ಬೆಂಗಳೂರು: ಬಿಜೆಪಿಗೆ ಹೊಸ ಸಾರಥಿ ನೇಮಕ ಬೆನ್ನಲ್ಲೇ ರಾಜ್ಯದ ಕೇಸರಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬೆಳಗಾವಿ ಅಧಿವೇಶನ ಬಿಟ್ಟು ದೆಹಲಿಗೆ ತೆರಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನೂತನ ಕಾರ್ಯಾಧ್ಯಕ್ಷ ನಿತಿನ್ ನವೀನ್ ಅವರನ್ನು ಮಂಗಳವಾರ ಭೇಟಿ ಮಾಡಿ ಶುಭ ಕೋರಿದ್ದಾರೆ. ಅಲ್ಲದೆ, ರಾಜ್ಯದ ಪ್ರಸಕ್ತ ರಾಜಕೀಯ ಸ್ಥಿತಿಗತಿ, ಪಕ್ಷ ಸಂಘಟನೆ, ರಾಜ್ಯದಲ್ಲಿನ ಸಿಎಂ ಬದಲಾವಣೆ ಕುರಿತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಬಿಜೆಪಿಗೆ ರಾಷ್ಟ್ರೀಯ ನೂತನ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಿತಿನ್ ನವೀನ್ ಅವರು, ರಾಜ್ಯದ ಬಗ್ಗೆಯೂ ಗಮನ ಹರಿಸುವ ಸಾಧ್ಯತೆಗಳಿದ್ದು, ಈ ಹಿನ್ನೆಲೆಯಲ್ಲಿ ಅವರ ಭೇಟಿ ಮಹತ್ವ ಪಡೆದಿದೆ.
11:27 PM (IST) Dec 17
19ರ ಯುವಕನ ಕಾರು ಚಾಲನೆಗೆ ಹೋಯ್ತು ಪಾದಾಚಾರಿ ಪ್ರಾಣ, ಬೆಂಗಳೂರಲ್ಲಿ ಭೀಕರ ಸರಣಿ ಅಪಘಾತ, ಪದಾಚಾರಿಗೆ ಡಿಕ್ಕಿ ಹೊಡೆದ ಬಳಿಕ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಎರ್ಟಿಗಾ ಕಾರು, ಐದಾರು ಬೈಕ್ಗಳಿಗೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ.
10:48 PM (IST) Dec 17
ಅವರೊಬ್ಬ ಸ್ಟಾರ್ ಹೀರೋ.. 100 ಸಿನಿಮಾ ಪೂರೈಸಿದ ನಟ, ಅದರಲ್ಲಿ 40 ಸಿನಿಮಾಗಳು ಫ್ಲಾಪ್ ಆಗಿವೆ, 33 ಸಿನಿಮಾಗಳು ರಿಲೀಸ್ ಆಗಿಲ್ಲ. ಆದರೂ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋ ಸ್ಟೇಟಸ್ ಗಳಿಸಿದರು. ಇಷ್ಟು ವರ್ಷಗಳ ಸಿನಿಮಾ ಕೆರಿಯರ್ನಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ ಆ ಸ್ಟಾರ್ ನಟ ಯಾರು ಗೊತ್ತಾ?
10:28 PM (IST) Dec 17
ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಉತ್ತಮ ಫಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಒಳ್ಳೆಯ ಕಾಲ ಬರುತ್ತದೆ. ಅಲ್ಲಿಯವರೆಗೆ ಕಾರ್ಯಕರ್ತರು ಎದೆಗುಂದಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
10:02 PM (IST) Dec 17
ಹೊಸದಾಗಿ 600 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮತಿ ದೊರೆತ ಕೂಡಲೇ ಪಿಎಸ್ಐ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಡಾ. ಜಿ.ಪರಮೇಶ್ವರ್ ಹೇಳಿದ್ದಾರೆ.
09:49 PM (IST) Dec 17
ಕನ್ನಡ ಭಾಷಾ ಕಲಿಕೆ ಅಧಿನಿಯಮದಡಿ ಕನ್ನಡ ಕಲಿಸುತ್ತಿಲ್ಲ ಎಂಬ ದೂರು ಬಂದರೆ ಅಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
09:13 PM (IST) Dec 17
ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ಒಬ್ಬರು ನೋಡಲ್ ಅಧಿಕಾರಿ ನೇಮಿಸಲಾಗುವುದು. ಕೆಲ ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಗಂಡು ಮಕ್ಕಳೇ ಹೆಚ್ಚು ಜನಿಸಿರುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
09:07 PM (IST) Dec 17
2,185 ಕೋಟಿ ರು. ಅನುದಾನ ಕಡಿತಗೊಳಿಸಲಾಗಿದೆ. ಇದು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
08:54 PM (IST) Dec 17
ಜೈಲರ್ ಚಿತ್ರದಲ್ಲಿ ಕಾವಾಲಾ ಹಾಡಿನ ವೇಳೆ ತಮನ್ನಾ ಜೊತೆ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಹೇಳಿದ್ದ ರಜನಿಕಾಂತ್ ಅವರ ಫೀಲಿಂಗ್ಸ್ ಅನ್ನು ನೋರಾ ಫತೇಹಿ ಈಡೇರಿಸಲಿದ್ದಾರೆ ಎಂದು ಕಾಣುತ್ತಿದೆ.
08:50 PM (IST) Dec 17
ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ವೈಟಿಪಿಎಸ್) ಕಲ್ಲಿದ್ದಲು ವ್ಯಾಗನ್ಗಳನ್ನು ಸರಿಯಾಗಿ ಖಾಲಿ ಮಾಡದೆ, ನಷ್ಟ ಉಂಟುಮಾಡಿದ ಆರೋಪದ ಮೇಲೆ ಪವರ್ ಮೆಕ್ ಪ್ರೈವೆಟ್ ಲಿಮಿಟೆಡ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬೃಹತ್ ಕಳ್ಳತನದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿರ್ಧರಿಸಿದೆ.
08:45 PM (IST) Dec 17
'ರಾಧಾ ಕಲ್ಯಾಣ' ಖ್ಯಾತಿಯ ನಟಿ ಚಿತ್ರಾಲ್ ರಂಗಸ್ವಾಮಿ ಅವರು ಡಾನ್ಸ್ ಈವೆಂಟ್ ಎಂದು ನಂಬಿಸಿ ದುಬೈಗೆ ಕರೆದೊಯ್ದು ಬಾರ್ ಗರ್ಲ್ ಮಾಡಿದ ಮೋಸದ ಕಥೆಯನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಮೂರು ತಿಂಗಳ ಅನುಭವ, ಬಾರ್ ಗರ್ಲ್ಗಳ ಬಗೆಗಿನ ತಪ್ಪು ಕಲ್ಪನೆಗಳು ಮತ್ತು ಅಲ್ಲಿನ ಕೋಡ್ ವರ್ಡ್ಗಳ ಬಗ್ಗೆ ತಿಳಿಸಿದ್ದಾರೆ.
08:14 PM (IST) Dec 17
ಕಾರವಾರದಲ್ಲಿ ಸೀಗಲ್ ಹಕ್ಕಿಯ ದೇಹದಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿ ಆತಂಕ ಸೃಷ್ಟಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಬೀಜಿಂಗ್ನ ಪರಿಸರ ಅಧ್ಯಯನದ ಭಾಗವೆಂದು ತಿಳಿದುಬಂದಿದೆ. ಭದ್ರತಾ ದೃಷ್ಟಿಯಿಂದ ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ತನಿಖೆ ನಡೆಸುತ್ತಿವೆ.
07:47 PM (IST) Dec 17
ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯೂರೋದು ತುಂಬಾ ಕಷ್ಟ.. ಸೌಂದರ್ಯದ ಜೊತೆಗೆ ಅದೃಷ್ಟವೂ ಇರಬೇಕು. ಆದರೆ ಅದೃಷ್ಟ ಇಲ್ಲದ ನಟಿಯರು ಟಾಲಿವುಡ್ನಲ್ಲಿ ತುಂಬಾ ಜನರಿದ್ದಾರೆ. ಈ ನಟಿ ಕೂಡಾ ಅದೇ ಸಾಲಿಗೆ ಸೇರುತ್ತಾರೆ. ಹಾಗಾದ್ರೆ ಆ ಕಥೆ ಏನು ಅಂತ ಈಗ ನೋಡೋಣ ಬನ್ನಿ..
07:41 PM (IST) Dec 17
ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಅಶ್ವಿನಿ ಗೌಡ ಅವರಿಗೆ ಗಾಯ ಮಾಡಿ, ಎಂಜಲು ಉಗುಳಿದ್ದ ಚೈತ್ರಾ ಕುಂದಾಪುರ, ಇದೀಗ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ. ದೇವರ ಮುಂದೆ ಕುಳಿತಾಗ ತಪ್ಪು ಎನಿಸಿತು ಎಂದು ಹೇಳಿಕೊಂಡ ಚೈತ್ರಾ, ಕ್ಯಾಮೆರಾ ಇಲ್ಲದಾಗ ಅಶ್ವಿನಿ ಬಳಿ ಕ್ಷಮೆ ಕೇಳಿದ್ದಾರೆ.
07:33 PM (IST) Dec 17
ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಒಪ್ಪಿಗೆ ನೀಡಿದ್ದಾರೆ. ಈ ಪಾತ್ರಕ್ಕಾಗಿ ವಿಶೇಷ ತಯಾರಿಯನ್ನೂ ಸಹ ಸಾಯಿ ಪಲ್ಲವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
07:10 PM (IST) Dec 17
ಚಿರಂಜೀವಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದ ನಟನೊಂದಿಗೆ ಸ್ಟಾರ್ ನಟಿಯೊಬ್ಬರು ಲವ್ ಅಫೇರ್ ಹೊಂದಿದ್ದರು. ಆದರೆ ಕೊನೆಗೆ ಆಕೆ ಮದುವೆಯಾಗದೆ ಒಂಟಿಯಾಗಿ ಉಳಿದರು. ಆ ನಟ ಮತ್ತು ನಟಿ ಯಾರೆಂದು ಈ ಲೇಖನದಲ್ಲಿ ತಿಳಿಯಿರಿ.
07:01 PM (IST) Dec 17
ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಗಿಲ್ಲಿ ನಟ, ರಜತ್ ಮತ್ತು ಚೈತ್ರಾ ಕುಂದಾಪುರ ನಡುವೆ ಜಗಳಕ್ಕೆ ಕಿಡಿ ಹಚ್ಚಿದ್ದಾರೆ. ರಜತ್ ಅವರು ಗಿಲ್ಲಿ ನಟನನ್ನು ಬಳಸಿಕೊಂಡು ಚೈತ್ರಾ ಅವರನ್ನು ಕೆರಳಿಸುತ್ತಿದ್ದು, ಇದು ಮನೆಯಲ್ಲಿ ಹೊಸ ಗಲಾಟೆಗೆ ಕಾರಣವಾಗಿದೆ
06:53 PM (IST) Dec 17
ಆ್ಯಂಕರ್ ಅನಸೂಯಾ ಭಾರದ್ವಾಜ್ ಸದ್ಯ ಕೆಲವೇ ಕೆಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. 'ಜಬರ್ದಸ್ತ್' ಶೋ ತೊರೆದ ನಂತರ ಅವರ ಕ್ರೇಜ್ ಕಡಿಮೆಯಾಗಿದೆ. ಈ ನಡುವೆ, ಹೀರೋಗಳ ಬಗ್ಗೆ ಅವರು ಮಾಡಿದ ಕಾಮೆಂಟ್ ವೈರಲ್ ಆಗಿದೆ.
06:52 PM (IST) Dec 17
Raj B Shetty Breaks Silence on Rishab Shetty Missing His Name ಸ್ಯಾಂಡಲ್ವುಡ್ನ ಶೆಟ್ಟಿ ಗ್ಯಾಂಗ್ನಲ್ಲಿ ಬಿರುಕು ಮೂಡಿದೆ ಎಂಬ ವದಂತಿ ಹಬ್ಬಿತ್ತು. '45' ಸಿನಿಮಾ ಕುರಿತು ರಿಷಬ್ ಶೆಟ್ಟಿ ಮಾಡಿದ ಟ್ವೀಟ್ನಲ್ಲಿ ರಾಜ್ ಬಿ ಶೆಟ್ಟಿ ಹೆಸರು ಪ್ರಸ್ತಾಪಿಸದಿದ್ದದ್ದು ಇದಕ್ಕೆ ಕಾರಣವಾಗಿತ್ತು.
06:48 PM (IST) Dec 17
ಬೆಳಗಾವಿ ಚಳಿಗಾಲದ ಅಧಿವೇಶನದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವರು ಸದನಕ್ಕೆ ಗೈರಾಗಿ ಸರ್ಕ್ಯೂಟ್ ಹೌಸ್ನಲ್ಲಿ ವಿಶ್ರಾಂತಿ ಪಡೆದರು. ಈ ಸಂದರ್ಭದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಜಿ.ಟಿ. ದೇವೇಗೌಡರಂತಹ ರಾಜಕೀಯ ನಾಯಕರು ಅವರನ್ನು ಭೇಟಿ ಮಾಡಿದ್ದಾರೆ.
06:31 PM (IST) Dec 17
ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ವಿಳಂಬಕ್ಕೆ ಇಲಾಖೆಗಳ ನಡುವಿನ ಸಂಘರ್ಷವೇ ಕಾರಣ. ಈ ಬಗ್ಗೆ ಮಾಹಿತಿ ಇಲ್ಲದೇ ತಪ್ಪು ಮಾಹಿತಿ ನಿಡಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸದನದಲ್ಲಿ ಕ್ಷಮೆಯಾಚನೆ ಮಾಡಿದರು. ಪೂರ್ಣ ವಿವರ ಇಲ್ಲಿದೆ.
06:21 PM (IST) Dec 17
ಬಾತ್ರೂಮ್ ಸ್ವಚ್ಛವಾಗಿದ್ದರೆ ಮನೆಯವರೆಲ್ಲರೂ ಆರೋಗ್ಯವಾಗಿರುತ್ತಾರೆ ಎಂದು ಹಲವರು ನಂಬುತ್ತಾರೆ. ಆದರೆ ಬಾತ್ರೂಮ್ ಸ್ವಚ್ಛಗೊಳಿಸುವಾಗ ನಾವು ಮಾಡುವ ಕೆಲವು ತಪ್ಪುಗಳಿಂದ ಆರೋಗ್ಯ ಹಾಳಾಗುತ್ತದೆ. ಅದರಲ್ಲೂ ಬಾಗಿಲು, ಕಿಟಕಿ ಮುಚ್ಚಿ ಕ್ಲೀನ್ ಮಾಡುವುದು ತುಂಬಾ ಅಪಾಯಕಾರಿ ಎನ್ನುತ್ತಾರೆ ತಜ್ಞರು.
05:57 PM (IST) Dec 17
ಕನ್ನಡ ಮತ್ತು ಹಿಂದಿಯಲ್ಲಿ ‘45’ ಚಿತ್ರದ ಟೀಸರ್ 1 ಕೋಟಿಗೂ ಹೆಚ್ಚು ಹಿಟ್ಸ್ ಗಳಿಸಿದೆ. ತೆಲುಗು, ತಮಿಳು, ಮಲಯಾಳಂನಲ್ಲಿ ಕ್ರಮವಾಗಿ 90 ಲಕ್ಷ, 86 ಲಕ್ಷ, 84 ಲಕ್ಷ ವೀಕ್ಷಣೆ ಪಡೆದಿದೆ. ಈ ಚಿತ್ರವು ಡಿ.25ಕ್ಕೆ ತೆರೆಗೆ ಬರುತ್ತಿದೆ.
05:40 PM (IST) Dec 17
ಮಹೇಶ್ ಬಾಬು ಮತ್ತು ಪ್ರಕಾಶ್ ರೈ ಆಪ್ತರಾಗಿದ್ದು, ಮಹೇಶ್ ಬಾಬು ನಟನೆಯ ಬಹುತೇಕ ಸಿನಿಮಾಗಳಲ್ಲಿ ಪ್ರಕಾಶ ರೈ ಕೂಡ ಕಾಣಿಸಿಕೊಳ್ಳುತ್ತಾರೆ. ಇದೀಗ ಪ್ರಕಾಶ್ ರೈ ಅವರು ಮಹೇಶ್ ಬಾಬು ವೃತ್ತಿ ಜೀವನದ ಬಹುದೊಡ್ಡ ಸಿನಿಮಾದ ಭಾಗವಾಗಿದ್ದಾರೆ.
05:37 PM (IST) Dec 17
ರಮೇಶ್ ಕುತಂತ್ರದಿಂದ ಕರ್ಣ ಮತ್ತು ನಿತ್ಯಾ ನಿಜವಾಗಿಯೂ ಮದುವೆಯಾಗುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ, ಕರ್ಣನ ಮೇಲೆ ತಪ್ಪು ತಿಳಿದು ತಪ್ಪಿಸಿಕೊಂಡು ಬಂದಿರುವ ತೇಜಸ್, ಮದುವೆ ನಡೆಯುವ ಸ್ಥಳಕ್ಕೆ ಬರುತ್ತಿದ್ದಾನೆ. ತೇಜಸ್ ಬರುವಷ್ಟರಲ್ಲಿ ಮದುವೆ ನಡೆದುಹೋಗುತ್ತದೆಯೇ ಎಂಬ ಕುತೂಹಲ ಇದೀಗ ಮನೆಮಾಡಿದೆ
05:28 PM (IST) Dec 17
ಮೈಸೂರಿನ ಹಿನಕಲ್ ಕೆನರಾ ಬ್ಯಾಂಕ್ನಲ್ಲಿ ಅಡವಿಟ್ಟ ಚಿನ್ನದ ಸ್ವರೂಪ ಬದಲಾದ ಆರೋಪ. ಆಭರಣದ ವಿನ್ಯಾಸ, ತೂಕ ಸರಿಯಾಗಿದ್ದರೂ 85 ಗುಂಡುಗಳ ಸರದಲ್ಲಿ 77 ಮಾತ್ರ ಲಭ್ಯ! ತನಿಖೆಗೆ ಆದೇಶ.
05:19 PM (IST) Dec 17
ಸಿನಿಮಾ ಸಮಾಜಕ್ಕೆ ಸಂದೇಶ ನೀಡುವಂತಿರಬೇಕು ಎಂಬ ಅಂಶವನ್ನು ತಳ್ಳಿ ಹಾಕಿದ್ದಾರೆ. ಫ್ಯಾನ್ಸ್ ನಮ್ಮ ಗೊಂಬೆಗಳಲ್ಲ. ನಮ್ಮಿಂದ ಪಾಠ ಹೇಳಿಸಿಕೊಳ್ಳುವ ದಡ್ಡರಲ್ಲ. ಅಡ್ವೈಸ್ ಕೊಡೋವಷ್ಟು ದೊಡ್ಡವರು ನಾವ್ಯಾರೂ ಅಲ್ಲ ಎಂದರು ಕಿಚ್ಚ ಸುದೀಪ್.
05:06 PM (IST) Dec 17
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕೋಲಾರದಲ್ಲಿ 21 ಎಕರೆ ಸ್ಮಶಾನ ಮತ್ತು ಕೆರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇದು ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಸ್ಪಷ್ಟನೆ ನೀಡಿದ್ದಾರೆ.
04:49 PM (IST) Dec 17
ಕಾಂತಾರ ಚಾಪ್ಟರ್ 1ರಲ್ಲಿ ಬರುವ ದೈವದ ಅಂಶ ಅತಿ ಸೂಕ್ಷ್ಮ ಹಾಗೂ ಪವಿತ್ರ. ಅದನ್ನು ಅನುಕರಿಸಬೇಡಿ ಎಂದು ಎಲ್ಲೇ ಹೋದರೂ ಹೇಳುತ್ತೇನೆ. ಆದರೂ ನಟ ರಣವೀರ್ ಸಿಂಗ್ ದೈವವನ್ನು ಮಿಮಿಕ್ರಿ ಮಾಡಿದ್ದು ಸರಿ ಅನಿಸಲಿಲ್ಲ. ಮುಜುಗರ ತರಿಸಿತು ಅಂತಾರೆ ರಿಷಬ್ ಶೆಟ್ಟಿ.
04:24 PM (IST) Dec 17
ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಯಾವುದೇ ಹಿಂಜರಿಕೆ ಇಲ್ಲದೇ ಅನುಮಾನಗಳಿಗೆ ಪ್ರಶ್ನೆಗಳನ್ನು ಕೇಳಿ ತಮ್ಮಲ್ಲಿರುವ ಆತಂಕಗಳನ್ನು ಸರಿಪಡಿಸಿಕೊಳ್ಳಬೇಕೆಂದು ವಿ ರಶ್ಮಿ ಮಹೇಶ್ ರವರು ಕಿವಿ ಮಾತು ಹೇಳಿದರು.
04:01 PM (IST) Dec 17
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದಲ್ಲಿ, ಕೊಡಚಾದ್ರಿ ಸರ್ಕಾರಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ ರಚನಾ (20) ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ.
03:58 PM (IST) Dec 17
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಲಲಿತಾ ಪಾತ್ರವನ್ನು ಹಠಾತ್ತನೆ ಅಂತ್ಯಗೊಳಿಸಿರುವುದಕ್ಕೆ ನಟಿ ವಿಜಯಲಕ್ಷ್ಮಿ ಸುಬ್ರಮಣಿ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಪಾತ್ರವನ್ನು ಸಾಯಿಸಿರುವುದು ಕಥೆಗಾರರ ಷಡ್ಯಂತ್ರ ಎಂದು ಇನ್ಸ್ಟಾಗ್ರಾಮ್ನಲ್ಲಿ ನೋವು ತೋಡಿಕೊಂಡಿದ್ದಾರೆ.
03:32 PM (IST) Dec 17
67 ವರ್ಷದ ನಿವೃತ್ತ ಸರ್ಕಾರಿ ಪ್ರಾಧ್ಯಾಪಕಿಯೊಬ್ಬರು, 42 ವರ್ಷಗಳ ದಾಂಪತ್ಯದಲ್ಲಿ ತಮ್ಮ ಪತಿಯಿಂದ ನಿರಂತರ ದೈಹಿಕ, ಮಾನಸಿಕ, ಆರ್ಥಿಕ ಮತ್ತು ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ. ಪತಿಯು ಮನೆಯಿಂದ ಹೊರಹೋಗುವಂತೆ ಲೀಗಲ್ ನೋಟಿಸ್ ನೀಡಿದ ನಂತರ ಈ ದೂರು ನೀಡಿದ್ದಾರೆ.
03:27 PM (IST) Dec 17
03:05 PM (IST) Dec 17
02:48 PM (IST) Dec 17
ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಿ, ಗೌತಮ್ ಮತ್ತು ಭೂಮಿಕಾರನ್ನು ಒಂದು ಮಾಡಲು ಮಾಸ್ಟರ್ಪ್ಲ್ಯಾನ್ ರೂಪಿಸಿದ್ದಾಳೆ. ತನ್ನ ಕೊನೆಯಾಸೆಯಂತೆ ನಟಿಸಿ, ಮಕ್ಕಳಾದ ಆಕಾಶ್ ಮತ್ತು ಮಿಂಚು ಜೊತೆ ಸೇರಿ ಇಬ್ಬರನ್ನೂ ಮತ್ತೆ ಒಂದುಗೂಡಿಸಲು ಪ್ರಯತ್ನಿಸುತ್ತಿದ್ದಾಳೆ.
02:45 PM (IST) Dec 17
ರಾಗಿ ಮುದ್ದೆ ಬಡಿಸುವ ಸಾಂಪ್ರದಾಯಿಕ ವಿಧಾನವನ್ನು 'ಅಶುಚಿ' ಎಂದು ಟೀಕಿಸಿದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದು ನಮ್ಮ ಸಾಂಸ್ಕೃತಿಕ ಅನಕ್ಷರತೆಯನ್ನು ತೋರಿಸುತ್ತದೆ ಎಂದು ಕಾರ್ತಿಕ್ ರೆಡ್ಡಿ ಎಂಬುವವರು ತಿರುಗೇಟು ನೀಡಿದ್ದಾರೆ.
02:31 PM (IST) Dec 17
ಹುಬ್ಬಳ್ಳಿಯಲ್ಲಿ ಪಲ್ಲವಿ ಕಗ್ಗಲ್ ಆತ್ಮ೧ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನೇಮಕಾತಿ ವಿಳಂಬ ಕಾರಣ ಎಂಬ ವದಂತಿ ಪೊಲೀಸ್ ಕಮಿಷನರ್ ತಳ್ಳಿಹಾಕಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್ನಲ್ಲಿ ಅನಾರೋಗ್ಯ, ವೈಯಕ್ತಿಕ ಕಾರಣಗಳ ಬಗ್ಗೆ ಪಲ್ಲವಿ ಉಲ್ಲೇಖಿಸಿದ್ದಾರೆ. ಸುಳ್ಳು ಸುದ್ದಿ ಹರಡದಂತೆ ಮನವಿ.
02:11 PM (IST) Dec 17
'ಮದಗಜ' ಖ್ಯಾತಿಯ ನಟಿ ಜೋಶಿತಾ ಮತ್ತು ಅವರ ಕುಟುಂಬದ ಮೇಲೆ ಪತಿ ಸುರೇಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮದುವೆಗೂ ಮುನ್ನ ಅ*ತ್ಯಾಚಾರ ಮಾಡಿ, ವಿಡಿಯೋ ಮೂಲಕ ಬೆದರಿಸಿ ಮದುವೆಯಾಗಿದ್ದಲ್ಲದೆ, ಮದುವೆಯ ನಂತರವೂ ಚಿತ್ರಹಿಂಸೆ ನೀಡುತ್ತಿದ್ದ ಎಂದು ನಟಿ ಮತ್ತು ಅವರ ತಾಯಿ ಆರೋಪಿಸಿದ್ದಾರೆ.
01:47 PM (IST) Dec 17
Gruha Lakshmi scheme payment delay: ಗೃಹಲಕ್ಷ್ಮಿ ಯೋಜನೆ ಹಣ ಬಾಕಿ ವಿಚಾರವಾಗಿ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಉತ್ತರದಿಂದ ಅಸಮಾಧಾನಗೊಂಡ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
01:28 PM (IST) Dec 17