Published : Nov 11, 2025, 07:31 AM ISTUpdated : Nov 11, 2025, 10:23 PM IST

State News Live: 'ಭಾಗ್ಯಲಕ್ಷ್ಮಿ' ಬಿಟ್ಟು 'ಆದಿಲಕ್ಷ್ಮಿ'ಗೆ ಎಂಟ್ರಿ ಕೊಟ್ಟ ನಟಿ ಆಶಾ ನಯ್ಯರ್​ - Adilakshmi Purana- ಏನಿದು ಸ್ಟೋರಿ?

ಸಾರಾಂಶ

ಬೆಂಗಳೂರು (ನ.11): ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ನೀಡಿದ ವಿಡಿಯೋ ಬಹಿರಂಗವಾದ ಬೆನ್ನಲ್ಲಿಯೇ ಸರ್ಕಾರ ಜೈಲು ಅಧಿಕಾರಿಗಳಾದ ಮ್ಯಾಗೇರಿ ಹಾಗೂ ಭಜಂತ್ರಿಯ ತಲೆದಂಡ ಪಡೆದಿದೆ. ಅದರೊಂದಿಗೆ ಜೈಲಿನ ಮುಖ್ಯ ಅಧೀಕ್ಷಕ ಸುರೇಶ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಗೃಹಸಚಿವ ಡಾ.ಜಿ.ಪರಮೇಶ್ವರ್‌ ನೇತತ್ವದ ಸಭೆಯಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಐಪಿಎಸ್‌ ಅಧಿಕಾರಿಯನ್ನು ನೇಮಕ ಮಾಡುವ ನಿರ್ಧಾರ ಮಾಡಲಾಗಿದೆ. ಜೈಲು ಆಡಳಿತದ ಸುಧಾರಣೆಗೆ ಎಡಿಜಿಪಿ ತಂಡವನ್ನು ರಚಿಸಲಾಗಿದೆ. ಇನ್ನು ವಿಡಿಯೋ ಸೋರಿಕೆ ಹಿಂದೆ ನಟ ಧನ್ವೀರ್‌ ಕೈವಾಡ ಇರುವ ಕಾರಣಕ್ಕೆ ಆತನನ್ನು ತೀವ್ರ ವಿಚಾರಣೆ ಮಾಡಲಾಗಿದೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:23 PM (IST) Nov 11

'ಭಾಗ್ಯಲಕ್ಷ್ಮಿ' ಬಿಟ್ಟು 'ಆದಿಲಕ್ಷ್ಮಿ'ಗೆ ಎಂಟ್ರಿ ಕೊಟ್ಟ ನಟಿ ಆಶಾ ನಯ್ಯರ್​ - Adilakshmi Purana- ಏನಿದು ಸ್ಟೋರಿ?

'ಭಾಗ್ಯಲಕ್ಷ್ಮಿ' ಸೀರಿಯಲ್‌ನಲ್ಲಿ ಪೂಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟಿ ಆಶಾ ನಯ್ಯರ್, ಇದೀಗ 'ಆದಿಲಕ್ಷ್ಮಿ ಪುರಾಣ' ಸೀರಿಯಲ್ ಮೂಲಕ ಜೀ ಕನ್ನಡದಲ್ಲಿ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ.  ಲಕ್ಷ್ಮಿ ತನ್ನ ಪತಿ ಆದಿಯಿಂದ ತಿರಸ್ಕರಿಸಲ್ಪಟ್ಟಿದ್ದು, ಗಂಡನ ಮನವೊಲಿಸುವ ಸವಾಲನ್ನು ಎದುರಿಸಲಿದ್ದಾಳೆ.

Read Full Story

09:44 PM (IST) Nov 11

Amruthadhaare - ಜೈದೇವ್​ಗೆ ಕೊನೆಗೂ ಮುಹೂರ್ತ ಫಿಕ್ಸ್​ ಮಾಡಿದ ಗೌತಮ್​! ಮುಂದಿದೆ ಮಾರಿಹಬ್ಬ

ಗೌತಮ್‌ನ ಆಸ್ತಿಯನ್ನು ಪಡೆದರೂ ತೃಪ್ತರಾಗದ ಜೈದೇವ್ ಮತ್ತು ಶಕುಂತಲಾ, ಇದೀಗ ಮಲ್ಲಿಯ ಆಸ್ತಿಯನ್ನು ಕಬಳಿಸಲು ಸಂಚು ರೂಪಿಸಿದ್ದಾರೆ. ಜೈದೇವ್, ಮಲ್ಲಿಯನ್ನು ಪತ್ತೆಹಚ್ಚಿ ಆಸ್ತಿಗೆ ಸಹಿ ಹಾಕುವಂತೆ ಬೆದರಿಸಿದಾಗ, ಗೌತಮ್ ಆಕೆಗೆ ಮುಕ್ತಿ ನೀಡಲು ಒಂದು ಯೋಜನೆ ರೂಪಿಸುತ್ತಾನೆ.
Read Full Story

09:36 PM (IST) Nov 11

ಮಾಲೂರು ಮರು ಎಣಿಕೆ ಕೇಂದ್ರದಿಂದ ಬಂದು ಕಣ್ಣೀರಿಟ್ಟ ಶಾಸಕ ನಂಜೇಗೌಡ, ಉಲ್ಟಾ ಆಗುತ್ತಾ ಫಲಿತಾಂಶ?

ಮಾಲೂರು ಮರು ಎಣಿಕೆ ಕೇಂದ್ರದಿಂದ ಬಂದು ಕಣ್ಣೀರಿಟ್ಟ ಶಾಸಕ ನಂಜೇಗೌಡ, ಉಲ್ಟಾ ಆಗುತ್ತಾ ಫಲಿತಾಂಶ? ಮರು ಎಣಿಕೆ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ ಕಾಂಗ್ರೆಸ್ ಶಾಸಕ ನಂಜೇಗೌಡ ಕುಟುಂಬದ ಜೊತೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

Read Full Story

07:22 PM (IST) Nov 11

ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ

ಬೆಂಗಳೂರು ಫ್ಲ್ಯಾಟ್‌ನಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ಶವವಾಗಿ ಪತ್ತೆ, ಇಬ್ಬರು ಯುವತಿಯರ ವಿರುದ್ದ ಪ್ರಕರಣ ದಾಖಲಾಗಿದೆ. ಒಬ್ಬಳ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ. ಯುವತಿಯರ ಕಿರುಕುಳಕ್ಕೆ ಯುವಕ ಬದುಕು ಅಂತ್ಯಗೊಳಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Read Full Story

07:12 PM (IST) Nov 11

ಬಿಹಾರ ಚುನಾವಣೆ - ಪೈಜಾಮವನ್ನು ಮುಂದೆ ಹಿಡಿದು ವೋಟ್ ಕೇಳಿದ ರಾಜಕಾರಣಿ - ವೃದ್ಧ ಮಾಡಿದ್ದೇನು?

Bihar election viral video: ರಾಜಕಾರಣಿಯೊಬ್ಬರು ತಮ್ಮ ಪೈಜಾಮದ ಟಾಪನ್ನು ಎತ್ತಿ ಮತ ಕೇಳಲು ಮುಂದಾಗಿದ್ದಾರೆ. ಈ ರಾಜಕಾರಣಿ ಹೀಗೆ ಪೈಜಾಮ ಎತ್ತಿ ಮತ ಕೇಳುವುದನ್ನು ನೋಡಿದ ಅಲ್ಲೇ ಇದ್ದ ವೃದ್ಧರೊಬ್ಬರು ಅವರ ಪೈಜಾಮದ ಮೇಲೆ ಒಂದು ರೂ ನಾಣ್ಯ ಹಾಕಿದ್ದು, ಇದಕ್ಕೆ ರಾಜಕಾರಣಿ ರಿಯಾಕ್ಷನ್ ಹೇಗಿತ್ತು ನೋಡಿ

Read Full Story

06:37 PM (IST) Nov 11

ಆಗ ಜೈಲಿಂದ ತಪ್ಪಿಸಿಕೊಳ್ತಿದ್ದ, ಈಗ ಅಲ್ಲೇ ಸುಖ ಪಡೀತಿದ್ದಾನೆ! ವಿಕೃತಕಾ*ಮಿ ಉಮೇಶ್​ ರೆಡ್ಡಿಗೆ ಹಣ ಸುರೀತಿರೋರು ಯಾರು?

18ಕ್ಕೂ ಹೆಚ್ಚು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿ, ಕೊಲೆಗೈದ ವಿಕೃತಕಾಮಿ ಉಮೇಶ್ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಈತನ ರಾಜಾತಿಥ್ಯಕ್ಕೆ ಹಣ ಎಲ್ಲಿಂದ ಪೂರೈಕೆಯಾಗುತ್ತಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. 

Read Full Story

06:18 PM (IST) Nov 11

ಬೈಮಿಸ್ಟೇಕ್ ಕಂಪನಿ ಸಿಇಒ ಸೇರಿ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಲೆಟರ್ ಕಳುಹಿಸಿದ ಹೆಚ್‌ಆರ್ -

Termination notice to entire company: ಹೊಸ ಸಿಸ್ಟಮ್ ಪರೀಕ್ಷಿಸುವಾಗ, ಹೆಚ್‌ಆರ್ ಅಧಿಕಾರಿಯೊಬ್ಬರು ಆಕಸ್ಮಿಕವಾಗಿ ಸಿಇಒ ಸೇರಿದಂತೆ ಎಲ್ಲಾ ಉದ್ಯೋಗಿಗಳಿಗೆ ಟರ್ಮಿನೇಷನ್ ಇಮೇಲ್ ಕಳುಹಿಸಿದ ಘಟನೆ ಸಂಸ್ಥೆಯೊಂದರಲ್ಲಿ ನಡೆದಿದೆ. ಆಮೇಲಾಗಿದ್ದೇನು?

Read Full Story

06:05 PM (IST) Nov 11

ನಾನು ಸೋತಿದ್ದೇನೆ ಸತ್ತಿಲ್ಲ- ಇನ್ಮುಂದೆ Bigg Boss ನೋಡಲ್ಲ ಎನ್ನುತ್ತಲೇ ಕಾರಣ ಹೇಳಿದ ಚಂದ್ರಪ್ರಭ

ಬಿಗ್ ಬಾಸ್ ಮನೆಯಿಂದ 6 ವಾರಗಳ ಬಳಿಕ ಚಂದ್ರಪ್ರಭ ಎಲಿಮಿನೇಟ್ ಆಗಿದ್ದಾರೆ. ಈ ಎಲಿಮಿನೇಷನ್ ಬಗ್ಗೆ ಅಸಮಾಧಾನ ಹೊರಹಾಕಿರುವ ಅವರು, ಮನೆಯಿಂದ ಹೊರಬರಲು ನಾನೇ ನಿರ್ಧರಿಸಿದ್ದೆ, ಅದರ ಕಾರಣ ಮುಂದೆ ಹೇಳುತ್ತೇನೆ ಎಂದಿದ್ದಾರೆ. ಇನ್ನು ಮುಂದೆ ಬಿಗ್ ಬಾಸ್ ನೋಡುವುದಿಲ್ಲ, ಅದು ನನ್ನಂತವರಿಗೆ ಅಲ್ಲ ಎಂದಿದ್ದಾರೆ.

 

Read Full Story

05:28 PM (IST) Nov 11

ಇಂಗ್ಲಿಷ್​ನಲ್ಲಿ ಉಗುಳಿದ್ರೆ 400 ರೂ. ರಿಯಾಯಿತಿ! ಬೆಂಗಳೂರಿನಲ್ಲಿ ಫಲಕ ನೋಡಿ ಜನರು ಶಾಕ್​- ಆಗಿದ್ದೇನು?

ಬೆಂಗಳೂರಿನಲ್ಲಿ ವೈರಲ್ ಆಗಿರುವ ಫಲಕವೊಂದರಲ್ಲಿ, ಕನ್ನಡದಲ್ಲಿ ಉಗುಳಿದರೆ ₹500 ಮತ್ತು ಇಂಗ್ಲಿಷ್‌ನಲ್ಲಿ ಉಗುಳಿದರೆ ₹100 ದಂಡ ಎಂದು ಬರೆಯಲಾಗಿದೆ. ಈ ದ್ವಂದ್ವ ನೀತಿಯುಳ್ಳ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ..

Read Full Story

04:46 PM (IST) Nov 11

Name Astrology - ಚಂದ್ರನು ಸಿಂಹ ರಾಶಿಗೆ ಪ್ರವೇಶ- ನಿಮ್ಮ ಹೆಸರಿನ ಮೊದಲಕ್ಷರಲ್ಲಿ ಅಡಗಿದೆ ನಾಳೆಯ ಭವಿಷ್ಯ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಹೆಸರಿನ ಮೊದಲ ಅಕ್ಷರವು ವ್ಯಕ್ತಿಯ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ನವೆಂಬರ್ 12, 2025 ರಂದು ಚಂದ್ರನು ಸಿಂಹ ರಾಶಿಗೆ ಪ್ರವೇಶಿಸುವುದರಿಂದ, A ಯಿಂದ Z ವರೆಗಿನ ಪ್ರತಿಯೊಂದು ಅಕ್ಷರದ ಹೆಸರಿನವರಿಗೆ ಆ ದಿನದ ಫಲಾನುಫಲಗಳನ್ನು ಇಲ್ಲಿ ವಿವರಿಸಲಾಗಿದೆ.
Read Full Story

04:26 PM (IST) Nov 11

ಗೋಕರ್ಣದಲ್ಲಿ ಆ ಪ್ರೇತ‌, ವಂಶ ನಿರ್ವಂಶ ಮಾಡ್ತೀನಿ ಎಂದು ಹೇಳಿತು - ಮಾಸ್ಟರ್‌ ಆನಂದ್

ಮಾಸ್ಟರ್‌ ಆನಂದ್‌ ಅವರು ಆಧ್ಯಾತ್ಮಿಕ ವಿಷಯದ ಬಗ್ಗೆ ಮಾಹಿತಿ ಕೊಡಲು ಒಂದು ಯುಟ್ಯೂಬ್‌ ಚಾನೆಲ್‌ ಮಾಡಿದ್ದಾರೆ. ಅಲ್ಲಿ ಈ ಬಗ್ಗೆ ಅವರು ಮಾತನಾಡುತ್ತಿರುತ್ತಾರೆ. ಆ ವೇಳೆ ಗೋಕರ್ಣದಲ್ಲಿ ನಡೆದ ಘಟನೆಯನ್ನು, ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಹಾಗಾದರೆ ಏನಾಯ್ತು? 

Read Full Story

03:50 PM (IST) Nov 11

BBK 12 - ಥೂ ಥೂ ಎಂದು ಉಗಿದ್ರು; ಆರ್ಭಟಿಸಿದ ಉತ್ತರ ಕರ್ನಾಟಕದ ಹುಲಿ ಮಾಳು ನಿಪನಾಳ!

BBK 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ನಿತ್ಯವೂ ಹೊಸ ಹೊಸ ಟಾಸ್ಕ್‌ಗಳನ್ನು ನೀಡಲಾಗುತ್ತಿದೆ. ಅದರಂತೆ ಈ ಬಾರಿ ಸ್ಪರ್ಧಿಗಳು ಸೂಕ್ತವಾದ ಕಾರಣ ನೀಡಿ, ಅವರು ಸಗಣಿ, ಕಸ ಎಂದು ಟೈಟಲ್‌ ಕೊಟ್ಟು ಮೈಮೇಲೆ ಸಗಣಿ ಸುರಿಯಬೇಕು, ಮೈಮೇಲೆ ಕಸ ಹಾಕಬೇಕಿತ್ತು.

Read Full Story

03:42 PM (IST) Nov 11

ತಾನು ಕೆಲಸ ಮಾಡ್ತಿದ್ದ ಅಲ್ ಫಲಾಹ್ ಕಾಲೇಜು ಲ್ಯಾಬನ್ನೇ RDX ಮಾಡಲು ಬಳಿಸಿದ್ನಾ ಟೆರರಿಸ್ಟ್ ಡಾಕ್ಟರ್‌

Doctor Muzamil Shakeel Jaish link: ಹರ್ಯಾಣದ ಆಲ್ ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಮುಜಾಮಿಲ್ ಶಕೀಲ್‌ನನ್ನು ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಸಂಪರ್ಕದ ಮೇಲೆ ಬಂಧಿಸಲಾಗಿದೆ. ಈತ ಕಾಲೇಜಿನ ಪ್ರಯೋಗಾಲಯವನ್ನೇ ಆರ್‌ಡಿಎಕ್ಸ್ ತಯಾರಿಸಲು ಬಳಸುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ.

Read Full Story

03:26 PM (IST) Nov 11

ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ

ದೆಹಲಿ ಸ್ಫೋಟ ಪ್ರಕರಣ, ವಿಮಾನ ಪ್ರಯಾಣಿಕರಿಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ವಿಶೇಷ ಸೂಚನೆ ನೀಡಲಾಗಿದೆ. ಈಗಾಗಲೇ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇದರ ಬೆನ್ನಲ್ಲೇ ಬೆಂಗಳೂರು ವಿಮಾನ ನಿಲ್ದಾಣ ಮಹತ್ವದ ಸೂಚನೆ ನೀಡಿದೆ.

Read Full Story

02:36 PM (IST) Nov 11

'ಜನರಿಗೆ ಕಾಫಿ, ಟೀ ಯಾಕೆ ಕುಡಿಸ್ತೀರಾ, ಉಚ್ಚೆ ಕುಡಿಸಿ..' ಬಿಜೆಪಿ ಟೀಕೆ ಮಾಡುವ ಭರದಲ್ಲಿ ಹೇಳಿದ ಸಂತೋಷ್‌ ಲಾಡ್‌!

ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಸಚಿವ ಸಂತೋಷ್‌ ಲಾಡ್‌ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 10 ವರ್ಷಗಳಲ್ಲಿ ನಡೆದ ಸ್ಫೋಟಗಳಿಗೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ.

Read Full Story

02:32 PM (IST) Nov 11

30 ವರ್ಷಗಳ ಬಳಿ ಶನಿ ನೇರ ಸಂಚಾರ - ಈ 5 ರಾಶಿಗೆ ಮುಟ್ಟಿದ್ದೆಲ್ಲವೂ ಬಂಗಾರ- ಖ್ಯಾತಿಯ ಉತ್ತುಂಗ

ನವೆಂಬರ್ 28 ರಂದು, 30 ವರ್ಷಗಳ ಬಳಿಕ ಶನಿಯು ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಈ ಜ್ಯೋತಿಷ್ಯ ಬದಲಾವಣೆಯು 5 ರಾಶಿಯವರಿಗೆ ಆರ್ಥಿಕ ಸಮೃದ್ಧಿ, ವೃತ್ತಿ ಪ್ರಗತಿ ಮತ್ತು ಖ್ಯಾತಿಯನ್ನು ತರಲಿದೆ. ಈ ರಾಶಿಗಳ ಜೀವನದಲ್ಲಿ ಆಗಲಿರುವ ಸಕಾರಾತ್ಮಕ ಬದಲಾವಣೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

01:35 PM (IST) Nov 11

BBK 12 - ಬನಿಯನ್‌ ಹಾಕಿ ಗಿಲ್ಲಿ ನಟ ಬಡವನಂತೆ ನಾಟಕ; MG ಹೆಕ್ಟೇರ್‌ನಲ್ಲಿ ಓಡಾಟ - ‌ ವಿಷ ಕಾರಿದ ಧ್ರುವಂತ್

Bigg Boss Kannada Season 12 Updates: ಬಿಗ್‌ ಬಾಸ್‌ ಮನೆಯಲ್ಲಿ ಯಾವ ಸ್ಪರ್ಧಿ ವಿಷಕಾರಿ ಎಂದು ಹೇಳಿ ಮೆಣಸಿನಕಾಯಿ ತಿನ್ನಲು ಕೊಡಬೇಕಿತ್ತು. ಆಗ ಧ್ರುವಂತ್‌ ಅವರು ಗಿಲ್ಲಿ ನಟನಿಗೆ, ಗಿಲ್ಲಿ ನಟ ಅವರು ಧ್ರುವಂತ್‌ ವಿರುದ್ಧ ಆರೋಪ ಮಾಡಿದ್ದಾರೆ. ಹಾಗಾದರೆ ಏನಾಯ್ತು?

Read Full Story

01:23 PM (IST) Nov 11

Bigg Boss ಗೆಲ್ಲುವುದು ಗಿಲ್ಲಿ ನಟ ಅಲ್ಲ, ಬದಲಿಗೆ.... ಡಾಗ್​ ಸತೀಶ್​ ನುಡಿದ ಭವಿಷ್ಯವಾಣಿ ಏನು?

ಬಿಗ್​ಬಾಸ್​ ಕನ್ನಡ 12ರ ವಿನ್ನರ್ ಯಾರೆಂಬ ಚರ್ಚೆ ಜೋರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನ ಹೆಸರು ಮುಂಚೂಣಿಯಲ್ಲಿದೆ. ಆದರೆ, ಮನೆಯಿಂದ ಹೊರಬಂದಿರುವ ಡಾಗ್ ಸತೀಶ್, ಗಿಲ್ಲಿ ನಟ ಗೆಲ್ಲುವುದಿಲ್ಲ, ಬದಲಿಗೆ ರಕ್ಷಿತಾ ಶೆಟ್ಟಿ ತನ್ನ ಸಮತೋಲಿತ ಆಟದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
Read Full Story

01:07 PM (IST) Nov 11

ಕೃಷ್ಣರ ಮೇಲೆ ಸೇಡು, ಶ್ರೀದೇವಿ ಜೊತೆ ಎನ್‌ಟಿಆರ್ ಡ್ಯುಯೆಟ್.. ಇಲ್ಲಿದೆ 45 ವರ್ಷ ಹಿಂದಿನ ಸರ್ದಾರ್ ಪಾಪಾರಾಯುಡು ವಿಮರ್ಶೆ

ಸೀನಿಯರ್ ಎನ್‌ಟಿಆರ್ ತಮ್ಮ ಸಿನಿಮಾ ಕೆರಿಯರ್‌ನಲ್ಲಿ ಮಾಡದ ಪ್ರಯೋಗಗಳಿಲ್ಲ. ಅವರು ಅನೇಕ ರೀತಿಯ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎನ್‌ಟಿಆರ್ ಎಂದರೆ ಎಲ್ಲರಿಗೂ ಪೌರಾಣಿಕ ಪಾತ್ರಗಳೇ ನೆನಪಾಗುತ್ತವೆ. ಆದರೆ ಸರ್ದಾರ್ ಪಾಪಾರಾಯುಡು ರೀತಿಯ ಅದ್ಭುತ ಸಾಮಾಜಿಕ ಚಿತ್ರಗಳೂ ಅವರ ಖಾತೆಯಲ್ಲಿವೆ.

Read Full Story

01:07 PM (IST) Nov 11

ಭಾರತ ಹಿಂದೂರಾಷ್ಟ್ರ ಆಗೋದಿಲ್ಲ, ಬಿಹಾರ ಚುನಾವಣೆ ಮೇಲೆ ಬಾಂಬ್‌ ಬ್ಲಾಸ್ಟ್‌ ಪರಿಣಾಮ ಖಂಡಿತ ಎಂದ ಸಿದ್ದರಾಮಯ್ಯ!

ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಹಿಂದೂರಾಷ್ಟ್ರ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಭಾರತ ಬಹುತ್ವದ ರಾಷ್ಟ್ರ ಎಂದಿದ್ದಾರೆ. ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಜನರ ಸಮಸ್ಯೆ ಬಗೆಹರಿಸಲು ಸೂಚಿಸಿದ್ದು, ಸಂಪುಟ ಪುನಾರಚನೆ ಚರ್ಚೆಗಾಗಿ ದೆಹಲಿಗೆ ತೆರಳುವ ಸಾಧ್ಯತೆ ಇದೆ.
Read Full Story

12:37 PM (IST) Nov 11

ರೈತರು ಒಂದು ಇಂಚು ಭೂಮಿ ಕೊಡಬೇಡಿ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ಯಾರೂ ಹೆದರುವ ಅಗತ್ಯ ಇಲ್ಲ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು.

Read Full Story

12:29 PM (IST) Nov 11

ದೆಹಲಿ ಕಾರ್‌ ಬಾಂಬ್‌ ಬ್ಲಾಸ್ಟ್‌ ಪಿತೂರಿ ಮಾಡಿದವರ ಸುಮ್ಮನೆ ಬಿಡೋ ಮಾತೇ ಇಲ್ಲ - ನರೇಂದ್ರ ಮೋದಿ

ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್ ಬಾಂಬ್ ಬ್ಲಾಸ್ಟ್ ಕುರಿತು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಈ ಪಿತೂರಿಯ ಹಿಂದಿರುವವರನ್ನು ಸುಮ್ಮನೆ ಬಿಡುವುದಿಲ್ಲ ಮತ್ತು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Read Full Story

12:23 PM (IST) Nov 11

ಕನ್ನಡದಲ್ಲಿ ವಿಜ್ಞಾನದ ರಸದೌತಣ - ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಿಂದ ವಿಶೇಷ ಅಭಿಯಾನ!

ಬೆಂಗಳೂರಿನ ಜಯನಗರದಲ್ಲಿರುವ ಪರಮ್ ಸೈನ್ಸ್ ಎಕ್ಸ್‌ಪೀರಿಯನ್ಸ್‌ ಸೆಂಟರ್‌ನಲ್ಲಿ (ParSEC) ಈ ತಿಂಗಳು ಪೂರ್ತಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡುವ ವಿನೂತನ ಯೋಜನೆಯನ್ನು ಹಮ್ಮಿಕೊಂಡಿದೆ.

Read Full Story

12:20 PM (IST) Nov 11

Amruthadhaare - ಕೊನೆಗೂ ಅಕ್ಕ-ತಮ್ಮನನ್ನು ಒಂದು ಮಾಡಿಬಿಟ್ಟ ಗೌತಮ್​; ಮುನಿಸು ಮಾಯ

‘ಅಮೃತಧಾರೆ’ ಧಾರಾವಾಹಿಯಲ್ಲಿ ಆಕಾಶ್ ಮತ್ತು ಮಿಂಚು ಶಾಲೆಯಲ್ಲಿ ಜಗಳವಾಡುತ್ತಾರೆ, ಇದರಿಂದಾಗಿ ಪ್ರಿನ್ಸಿಪಾಲ್ ಗೌತಮ್ ಮತ್ತು ಭೂಮಿಕಾರನ್ನು ಶಾಲೆಗೆ ಕರೆಸುತ್ತಾರೆ. ಗೌತಮ್ ಮಕ್ಕಳನ್ನು ಸಮಾಧಾನಪಡಿಸಿ ಒಂದಾಗಿಸುವುದನ್ನು ತೆರೆಮರೆಯಲ್ಲಿ ನಿಂತು ನೋಡಿದ ಭೂಮಿಕಾ ಮನಸ್ಸಿನಲ್ಲೇ ಖುಷಿಪಡುತ್ತಾಳೆ.
Read Full Story

12:16 PM (IST) Nov 11

ಎಲ್‌ಪಿಜಿ ಸಾಗಿಸುತ್ತಿದ್ದ ಟ್ರಕ್ ಪಲ್ಟಿ - ಸಿಲಿಂಡರ್‌ ಸ್ಫೋಟಕ್ಕೆ ಸುಟ್ಟು ಕರಕಲಾದ ಟ್ರಕ್

Ariyalur truck explosion: ತಮಿಳುನಾಡಿನ ಅರಿಯಲೂರು ಬಳಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾಗಿ, ಸಿಲಿಂಡರ್‌ಗಳು ಸ್ಫೋಟಗೊಂಡು ಭಾರಿ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಿದ್ದಾರೆ.

Read Full Story

11:56 AM (IST) Nov 11

47ರ ನಂತರವೂ ಆರೆಸ್ಸೆಸ್‌ ಏಕೆ ನೋಂದಣಿ ಆಗಲಿಲ್ಲ? - ಸಚಿವ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ನೋಂದಣಿ ಮಾಡಿಕೊಂಡರೆ ಆದಾಯದ ಮೂಲ ಹೇಳಬೇಕಾಗುತ್ತದೆ. ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿ ಆಗುತ್ತಿಲ್ಲ ಎಂದು ಅವರು ಬಯಸಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

Read Full Story

11:48 AM (IST) Nov 11

ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಕನಸ್ಸಿನಿಂದ ಪಕ್ಷ ಕಟ್ಟಲು ಹೊರಟಿದ್ದಾರೆ - ಜಿ.ಟಿ.ದೇವೇಗೌಡ

ಎಚ್.ಡಿ.ಕುಮಾರಸ್ವಾಮಿಯವರು ಆರೋಗ್ಯ ಸರಿ ಮಾಡಿಕೊಂಡು ಜೆಡಿಎಸ್ ಕಟ್ಟಲು ಮುಂದಾಗಿದ್ದಾರೆ. ಸಿಎಂ ಆಗುವ ಕನಸಿನೊಂದಿಗೆ ಪಕ್ಷ ಕಟ್ಟಲು ಹೊರಟ್ಟಿದ್ದಾರೆ. ಅವರಿಗೆ ಶುಭವಾಗಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

Read Full Story

11:45 AM (IST) Nov 11

21 ವರ್ಷದ ಮಾಡೆಲ್‌ಅನ್ನು ಖಾಸಗಿ ಆಸ್ಪತ್ರೆಯ ಹೊರಗಡೆ ಎಸೆದು ಪರಾರಿಯಾದ ಪ್ರೇಮಿ!

Bhopal Model Khushboo Ahirwar Found Dead Outside Hospital ಆಸ್ಪತ್ರೆಯ ಹೊರಗೆ ಸಂತ್ರಸ್ತೆಯ ತಾಯಿ ಲಕ್ಷ್ಮಿ ಅಹಿರ್ವಾರ್ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಗೋಳಾಡಿದ್ದಾರೆ.

 

Read Full Story

11:30 AM (IST) Nov 11

ಟೈರ್‌ ಸ್ಫೋಟ ಬಳಿಕ ಕಾರಿಗೆ ಬೆಂಕಿ - ಮಹಿಳೆ ಸಜೀವ ದಹನ

Car fire after tire burst: ಮಹಾರಾಷ್ಟ್ರದ ಜಲಗಾಂವ್-ಛತ್ರಪತಿ ಸಂಭಾಜಿ ನಗರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿ ಮಹಿಳೆಯೊಬ್ಬರು ಸಜೀವ ದಹನಗೊಂಡ ಘಟನೆ ನಡೆದಿದೆ.

Read Full Story

11:20 AM (IST) Nov 11

ಪರಪ್ಪನ ಅಗ್ರಹಾರ ಜೈಲು ರಾಜಾತಿಥ್ಯ ವಿವಾದ - ಸಿಎಂ ಸಿದ್ದರಾಮಯ್ಯ ಮನೆಗೆ ಬಿಜೆಪಿ ಮುತ್ತಿಗೆ ಯತ್ನ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಿರುವುದನ್ನು ಖಂಡಿಸಿ ಬಿಜೆಪಿಯ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

Read Full Story

10:51 AM (IST) Nov 11

ಸಂಪುಟ ಪುನಾರಚನೆ ವೇಳೆ ನನಗೆ ಸಚಿವ ಸ್ಥಾನ ನೀಡಬೇಕು - ಶಾಸಕ ಸಿ.ಎಸ್.ನಾಡಗೌಡ

ಸಂಪುಟ ಪುನಾರಚನೆ ವೇಳೆ ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಜಾತಿ ಸಮೀಕ್ಷೆಯ ಆಧಾರದ ಮೇಲೆ ಲಿಂಗಾಯತ ಕೋಟಾದಡಿಯಲ್ಲಿ ನನ್ನನ್ನು ಮಂತ್ರಿ ಮಾಡಬೇಕೆಂದು ಒತ್ತಾಯಿಸುತ್ತೇನೆ ಎಂದು ಸಿ.ಎಸ್.ನಾಡಗೌಡ ಹೇಳಿದ್ದಾರೆ.

Read Full Story

10:27 AM (IST) Nov 11

ಪವರ್‌ಪಾಯಿಂಟ್‌.. ಶತ್ರುವಿನ ಬುದ್ಧಿ ಜೊತೆಗೂ ಇಂದು ಹೋರಾಡಬೇಕಿದೆ - ಸೇನಾ ಮುಖ್ಯಸ್ಥ ದ್ವಿವೇದಿ

ಭವಿಷ್ಯದಲ್ಲಿ ಅನೇಕ ಸವಾಲುಗಳು ಎದುರಾಗಲಿವೆ. ಅವು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಮತ್ತು ಅಸ್ಪಷ್ಟತೆ ಎಂಬ ಸವಾಲುಗಳು. ಭವಿಷ್ಯ ತನ್ನೊಳಗೆ ಏನೆಲ್ಲವನ್ನು ಹಿಡಿದಿಟ್ಟುಕೊಂಡಿದೆ ಎಂಬುದರ ಬಗ್ಗೆ ನನಗೆ ಮತ್ತು ನಿಮಗೆ ಯಾವುದೇ ಸುಳಿವಿಲ್ಲ.

Read Full Story

09:58 AM (IST) Nov 11

ಅಯ್ಯೋ ದುರ್ವಿಧಿಯೇ.. 500 ರೂ ಆಸೆಗೆ ನಾಗರಹಾವು ಹಿಡಿಯುವಾಗ ಕಡಿತ - 17 ವರ್ಷದ ಬಾಲಕ ಸಾವು

ಹಾವು ಹಿಡಿಯಲು ಹೋದ ಹುಡುಗನನ್ನು ಅದೇ ಹಾವು ಕಡಿದ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರಜಾಕ್ (17) ಮೃತಪಟ್ಟ ಹುಡುಗ. ಹಾವು ಕಚ್ಚಿರೋ ವಿಡಿಯೋ ಮೊಬೈಲ್‌ನಲ್ಲಿ ಸೆರೆಯಾಗಿದೆ.

Read Full Story

09:36 AM (IST) Nov 11

ಹೀರೋ ಮುಸ್ಲಿಂ ಆಗಿದ್ದಕ್ಕೆ ಥಿಯೇಟರ್‌ಗೆ ಬಾರದ ಜನ.. 1083 ಕೋಟಿ ನಷ್ಟ! ವಿಶ್ವದ ಅತಿದೊಡ್ಡ ಫ್ಲಾಪ್ ಚಿತ್ರವಿದು

ಯಾವುದೇ ನಟನ ಯಶಸ್ಸು ಮತ್ತು ವೈಫಲ್ಯದ ಆಧಾರದ ಮೇಲೆ ಅವರಿಗೆ ಬೆಲೆ ಕಟ್ಟಲಾಗುತ್ತದೆ. 1300 ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ನಿರ್ಮಾಣವಾದ ಚಿತ್ರವೊಂದು ಹೀನಾಯವಾಗಿ ಸೋತು 1083 ಕೋಟಿ ನಷ್ಟ ಅನುಭವಿಸಿದೆ. ಆ ಚಿತ್ರದ ಬಗ್ಗೆ ಈ ಲೇಖನದಲ್ಲಿ ನೋಡೋಣ.

Read Full Story

09:16 AM (IST) Nov 11

ವಿಷ್ಣು ಜೊತೆ ನಟಿಸಿದ್ದ ಭಾನುಪ್ರಿಯ ತನ್ನ ಸಂಪಾದನೆಯನ್ನೆಲ್ಲಾ ಹೇಗೆ ಕಳೆದುಕೊಂಡರು? ನಟಿಗೆ ಮೋಸ ಮಾಡಿದ್ದು ಯಾರು?

ನಾಯಕಿಯಾಗಿ ಸುಮಾರು 15 ವರ್ಷಗಳ ಕಾಲ ಸಿನಿರಂಗವನ್ನು ಆಳಿದವರು ಭಾನುಪ್ರಿಯ. ಮೆಗಾಸ್ಟಾರ್ ಚಿರಂಜೀವಿಗೆ ಡ್ಯಾನ್ಸ್‌ನಲ್ಲಿ ಪೈಪೋಟಿ ನೀಡಿದ್ದ ಈ ನಟಿ, ನಂತರದ ದಿನಗಳಲ್ಲಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದರು. ತನ್ನ ಆಸ್ತಿಯನ್ನೆಲ್ಲಾ ಅವರು ಯಾರಿಗೆ ಕೊಟ್ಟರು ಗೊತ್ತಾ?

Read Full Story

08:52 AM (IST) Nov 11

ಪೌತಿ ಖಾತೆ, ಪೋಡಿಗೆ ಡಿಸೆಂಬರ್‌ ಗಡುವು - ಎರಡೂ ಕಾರ್ಯಕ್ಕೆ ವೇಗ ನೀಡಲು ತಹಶೀಲ್ದಾರ್‌ಗಳಿಗೆ ಸಚಿವ ಕೃಷ್ಣ ಸೂಚನೆ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮತ್ತು ಅತಿವೃಷ್ಟಿಯಿಂದ ಪೋಡಿ ದುರಸ್ತಿ ಕಾರ್ಯ ತಡವಾಗಿದೆ, ಹೀಗಾಗಿ ಎರಡೂ ಕಾರ್ಯಗಳಿಗೆ ವೇಗ ನೀಡಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Read Full Story

08:05 AM (IST) Nov 11

ಬೆಂಗಳೂರು ನಗರದಲ್ಲಿ ಆನ್‌ಲೈನ್ ಇ-ಖಾತಾ ವ್ಯವಸ್ಥೆ ಜಾರಿ - ಮನೀಷ್ ಮೌದ್ಗಿಲ್

ಖಾತಾ ದಾಖಲೆ ಪಡೆಯಲು ಕಂದಾಯ ಕಚೇರಿ, ಪಾಲಿಕೆ ಕಚೇರಿಗಳಿಗೆ ಅಲೆಯುವುದು, ಮಧ್ಯವರ್ತಿಗಳ ಹಾವಳಿ, ವ್ಯಾಪಕ ಭ್ರಷ್ಟಾಚಾರ ತಪ್ಪಿಸಲು ಆನ್‌ಲೈನ್ ಅಥವಾ ಬೆಂಗಳೂರು ಒನ್ ಸೆಂಟರ್ ಮೂಲಕ ‘ಇ-ಖಾತಾ’ಗೆ ಅರ್ಜಿ ಸಲ್ಲಿಸುವ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಜಾರಿಗೊಳಿಸಲಾಗಿದೆ

Read Full Story

07:58 AM (IST) Nov 11

ಸರ್ಕಾರದ ಕಪಾಟಿನಲ್ಲಿ ದೂಳು ತಿನ್ನುತ್ತಿವೆ ಜೈಲು ಸುಧಾರಣೆಗಾಗಿ ಸಲ್ಲಿಸಿದ 4 ವರದಿಗಳು

ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಉನ್ನತ ಮಟ್ಟದ ಸಮಿತಿಗಳಿಂದ ಸಲ್ಲಿಕೆಯಾದ ನಾಲ್ಕು ವರದಿಗಳು ಸರ್ಕಾರದ ಕಪಾಟಿನಲ್ಲಿ ಧೂಳು ತಿನ್ನುತ್ತಿವೆ. ಈಗ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದಲ್ಲಿ ಮತ್ತೊಂದು ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚನೆಯಾಗಿದೆ.

Read Full Story

07:37 AM (IST) Nov 11

ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್‌ ವಿಚಾರಣೆ ನ.19ಕ್ಕೆ ಮುಂದೂಡಿದ ಸಿಟಿ ಸಿವಿಲ್‌ ಕೋರ್ಟ್‌

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಒಟ್ಟು 10 ದಾಖಲೆಗಳನ್ನು ಒಪ್ಪುವಂತೆ ಕೋರಿ ತನಿಖಾಧಿಕಾರಿಗಳ ಪರ ಸರ್ಕಾರಿ ಅಭಿಯೋಜಕರು ಸೋಮವಾರ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ಗೆ ಮನವಿ ಮಾಡಿದರು.

 

Read Full Story

07:35 AM (IST) Nov 11

ಜೈಲು ವಿಡಿಯೋಗೆ 2 ತಲೆದಂಡ, ಸುಧಾರಣೆಗೆ ಉನ್ನತ ತಂಡ

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ ಪ್ರಕರಣ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರವು, ಕಾರಾಗೃಹಗಳ ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್‌.ಹಿತೇಂದ್ರ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಿದೆ.

 

Read Full Story

More Trending News