MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಮುಂದಾಗೋ ಸಮಸ್ಯೆ ಬಗ್ಗೆ ಮೊದಲೇ 'ಡೆವಿಲ್'‌ ಟೀಂಗೆ Darshan Thoogudeepa ಮಾಹಿತಿ ಕೊಟ್ಟಿದ್ರು: ಉಮೇಶ್‌ ಬಣಕಾರ್

ಮುಂದಾಗೋ ಸಮಸ್ಯೆ ಬಗ್ಗೆ ಮೊದಲೇ 'ಡೆವಿಲ್'‌ ಟೀಂಗೆ Darshan Thoogudeepa ಮಾಹಿತಿ ಕೊಟ್ಟಿದ್ರು: ಉಮೇಶ್‌ ಬಣಕಾರ್

ದರ್ಶನ್‌ ಅವರ ಜಾಮೀನು ರದ್ದತಿಯಿಂದ ಚಿತ್ರರಂಗಕ್ಕೆ ಆತಂಕ ಎದುರಾಗಿದೆ. ಡೆವಿಲ್ ಸಿನಿಮಾ ಬಿಡುಗಡೆಗೆ ಅಡ್ಡಿಯಾಗಿದ್ದು, ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉಮೇಶ್ ಬಣಕಾರ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2 Min read
Padmashree Bhat
Published : Aug 15 2025, 12:31 PM IST
Share this Photo Gallery
  • FB
  • TW
  • Linkdin
  • Whatsapp
15
ಜಾಮೀನು ಪ್ರಶ್ನೆ ಮಾಡಿದ್ದ ರಾಜ್ಯ ಸರ್ಕಾರ!
Image Credit : Asianet News

ಜಾಮೀನು ಪ್ರಶ್ನೆ ಮಾಡಿದ್ದ ರಾಜ್ಯ ಸರ್ಕಾರ!

ಅನಾರೋಗ್ಯದ ನಿಮಿತ್ತ ದರ್ಶನ್‌ ಅವರಿಗೆ ಹೈಕೋರ್ಟ್‌ ಕಡೆಯಿಂದ ಜಾಮೀನು ನೀಡಲಾಗಿತ್ತು. ಇದನ್ನು ರಾಜ್ಯ ಸರ್ಜಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಅವರಿಗೆ ರಾಜಾತಿಥ್ಯ ನೀಡಿದ್ದಕ್ಕೂ ಕೂಡ ಪ್ರಶ್ನೆ ಎದ್ದಿತ್ತು. ಈಗ ಜಾಮೀನು ರದ್ದಾಗಿದೆ.

25
ಪ್ರಿಯಾ ಹಾಸನ್‌ ಏನಂದ್ರು?
Image Credit : priya hassan instagram

ಪ್ರಿಯಾ ಹಾಸನ್‌ ಏನಂದ್ರು?

“ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲೇಬೇಕು, ಉಪ್ಪು ತಿಂದ ಮೇಲೆ ನೀರು ಕುಡಿಲೇ ಬೇಕು. ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಅನ್ನೋ ಹಾಗೆ ದರ್ಶನ್ ಆಗಿದ್ದಾರೆ. ದರ್ಶನ್ ಒಳ್ಳೆ ವ್ಯಕ್ತಿ ಆಗಿ ಹೊರಗೆ ಬರಲಿ. ದರ್ಶನ್ ಅಭಿಮಾನಿಗಳಿಗೂ ಇದು ಅರ್ಥ ಆಗಬೇಕು. ದರ್ಶನ್ ಅವರನ್ನು ಪ್ರೀತಿ ಮಾಡಿ ಆದರೆ ಅವರ ತಪ್ಪಿಗೂ ಪ್ರೋತ್ಸಾಹ ಕೊಡಬೇಡಿ. ಹೆಣ್ಣು ಮಕ್ಕಳಿಗೆ ಗೌರವ ಕೊಡೋದನ್ನು ಕಲಿಯಿರಿ. ದರ್ಶನ್ ಅಭಿಮಾನಿಗಳೇ ಹೆಣ್ಣು ಮಕ್ಕಳಿಗೆ ಕೆಟ್ಟ ಮೆಸೇಜ್ ಮಾಡುತ್ತಾರೆ” ನಟಿ ನಿರ್ಮಾಪಕಿ ಪ್ರಿಯಾ ಹಾಸನ್ ಹೇಳಿಕೆ ನೀಡಿದ್ದಾರೆ.

35
ದರ್ಶನ್‌ ಮಾಡಿಕೊಂಡಿರೋದು ಸ್ವಯಂಕೃತ ಅಪರಾಧ!
Image Credit : Asianet News

ದರ್ಶನ್‌ ಮಾಡಿಕೊಂಡಿರೋದು ಸ್ವಯಂಕೃತ ಅಪರಾಧ!

“ದರ್ಶನ್ ಪ್ರಕರಣ ಅವರ ಅಭಿಮಾನಿಗಳಿಗೆ ಪಾಠವಾಗಿದೆ. ನೀವು ದರ್ಶನ್ ಮಾಡಿಕೊಂಡ ಕೆಲಸವನ್ನ ಮಾಡಿಕೊಳ್ಳಬೇಡಿ. ನೀವು ನಿಮ್ಮ ಮನೆಗೆ ಹೀರೋ ಆಗಿ ಸಾಕು. ದರ್ಶನ್ ಮಾಡಿಕೊಂಡಿರೋದು ಸ್ವಯಂ ಕೃತ ಅಪರಾಧ” ಎಂದಿದ್ದಾರೆ.

45
ಉಮೇಶ್‌ ಬಣಕಾರ್‌ ಏನಂದ್ರು?
Image Credit : Asianet News

ಉಮೇಶ್‌ ಬಣಕಾರ್‌ ಏನಂದ್ರು?

“ಇದು ದುರಂತ. ಚಿತ್ರರಂಗಕ್ಕೆ ನೂರಕ್ಕೆ ನೂರು ಭಾಗ ನಷ್ಟ. ಡೆವಿಲ್ ಸಿನಿಮಾಗೆ ಇದರಿಂದ ತೊಂದರೆ ಆಗಿದೆ. ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತ್ತು. ಯಾವ ನಟರು ಇಂತಹ ಸಮಸ್ಯೆಗಳನ್ನು ತಂದುಕೊಳ್ಳಬಾರದು. ಇದ್ರೆ ನೆಮ್ಮದಿಯಾಗಿ ಇರ್ಬೇಕು ಅನ್ನೋ ಡೆವಿಲ್ ಸಿನಿಮಾ ಹಾಡು ಬಿಡುಗಡೆ ಆಗಬೇಕಿತು. ಆದ್ರೆ ದರ್ಶನ್ ಅವರಿಗೆ ನೆಮ್ಮದಿ ಇಲ್ಲದ ಹಾಗಾಗಿದೆ. ಯಾವ ಸಮಯದಲ್ಲಿ ಏನಾಗುತ್ತೆ ಅಂತ ಹೇಳೋಕೆ ಆಗಲ್ಲ ಎಂದು ನಟ ದರ್ಶನ್ ಅವರೇ ಸಿನಿಮಾ ತಂಡದ ಜೊತೆ ಹೇಳಿಕೊಂಡಿದ್ರು. ಹಾಗಾಗಿ ಡೆವಿಲ್ ಸಿನಿಮಾ ಕೆಲಸವನ್ನ ಬೇಗ ಬೇಗ ಮುಗಿಸಿದ್ರು. ದರ್ಶನ್ ಅವರಿಗೆ ಜೈಲಿನಿಂದ ಬಿಡುಗಡೆ ಆಗೋಕೆ ಇನ್ನೂ ಅವಕಾಶ ಇದೆ. ಇಲ್ಲಿ ಡೆವಿಲ್ ಸಿನಿಮಾ ನಿರ್ಮಾಪಕರು ನಿರಪರಾದಿಗಳು”

ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹೇಳಿಕೆ ನೀಡಿದ್ದಾರೆ.

55
ಡೆವುಲ್‌ ರಿಲೀಸ್‌ ಯಾವಾಗ?
Image Credit : Asianet News

ಡೆವುಲ್‌ ರಿಲೀಸ್‌ ಯಾವಾಗ?

ದರ್ಶನ ನಟನೆಯ ಡೆವಿಲ್‌ ಸಿನಿಮಾ ಕೆಲಸ ಮುಗಿದಿದೆ, ದರ್ಶನ್‌ ಪಾತ್ರದ ಡಬ್ಬಿಂಗ್‌ ಕೆಲಸ ಕೂಡ ಮುಗಿದಿದೆ. ದರ್ಶನ್‌ ಜೈಲಿನಲ್ಲಿ ಇರೋದಿಕ್ಕೆ ಈ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ ಎಂದು ಕಾದು ನೋಡಬೇಕಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದರ್ಶನ್ ತೂಗುದೀಪ
ರೇಣುಕಾಸ್ವಾಮಿ ಪ್ರಕರಣ
ಸ್ಯಾಂಡಲ್‌ವುಡ್
ಸೆಲೆಬ್ರಿಟಿಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved