಾರಣವಾಗಿದೆ.
Read Full Story

06:00 PM (IST) May 21

ಬೆಂಗಳೂರು ಶಾಕಿಂಗ್​ - ಹಸುವಿನ ಜೊತೆ ವಿಕೃತಕಾ*ಮಿ ಡೆಲಿವರಿ ಬಾಯ್​ ಮಾಡಿದ್ದೇನು? ವಿಡಿಯೋ ಇಲ್ಲಿದೆ

ಬೆಂಗಳೂರಿನ ಅಕ್ಕಿಪೇಟೆಯಲ್ಲಿ ಡೆಲಿವರಿ ಬಾಯ್ ಒಬ್ಬ ರಸ್ತೆಯಲ್ಲಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವಿಕೃತ ಕೃತ್ಯವು, ಮನುಷ್ಯರು ಪ್ರಾಣಿಗಳ ಮೇಲೂ ನಡೆಸುತ್ತಿರುವ ದೌರ್ಜನ್ಯದ ಕರಾಳ ಮುಖವನ್ನು ಬಯಲುಮಾಡಿದೆ.
Read Full Story

05:56 PM (IST) May 21

ಶಿವಾನಂದ ನೀಲಣ್ಣವರ ಬಹುಕೋಟಿ ವಂಚನೆ ಪ್ರಕರಣ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಶಿಕ್ಷಕ ಸಮುದಾಯಕ್ಕೆ ₹ 200 ಕೋಟಿ ದೋಖಾ!

ಧಾರವಾಡ ಜಿಲ್ಲೆಯಲ್ಲಿ ಶಾಲಾ ಶಿಕ್ಷಕರನ್ನೇ ಗುರಿಯಾಗಿಸಿಕೊಂಡು ₹200 ಕೋಟಿಗೂ ಅಧಿಕ ಮೊತ್ತದ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಹುಬ್ಬಳ್ಳಿಯ ಶಿಕ್ಷಕರೇ ಏಜೆಂಟರಂತೆ ಕಾರ್ಯನಿರ್ವಹಿಸಿ ಹಣ ಸಂಗ್ರಹಿಸಿದ್ದಾರೆ. ನೌಕರಿಗೆ ಕುತ್ತು ಬರುವ ಭಯದಿಂದ ಸಂತ್ರಸ್ತ ಶಿಕ್ಷಕರು ದೂರು ನೀಡಲು ಹಿಂಜರಿಯುತ್ತಿದ್ದಾರೆ.
Read Full Story

05:21 PM (IST) May 21

ಚಂಡಮಾರುತ ಹಾಗೂ ಭಾರಿ ಮಳೆ ಮುನ್ಸೂಚನೆ - ಕರಾವಳಿ ಜಿಲ್ಲೆಗಳಲ್ಲಿ 61 ದಿನಗಳ ಕಾಲ ಮೀನುಗಾರಿಕೆ ನಿಷೇಧ

ಮುಂಗಾರು ಪೂರ್ವ ಮಳೆ ಹಾಗೂ ಚಂಡಮಾರುತದ ಮುನ್ಸೂಚನೆ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 1 ರಿಂದ 61 ದಿನಗಳ ಕಾಲ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಸುರಕ್ಷತಾ ಕ್ರಮವಾಗಿ ಗೋಕರ್ಣ, ಮುರ್ಡೇಶ್ವರ ಸೇರಿದಂತೆ ಕರಾವಳಿಯಾದ್ಯಂತ ಜಲಸಾಹಸ ಕ್ರೀಡೆಗಳು ಮತ್ತು ಪ್ರವಾಸಿ ಬೋಟಿಂಗ್ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.
Read Full Story

04:36 PM (IST) May 21

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಚಾಲೆಂಜರ್ 2026 ಭರ್ಜರಿ ತಾಲೀಮು, 3000 ಸಿಬ್ಬಂದಿಗಳಿಂದ ತುರ್ತು ಕಾರ್ಯಾಚರಣೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಚಾಲೆಂಜರ್ 2026' ಎಂಬ ಬೃಹತ್ ತುರ್ತು ಪರಿಸ್ಥಿತಿ ಅಭ್ಯಾಸವನ್ನು ಯಶಸ್ವಿಯಾಗಿ ನಡೆಸಲಾಯಿತು. 3,000ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಈ ತಾಲೀಮಿನಲ್ಲಿ, ವಿಮಾನ ಅಪಘಾತದ ಸನ್ನಿವೇಶವನ್ನು ಸೃಷ್ಟಿಸಲಾಯಿತು.

Read Full Story

04:05 PM (IST) May 21

ಗಂಗಾವತಿ ಕಾಂಗ್ರೆಸ್‌ನಲ್ಲಿ ಹೆಚ್ಚಿದ ಗುಂಪುಗಾರಿಕೆ - ತ್ರಿಶಂಕು ಸ್ಥಿತಿಯಲ್ಲಿ ಕಾರ್ಯಕರ್ತರು

ಗಂಗಾವತಿ ನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದಲ್ಲಿರುವ ಕಾಂಗ್ರೆಸ್‌ ಪಕ್ಷ ನಾವಿಕ ಇಲ್ಲದ ಹಡಗಿನಂತಾಗಿದೆ. ಈಗಾಗಲೇ ಕಾಂಗ್ರೆಸ್‌ ಮೂರು ಗುಂಪುಗಳಿದ್ದು, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

Read Full Story

03:56 PM (IST) May 21

ಲಕ್ಕುಂಡಿಯ ಗುಪ್ತ ಸತ್ಯ - ದೇವಾಲಯಗಳ ಪತ್ತೆಗೆ ಸ್ಯಾಟಲೈಟ್ ಬಳಕೆ, ಲಕ್ಕುಂಡಿಯ ನೂರೊಂದು ಬಾವಿ, ದೇಗುಲ ಶೀಘ್ರ ಅನಾವರಣ

ಐತಿಹಾಸಿಕ ಲಕ್ಕುಂಡಿಯಲ್ಲಿರುವ ನೂರೊಂದು ಬಾವಿ ಮತ್ತು ನೂರೊಂದು ದೇವಾಲಯಗಳನ್ನು ಪತ್ತೆಹಚ್ಚಲು ಎನ್‌ಐಎಎಸ್‌ ಸಂಸ್ಥೆಯ ಸಹಕಾರದೊಂದಿಗೆ ಸ್ಯಾಟಲೈಟ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಈ ಸ್ಥಳವನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆಯುತ್ತಿದೆ.

Read Full Story

03:18 PM (IST) May 21

ಗದಗ - ಪ್ರೀತಿಸಿ ಮದುವೆಯಾದ ಗಂಡನಿಗೆ ಬೆಡ್ ರೂಂ ನಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ಚಟ್ಟ ಕಟ್ಟಿದ ಹೆಂಡತಿ!

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಇದೇ ಕಾರಣಕ್ಕೆ ಈ ಘೋರ ಕೃತ್ಯ ನಡೆದಿದೆ. 

Read Full Story

02:10 PM (IST) May 21

ತುಮಕೂರು-ಯಶವಂತಪುರ ಮೆಮು ರೈಲು ಸಮಯ ಬದಲಾವಣೆ ಸಾಧ್ಯತೆ - KSRಗೆ ವಿಸ್ತರಣೆ ಆಗುತ್ತಾ?

ಉದ್ಯೋಗಿಗಳಿಗೆ ಅನುಕೂಲವಾಗಲು ತುಮಕೂರು-ಯಶವಂತಪುರ ಮೆಮು ರೈಲಿನ ಸಮಯವನ್ನು ಬದಲಾಯಿಸುವಂತೆ ಮಾಡಿದ ಮನವಿಗೆ ನೈಋತ್ಯ ರೈಲ್ವೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಸಮಯ ಬದಲಾವಣೆ, ಹೊಸ ನಿಲುಗಡೆ ಹಾಗೂ ಮತ್ತೊಂದು ರೈಲಿನ ವೇಳಾಪಟ್ಟಿ ಪರಿಶೀಲಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

Read Full Story

01:21 PM (IST) May 21

ಹಣ ವಾಪಸ್ ಕೇಳಿದ ವ್ಯಕ್ತಿಗೆ ನರಕ ದರ್ಶನ! ಕಾರಿನ ಬಾನೆಟ್ ಮೇಲೆಯೇ ಎಳೆದೊಯ್ದ ಆರ್‌ಟಿಐ ಕಾರ್ಯಕರ್ತ ಗಂಗರಾಜು?

ಮೈಸೂರಿನಲ್ಲಿ 50:50 ನಿವೇಶನದ ಹಣ ವಾಪಸ್ ಕೇಳಿದ ವಿಚಾರಕ್ಕೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಮತ್ತು ಧನಂಜಯ ನಡುವೆ ಜಗಳ ನಡೆದಿದೆ. ಹಣ ವಾಪಸ್ ಕೇಳಿದ ಧನಂಜಯ ಕಾರಿನ ಬಾನೆಟ್ ಮೇಲೆ ಹತ್ತಿದ್ದು, ಗಂಗರಾಜು ಆತನನ್ನು ಹೊತ್ತೊಯ್ದ ಘಟನೆ ನಡೆದಿದೆ. 

Read Full Story

01:00 PM (IST) May 21

ಕೆಪಿಎಸ್ ಬೇಡ, ನಮ್ಮೂರ ಸರ್ಕಾರಿ ಶಾಲೆ ನಮ್ಮೂರಲ್ಲೇ ಉಳಿಯಲಿ - ಗ್ರಾಮಸ್ಥರ ಪ್ರತಿಭಟನೆ

ತಮ್ಮೂರಿನ ಸರ್ಕಾರಿ ಶಾಲೆಯನ್ನು ಜಾವಗಲ್ ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಸಾರಿಗೆ ವ್ಯವಸ್ಥೆಯ ಕೊರತೆ ಮತ್ತು ಮಕ್ಕಳ ಸುರಕ್ಷತೆಯ ಕಾರಣ ನೀಡಿ, "ನಮ್ಮೂರ ಶಾಲೆ ನಮ್ಮೂರಲ್ಲೇ ಉಳಿಯಲಿ" ಎಂದು ಆಗ್ರಹಿಸಿ, ಶಾಲೆಯನ್ನು ಮುಚ್ಚುವ ಬದಲು ಮೂಲಸೌಕರ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿದರು.

Read Full Story

12:31 PM (IST) May 21

Modi Chocolate Politics - ಪ್ರಧಾನಿ ಮೋದಿ-ಜಾರ್ಜಿಯಾ ಮೆಲೋನಿ ಭೇಟಿ ಬಗ್ಗೆ ಪ್ರಿಯಾಂಕ್ ಖರ್ಗೆ ಶಾಕಿಂಗ್ ಹೇಳಿಕೆ

ಇಟಲಿ ಪ್ರಧಾನಿಗೆ ಮೋದಿ ಚಾಕ್ಲೆಟ್ ನೀಡಿದ ವಿಚಾರವಾಗಿ, ಸಚಿವ ಪ್ರಿಯಾಂಕ್ ಖರ್ಗೆ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಳೆದ 13 ವರ್ಷಗಳಿಂದ ಮೋದಿ ಅವರು 'ಅಚ್ಚೇ ದಿನ್', 'ವಿಕಸಿತ್ ಭಾರತ್' ನಂತಹ ಘೋಷಣೆಗಳೆಂಬ ಚಾಕ್ಲೆಟ್ ನೀಡಿ ಜನರನ್ನು ಸಮಾಧಾನಿಸುತ್ತಿದ್ದಾರೆ ಎಂದು ವಾಗ್ದಾಳಿ.

Read Full Story

12:12 PM (IST) May 21

ನಾನು ಸಿಎಂ ಆದ್ರೆ LED ಸ್ಕ್ರೀನ್​ನಲ್ಲಿ ಕರ್ನಾಟಕ; ರೆಡಿಯಾಯ್ತು ಉಪೇಂದ್ರ ನೀಲಿ ನಕ್ಷೆ- ಅದ್ರಲ್ಲಿ ಏನೇನಿದೆ ನೋಡಿ

ನಟನಾಗಿ ಯಶಸ್ವಿಯಾದರೂ ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಕಾಣದ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ ಛಲವನ್ನು ಬಿಟ್ಟಿಲ್ಲ. ಇತ್ತೀಚೆಗೆ ತಾವು ಮುಖ್ಯಮಂತ್ರಿಯಾದರೆ ತಂತ್ರಜ್ಞಾನ ಬಳಸಿ ಪಾರದರ್ಶಕ ಆಡಳಿತ ನೀಡುವುದಾಗಿ ಮತ್ತು ಅಭಿವೃದ್ಧಿ ಕಾರ್ಯಗಳ ಉದ್ಘಾಟನಾ ಶೈಲಿಯನ್ನೇ ಬದಲಾಯಿಸುವುದಾಗಿ ಹಂಚಿಕೊಂಡಿದ್ದಾರೆ.

Read Full Story

11:18 AM (IST) May 21

Rakesh Bedi-Shocking - ಅವನು ಅಷ್ಟು ಚೆನ್ನಾಗಿ ಹಾಡಲು ಒಂದೇ ಕಾರಣ, ಏಕೆಂದರೆ ಅವನು ನನ್ನ ಮಗ (ಬಚ್ಚಾ ಹೈ ತೂ ಮೇರಾ)..!

ರಾಕೇಶ್ ಬೇಡಿ ಕ್ಯಾಮೆರಾವನ್ನು ಸುಖ್ಬೀರ್ ಕಡೆಗೆ ತಿರುಗಿಸುತ್ತಿದ್ದಂತೆಯೇ, ಸುಖ್ಬೀರ್ ತಮ್ಮದೇ ಸ್ಟೈಲ್‌ನಲ್ಲಿ ಹಿಟ್ ಸಾಂಗ್ "ದಿಲ್ ದೇನಾ ದಿಲ್ ಲೇನಾ... ಸೌದಾ ಖರಾ ಖರಾ..." ಎಂದು ಹಾಡಲು ಆರಂಭಿಸಿದರು. ಅಷ್ಟಕ್ಕೆ ಸುಮ್ಮನಾಗದ ಸುಖ್ಬೀರ್, ರಾಕೇಶ್ ಬೇಡಿ ಅವರ ಮುಖ ನೋಡುತ್ತಾ, ಹಾಗೆ ಹೇಳ್ಬಿಟ್ರು..!

Read Full Story

10:56 AM (IST) May 21

ಬೆಂಗಳೂರು ಡ್ರಗ್ಸ್ ಜಾಲ - ಚೂಡಿದಾರ ಉಡುಪು ಸಾಗಿಸುವ ನೆಪದಲ್ಲಿ ದೆಹಲಿಯಿಂದ ₹35 ಕೋಟಿ ಎಂಡಿಎಂಎ ಸಾಗಾಟ!

ಹೆಬ್ಬಾಳ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ, ಚೂಡಿದಾರ ಉಡುಪುಗಳ ಸೋಗಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತು ಸಾಗಿಸುತ್ತಿದ್ದ ಜಾಲವನ್ನು ಭೇದಿಸಿದ್ದಾರೆ. ಈ ಸಂಬಂಧ ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿ, ₹35 ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.
Read Full Story

10:42 AM (IST) May 21

Bengaluru horror - ಬೇರೆಯವರ ಹೆಸರಲ್ಲಿ ರೂಂ ಬುಕ್, ಎಂಟ್ರಿ ಇಲ್ಲದೇ ಲಾಡ್ಜ್‌ಗೆ ಬಂದವನು ನಿಗೂಢ ಸಾವು! ಜೊತೆಗಿದ್ದವನು ಎಸ್ಕೇಪ್!

ಬೆಂಗಳೂರಿನ ಮಡಿವಾಳದ ಲಾಡ್ಜ್‌ನಲ್ಲಿ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಬೇರೆಯವರ ಹೆಸರಲ್ಲಿ ಬುಕ್ ಆಗಿದ್ದ ರೂಂನಲ್ಲಿದ್ದ ಈತನ ಜೊತೆಗಿದ್ದ ವ್ಯಕ್ತಿ ಪರಾರಿಯಾಗಿದ್ದು, ಬಾಯಲ್ಲಿ ರಕ್ತ ಕಂಡುಬಂದಿರುವುದು ಸಾವಿನ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

Read Full Story

10:33 AM (IST) May 21

Shruti Haasan - 'ನಾನು ಕಮಲ್ ಹಾಸನ್ ಮಗಳಲ್ಲ, ನನ್ನ ಅಪ್ಪ ಡಾ. ರಾಮಚಂದ್ರನ್.. ನನ್ನ ಹೆಸರು ಪೂಜಾ ರಾಮಚಂದ್ರನ್'..!

ಚೆನ್ನೈನ ಗಲ್ಲಿ ಗಲ್ಲಿಯಲ್ಲೂ ನಟ ಕಮಲ್ ಹಾಸನ್ ಸಿನಿಮಾ ಪೋಸ್ಟರ್‌ಗಳು, ಜನಜಂಗುಳಿ. ಅಲ್ಲಿ ಶ್ರುತಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವೇ ಆಗುತ್ತಿರಲಿಲ್ಲ. ಸಾರಿಕಾ ಮತ್ತು ಕಮಲ್ ಹಾಸನ್ ಬೇರೆಯಾದಾಗ ಶ್ರುತಿ ಮುಂಬೈಗೆ ಶಿಫ್ಟ್ ಆದರು. ಅಲ್ಲಿ ಆಗಿದ್ದೇನು? ಅಪ್ಪನ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ಶ್ರುತಿ ನೋಡಿ..

Read Full Story

10:09 AM (IST) May 21

ಬಿಡದಿ ಟೌನ್‌ಶಿಪ್ - ಕುಮಾರಸ್ವಾಮಿ ಪಂಥಾಹ್ವಾನ ಸ್ವೀಕರಿಸಿದ ಡಿಕೆಶಿ; ರೈತರಿಗೆ ಪರಿಹಾರ, ಚರ್ಚೆಗೆ ಸಿದ್ಧ

ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಚರ್ಚಿಸಲು ಕುಮಾರಸ್ವಾಮಿ ನೀಡಿದ ಪಂಥಾಹ್ವಾನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಸ್ವೀಕರಿಸಿದ್ದಾರೆ. ರೈತರೊಂದಿಗೆ ಸಭೆ ನಡೆಸಿ, ಜೂನ್ ಮೊದಲ ವಾರದಿಂದ ಪರಿಹಾರ ವಿತರಿಸುವುದಾಗಿ ಭರವಸೆ ನೀಡಿದ್ದು, ಈ ಯೋಜನೆ ಕುಮಾರಸ್ವಾಮಿ ಕಾಲದಲ್ಲೇ ಆರಂಭವಾಗಿದ್ದನ್ನು ನೆನಪಿಸಿದ್ದಾರೆ.
Read Full Story

10:08 AM (IST) May 21

ತಿರುವನಂತಪುರ-ಕಾಸರಗೋಡು ಸೆಮಿ ಹೈಸ್ಪೀಡ್‌ ರೈಲು ಯೋಜನೆ ರದ್ದು, 530 ಕಿಮೀ ಸಿಲ್ವರ್‌ಲೈನ್ ಪ್ರಾಜೆಕ್ಟ್ ಕಮರಿತು

ಕೇರಳದ ಯುಡಿಎಫ್ ಸರ್ಕಾರವು, ಹಿಂದಿನ ಎಲ್‌ಡಿಎಫ್ ಸರ್ಕಾರದ ಮಹತ್ವಾಕಾಂಕ್ಷೆಯ ಸಿಲ್ವರ್‌ಲೈನ್ ಸೆಮಿ-ಹೈ ಸ್ಪೀಡ್ ರೈಲು ಯೋಜನೆಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ. ಪರಿಸರಕ್ಕೆ ಮಾರಕ, ಅವೈಜ್ಞಾನಿಕ ಮತ್ತು ಸಾರ್ವಜನಿಕ ವಿರೋಧದ ಕಾರಣ ನೀಡಿ, ಭೂಸ್ವಾಧೀನ ಅಧಿಸೂಚನೆಗಳನ್ನು ಹಿಂಪಡೆಯಲಾಗಿದೆ.
Read Full Story

09:58 AM (IST) May 21

1ನೇ ತರಗತಿ ಪ್ರವೇಶ ವಯೋಮಿತಿ ಸಡಿಲಿಕೆ ವಿಚಾರ - ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ಮಹತ್ವದ ಸೂಚನೆ!

2026-27ನೇ ಶೈಕ್ಷಣಿಕ ಸಾಲಿಗೆ ಒಂದನೇ ತರಗತಿ ದಾಖಲಾತಿಗೆ ನಿಗದಿಪಡಿಸಿರುವ ವಯೋಮಿತಿ ಮರುಪರಿಶೀಲಿಸುವಂತೆ ರಾಜ್ಯ ಶಾಲಾ ಶಿಕ್ಷಣ ಇಲಾಖೆಗೆ ಹೈಕೋರ್ಟ್‌ ಒಂದು ವಾರದ ಗಡುವು. ವಯೋಮಿತಿ ಆದೇಶದಿಂದ ಲಕ್ಷಾಂತರ ವಿದ್ಯಾರ್ಥಿಗಳು ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವ ಆತಂಕ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.

Read Full Story

09:34 AM (IST) May 21

ಹುಲಿ ಗಣತಿಗೆ ಇರಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾ ಕಳ್ಳತನ - ಅರಣ್ಯ ಪ್ರದೇಶದಲ್ಲಿ ನಡೆದಿದ್ದೇನು?

ಅಂಕೋಲಾ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅಳವಡಿಸಲಾಗಿದ್ದ ಟ್ರ್ಯಾಪ್ ಕ್ಯಾಮೆರಾಗಳು ಕಳ್ಳತನವಾಗುತ್ತಿವೆ. ಈ ಘಟನೆಯಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳು ನಷ್ಟವಾಗುವುದರ ಜೊತೆಗೆ, ಸಂಗ್ರಹಿಸಲಾಗಿದ್ದ ವನ್ಯಜೀವಿಗಳ ಅಮೂಲ್ಯ ಮಾಹಿತಿಯೂ ಕಳೆದುಹೋಗಿ ಗಣತಿ ಕಾರ್ಯಕ್ಕೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ ಮತ್ತು ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
Read Full Story

08:54 AM (IST) May 21

NWKRTC - ಹಳಿಯಾಳ-ಭಟ್ಕಳ ಬಸ್‌ಗೆ ಸಂಡೇ ಹಾಲಿಡೇ; ಸಾರಿಗೆ ಸಿಬ್ಬಂದಿಯಿಂದ ಅಸಂಬದ್ಧ ಸಬೂಬು

ಜನರ ಬೇಡಿಕೆಯಂತೆ ಆರಂಭವಾದ ಹಳಿಯಾಳ-ಭಟ್ಕಳ ಬಸ್ ಸೇವೆ ಕಳೆದ ಎರಡು ತಿಂಗಳಿಂದ ಅನಿಯಮಿತವಾಗಿದ್ದು, ವಿಶೇಷವಾಗಿ ಭಾನುವಾರದಂದು ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಪ್ರಯಾಣಿಕರು, ನೌಕರರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಸಾರಿಗೆ ಇಲಾಖೆ ಶೀಘ್ರದಲ್ಲೇ ಸೇವೆ ಪುನರಾರಂಭಿಸುವುದಾಗಿ ಭರವಸೆ ನೀಡಿದೆ.
Read Full Story

08:37 AM (IST) May 21

ಸಿಎಂ ಬದಲಾಗಬೇಕು ಅಂತ ನಾನು ಎಲ್ಲೂ ಹೇಳಿಲ್ಲ; ಆ ಮಾತು ಹೇಳ್ತಿರೋದೇ ರಾಜಣ್ಣ - ಡಿಕೆ ಶಿವಕುಮಾರ್

ಡಾ.ಪರಮೇಶ್ವರ್‌ ಅವರನ್ನು ಸಿಎಂ ಮಾಡಬೇಕು ಎಂಬ ರಾಜಣ್ಣ ಹೇಳಿಕೆಯ ಅರ್ಥ ಸಿದ್ದರಾಮಯ್ಯ ಅಧಿಕಾರದಿಂದ ಇಳಿಯಬೇಕೆಂದೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ. ತಾನು ಎಲ್ಲೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿಲ್ಲ, ಆದರೆ ರಾಜಣ್ಣ ಅವರೇ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಸ್ಪಷ್ಟನೆ.

Read Full Story

08:21 AM (IST) May 21

40 ಸಾವಿರ ಜನರಿಗೆ ವಂಚಿಸಿದವ ಶಿವಾನಂದನ 15 ಬ್ಯಾಂಕ್ ಖಾತೆಯಲ್ಲಿದ್ದ ₹250 ಕೋಟಿ ಜಪ್ತಿ!

ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಬಹುಕೋಟಿ ಠೇವಣಿ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ, ಮಾಲೀಕ ಶಿವಾನಂದ ನೀಲಣ್ಣನವರಿಗೆ ಸೇರಿದ 15 ಬ್ಯಾಂಕ್‌ ಖಾತೆಗಳಿಂದ ಸುಮಾರು ₹250 ಕೋಟಿ ಜಪ್ತಿ ಮಾಡಿದೆ. ಈ ಸಂಸ್ಥೆಯು ಸುಮಾರು 40 ಸಾವಿರ ಹೂಡಿಕೆದಾರರಿಂದ ₹1,180 ಕೋಟಿಗೂ ಅಧಿಕ ಹಣವನ್ನು ಸಂಗ್ರಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
Read Full Story

08:11 AM (IST) May 21

ಸರ್ಕಾರಿ ಶಾಲೆಗೆ ಮಗು ದಾಖಲಿಸಿದರೆ ₹1000 ಎಫ್‌ಡಿ; ಮುಖ್ಯೋಪಾಧ್ಯಾಯರಿಂದ ಹೊಸ ಯೋಜನೆ

ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಎಂ. ಪಾಟೀಲ ಅವರು ಶಾಲಾ ದಾಖಲಾತಿ ಹೆಚ್ಚಿಸಲು ವಿನೂತನ ಯೋಜನೆ ಆರಂಭಿಸಿದ್ದಾರೆ. ಒಂದನೇ ತರಗತಿಗೆ ದಾಖಲಾಗುವ ಪ್ರತಿ ಮಗುವಿನ ಹೆಸರಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್ ಇಡುವ ಮೂಲಕ ಅವರು ಮಾದರಿಯಾಗಿದ್ದಾರೆ.

Read Full Story

07:59 AM (IST) May 21

ಮುಸ್ಲಿಂ ಪ್ರೇಮಿಯೊಂದಿಗೆ ಇರುವೆ ಎಂದ ಸಿಖ್ ಮಗಳು, ಮಾನಸಿಕ ಆರೋಗ್ಯ ಪರೀಕ್ಷೆಗೆ ತಾಯಿ ಕೋರಿದ್ದ ಅರ್ಜಿ ವಜಾ

ಮುಸ್ಲಿಂ ಪ್ರೇಮಿಯೊಂದಿಗೆ ವಾಸಿಸಲು ಬಯಸಿದ 21 ವರ್ಷದ ಸಿಖ್ ಯುವತಿಯ ಮಾನಸಿಕ ಆರೋಗ್ಯ ಮೌಲ್ಯಮಾಪನಕ್ಕೆ ಕೋರಿ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಏನಿದು ಪ್ರಕರಣ, ಹೈಕೋರ್ಟ್ ಹೇಳಿದ್ದೇನು ಪೂರ್ತಿ ಓದಿ.

Read Full Story

07:57 AM (IST) May 21

ಗದಗನಲ್ಲಿ ನಡೆಯುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು, ಬಸವಾದಿ ಶರಣರಿಂದ ತೀವ್ರ ವಿರೋದ

ಗದಗಿನಲ್ಲಿ ಕನ್ಹೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಹಿಂದೂ ಸಮಾವೇಶಕ್ಕೆ ಸಮಾನ ಮನಸ್ಕರು ಮತ್ತು ಬಸವಾದಿ ಶರಣರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಶರಣ ಪರಂಪರೆಯನ್ನು ನಾಶಮಾಡುವ ಮತ್ತು ಕೋಮುದ್ವೇಷ ಬಿತ್ತುವ RSS ಪ್ರೇರಿತ ಹುನ್ನಾರ ಎಂದು ಅವರು ಆರೋಪಿಸಿದ್ದಾರೆ.

Read Full Story

07:39 AM (IST) May 21

Vijayapur - ಅವೇಶದಿಂದ ತಂದೆಯ ಪೆಟ್ರೋಲ್ ಬಂಕ್ ನಾಶಗೊಳಿಸಿದ ಮಗ; ಎಲ್ಲಾ ಪೀಸ್ ಪೀಸ್

ನಾಲತವಾಡದಲ್ಲಿ ಮಾಲೀಕನ ಪುತ್ರನೇ ತನ್ನ ತಂದೆಯ ಪೆಟ್ರೋಲ್ ಬಂಕ್ ಅನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾನೆ. ಈ ಘಟನೆಯಿಂದಾಗಿ ಸ್ಥಳೀಯ ವಾಹನ ಸವಾರರು ಪೆಟ್ರೋಲ್, ಡೀಸೆಲ್‌ಗಾಗಿ ಪರದಾಡುವಂತಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

07:34 AM (IST) May 21

ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್‌ - ಶಾಲಾರಂಭಕ್ಕೂ ಮುನ್ನವೇ ಕೈ ಸೇರಲಿವೆ ಪಠ್ಯಪುಸ್ತಕಗಳು!

2026-27ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಮುದ್ರಣ ಕಾರ್ಯವು ಅಂತಿಮ ಹಂತದಲ್ಲಿದ್ದು, ಶೇ. 85ಕ್ಕೂ ಹೆಚ್ಚು ಮುದ್ರಣ ಪೂರ್ಣಗೊಂಡಿದೆ. ಈಗಾಗಲೇ ಶಾಲೆಗಳಿಗೆ ಪುಸ್ತಕಗಳ ಸರಬರಾಜು ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಶಾಲಾರಂಭದ ವೇಳೆಗೆ ಮಕ್ಕಳಿಗೆ ಪುಸ್ತಕಗಳು ದೊರೆಯುವ ಭರವಸೆ ಮೂಡಿದೆ.

Read Full Story

07:27 AM (IST) May 21

ಹಂಪಿಯ ಉತ್ಖನನದಲ್ಲಿ ಭಗ್ನಗೊಂಡ 2 ಆಳ್ವರ್‌ ವಿಗ್ರಹ, ಮೂರು ಪ್ರತಿಷ್ಠಾನ ಪೀಠ ಪತ್ತೆ

ಹಂಪಿಯ ಹಜಾರರಾಮ ದೇಗುಲದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಡೆಸಿದ ಉತ್ಖನನದಲ್ಲಿ, ಭಗ್ನಗೊಂಡ ಪುರಾತನ ಆಳ್ವರ್ ವಿಗ್ರಹಗಳು ಮತ್ತು ಪೀಠಗಳು ಪತ್ತೆಯಾಗಿವೆ. 1565ರ ತಾಳಿಕೋಟೆ ಕದನದ ನಂತರ ನಡೆದ ದಾಳಿಗೆ ಸಾಕ್ಷಿಯಾಗಿವೆ.

Read Full Story

More Trending News