LIVE NOW
Published : Mar 18, 2026, 06:43 AM ISTUpdated : Mar 18, 2026, 11:44 PM IST

Karnataka News Live: ಮಂಗಳೂರು - 9 ವರ್ಷದ ಬಾಲಕನಿಗೆ ತಿಂಡಿ ಕೊಟ್ಟು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ 33 ವರ್ಷದ ವ್ಯಕ್ತಿ!

ಸಾರಾಂಶ

ಬೆಂಗಳೂರು: ಮುಂದಿನ ನಾಲ್ಕು ದಿನಗಳವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಚದುರಿದಂತೆ ಮಳೆಯಾಗಲಿದೆ. ಕೆಲ ಪ್ರದೇಶಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯುಗಾದಿ ಹಬ್ಬದ ಮುನ್ನ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿದು ಧರೆಯನ್ನು ಸ್ವಲ್ಪ ತಂಪು ಮಾಡಿದೆ. ಧಾರವಾಡದ ಕಲಘಟಗಿ ಸೇರಿ ಕೆಲವೆಡೆ ಆಲಿಕಲ್ಲು ಮಳೆಯಾಗಿದೆ.

ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಹಾಸನ, ರಾಮನಗರ, ಕೊಡಗು, ತುಮಕೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದೆ.

ಮಳೆ ವಿವರ:

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಾಸನ ಮತ್ತು ಮಾಗಡಿಯಲ್ಲಿ ತಲಾ 5 ಸೆಂ.ಮೀ. ಮಳೆಯಾಗಿದೆ. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ 4 ಸೆಂ.ಮೀ, ಧರ್ಮಸ್ಥಳದಲ್ಲಿ 3 ಸೆಂ.ಮೀ, ದಾವಣಗೆರೆ ನಗರದಲ್ಲಿ 3 ಸೆಂ.ಮೀ ಮತ್ತು ಚನ್ನಗಿರಿಯಲ್ಲಿ 2 ಸೆಂ.ಮೀ ಮಳೆಯಾದ ವರದಿಯಾಗಿದೆ.

ಕುಣಿಗಲ್ ಮತ್ತು ಬೆಂಗಳೂರು ನಗರದ ಟಿ.ಜಿ. ಹಳ್ಳಿ ಎಚ್‌ಎಂಎಸ್ ಕೇಂದ್ರಗಳಲ್ಲಿ ತಲಾ 2 ಸೆಂ.ಮೀ. ಮಳೆ ಸುರಿದಿದೆ. ಚಿತ್ರದುರ್ಗ ನಗರ, ನಾಯಕನಹಟ್ಟಿ, ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಬೀದರ್ ಜಿಲ್ಲೆಯ ಮಂತಾಳದಲ್ಲಿ ತಲಾ 1 ಸೆಂ.ಮೀ. ಮಳೆ ಸುರಿದಿದೆ.

11:44 PM (IST) Mar 18

ಮಂಗಳೂರು - 9 ವರ್ಷದ ಬಾಲಕನಿಗೆ ತಿಂಡಿ ಕೊಟ್ಟು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ 33 ವರ್ಷದ ವ್ಯಕ್ತಿ!

ಮಂಗಳೂರಿನಲ್ಲಿ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಣಾಜೆ ಪೊಲೀಸರು 33 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಪಾಕೆಟ್ ಮನಿ ನೆಪದಲ್ಲಿ ಬಾಲಕನನ್ನು ಗೃಹಮಿಂಗ್ ಮಾಡಿ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Read Full Story

11:24 PM (IST) Mar 18

ಮುಂಬೈನಿಂದ ಮಂಗಳೂರು ಕೊಂಕಣ ರೈಲು ಮಾರ್ಗದಲ್ಲಿ ಅಧಿಕಾರಿಗಳ ತಪಾಸಣೆ, ಕಾರಣವೇನು?

ಮುಂಬಯಿಯಿಂದ ಮಂಗಳೂರಿನ ತೋಕೂರುವರೆಗಿನ ಕೊಂಕಣ ರೈಲು ಮಾರ್ಗದಲ್ಲಿ ವಾರ್ಷಿಕ ಮಳೆಗಾಲ ಪೂರ್ವ ತಪಾಸಣೆ ಆರಂಭವಾಗಿದೆ. ರೈಲು ಹಳಿ, ಸುರಂಗ, ಭೂಕುಸಿತ ಸಾಧ್ಯತೆಯಿರುವ ಪ್ರದೇಶಗಳನ್ನು ಪರಿಶೀಲಿಸಿ, ಮಳೆಗಾಲದಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿರಂತರ ಸಂಚಾರವನ್ನು ಖಚಿತಪಡಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ.
Read Full Story

10:56 PM (IST) Mar 18

Mangaluru - ಎಂಆರ್‌ಪಿಎಲ್ ಹೊಸ ಮೈಲಿಗಲ್ಲು 1000ನೇ ಪೆಟ್‌ಕೋಕ್ ರೈಲು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ರವಾನೆ

ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ತನ್ನ ಎಂಎಂಆರ್‌ಟಿ ರೈಲ್ವೆ ಸೈಡಿಂಗ್‌ನಿಂದ 1,000ನೇ ಪೆಟ್‌ಕೋಕ್ ರೈಲು ರೇಕ್ ಅನ್ನು ಯಶಸ್ವಿಯಾಗಿ ರವಾನಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಐತಿಹಾಸಿಕ ರೇಕ್ ಅನ್ನು ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ಕಳುಹಿಸಲಾಗಿದ್ದು, ಈ ಸಾಧನೆಯು ಸಂಸ್ಥೆಯ ಕಾರ್ಯಕ್ಷಮತೆ ಮತ್ತು ಲಾಜಿಸ್ಟಿಕ್ಸ್ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.
Read Full Story

10:34 PM (IST) Mar 18

Karnataka Rains - ರಾಜ್ಯದಲ್ಲಿ ಆಲಿಕಲ್ಲು ಮಳೆ ಅಬ್ಬರ - ಹಲವು ಜಿಲ್ಲೆಗಳಲ್ಲಿ ಜನರಿಗೆ ಅಚ್ಚರಿ

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಏಕಾಏಕಿ ಸುರಿದ ಆಲಿಕಲ್ಲು ಮಳೆ ಜನರನ್ನು ಬೆಚ್ಚಿಬೀಳುವಂತೆ ಮಾಡಿತು. ಮಧ್ಯಾಹ್ನದಿಂದಲೇ ಆಕಾಶದಲ್ಲಿ ದಟ್ಟ ಮೋಡಗಳು ಕವಿದು ಮಳೆಯ ಸುಳಿವು ನೀಡುತ್ತಿದ್ದವು.

Read Full Story

10:34 PM (IST) Mar 18

ಬೆಚ್ಚಿಬಿದ್ದ ಬೆಂಗಳೂರು - ಅಪ್ಪನನ್ನೇ ಮೂಟೆಯಲ್ಲಿ ಕಟ್ಟಿ ಕೋರಿಯರ್​ ಮಾಡಲು ಬಂದ ಪುತ್ರಿ! ಕಾರಣ ಸರ್ಕಾರವಂತೆ ಕೇಳಿ

ಬೆಂಗಳೂರಿನಲ್ಲಿ ಯುವತಿಯೊಬ್ಬಳು ಹಬ್ಬದ ಬಸ್ ದರ ಏರಿಕೆಯನ್ನು ವಿರೋಧಿಸಿ ತನ್ನ ತಂದೆಯನ್ನೇ ಮೂಟೆಯಲ್ಲಿ ಕಟ್ಟಿ ಕೊರಿಯರ್ ಮಾಡಲು ಯತ್ನಿಸಿದ್ದಾಳೆ. ಕೊರಿಯರ್ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಇದೊಂದು 'ಪ್ರಾಂಕ್' ಎಂದು ಹೇಳಿದ ಕುಟುಂಬಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿದ್ದಾರೆ.
Read Full Story

10:20 PM (IST) Mar 18

ಮಂಗಳೂರು ಜೈಲಿನಲ್ಲಿ ಕೈದಿಗಳ ದಾಂಧಲೆ - ಜೈಲಾಧಿಕಾರಿ ಮೇಲೆ ಹಲ್ಲೆ, ಬೆಂಕಿ ಹಚ್ಚಿ ದುಸ್ಸಾಹಸ, ಸರ್ಕಾರಿ ಆಸ್ತಿಗೆ ಹಾನಿ!

ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಹಿಂಸಾತ್ಮಕ ಕೃತ್ಯ ಎಸಗಿದ್ದಾರೆ. ಜೈಲು ಅಧೀಕ್ಷಕರ ಮೇಲೆ ಹಲ್ಲೆಗೆ ಯತ್ನಿಸಿ, ಸರ್ಕಾರಿ ಆಸ್ತಿಗೆ ಹಾನಿ ಮಾಡಿ, ಹಾಸಿಗೆಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದಾರೆ. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Full Story

09:56 PM (IST) Mar 18

Love​ ಹೇಗೆಲ್ಲಾ ಶುರುವಾಗತ್ತೆ ಗೊತ್ತಾ? Bigg Boss ರಕ್ಷಿತಾ ಶೆಟ್ಟಿ ಬಾಯಲ್ಲೇ ಕೇಳಿ ವೆರೈಟಿ ವೆರೈಟಿ ವಿಧಾನ

ಬಿಗ್​ಬಾಸ್​ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಕನಸು ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮೊದಲ ನೋಟದ ಪ್ರೀತಿ ಮತ್ತು ಆಪ್ತ ಸ್ನೇಹಿತನ ಮೇಲಾಗುವ ಪ್ರೀತಿಯ ಬಗ್ಗೆ ಅವರು ಮಾತನಾಡಿದ್ದಾರೆ.
Read Full Story

09:36 PM (IST) Mar 18

ಬದಲಾಗಲಿದೆ ಕನ್ನಡದ ಮೊಟ್ಟಮೊದಲ ಸ್ಯಾಟಲೈಟ್‌ ಚಾನೆಲ್‌ ಉದಯ ಟಿವಿ ಹೆಸರು? ಕನ್ನಡಿಗರಿಗೆ ಇದೆ ಖುಷಿ ಸುದ್ದಿ

ಕನ್ನಡದ ಪ್ರಖ್ಯಾತ ಚಾನೆಲ್ ಉದಯ ಟಿವಿಯು ಸನ್ ನೆಟ್‌ವರ್ಕ್‌ನಿಂದ ಮರು ಬ್ರ್ಯಾಂಡಿಂಗ್‌ಗೆ ಒಳಗಾಗುತ್ತಿದೆ. ಯುಗಾದಿಯ ವೇಳೆಗೆ 'ಸನ್ ಉದಯ ಟಿವಿ' ಎಂದು ಹೊಸ ಹೆಸರು ಮತ್ತು ಲೋಗೋದೊಂದಿಗೆ ಬದಲಾಗುವ ನಿರೀಕ್ಷೆಯಿದೆ. 

Read Full Story

09:11 PM (IST) Mar 18

Rajamouli - ಈ ಐಡಿಯಾ ನನಗೆ ಯಾಕೆ ಬರಲಿಲ್ಲ? - ಸುಕುಮಾರ್ ಸೀನ್ ನೋಡಿ ರಾಜಮೌಳಿ ಶಾಕ್

ಖ್ಯಾತ ನಿರ್ದೇಶಕ ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ 'ವಾರಣಾಸಿ' ಎಂಬ ಸಿನಿಮಾ ಮಾಡುತ್ತಿದ್ದಾರೆ. ರಾಜಮೌಳಿ ಒಂದು ಸಂದರ್ಶನದಲ್ಲಿ ತಮಗೆ ಇಷ್ಟವಾದ ನಿರ್ದೇಶಕರ ಬಗ್ಗೆ ಮಾತನಾಡಿದ್ದಾರೆ.

Read Full Story

09:10 PM (IST) Mar 18

ಯುಗಾದಿ ಸಂಭ್ರಮಕ್ಕೆ ಸರ್ಕಾರಿ ನೌಕರರಿಗೆ ಕಹಿ, ಹಬ್ಬದ ದಿನವೂ ಕೆಲಸಕ್ಕೆ ಬರುವಂತೆ ಸರ್ಕಾರ ಆದೇಶ!

ವಿಧಾನಸಭೆ ಅಧಿವೇಶನದ ಬಾಕಿ ಪ್ರಶ್ನೆಗಳಿಗೆ ಉತ್ತರ ಸಿದ್ಧಪಡಿಸುವ ಸಲುವಾಗಿ, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಯುಗಾದಿ ಹಬ್ಬದ ರಜೆಯನ್ನು ರದ್ದುಗೊಳಿಸಿ ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸರ್ಕಾರ ಆದೇಶಿಸಿದೆ. ಈ ಕ್ರಮವು ಸಿಬ್ಬಂದಿ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
Read Full Story

08:42 PM (IST) Mar 18

ಇ-ಸ್ವತ್ತು ತಂತ್ರಾಂಶ ದೋಷ ಸತ್ಯ - 15 ದಿನಗಳಲ್ಲಿ ಪರಿಹಾರ - ಸಚಿವ ಪ್ರಿಯಾಂಕ್‌ ಖರ್ಗೆ

ಇ-ಸ್ವತ್ತು ನೀಡುವ ತಂತ್ರಾಂಶದಲ್ಲಿ ನ್ಯೂನ್ಯತೆ ಆಗಿರುವುದು ಸತ್ಯ. ಪ್ರಸ್ತುತ ಸಾಕಷ್ಟು ಸಮಸ್ಯೆ ಬಗೆಹರಿಸಿದ್ದು, 15 ದಿನಗಳಲ್ಲಿ ವ್ಯವಸ್ಥೆ ಸಂಪೂರ್ಣ ಸುಧಾರಿಸಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

Read Full Story

08:19 PM (IST) Mar 18

ಮಂಗಳೂರು - ಭೂ ವಿವಾದದ ಸೇಡು, ಅಪ್ಪನಿಗೂ ಶೆಟ್ಟಿಗೂ 2 ಕೋಟಿ ಜಾಗದ ವ್ಯಾಜ್ಯ, ಕಾರು ಹರಿಸಿ ಹತ್ಯೆಗೆ ಯತ್ನಿಸಿದ ಮಗ!

ಮಂಗಳೂರಿನಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸು ವಿವಾದದ ಹಿನ್ನೆಲೆಯಲ್ಲಿ, ಮೊಹಮ್ಮದ್ ಶರೀಫ್ ಎಂಬಾತ ಮೋಹನ್ ದಾಸ್ ಶೆಟ್ಟಿ ಎಂಬುವವರ ಮೇಲೆ ಕಾರು ಹರಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಆಘಾತಕಾರಿ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕದ್ರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

07:18 PM (IST) Mar 18

ರಸ್ತೆಯಲ್ಲಿ ಗಲಾಟೆ - ಡ್ರೈವರ್‌ಗೆ ಹೊಡೆಯುವುದನ್ನು ತಡೆಯಲು ಹೋದ ತಾಯಿಯನ್ನೇ ಕೆಳಗೆ ತಳ್ಳಿದ ಮಗ

ಬೆಂಗಳೂರಿನಲ್ಲಿ ಕ್ಯಾಬ್ ಡಿಕ್ಕಿ ಹೊಡೆದಿದ್ದಕ್ಕೆ ಸಿಟ್ಟಿಗೆದ್ದ ಕಾರು ಚಾಲಕ, ಕ್ಯಾಬ್ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದನ್ನು ತಡೆಯಲು ಬಂದ ತನ್ನ ತಾಯಿಯನ್ನೇ ದೂರ ತಳ್ಳಿ ಹಲ್ಲೆ ಮಾಡಿದ್ದು, ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

07:05 PM (IST) Mar 18

ಯುಗಾದಿ ಹೊಸತೊಡಕಿಗೆ ಮಾಂಸ ಪ್ರಿಯರಿಗೆ ಗುಡ್‌ನ್ಯೂಸ್‌, ಮಾಂಸ-ಮೀನು ಬೆಲೆಯಲ್ಲಿ ಭಾರೀ ಇಳಿಕೆ!

ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಹೋಟೆಲ್‌ಗಳು ಮಾಂಸ ಮತ್ತು ಮೀನು ಖರೀದಿ ಕಡಿಮೆ ಮಾಡಿವೆ. ಇದರಿಂದಾಗಿ ಮಾಂಸದ ಮಾರಾಟದಲ್ಲಿ ಸುಮಾರು 30% ಇಳಿಕೆಯಾಗಿದ್ದು, ಯುಗಾದಿ ಹೊಸತೊಡಕಿಗೆ ಮಾಂಸದ ಬೆಲೆಗಳು ಇಳಿಕೆಯಾಗುವ ನಿರೀಕ್ಷೆಯಿದೆ.
Read Full Story

07:02 PM (IST) Mar 18

ಯುಗಾದಿ ಹಬ್ಬ ಹಿನ್ನೆಲೆ ಬೆಂಗಳೂರಿಂದ ಊರಿಗೆ - ತುಂಬಿ ತುಳುಕುತ್ತಿರುವ ಮೆಜೆಸ್ಟಿಕ್, ಟಿಕೆಟ್ ಬೆಲೆ ದುಬಾರಿ!

ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದ್ದು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜನಜಂಗುಳಿ ಉಂಟಾಗಿದೆ. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ವಿಪರೀತವಾಗಿ ಏರಿಸಿದ್ದು, ಇದಕ್ಕೆ ಪ್ರತಿಯಾಗಿ ಸಾರಿಗೆ ಇಲಾಖೆ ದಾಳಿ ನಡೆಸಿ ದಂಡ ವಿಧಿಸುತ್ತಿದೆ.
Read Full Story

06:47 PM (IST) Mar 18

Rishab Shetty - ತೆಲುಗಿನ ಇಬ್ಬರು ಸ್ಟಾರ್ ಹೀರೋಗಳ ಜೊತೆ ರಿಷಬ್ ಶೆಟ್ಟಿ ಸಿನಿಮಾ? ಯಾರವರು ಗೊತ್ತಾ?

'ಕಾಂತಾರ'ದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ರಿಷಬ್ ಶೆಟ್ಟಿ, ನಟನಿಗಿಂತ ನಿರ್ದೇಶಕನಾಗಿ ಹೆಚ್ಚು ಬೇಡಿಕೆ ಗಳಿಸಿದ್ದಾರೆ. ಹಲವು ಸ್ಟಾರ್ ನಟರು ರಿಷಬ್ ಜೊತೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಆ ಇಬ್ಬರು ಟಾಲಿವುಡ್ ಸ್ಟಾರ್‌ಗಳು ಯಾರು ಗೊತ್ತಾ?

Read Full Story

06:31 PM (IST) Mar 18

ರಾಜ್ಯದಲ್ಲಿ ಔಷಧಿಗಳ ಖರೀದಿಗೆ 868 ಕೋಟಿ ಟೆಂಡರ್‌ - ಸಚಿವ ದಿನೇಶ್‌ ಗುಂಡೂರಾವ್‌

ರಾಜ್ಯದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಇಲ್ಲ. 868 ಕೋಟಿ ರು. ಮೌಲ್ಯದ ಔಷಧಿ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ಔಷಧಿಗಳ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Read Full Story

06:10 PM (IST) Mar 18

ಮಗನಿಗೆ ಮದ್ವೆ ಮಾಡಿದ್ರೆ ನೀವು ಫಿನಿಶ್‌ ಅಂತಾ ತಾಯಿಗೆ ಹೇಳಿದ ಆರ್ಯವರ್ಧನ್‌ ಗುರೂಜಿ, 'This is business' ಎಂದ ನೆಟ್ಟಿಗರು!

ಮಾಜಿ ಬಿಗ್‌ಬಾಸ್‌ ಸ್ಪರ್ಧಿ ಆರ್ಯವರ್ಧನ್‌ ಗುರೂಜಿ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಅವರು ಯುವಕನೊಬ್ಬನಿಗೆ ಎರಡು ಮದುವೆ ಹಾಗೂ ಸೊಸೆಯಿಂದ ತಾಯಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ.

Read Full Story

05:57 PM (IST) Mar 18

ಮದುವೆಯಾಗಿ 10 ವರ್ಷ; ಇನ್ನೇನು ಡಿವೋರ್ಸ್‌ ಘೋಷಣೆ ಮಾಡ್ತಾರೆ ಎನ್ನುವಾಗಲೇ ಅಚ್ಚರಿ ಸುದ್ದಿ ಕೊಟ್ಟ ನಟಿ!

Actress Divyanka Tripathi: ನಟಿ ದಿವ್ಯಾಂಕಾ ತ್ರಿಪಾಠಿ, ವಿವೇಕ್ ದಹಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಶೀಘ್ರದಲ್ಲೇ ಸೀಮಂತ ಕಾರ್ಯಕ್ರಮ ನಡೆಯಲಿದೆ ಎಂದೂ ವರದಿಗಳು ಹೇಳುತ್ತಿವೆ. ಆದರೆ, ಈ ಜೋಡಿ ಈ ಬಗ್ಗೆ ಇನ್ನೂ ಅಧಿಕೃತವಾಗಿ ಏನನ್ನೂ ಖಚಿತಪಡಿಸಿಲ್ಲ.

 

Read Full Story

05:42 PM (IST) Mar 18

ವಿಜಯನಗರ ಜಿಲ್ಲೆಯ ರೌಡಿ ಶೀಟರ್‌ಗಳ ಬೆವರಿಳಿಸಿದ ಖಡಕ್ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ !

ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಅವರು, 220 ರೌಡಿಶೀಟರ್‌ಗಳಿಗೆ ಪರೇಡ್ ನಡೆಸಿ, ಅಪರಾಧ ಚಟುವಟಿಕೆಗಳನ್ನು ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುಧಾರಣೆಗೆ ಅವಕಾಶವಿದ್ದು, ಸಮಾಜದಲ್ಲಿ ಗೌರವಯುತ ಜೀವನ ನಡೆಸುವಂತೆ ಸಲಹೆ ನೀಡಿದ ಅವರು, ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Read Full Story

05:25 PM (IST) Mar 18

'ನನ್ನ ಮರ್ಯಾದೆ ಪ್ರಶ್ನೆ ಅಂದಿದ್ದೆ, ಆದ್ರೂ ಕೇಳಲಿಲ್ಲ..' - ನಿರ್ದೇಶಕ ಪ್ರೇಮ್ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ!

ಕನ್ನಡದ 'ಕೆಡಿ' ಚಿತ್ರದ ವಿವಾದಾತ್ಮಕ ಹಾಡಿನ ಕುರಿತು ನಟಿ ನೋರಾ ಫತೇಹಿ ಮೌನ ಮುರಿದಿದ್ದಾರೆ. ತಮಗೆ ಕನ್ನಡ ಬಾರದ ಕಾರಣ ನಿರ್ದೇಶಕರನ್ನು ನಂಬಿದ್ದೆ ಎಂದಿರುವ ಅವರು, ಹಾಡಿನ ಹಿಂದಿ ಅವತರಣಿಕೆಯ ಅಶ್ಲೀಲ ಸಾಹಿತ್ಯದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದಿದ್ದಾರೆ.

Read Full Story

05:16 PM (IST) Mar 18

ಅಡಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ - ಸಚಿವ ಚಲುವರಾಯಸ್ವಾಮಿ

ಪಾನ್‌ ಅಥವಾ ಪಾನ್‌ ಮಸಾಲದಂತಹ ಪದಾರ್ಥಗಳಲ್ಲಿ ಅಡಕೆಯನ್ನು ಒಂದು ಅಂಶವಾಗಿ ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ಹಾಗೂ ತಂಬಾಕು ಸೇರಿಸದೇ ಇದ್ದರೆ ಹಾನಿಕಾರಕವಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.

Read Full Story

05:01 PM (IST) Mar 18

ಫೋಟೋಗಳು - Dhurandhar Movie ಸ್ಟಾರ್ ರಣವೀರ್‌ ಸಿಂಗ್ 100 ಕೋಟಿ ರೂ. ಬಂಗಲೆಯಲ್ಲಿ ಏನೇನಿದೆ?

Actor Ranveer Singh: ಬಾಲಿವುಡ್‌ ನಟ ರಣವೀರ್ ಸಿಂಗ್ ಅವರ ಮನೆಗಳು ಕೇವಲ ಐಷಾರಾಮಿ ಕಟ್ಟಡಗಳಲ್ಲ, ಅವು ಅವರ ಯಶಸ್ಸು, ಮಹತ್ವಾಕಾಂಕ್ಷೆ ಮತ್ತು ಪಯಣದ ಪ್ರತಿಬಿಂಬ. ಬಾಂದ್ರಾದ ಬಂಗಲೆಯಾಗಿರಲಿ ಅಥವಾ ಅಲಿಬಾಗ್‌ನ ರೆಸಾರ್ಟ್ ಆಗಿರಲಿ, ಪ್ರತಿಯೊಂದು ಆಸ್ತಿಯೂ ಈ ನಟ ಸಾಗಿ ಬಂದ ಹಾದಿಯ ಕಥೆಯನ್ನು ಹೇಳುತ್ತದೆ.

 

Read Full Story

04:57 PM (IST) Mar 18

Censor Cuts - ಧುರಂಧರ್ 2ಗೆ A ಸರ್ಟಿಫಿಕೇಟ್ - 21 ಕಟ್ ಸೂಚಿಸಿದ ಸೆನ್ಸಾರ್ ಬೋರ್ಡ್, ಕಾರಣ ಏನು?

ರಣ್‌ವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಸೆನ್ಸಾರ್ ಬೋರ್ಡ್ ಈ ಚಿತ್ರಕ್ಕೆ 'A' ಸರ್ಟಿಫಿಕೇಟ್ ನೀಡಿದೆ. ಸಿನಿಮಾದಲ್ಲಿನ ಹಿಂಸಾಚಾರದ ದೃಶ್ಯಗಳಿಂದಾಗಿ ಬರೋಬ್ಬರಿ 21 ಕಟ್‌ಗಳನ್ನು ಸೂಚಿಸಿದ್ದು, ಒಂದು ನಿಮಿಷಕ್ಕೂ ಹೆಚ್ಚು ದೃಶ್ಯಗಳಿಗೆ ಕತ್ತರಿ ಹಾಕಲಾಗಿದೆ.

Read Full Story

04:39 PM (IST) Mar 18

ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ - ಡಿಸಿಎಂ ಡಿ.ಕೆ.ಶಿವಕುಮಾರ್

ಮಲೆನಾಡಿನ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ. ಇದುವರೆಗೂ ನದಿ ಜೋಡಣೆ ಎಲ್ಲೂ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತಮ್ಮನ್ನು ಭೇಟಿಯಾದ ಬೇಡ್ತಿ-ಅಘನಾಶಿನಿ ಸಮಿತಿ ನಿಯೋಗಕ್ಕೆ ಭರವಸೆ ನೀಡಿದರು.

Read Full Story

04:35 PM (IST) Mar 18

ಬೀದರ್ - ಬಸವಕಲ್ಯಾಣದಲ್ಲಿ ಭೀಕರ ದುರಂತ, ಲಾರಿ ಡಿಕ್ಕಿಯಾಗಿ ಕ್ಷಣಾರ್ಧದಲ್ಲಿ ದಂಪತಿ ಸ್ಥಳದಲ್ಲೇ ಸಾವು!

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಂಪತಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

04:24 PM (IST) Mar 18

ವಿದ್ಯುತ್ ಖರೀದಿಗೆ ಸಕ್ಕರೆ ಕಾರ್ಖಾನೆಗಳ ಜೊತೆ ಒಪ್ಪಂದ - ಸಚಿವ ಶಿವಾನಂದ ಪಾಟೀಲ

ಮುಂದಿನ ಕಬ್ಬು ನುರಿಸುವ ಹಂಗಾಮಿನಿಂದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

Read Full Story

04:23 PM (IST) Mar 18

ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ - ಡ್ರಗ್ಸ್ ಕಂಟ್ರೋಲರ್ ಶ್ಯಾಮಲಾ ಲೋಕಾ ಬಲೆಗೆ

ಮೆಡಿಕಲ್ ಸ್ಟೋರ್ ಲೈಸೆನ್ಸ್ ನವೀಕರಣಕ್ಕೆ 35,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೋಲಾರ ಸಹಾಯಕ ಡ್ರಗ್ಸ್ ಕಂಟ್ರೋಲರ್ ಲೋಕಾ ಬಲೆಗೆ ಬಿದ್ದಿದ್ದಾರೆ. ಮಾಲೂರು ತಾಲೂಕಿನ ಟೇಕಲ್ ಬಳಿ ಲಂಚ ಸ್ವೀಕಾರ ಮಾಡುತ್ತಿದ್ದ ಮೂವರು ಬಲೆಗೆ ಬಿದ್ದಿದ್ದಾರೆ.

Read Full Story

03:15 PM (IST) Mar 18

ಚಿಕ್ಕಮಗಳೂರು - ಒಂದು ಕ್ಲಿಕ್, ಖಾಲಿಯಾದ ಖಾತೆ - ಎಪಿಕೆ ಲಿಂಕ್ ಮೂಲಕ ಕೂಡಿಟ್ಟ ಲಕ್ಷಾಂತರ ಹಣ ಕಳೆದುಕೊಂಡ ವೃದ್ಧ!

ಚಿಕ್ಕಮಗಳೂರಿನಲ್ಲಿ 62 ವರ್ಷದ ಹಿರಿಯ ನಾಗರಿಕರೊಬ್ಬರು ಅನುಮಾನಾಸ್ಪದ APK ಫೈಲ್ ಲಿಂಕ್ ಕ್ಲಿಕ್ ಮಾಡಿ ತಮ್ಮ ಬ್ಯಾಂಕ್ ಖಾತೆಯಿಂದ ₹3.12 ಲಕ್ಷ ಕಳೆದುಕೊಂಡಿದ್ದಾರೆ. ಈ ಸೈಬರ್ ವಂಚನೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪರಿಚಿತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

03:10 PM (IST) Mar 18

ಹುಡುಗಿ ಕೊಡಲ್ಲ ಅಂದಿದ್ದಕ್ಕೆ ಯುವತಿ ಹಾಗೂ ಆಕೆಯ ಕುಟುಂಬದವರ ಮೇಲೆ ಜನ ಕರೆದುಕೊಂಡು ಬಂದು ಹಲ್ಲೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ, ಮದುವೆಗೆ ನಿರಾಕರಿಸಿದರೆಂಬ ಕಾರಣಕ್ಕೆ ಯುವಕನೋರ್ವ ಯುವತಿ ಮತ್ತು ಆಕೆಯ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹತ್ತು ಜನರೊಂದಿಗೆ ಮನೆಗೆ ನುಗ್ಗಿದ ಆರೋಪಿಯು, ಖಾರದ ಪುಡಿ ಎರಚಿ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ.

Read Full Story

02:11 PM (IST) Mar 18

Tumakuru - ಮಗಳ ಆತ್ಮ*ಹತ್ಯೆ; ಗಂಡನ ಮನೆಯೊಳಗೆ ಪುತ್ರಿಯ ಅಂತ್ಯಕ್ರಿಯೆ ಮಾಡಿದ ತಂದೆ

ಆತ್ಮ*ಹತ್ಯೆ ಮಾಡಿಕೊಂಡ ಮಗಳ ಅಂತ್ಯಸಂಸ್ಕಾರವನ್ನು, ಆಕೆಯ ಗಂಡ ಪಾವಗಡ ತಾಲೂಕಿನಲ್ಲಿ ಕಟ್ಟಿಸುತ್ತಿದ್ದ ನಿರ್ಮಾಣ ಹಂತದ ಮನೆಯಲ್ಲೇ ತಂದೆ ನೆರವೇರಿಸಿದ್ದಾರೆ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಂದೆ, ಇದು ಕೊಲೆ ಎಂದು ಆರೋಪಿಸಿದ್ದಾರೆ.

Read Full Story

01:38 PM (IST) Mar 18

RCB ತಂಡ ಖರೀದಿ ರೇಸ್‌ನಿಂದ ಮ್ಯಾಂಚೆಸ್ಟರ್‌ ಯುನೈಟೆಡ್‌ ಔಟ್! ಅಂತಿಮ ಹಂತದಲ್ಲಿ ಕನ್ನಡಿಗ ಸೇರಿ ರೇಸ್‌ನಲ್ಲಿವೆ ಈ ಎರಡು ಸಂಸ್ಥೆಗಳು!

ನವದೆಹಲಿ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಸೇಲ್ ಪ್ರಕ್ರಿಯೆ ಕೂಡಾ ನಿರ್ಣಾಯಕ ಹಂತದಲ್ಲಿದೆ. ಇದೀಗ ಕನ್ನಡಿಗ ಸೇರಿ ಎರಡು ಸಂಸ್ಥೆಗಳು ಆರ್‌ಸಿಬಿ ಖರೀದಿಸುವ ರೇಸ್‌ನಲ್ಲಿ ಉಳಿದುಕೊಂಡಿವೆ.

 

Read Full Story

01:18 PM (IST) Mar 18

ಡಿಸ್ಕೋ ಬಾರ್‌ ಆದ ಬೆಂಗಳೂರು ಮೆಟ್ರೋ, ಯಾರ ಮನೆ ಮಕ್ಕಳಪ್ಪಾ ನೀವೆಲ್ಲಾ..

ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಯುವತಿಯರ ಗುಂಪೊಂದು ನೆಲದ ಮೇಲೆ ಕುಳಿತು ಜೋರಾಗಿ ಹಾಡು ಹಾಡಿ ನಿಯಮ ಉಲ್ಲಂಘಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರು ದೆಹಲಿ ಮೆಟ್ರೋದಂತಹ ಸಂಸ್ಕೃತಿ ಬೆಂಗಳೂರಿಗೆ ಬೇಡವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

01:03 PM (IST) Mar 18

ಏನಾಗ್ತಿದೆ ಬಾಲಿವುಡ್‌ ಸಿನಿಮಾರಂಗದಲ್ಲಿ..? ಅರಿಜಿತ್ ಸಿಂಗ್ ಬೆನ್ನಲ್ಲೇ ಶ್ರೇಯಾ ಘೋಷಾಲ್ ಹೀಗ್ ಹೇಳ್ಬಿಟ್ರು..!

"ನನ್ನ ಧ್ವನಿ ಇರುವವರೆಗೂ ಮತ್ತು ನನ್ನ ರಿಯಾಜ್ (ಅಭ್ಯಾಸ) ನಡೆಯುವವರೆಗೂ ನಾನು ವೇದಿಕೆಯ ಮೇಲೆ ನೇರವಾಗಿಯೇ ಹಾಡಲು ಇಷ್ಟಪಡುತ್ತೇನೆ. ಪ್ರೇಕ್ಷಕರು ನಮಗಾಗಿ ಬರುತ್ತಾರೆ, ಅವರಿಗೆ ಮೋಸ ಮಾಡುವುದು ನನಗೆ ಇಷ್ಟವಿಲ್ಲ," ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಮುಂದೇನು?

Read Full Story

12:30 PM (IST) Mar 18

KR ನಗರಕ್ಕೆ ಬಂದು ಮಾಡಿದ್ದೇನು ಅಂತ ಗೊತ್ತು; ಜಿಟಿಡಿ ಹೇಳಿಕೆಗೆ ಸಾ.ರಾ. ಮಹೇಶ್ ತಿರುಗೇಟು!

ಶಾಸಕ ಜಿ.ಟಿ.ದೇವೇಗೌಡರ ಜೆಡಿಎಸ್ ಸ್ಪರ್ಧೆ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾರಾ ಮಹೇಶ್, ಕುಮಾರಸ್ವಾಮಿ ಅವರೇ ಜಿಟಿಡಿ ನಮ್ಮ ಜೊತೆ ಇಲ್ಲ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.  ಮುಖ್ಯಮಂತ್ರಿಗಳ ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

Read Full Story

12:06 PM (IST) Mar 18

ಬೇಸಿಗೆ ಮಳೆ - ಸಿಂಧನೂರಿನಲ್ಲಿ ಸಿಡಿಲು ಬಡಿದು 23 ವರ್ಷದ ಕುರಿಗಾಹಿ ದಾರುಣ ಸಾವು!

ಯುಗಾದಿಗೂ ಮುನ್ನ ರಾಯಚೂರಿನಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಬಿಸಿಲಿನಿಂದ ಕಾದಿದ್ದ ಭೂಮಿಗೆ ತಂಪೆರೆದಿದೆ. ಆದರೆ, ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಮಂಜುನಾಥ್ ಎಂಬ 23 ವರ್ಷದ ಕುರಿಗಾಹಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
Read Full Story

11:34 AM (IST) Mar 18

Bhagyalakshmi Serial ಮೆಗಾ ರಣ ರೋಚಕ ಟ್ವಿಸ್ಟ್;‌ ಭಾಗ್ಯಗೆ ನರಕ ತೋರಿಸ್ತಾನೆ ತಾಂಡವ್!‌ ಮುಂದೇನು ಕಥೆ?

Bhagyalakshmi Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್‌ ಬದಲಾಗಿದ್ದಾನೆ ಎಂದು ಮಗಳು ತನ್ವಿ ನಂಬಿದ್ದಾಳೆ. ಆದರೆ ತಾಂಡವ್‌ ಬದಲಾಗಿಲ್ಲ, ಕಲರ್ಸ್‌ ಕನ್ನಡ ವಾಹಿನಿಯು ಹೊಸದಾಗಿ ಪ್ರೋಮೋ ರಿಲೀಸ್‌ ಮಾಡಿದ್ದು, ತಾಂಡವ್‌ ಬದಲಾಗಿಲ್ಲ ಎನ್ನೋದು ಸಾಬೀತಾಗಿದೆ.

 

Read Full Story

11:26 AM (IST) Mar 18

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ, ಮೈಕ್ರೋ ಚಿಪ್ ಕೊರತೆ, ಗಗನಕ್ಕೇರಿದ ಮೊಬೈಲ್‌ ಫೋನ್‌ ದರ!

ಮಧ್ಯಪ್ರಾಚ್ಯದ ಯುದ್ಧದ ಸನ್ನಿವೇಶದ ನಡುವೆ, ಜಾಗತಿಕ ಮೈಕ್ರೋ ಚಿಪ್ ಕೊರತೆಯಿಂದಾಗಿ ಮೊಬೈಲ್‌ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆಗಳು ಗಗನಕ್ಕೇರಿವೆ. ಈ ಬೆಲೆ ಏರಿಕೆಯು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದು, ಚಿಪ್‌ಗಳ ಕೊರತೆಯು ನೈಜವೋ ಅಥವಾ ಕೃತಕವೋ ಎಂಬ ಗೊಂದಲ ಮಾರುಕಟ್ಟೆಯಲ್ಲಿ ಮನೆಮಾಡಿದೆ.
Read Full Story

11:20 AM (IST) Mar 18

ಈ ದಿನಾಂಕದಂದು ಹುಟ್ಟಿದ ಹುಡುಗೀರು ಸಣ್ಣ ವಿಷ್ಯಕ್ಕೂ ತಲೆಕೆಡಿಸಿಕೊಳ್ತಾರೆ - ಇವ್ರ ಲವ್ ಸ್ಟೋರಿ ಕಷ್ಟ!

ಸಂಖ್ಯಾಶಾಸ್ತ್ರದ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯ ಜನ್ಮ ದಿನಾಂಕಕ್ಕೂ ಒಂದು ವಿಶೇಷ ಅರ್ಥವಿದೆ. ಆ ದಿನಾಂಕದಿಂದ ಸಿಗುವ ಮೂಲ ಸಂಖ್ಯೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ ಎಂದು ನಂಬಲಾಗಿದೆ. ಅದರಂತೆ, ಕೆಲವು ಸಂಖ್ಯೆಗಳನ್ನು ಹೊಂದಿರುವ ಮಹಿಳೆಯರು ಪ್ರತಿಯೊಂದು ವಿಷಯದ ಬಗ್ಗೆಯೂ ಹೆಚ್ಚು ಯೋಚಿಸುತ್ತಾರೆ.

Read Full Story

10:45 AM (IST) Mar 18

ದಾವಣಗೆರೆ ಉಪಚುನಾವಣೆ - ಅಲ್ಪಸಂಖ್ಯಾತರು ವರ್ಸಸ್‌ ಸಮರ್ಥ - ಕಾಂಗ್ರೆಸ್‌ ಟಿಕೆಟ್‌ಗಾಗಿ ವಾಗ್ವಾದ, ಯಾರಿಗೆ ಟಿಕೆಟ್?

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತ ಸಭೆಯಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಎಂಎಲ್ಸಿ ಅಬ್ದುಲ್ ಜಬ್ಬಾರ್ ಬೆಂಬಲಿಗರ ನಡುವೆ ಟಿಕೆಟ್‌ಗಾಗಿ ವಾಗ್ವಾದ ನಡೆದು, ಗದ್ದಲದ ವಾತಾವರಣ ನಿರ್ಮಾಣವಾಯಿತು. 

Read Full Story

More Trending News