Published : Aug 15, 2025, 06:45 AM ISTUpdated : Aug 15, 2025, 10:58 PM IST

Karnatata Latest News Live: ಮಾರಾಟವಾಗುತ್ತಾ ಗೂಗಲ್ ಕ್ರೋಮ್? ಖರೀದಿಗೆ ಭಾರತೀಯ ಯುವಕನಿಂದ ಬೃಹತ್ ಆಫರ್

ಸಾರಾಂಶ

ಬೆಂಗಳೂರು: ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಬೆನ್ನಲ್ಲೇ ಅವರು ನಿರ್ವಹಿಸುತ್ತಿದ್ದ ಸಹಕಾರ ಖಾತೆಗೆ ಭರ್ಜರಿ ಲಾಬಿ ಆರಂಭಗೊಂಡಿದ್ದು, ಸಚಿವ ಡಿ.ಸುಧಾಕರ್ ಅವರು ಇದಕ್ಕೆ ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಇದರಿಂದ ತಲ್ಲಣಗೊಂಡಿರುವ ನಾಯಕ (ಪಾಲ್ಮೀಕಿ) ಸಮುದಾಯದ ಶಾಸಕ ನಿಯೋಗ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನಾಯಕ ಸಮು ದಾಯದಿಂದ ತೆರವಾಗಿರುವ ಖಾತೆಗಳನ್ನು ಬೇರೆ ಜಾತಿಯವರಿಗೆ ನೀಡಬಾರದು ಎಂದು ಪಟ್ಟುಹಿಡಿದಿದೆ. ಇಷ್ಟಕ್ಕೂ ಸಹಕಾರ ಖಾತೆ ಗಾಗಿ ದೊಡ್ಡ ಪ್ರಮಾಣದಲ್ಲಿ ಲಾಬಿ ಆರಂಭವಾಗಲೂ ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್ ಹಾಗೂ ಕೆಎಂಎಫ್ ಮೇಲೆ ಹಿಡಿತ ಪಡೆಯಲು ಕಾಂಗ್ರೆಸ್‌ನ ಬಣ ಬಡಿದಾಟ ಕಾರಣ ಎನ್ನಲಾಗುತ್ತಿದೆ.

 

10:58 PM (IST) Aug 15

ಮಾರಾಟವಾಗುತ್ತಾ ಗೂಗಲ್ ಕ್ರೋಮ್? ಖರೀದಿಗೆ ಭಾರತೀಯ ಯುವಕನಿಂದ ಬೃಹತ್ ಆಫರ್

ಗೂಗಲ್ ಕ್ರೋಮ್ ಖರೀದಿಸಲು ಭಾರತೀಯ ಯುವ ಉದ್ಯಮಿ ಬೃಹತ್ ಆಫರ್ ಕೊಟ್ಟಿದ್ದಾರೆ. ತಮ್ಮ ಕಂಪನಿಯ ಮೌಲ್ಯಕ್ಕಿಂತ ಹೆಚ್ಚಿನ ಹಣ ನೀಡಿ ಕ್ರೋಮ್ ಖರೀದಿಗೆ ಮುಂದಾಗಿದ್ದಾರೆ. ಕ್ರೋಮ್ ಮಾರಟಾವಾಗುತ್ತಾ?

Read Full Story

10:24 PM (IST) Aug 15

ಮಹೀಂದ್ರ BE 6 ಬ್ಯಾಟ್‌ಮನ್ ಎಡಿಶನ್ ಲಾಂಚ್, ಡಿಸೈನ್‌ಗೆ ಮನಸೋತ ಕಾರು ಪ್ರಿಯರು

ಮಹೀಂದ್ರಾ ತಮ್ಮ BE.6 ಎಲೆಕ್ಟ್ರಿಕ್ ಕಾರಿನ ಬ್ಯಾಟ್‌ಮ್ಯಾನ್ ಆವೃತ್ತಿಯನ್ನ ಬಿಡುಗಡೆ ಮಾಡಿದ್ದಾರೆ. ವಿಶೇಷ ಅಂದರೆ ಕೇವಲ 300 ಕಾರು ಮಾತ್ರ ಲಭ್ಯವಿದೆ. ಈ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. 

Read Full Story

09:05 PM (IST) Aug 15

ತಿರುಪತಿ ಲಡ್ಡು ವಿವಾದ - ಪ್ರಸಾದ ಗುಣಮಟ್ಟಕ್ಕಾಗಿ ಅತ್ಯಾಧುನಿಕ ಫುಡ್ ಲ್ಯಾಬ್, ಭಕ್ತರ ವಿಶ್ವಾಸಕ್ಕೆ ಹೊಸ ಬಲ

ಆಂಧ್ರಪ್ರದೇಶ ಸರ್ಕಾರ 86 ಕೋಟಿ ರೂ. ವೆಚ್ಚದಲ್ಲಿ 5 ರಾಜ್ಯ ಮಟ್ಟದ ಆಹಾರ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ತಿರುಪತಿ ಲಡ್ಡು ವಿವಾದದ ಹಿನ್ನೆಲೆಯಲ್ಲಿ ತಿರುಮಲದಲ್ಲಿ ದೊಡ್ಡ ಫುಡ್ ಟೆಸ್ಟಿಂಗ್ ಲ್ಯಾಬ್ ಮುಂದಿನ ತಿಂಗಳು ಪ್ರಾರಂಭವಾಗಲಿದೆ.

Read Full Story

09:02 PM (IST) Aug 15

ಧರ್ಮಸ್ಥಳ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ, ಜೈನ ಹೆಣ್ಣುಮಕ್ಕಳ ಬಗ್ಗೆ ಅಶ್ಲೀಲ ಕಮೆಂಟ್ ಮಾಡಿದ ಯುವಕ ಅರೆಸ್ಟ್

ಧರ್ಮಸ್ಥಳ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ,ಯೂಟ್ಯೂಬ್ ಮೂಲಕ ಹಲವರು ಪೋಸ್ಟ್ ಮಾಡುತ್ತಿದ್ದಾರೆ. ಹೀಗೆ ಯಾರದ್ದೋ ಪೋಸ್ಟ್‌‌ಗೆ ಯುವಕನೊಬ್ಬ ಅಶ್ಲೀಲವಾಗಿ ಕಮೆಂಟ್ ಮಾಡಿ ಇದೀಗ ಅರೆಸ್ಟ್ ಆಗಿದ್ದಾನೆ.

 

Read Full Story

08:11 PM (IST) Aug 15

ವಾಹನ ಮಾಲೀಕರಿಗೆ ಸೂಚನೆ, ನಿಮ್ಮ ಮೊಬೈಲ್ ನಂಬರ್ ಲಿಂಕ್ ಕಡ್ಡಾಯ, ಆನ್‌ಲೈನ್ ಪ್ರಕ್ರಿಯೆ ಹೇಗೆ?

ವಾಹನ ಮಾಲೀಕರು ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿದವರು ತಮ್ಮ ಮೊಬೈಲ್ ನಂಬರ್ ಅಪ್‌ಡೇಟ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆಧಾರ್ ಅಥೆಂಟಿಕೇಶನ್ ಮೂಲಕ ನಿಮ್ಮ ವಾಹನ ಹಾಗೂ ಡ್ರೈವಿಂಗ್ ಲೈಸೆನ್ಸ್ ಜೊತೆಗೆ ನಂಬರ್ ಲಿಂಕ್ ಮಾಡಿ. ಆನ್‌ಲೈನ್ ಪ್ರಕ್ರಿಯೆ ಹೇಗೆ?

Read Full Story

07:14 PM (IST) Aug 15

ಅಂಬಾನಿ, ಮಿತ್ತಲ್ ನಿದ್ದೆಗೆಡಿಸಿದ BSNL, 47,000 ಕೋಟಿ ರೂ ಹೂಡಿಕೆ, 1 ರೂ ರಿಚಾರ್ಜ್ ಪ್ಲಾನ್

ಮುಕೇಶ್ ಅಂಬಾನಿ ಜಿಯೋ, ಸುನಿಲ್ ಮಿತ್ತಲ್ ಏರ್‌ಟೆಲ್‌ಗೆ ಆತಂಕ ಎದುರಾಗಿದೆ. ಬಿಎಸ್‌ಎನ್‌ಎಲ್ ಇದೀಗ ಟೆಲಿಕಾಂ ಮಾರುಕಟ್ಟೆ ಆಕ್ರಮಿಸುತ್ತಿದೆ. ಬರೋಬ್ಬರಿ 47,000 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಇಷ್ಟೇ ಅಲ್ಲ 1 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ನೀಡುತ್ತಿದೆ.

 

Read Full Story

06:46 PM (IST) Aug 15

ಬೆಂಗಳೂರು ಟ್ರಾಫಿಕ್ ಪೊಲೀಸ್‌ಗೆ ಬಹಿರಂಗವಾಗಿ ಬೋಸ.....ಕೆ ಎಂದು ನಿಂದಿಸಿದ ಉತ್ತರ ಭಾರತದ ಮಹಿಳೆ ಅರೆಸ್ಟ್

ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಹಿನ್ನೆಲೆ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಹಿಳೆ ಮತ್ತು ಆಕೆಯ ಸಂಗಾತಿಯನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

06:41 PM (IST) Aug 15

ದೆಹಲಿ ಹುಮಾಯುನ್ ಸಮಾದಿ ಕಾಂಪ್ಲೆಕ್ಸ್ ಕುಸಿತ,ಐವರು ಸಾವು, ಹಲವರಿಗೆ ಗಾಯ

ದೆಹಲಿಯಲ್ಲಿರುವ ಹುಮಾಯುನ್ ಸಮಾಧಿ ಕಾಂಪ್ಲೆಕ್ಸ್‌ನ ಒಂದು ಬಾಗ ಕುಸಿತಗೊಂಡು ಐವರು ಮೃತಪಟ್ಟಿದ್ದಾರೆ. ಇತ್ತ ಹಲವರನ್ನು ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. ಇಷ್ಟೇ ಅಲ್ಲ 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Read Full Story

06:23 PM (IST) Aug 15

ವೀರಶೈವ ಸಂಪ್ರದಾಯದಂತೆ ನಡೆದ ಶ್ರೀ ಶರಣಬಸಪ್ಪ ಅಪ್ಪರ ಅಂತ್ಯಸಂಸ್ಕಾರ

ವೀರಶೈವ ಮಠಾಧೀಶ ಡಾ. ಶರಣಬಸಪ್ಪ ಅಪ್ಪ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಭಕ್ತಸಾಗರದ ನಡುವೆ ಶರಣಬಸವೇಶ್ವರ ದೇವಸ್ಥಾನದ ಎದುರು ಸಮಾಧಿ ಮಾಡಲಾಯಿತು. ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು, ಭಕ್ತರು ಅಂತಿಮ ದರ್ಶನ ಪಡೆದರು.
Read Full Story

05:54 PM (IST) Aug 15

ಜಾತಿ ಜನಗಣತಿ ವರದಿ ಆ.19ರಂದು ಸಚಿವ ಸಂಪುಟದಲ್ಲಿ ಮಂಡನೆ - ಸಚಿವ ಬೋಸರಾಜು

ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಸರ್ಕಾರ ಎಲ್ಲರ ಅಭಿಪ್ರಾಯ ಪಡೆಯಲಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಹೇಳಿದ್ದಾರೆ.

Read Full Story

05:47 PM (IST) Aug 15

ಕೆಂಪೇಗೌಡ ಬಡಾವಣೆ ಪ್ಲಾನ್‌ ಅಕ್ರಮದ ಬಗ್ಗೆ ತನಿಖೆ - ಡಿಸಿಎಂ ಡಿ.ಕೆ.ಶಿವಕುಮಾರ್‌

ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರಿ ಹಣ ಪಡೆಯುತ್ತಿರುವ ಬಗ್ಗೆ ರೈತರಿಂದ ದೂರು ಬರೆಸಿ ಕೊಟ್ಟರೆ ಅಂತಹ ಅಧಿಕಾರಿಯನ್ನು ಇಂದು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಅಮಾನತು ಮಾಡುತ್ತೇನೆ.

Read Full Story

05:37 PM (IST) Aug 15

2025-26ನೇ ಸಾಲಿಗೆ ರಾಜ್ಯದ 5000 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ,ಯುಕೆಜಿ ಆರಂಭ - ಮಧು ಬಂಗಾರಪ್ಪ ಘೋಷಣೆ

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಚಿವ ಮಧು ಬಂಗಾರಪ್ಪ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳನ್ನು ಘೋಷಿಸಿದರು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಮತ್ತು ಜನಕಲ್ಯಾಣ ಕ್ಷೇತ್ರಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದರು.   ನೀಡಲಾಗುವುದು ಎಂದು ಭರವಸೆ ನೀಡಿದರು.

Read Full Story

05:36 PM (IST) Aug 15

ನ.1ರಿಂದ ವಾಣಿವಿಲಾಸ ಸಾಗರದಲ್ಲಿ ಬೋಟಿಂಗ್‌ ಸೌಲಭ್ಯ - ಸಚಿವ ಎಚ್‌.ಕೆ.ಪಾಟೀಲ್‌

ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೆ ಸೌಲಭ್ಯ ಕಲ್ಪಿಸುವ ಸಂಬಂಧ ಸಮೀಕ್ಷೆ ಮಾಡಲಾಗಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅಡಿ ಯೋಜನೆ ಜಾರಿಗೊಳಿಸಲಾಗುವುದು. ಈ ಸಂಬಂಧ ಟೆಂಡರ್‌ ಕರೆಯಲಾಗಿದೆ.

Read Full Story

05:28 PM (IST) Aug 15

ಧರ್ಮಸ್ಥಳ ಪ್ರಕರಣದ ಸತ್ಯವನ್ನು ಸರ್ಕಾರ ಬಹಿರಂಗಪಡಿಸಲಿ - ಸಂಸದ ಬೊಮ್ಮಾಯಿ

ಡಿಕೆಶಿ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಪ್ರಕರಣದಲ್ಲಿ ಈವರೆಗೆ ಏನೇನು ಆಗಿದೆ, ತನಿಖೆಯಲ್ಲಿ ಇತ್ತೀಚೆಗೆ ಏನು ಗೊತ್ತಾಗಿದೆ ಎಂಬುದನ್ನು ಬಹಿರಂಗ ಪಡಿಸಬೇಕು ಎಂದರು ಬಸವರಾಜ ಬೊಮ್ಮಾಯಿ.

Read Full Story

05:26 PM (IST) Aug 15

Darshan Thoogudeepa - ಶಿಕ್ಷೆ ಸಾಬೀತಾದ್ರೆ ಎಷ್ಟು ವರ್ಷ ಜೈಲಾಗತ್ತೆ? ಕೊನೇ ತೀರ್ಪು ಹೊರಬೀಳೋದು ಯಾವಾಗ? - SK Umesh

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್‌ ಸೇರಿ 7 ಜನರಿಗೆ ನೀಡಿದ್ದ ಜಾಮೀನು ಕ್ಯಾನ್ಸಲ್‌ ಆಗಿತ್ತು. ಈಗ ಕೇಸ್‌ ಸಾಬೀತಾದರೆ ಎಷ್ಟು ವರ್ಷಗಳ ಕಾಲ ಶಿಕ್ಷೆ ಆಗುವುದು? ಈ ಕೇಸ್‌ ಯಾವಾಗ ಬಗೆಹರಿಯುವುದು ಎಂಬ ಬಗ್ಗೆ ನಿವೃತ್ತ ಪೊಲೀಸ್‌ ಅಧಿಕಾರಿ ಎಸ್‌ ಕೆ ಉಮೇಶ್‌ ಮಾತನಾಡಿದ್ದಾರೆ. 

 

Read Full Story

05:18 PM (IST) Aug 15

ತಿರುಪತಿಗೆ 1 ಕೋಟಿ ರೂ ನಗದು, 25 ಲಕ್ಷ ರೂ ಚಿನ್ನಾಭರಣ ಕಾಣಿಕೆ ನೀಡಿದ ಬೆಂಗಳೂರು ಭಕ್ತ

ಬೆಂಗಳೂರು ಭಕ್ತ ತಿರುಪತಿಗೆ 1 ಕೋಟಿ ರೂಪಾಯಿ ನಗದು ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಾಣಿಕೆ ನೀಡಿದ್ದಾರೆ.

 

Read Full Story

05:09 PM (IST) Aug 15

ಸಮಾನತೆ ಬರಬೇಕು ಎಂದರೆ ಜಾತಿ ಸಮೀಕ್ಷೆ ನಡೆಯಬೇಕು - ಸಚಿವ ಮಧು ಬಂಗಾರಪ್ಪ

ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಪಟ್ಟಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳ ಯಶಸ್ಸು, ಜಿಲ್ಲಾ ಅಭಿವೃದ್ಧಿ ಯೋಜನೆಗಳು, ಶರಾವತಿ ಸಂತ್ರಸ್ತರ ಸಮಸ್ಯೆ, ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗಳನ್ನು ಒಳಗೊಂಡಿದೆ.
Read Full Story

04:42 PM (IST) Aug 15

ದಯವಿಟ್ಟು ನಮ್ಮನ್ನು ಇಳಿಸಿಬಿಡು, ಮಗು ಅಳ್ತಿದೆ, ಕ್ಯಾಬ್ ಚಾಲಕನ ಭಯಾನಕತೆ ಬಿಚ್ಚಿಟ್ಟ ಕುಟುಂಬ

ದಮ್ಮಯ್ಯ ಬಿಟ್ಟು ಬಿಡು ಎಂದರೂ ಕ್ಯಾಬ್ ಚಾಲಕ ಕೇಳಿಲ್ಲ, ಒಂದೆಡೆ ಮಗು ಭಯಭೀತಗೊಂಡು ಅಳುತ್ತಿದೆ. ಇತ್ತ ಪತಿ ಹಾಗೂ ಪತ್ನಿ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸದ ಘಟನೆ ವರದಿಯಾಗಿದೆ. ಈ ವಿಡಿಯೋವನ್ನು ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.

Read Full Story

04:36 PM (IST) Aug 15

ವಿಷ್ಣು ಅಭಿಮಾನಿ ಶಂಕರ್‌ ಕನಸಿನ ಸಿನಿಮಾ - ಪರಿಸರ ಕುರಿತು ಕತೆ ಹೇಳುವ 'ಸೋಲ್‌ಮೇಟ್ಸ್‌'

ನನಗೆ ಸಣ್ಣ ವಯಸ್ಸಿನಿಂದಲ್ಲೂ ಸಿನಿಮಾ ಹುಚ್ಚು. ನಾನು ಮೊದಲಿಗೆ ನೋಡಿದ ಸಿನಿಮಾ ‘ಪುಟ್ನಂಜ’ ಅಲ್ಲಿಂದ ನನ್ನ ಮತ್ತು ಹಂಸಲೇಖಾ ಅವರ ನಂಟು ಬೆಳೆಯಿತು ಅಂತಾನೆ ನನ್ನ ನಂಬಿಕೆ.

Read Full Story

04:11 PM (IST) Aug 15

ಧರ್ಮಸ್ಥಳ ಶವ ಹೂತ ಪ್ರಕರಣ - ಬಂಟ್ವಾಳ ಯುವತಿ ಪತ್ತೆಗೆ ಪ್ರಾಥಮಿಕ ಮಾಹಿತಿ ಕಲೆ ಹಾಕ್ತಿರೋ ಪೊಲೀಸರು

ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿದ ಆರೋಪದ ತನಿಖೆ ವೇಳೆ 13 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಂಟ್ವಾಳದ ಯುವತಿಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಎಸ್ಐಟಿ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬಂದಿವೆ.
Read Full Story

03:39 PM (IST) Aug 15

ವಿಲ್ಸನ್ ಗಾರ್ಡ್‌ನ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಟ್ವಿಸ್ಟ್, ಫ್ರಿಡ್ಜ್ ಬ್ಲಾಸ್ಟ್‌ನಿಂದ ಅವಘಡ

ಬೆಂಗಳೂರಿನ ವಿಲ್ಸನ್ ಗಾರ್ಡ್‌ನ್ ಬಳಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣ ಸಂಬಂಧ ಕಾರ್ಯಾಚರಣೆ ನಡಸುತ್ತಿದ್ದ ಎಸ್‌ಡಿಆರ್‌ಎಫ್ ತಂಡ ಮಹತ್ವದ ಅಂಶ ಬಯಲು ಮಾಡಿದೆ. ಸಿಲಿಂಡರ್‌ನಿಂದ ಸ್ಫೋಟ ಸಂಭವಿಸಿಲ್ಲ ಅನ್ನೋದು ಖಚಿತಗೊಂಡಿದೆ.

Read Full Story

02:50 PM (IST) Aug 15

ಯಾಕೋ ಹೋಮ್ ವರ್ಕ್ ಯಾಕ್ ಮಾಡಿಲ್ಲ ಅಂತ ಕೇಳಿದ್ದಕ್ಕೆ ದೆವ್ವ ಮೈಮೇಲೆ ಬಂದಂತೆ ವರ್ತಿಸಿದ ಬಾಲಕ

ಹೋಂವರ್ಕ್ ಮಾಡದ ಬಾಲಕನೊಬ್ಬ ಶಿಕ್ಷಕರ ಎದುರು ದೆವ್ವ ಬಂದಂತೆ ನಟಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

02:17 PM (IST) Aug 15

ಸ್ವಾತಂತ್ರ್ಯ ದಿನದಂದ ಛತ್ರಿ ಹಿಡಿದು ಖರ್ಗೆ ಧ್ವಜಾರೋಹಣ; ಮಳೆಯಲ್ಲಿ ಒದ್ದೆಯಾಗಿ ನಿಂತ ರಾಹುಲ್ ವೈರಲ್!

ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಛತ್ರಿ ಇಲ್ಲದೆ ಮಳೆಯಲ್ಲಿ ನಿಂತಿದ್ದರು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Read Full Story

01:42 PM (IST) Aug 15

ಮತಗಳ್ಳತನ ತನಿಖೆ ಮೊದಲು ಕನಕಪುರದಿಂದ ಆಗಲಿ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಜೆಡಿಎಸ್ ಮುಖಂಡ!

ಮಾಜಿ ಶಾಸಕ ಮಾಗಡಿ ಯ.ಎ.ಮಂಜುನಾಥ್‌ ಕನಕಪುರದಲ್ಲಿ ಮತ ಕಳ್ಳತನ ತನಿಖೆಗೆ ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಳ್ಳ ಮತಗಳಿಂದ ಗೆಲುವು ಸಾಧಿಸಲಾಗಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿ ಪ್ರಾಮಾಣಿಕ ಚುನಾವಣೆ ನಡೆದಿದ್ದರೆ ತಾನು ಮತ್ತು ನಿಖಿಲ್ ಕುಮಾರಸ್ವಾಮಿ ಸೋಲುತ್ತಿರಲಿಲ್ಲ ಎಂದರು.
Read Full Story

01:28 PM (IST) Aug 15

ಬೆಂಗಳೂರು - ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ, ಮೃತ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

ಚಿನ್ನಯ್ಯನಪಾಳ್ಯದಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ವರ್ಷದ ಬಾಲಕ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಘೋಷಿಸಿದ್ದಾರೆ. ಸ್ಫೋಟದ ಕಾರಣ ಇನ್ನೂ ತನಿಖೆಯ ಹಂತದಲ್ಲಿದೆ.
Read Full Story

01:12 PM (IST) Aug 15

ಸ್ವಾತಂತ್ರ್ಯ ದಿನದಂದೇ ಬಳ್ಳಾರಿ ಪಿಎಸ್‌ಐ ಪತ್ನಿ ನೇಣುಬಿಗಿದು ದುರಂತ ಸಾವು!

ಬಳ್ಳಾರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮೋಕಾ ಪೊಲೀಸ್ ಠಾಣೆಯ ಪಿಎಸ್‌ಐ ಕಾಳಿಂಗ ಅವರ ಪತ್ನಿ ಚೈತ್ರಾ (36) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಚೈತ್ರಾ, ತವರು ಮನೆಯಿಂದ ಎರಡು ದಿನಗಳ ಹಿಂದೆ ಮರಳಿದ್ದರು.
Read Full Story

12:43 PM (IST) Aug 15

ಬೆಂಗಳೂರು - ಚಿನ್ನಯ್ಯನಪಾಳ್ಯ ಭೀಕರ ಸ್ಫೋಟಕ್ಕೆ ನೆಲಸಮವಾದ 10 ಮನೆಗಳು! ಬ್ಲಾಸ್ಟ್ ಬಗ್ಗೆ ತೀವ್ರ ಅನುಮಾನ

ಬೆಂಗಳೂರಿನ ಚಿನ್ನಯ್ಯನಪಾಳ್ಯದಲ್ಲಿ ಭೀಕರ ಸ್ಫೋಟ ಸಂಭವಿಸಿ ಒಂದು ಮಗು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದ ಕಾರಣ ಇನ್ನೂ ನಿಗೂಢವಾಗಿದ್ದು, ತನಿಖೆ ಮುಂದುವರಿದಿದೆ. ಸ್ಥಳೀಯರು ಸಿಲಿಂಡರ್ ಸ್ಫೋಟವಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
Read Full Story

12:38 PM (IST) Aug 15

Get Out Rascal - ಯುಟ್ಯೂಬ್ ಪತ್ರಕರ್ತ ಎಂದ ವ್ಯಕ್ತಿಗೆ ಹಿಗ್ಗಾಮುಗ್ಗಾ ಜಾಡಿಸಿದ ಯತ್ನಾಳ್!

ವಿಜಯಪುರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ವೇಳೆ ಶಾಸಕ ಯತ್ನಾಳ್, ಯೂಟ್ಯೂಬ್ ಪತ್ರಕರ್ತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಮುಸ್ಲಿಂ ಯುವತಿಯರ ಜೊತೆ ಮದುವೆ ವಿವಾದದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಯತ್ನಾಳ್ ಕೋಪಗೊಂಡಿದ್ದಾರೆ.
Read Full Story

12:35 PM (IST) Aug 15

Dharmasthala Case - ನೂರಾರು ಹೆಣ ಹೂತಿದ್ದರೂ ಸೌಜನ್ಯ ಶವ ಬಿಟ್ಟಿದ್ಯಾಕೆ? ಮೊದಲ ಬಾರಿಗೆ 'ಭೀಮಾ' ಸಂದರ್ಶನ

ಇದೇ ಮಾದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿರುವ ಧರ್ಮಸ್ಥಳದ ಮುಸುಕುಧಾರಿ "ಭೀಮಾ" ಸೌಜನ್ಯ ಶವ ಸೇರಿದಂತೆ ಇತರರ ಬಗ್ಗೆ ಹೇಳಿದ್ದೇನು?

 

Read Full Story

12:31 PM (IST) Aug 15

ಮುಂದಾಗೋ ಸಮಸ್ಯೆ ಬಗ್ಗೆ ಮೊದಲೇ 'ಡೆವಿಲ್'‌ ಟೀಂಗೆ Darshan Thoogudeepa ಮಾಹಿತಿ ಕೊಟ್ಟಿದ್ರು - ಉಮೇಶ್‌ ಬಣಕಾರ್

ದರ್ಶನ್‌ ಅವರ ಜಾಮೀನು ರದ್ದತಿಯಿಂದ ಚಿತ್ರರಂಗಕ್ಕೆ ಆತಂಕ ಎದುರಾಗಿದೆ. ಡೆವಿಲ್ ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಮೇಶ್ ಬಣಕಾರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Read Full Story

12:06 PM (IST) Aug 15

ಆರೋಪ ಸಾಬೀತಾದ್ರೆ Darshan Thoogudeepa ಚಿತ್ರರಂಗದಿಂದ ಬ್ಯಾನ್‌ ಆಗ್ತಾರಾ? - ಕೆಫ್‌ಸಿಸಿ ನರಸಿಂಹಲು ಎಂ ಹೇಳಿದ್ದೇನು?

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಮತ್ತೆ ದರ್ಶನ್‌ ತೂಗುದೀಪ ಅವರು ಜೈಲು ಸೇರಿದ್ದಾರೆ. ಜಾಮೀನು ರದ್ದಾಗಿದ್ದಕ್ಕೆ ದರ್ಶನ್‌ ಮತ್ತೆ ಶ್ರೀಕೃಷ್ಣನ ಜನ್ಮಸ್ಥಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Read Full Story

12:00 PM (IST) Aug 15

Independence Day 2025 - ರಾಜಭವನದ ಅಂಗಳದಲ್ಲಿ ಧ್ವಜಾರೋಹಣ - ಏಕತೆ, ಪ್ರಗತಿ ಮತ್ತು ರಾಷ್ಟ್ರ ಸೇವೆಗೆ ರಾಜ್ಯಪಾಲರು ಕರೆ

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು 79ನೇ ಸ್ವಾತಂತ್ರ್ಯೋತ್ಸವದಂದು ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನತೆಗೆ ಶುಭಾಶಯಗಳನ್ನು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿಷ್ಠ ಭಾರತ ನಿರ್ಮಾಣದ ಪ್ರತಿಜ್ಞೆ, ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳು,  ಕುರಿತು ಭಾಷಣ ಮಾಡಿದರು.

Read Full Story

11:52 AM (IST) Aug 15

ಒಂದೇ ಸೆಲ್‌ನಲ್ಲಿದ್ದರೂ ದಾಸನ ಜತೆ ಮಾತನಾಡದ ಪ್ರದೂಶ್, ಬೆಳಗ್ಗಿನವರೆಗೆ ಕಣ್ಣೀರಿಟ್ಟು ನಿದ್ರೆಗೆ ಜಾರಿದ ಪವಿತ್ರಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದಾದ ನಂತರ ದರ್ಶನ್, ಪವಿತ್ರಾ ಗೌಡ ಮತ್ತು ಡಿ ಗ್ಯಾಂಗ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ. ರಜಾ ದಿನಗಳಲ್ಲಿ ಕುಟುಂಬದ ಭೇಟಿಗೆ ಅವಕಾಶವಿಲ್ಲದ ಕಾರಣ, ಅವರು ಸೋಮವಾರದವರೆಗೆ ಕಾಯಬೇಕಾಗಿದೆ. 

Read Full Story

11:46 AM (IST) Aug 15

ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಪೋಟ - ಒಂದು ಮಗು ಸಾವು, ಇಬ್ಬರು ಮಕ್ಕಳು ಸೇರಿ ಹಲವರಿಗೆ ಗಾಯ

ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಸಿಲಿಂಡರ್ ಸ್ಪೋಟದಲ್ಲಿ 10 ವರ್ಷದ ಮಗು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಸ್ಪೋಟದ ಕಾರಣ ಇನ್ನೂ ನಿಗೂಢವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

11:07 AM (IST) Aug 15

ದೇಶದ ಸಂಪತ್ತಿನ ಅಸಮಾನ ಹಂಚಿಕೆಗೆ ಸಿಎಂ ಬೇಸರ; ಭಾಷಣದ ಮುಖ್ಯಾಂಶಗಳು ಇಲ್ಲಿವೆ

79ನೇ ಸ್ವಾತಂತ್ರ್ಯೋತ್ಸವದಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಶುಭಾಶಯ ಕೋರಿ, ಗ್ಯಾರಂಟಿ ಯೋజನೆಗಳ ಯಶಸ್ಸು ಮತ್ತು ರಾಜ್ಯದ ಆರ್ಥಿಕ ಪ್ರಗತಿಯನ್ನು ಶ್ಲಾಘಿಸಿದರು. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸರ್ಕಾರದ ಕಾರ್ಯವೈಖರಿಯನ್ನು ವಿವರಿಸಿದರು.
Read Full Story

10:33 AM (IST) Aug 15

ಉದಯಗಿರಿಯಲ್ಲಿ ಒಂದು ಪೋಸ್ಟ್ ಹಾಕಿದ ವ್ಯಕ್ತಿಯನ್ನ ಬಂಧಿಸಲಾಯ್ತು, ಆದ್ರೆ ಧರ್ಮಸ್ಥಳದ ಬಗ್ಗೆ ಇಷ್ಟು ಅಪಪ್ರಚಾರ ನಡೆಸಿದವರ ಮೇಲೆ ಸುಮೋಟೊ ಕೇಸ್ ಹಾಕಿಲ್ಲ ಏಕೆ? ಅಪಪ್ರಚಾರ ನಡೆಸುವವರ ಬೆನ್ನಿಗೆ ಸರ್ಕಾರ?

ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಕುರಿತು ಶಾಸಕ ಶ್ರೀವತ್ಸ ಅನುಮಾನ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳಿಗೆ ಸರ್ಕಾರ ಯಾಕೆ ಬೆಲೆ ಕೊಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಧರ್ಮಸ್ಥಳದ ವಿರುದ್ಧದ ಆನ್‌ಲೈನ್ ಅಪಪ್ರಚಾರ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
Read Full Story

10:14 AM (IST) Aug 15

Dhanushree - ದೂರ ದೂರವಾದ ಬಿಗ್‌ ಬಾಸ್‌ ಧನುಶ್ರೀ, ಭರತ್!‌ ಎಳೆ ಎಳೆಯಾಗಿ ನಡೆದ ಕಹಾನಿ ಬಿಚ್ಚಿಟ್ಟ ಯುಟ್ಯೂಬರ್

Bigg Boss Dhanushree: ಬಿಗ್‌ ಬಾಸ್‌ ಕನ್ನಡ ಸೀಸನ್‌ 8 ಸ್ಪರ್ಧಿ ಧನುಶ್ರೀ ಅವರು ಭರತ್‌ ಎನ್ನುವವರ ಜೊತೆ ವಿಡಿಯೋ ಮಾಡಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುತ್ತಿದ್ದರು. ಈಗ ಇವರಿಬ್ಬರು ದೂರ ಆಗಿದ್ದಾರಂತೆ.

 

Read Full Story

10:00 AM (IST) Aug 15

'ದೇಶಕ್ಕೆ ಧ್ವಜವನ್ನ ನೀಡಿದ್ದೇ ಕಾಂಗ್ರೆಸ್..' ಕಾಂಗ್ರೆಸ್ ಪಕ್ಷದ ಕೊಡುಗೆಗಳ ಸ್ಮರಿಸಿ ಭಾವುಕರಾದ ಡಿಕೆ ಶಿವಕುಮಾರ

ಸ್ವಾತಂತ್ರ್ಯ ದಿನಾಚರಣೆಯಂದು ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಸ್ಮರಿಸಿ ಭಾವುಕರಾದರು. ಕಾಂಗ್ರೆಸ್ಸಿನಿಂದ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯದ ಬಗ್ಗೆ ವಿವರಿಸಿದರು. 2028 ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ತಂದು ರಾಜ್ಯಕ್ಕೆ ಹೊಸ ರೂಪ ನೀಡುವ ಘೋಷಣೆ ಮಾಡಿದರು.
Read Full Story

09:41 AM (IST) Aug 15

ರಾಜ್ಯದ 19 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, ಪ್ರಶಸ್ತಿ ಪಡೆದವರ ವಿವರ ಇಲ್ಲಿದೆ ನೋಡಿ!

ರಾಜ್ಯ ಪೊಲೀಸ್ ಇಲಾಖೆಯ 19 ಅಧಿಕಾರಿ/ಸಿಬ್ಬಂದಿಗೆ ಪ್ರಸಕ್ತ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಲೋಕಾಯುಕ್ತ ಎಸ್ಪಿ ಬದ್ರಿನಾಥ್ ಹಾಗೂ ಐಜಿಪಿ ಚಂದ್ರಗುಪ್ತ ಸೇರಿದಂತೆ ಹಲವರಿಗೆ ಪ್ರಶಸ್ತಿ ಘೋಷಣೆಯಾಗಿದೆ.
Read Full Story

08:42 AM (IST) Aug 15

ಇಂದು ಶರಣಬಸಪ್ಪ ಅಪ್ಪಾ ಅಂತ್ಯಕ್ರಿಯೆ; ಮಧ್ಯಾಹ್ನ 2 ಗಂಟೆವರೆಗೆ ಅಂತಿಮ ದರ್ಶನ

ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶರಣಬಸಪ್ಪ ಅಪ್ಪಾ ಅವರ ಲಿಂಗೈಕ್ಯದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಗೆ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದ್ದು, ರಾಜ್ಯದ ಗಣ್ಯರು ಆಗಮಿಸಲಿದ್ದಾರೆ.
Read Full Story

More Trending News