ಬೆಂಗಳೂರು (ಮಾ.11): ಅನರ್ಹ ಬಿಪಿಎಲ್ ಕಾರ್ಡ್ದಾರರನ್ನು ಪತ್ತೆ ಹಚ್ಚುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತೆ ಆರಂಭ ಮಾಡಿದೆ. ಈ ಬಾರಿ ಇಂಥ ಕಾರ್ಡ್ಗಳನ್ನು ಹುಡುಕುವ ಜವಾಬ್ದಾರಿಯನ್ನು ಪಿಡಿಓ ಹಾಗೂ ಗ್ರಾಮ ಲೆಕ್ಕಿಗರಿಗೆ ನೀಡಿದೆ. ಅನರ್ಹರ ಪತ್ತೆಗೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಇವರುಗಳು ಮನೆ ಮನೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ಮಾಡಲಿದ್ದಾರೆ. ಇನ್ನೊಂದೆಡೆ ಚಿನ್ನ ಸಾಗಾಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ವಿಚಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ್ದು, ರನ್ಯಾ ಜೊತೆ ನಂಟು ಹೊಂದಿರುವ ಸಚಿವರ ಹೆಸರು ಹೇಳಿ ಎಂದು ವಿಪಕ್ಷಗಳು ಒತ್ತಾಯಿಸಿದೆ.

11:47 PM (IST) Mar 11
Lucknow Hotel Death Uzbekistan Woman Found Dead: ಲಕ್ನೋದ ಹೋಟೆಲ್ನಲ್ಲಿ ಉಜ್ಬೇಕಿಸ್ತಾನದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಆಕೆ ಯುವಕನೊಂದಿಗೆ ಬಂದಿದ್ದು, ಆತ ನಂತರ ತೆರಳಿದ್ದಾನೆ. ಕೊಲೆ ಮತ್ತು ಆತ್ಮಹತ್ಯೆ ಎರಡೂ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ11:07 PM (IST) Mar 11
ರಾಯಚೂರು ಜಿಲ್ಲೆಯಲ್ಲಿ ಬೇಸಿಗೆ ತಾಪಮಾನವು 41.4 ಡಿಗ್ರಿ ಸೆಲ್ಸಿಯಸ್ಗೆ ಏರಿದೆ, ಇದು ರಾಜ್ಯದಲ್ಲೇ ಅತಿ ಹೆಚ್ಚು. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಂಪಾದ ಪಾನೀಯಗಳು ಮತ್ತು ನೆರಳಿನ ಆಶ್ರಯ ಪಡೆಯುತ್ತಿದ್ದಾರೆ.
ಪೂರ್ತಿ ಓದಿ11:00 PM (IST) Mar 11
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ರಿಷಬ್ ಪಂತ್ ನಿರ್ಗಮಿಸಿದ ಬಳಿಕ ಇದೀಗ ನಾಯಕನ ಹುಡುಕಾಟ ಜೋರಾಗಿದೆ. ಇದರ ನಡುವೆ ಕೆಎಲ್ ರಾಹುಲ್ಗೆ ನಾಯಕತ್ವ ವಹಿಸಿಕೊಳ್ಳುವಂತೆ ಡಿಸಿ ಸೂಚಿಸಿತ್ತು. ಆದರೆ ಕೆಎಲ್ ರಾಹುಲ್ ನಾಯಕತ್ವ ನಿರಾಕರಿಸಿದ್ದಾರೆ.
ಪೂರ್ತಿ ಓದಿ09:55 PM (IST) Mar 11
76 ವರ್ಷದ ತಂದೆ ಮರು ಮದುವೆಯಾಗಲು ತಯಾರಿ ಮಾಡಿಕೊಂಡಿದ್ದಾರೆ. ಆದರೆ ಇದಕ್ಕೆ 56 ವರ್ಷದ ಮಗ ವಿರೋಧಿಸಿದ್ದಾನೆ. ಜಗಳ ಶುರುವಾಗಿದೆ. ಕೊನೆಗೆ ಮರು ಮದುವೆಯೂ ಆಗಲಿಲ್ಲ, ಇತ್ತ ಮಗನೂ ಬದುಕುಳಿಯಿಲ್ಲ.
ಪೂರ್ತಿ ಓದಿ09:40 PM (IST) Mar 11
ಜೋಯಿಡಾ ತಾಲೂಕಿನ ಡಿಗ್ಗಿಯಲ್ಲಿರುವ ಗವಳಾದೇವಿ ಹುತ್ತಿಗೆ ಪಂಚ ಮಿರಾಶಿಗಳಿಂದ ಸೀರೆ ಉಡಿಸುವ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.12ರಂದು ನಡೆಯಲಿದೆ. ಮೂರ್ತಿ ಇಲ್ಲದ ಈ ದೇವಿಗೆ ಹುತ್ತಿಗೆ ಸೀರೆ ಉಡಿಸುವುದು ಇಲ್ಲಿನ ವಿಶೇಷ.
ಪೂರ್ತಿ ಓದಿ09:15 PM (IST) Mar 11
ಚಂದ್ರಮುಖಿ ಪ್ರಾಣಸಖಿ ಖ್ಯಾತಿಯ ನಟಿ ಭಾವನಾ ರಿಯಾಲಿಟಿ ಶೋದಲ್ಲಿ ಬೆತ್ತಲೆ ಬೆನ್ನು ಪ್ರದರ್ಶನ ಮಾಡಿ ಸಿಕ್ಕಾಪಟ್ಟೆ ಟ್ರೋಲ್ಗೊಳಗಾಗಿದ್ದಾರೆ. ಎಲ್ಲ ಜಾಲಿ ಜಾಲಿ ಅಂತ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಪೂರ್ತಿ ಓದಿ08:48 PM (IST) Mar 11
ಬಾಲಿವುಡ್ ನಲ್ಲಿ ಇನ್ನೊಂದು ಡಿವೋರ್ಸ್ ಆಗುತ್ತಾ? ಹೀಗೊಂದು ಚಿಂತೆ ಫ್ಯಾನ್ಸ್ ಕಾಡ್ತಿದೆ. ಅದಕ್ಕೆ ಕರೀನಾ ಮತ್ತು ಸೈಫ್ ಬಗ್ಗೆ ಜ್ಯೋತಿಷಿ ಹೇಳಿದ ಮಾತು ಕಾರಣವಾಗಿದೆ.
ಪೂರ್ತಿ ಓದಿ08:46 PM (IST) Mar 11
ಸಂಸದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಬೆನ್ನಲ್ಲೇ ಶ್ರೀವಶ್ರಿ ಹಾಗೂ ತೇಜಸ್ವಿ ಸೂರ್ಯ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೈಕಿ ಶಿವಶ್ರೀ ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?
ಪೂರ್ತಿ ಓದಿ08:25 PM (IST) Mar 11
ಕನ್ನಡದ ನಟಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳಿವೆ. ಕಾರ್ತಿಕ್ ತಾಯಿ, ವೈದ್ಯೆ ಸೊಸೆಯಾಗಬೇಕೆಂಬ ಆಸೆ ವ್ಯಕ್ತಪಡಿಸಿದ್ದು, ಕನ್ನಡದ ನಟಿಯೇ ಸೊಸೆಯಾಗುವ ಸಾಧ್ಯತೆ ಇದೆ.
ಪೂರ್ತಿ ಓದಿ08:04 PM (IST) Mar 11
ಖೋ ಖೋ ಆಟಗಾರರಿಗೆ ಕಡಿಮೆ ಹಣ ನೀಡಿದ್ದಕ್ಕೆ ಮತ್ತು ಶಬಾನಾ ಅಜ್ಮಿಗೆ 10 ಲಕ್ಷ ರೂ. ಬಹುಮಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡಕ್ಕೆ ಕೊಡುಗೆ ನೀಡದ ವ್ಯಕ್ತಿಗೆ ಪ್ರಶಸ್ತಿ ನೀಡಿದ್ದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ07:52 PM (IST) Mar 11
ಇದು ಬೆಂಗಳೂರಿನ ನೇಚರ್, ಒಮ್ಮೆ ಬೆಂಗಳೂರಿಗರ ಹೃದಯ ಗೆದ್ದರೆ ಸಾಕು, ಮತ್ತೆ ಪರಿಸ್ಥಿತಿ ಏನೇ ಇದ್ದರೂ ಯಾವತ್ತೂ ಕೈಬಿಡುವುದಿಲ್ಲ. ಮುಂದಿನ ಬಾರಿ ಆರ್ಸಿಬಿ ಕಪ್ ಗೆಲ್ಲುತ್ತೆ. ಕಪ್ ಗೆದ್ದರೂ ಇಲ್ಲದಿದ್ದರೂ ನಮ್ಮ ಸಪೋರ್ಟ್ ಆರ್ಸಿಬಿಗೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಆಡಿದ ಮಾತುಗಳು ಭಾರಿ ಸಂಚಲನ ಸೃಷ್ಟಿಸುತ್ತಿರುವುದೇಕೆ?
07:20 PM (IST) Mar 11
Simple kitchen Tips: ಅಡುಗೆಮನೆ ಕ್ಲೀನ್ ಮಾಡುವ ಸುಲಭ ವಿಧಾನಗಳು ಇಲ್ಲಿವೆ. ಮಸಾಲೆ ಪದಾರ್ಥಗಳು, ಕಿಚನ್ ಟವೆಲ್, ಪ್ಲಾಸ್ಟಿಕ್ ಕಂಟೈನರ್ ಮತ್ತು ಸ್ಪಾಂಜ್ನಂತಹ ವಸ್ತುಗಳನ್ನು ಕಾಲಕಾಲಕ್ಕೆ ಬದಲಾಯಿಸುವ ಮಹತ್ವವನ್ನು ತಿಳಿಯಿರಿ.
ಪೂರ್ತಿ ಓದಿ07:07 PM (IST) Mar 11
ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾಗಿದ್ದಾರೆ. ಬಿಬಿಎಂಪಿ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ.
ಪೂರ್ತಿ ಓದಿ07:05 PM (IST) Mar 11
ಕೆನಡಾದ (Canada) ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಸಂಸತ್ತನ್ನು ತೊರೆಯುವಾಗ ಕುರ್ಚಿ ಹಿಡಿದು ಹೊರನಡೆದರು. ಅವರ ಈ ವಿಶಿಷ್ಟ ಶೈಲಿಯ ಚಿತ್ರಗಳು ವೈರಲ್ ಆಗಿವೆ. ಸಂಪೂರ್ಣ ಸುದ್ದಿ ಓದಿ.
ಪೂರ್ತಿ ಓದಿ06:52 PM (IST) Mar 11
Hyderabadi Bagara Rice: ಹೈದರಾಬಾದ್ ಅಂದ್ರೆ ಎಲ್ಲರಿಗೂ ನೆನಪಿಗೆ ಬರೋದು ಬಿರಿಯಾನಿ. ಆದ್ರೆ ಆ ಬಿರಿಯಾನಿಗೇ ಟಫ್ ಕೊಡುವ ಬಾಗಾರ ರೈಸ್ ಒಮ್ಮೆ ಟೆಸ್ಟ್ ಮಾಡಿ ನೋಡಿ. ಆಮೇಲೆ ತುಂಬಾ ದಿನಗಳವರೆಗೆ ಅದರ ರುಚಿ ನಿಮ್ಮ ನಾಲಿಗೆಯಲ್ಲೇ ಉಳಿದುಕೊಳ್ಳುತ್ತೆ.
ಪೂರ್ತಿ ಓದಿ06:45 PM (IST) Mar 11
ಹೋಳಿ ಹಬ್ಬಕ್ಕೆ ಸ್ಟಾರ್ ಏರ್ ವಿಮಾನ ಸಂಸ್ಥೆ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಆಫರ್ ಮೂಲಕ ಟಿಕೆಟ್ ಬೆಲೆ ಕೇವಲ 999 ರೂಪಾಯಿ ಮಾತ್ರ. ವಿಶೇಷ ಅಂದರೆ 7 ದಿನಗಳ ಬುಕಿಂಗ್ ಅವಧಿ ಹಾಗೂ 7 ತಿಂಗಳ ಪ್ರಯಾಣ ಅವಧಿಯನ್ನು ನೀಡಲಾಗಿದೆ.
ಪೂರ್ತಿ ಓದಿ06:34 PM (IST) Mar 11
ಇಲ್ಲಿಯವರೆಗೆ, ಅಮೆರಿಕವು ಭಾರತದ ಮೇಲೆ ಯಾವುದೇ ಪ್ರತೀಕಾರದ ತೆರಿಗೆಯನ್ನು ವಿಧಿಸಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಹೇಳಿದ್ದಾರೆ. ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಉತ್ತರವನ್ನು ನೀಡಿದ್ದಾರೆ.
ಪೂರ್ತಿ ಓದಿ06:30 PM (IST) Mar 11
ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮಂಜುಳಾ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡನ ನಿಧನದಿಂದ ಖಿನ್ನತೆಗೆ ಒಳಗಾಗಿದ್ದ ಅವರು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಪೂರ್ತಿ ಓದಿ06:27 PM (IST) Mar 11
ಇತ್ತೀಚೆಗೆ ವೈರಲ್ ಆದ ವಿಡಿಯೋದಲ್ಲಿ ಮಕ್ಕಳು ಹಾವನ್ನು ಹಿಡಿದು ಸ್ಕಿಪ್ಪಿಂಗ್ ಆಡುತ್ತಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಬಾಲಕಿಯೊಬ್ಬಳು ಬೈಕ್ನೊಳಗೆ ಸಿಲುಕಿದ ಹಾವನ್ನು ಬರಿಗೈಲಿ ಹಿಡಿದೆಳೆಯುತ್ತಿದ್ದಾಳೆ.
ಪೂರ್ತಿ ಓದಿ06:26 PM (IST) Mar 11
ಸೆನೆಗಲ್ ಅಧ್ಯಕ್ಷ ಫಾಯ್ ಅವರ ನಾಯಕತ್ವದ ಕುರಿತಾದ ಹೇಳಿಕೆ ಭಾರತೀಯ ರಾಜಕಾರಣದ ವೈಭವೀಕರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ ಮತ್ತು ಒಡೆದು ಆಳುವ ತಂತ್ರಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಅವರ ಮೌಲ್ಯಾಧಾರಿತ ವಿಧಾನ ಭಾರತಕ್ಕೆ ಮಾರ್ಗದರ್ಶಿಯಾಗಬಲ್ಲುದೇ?
ಪೂರ್ತಿ ಓದಿ06:10 PM (IST) Mar 11
2017ರಲ್ಲಿ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ 23 ಆರೋಪಿಗಳು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಮರಳು ದಂಧೆಕೋರನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಈ ಕೃತ್ಯ ಎಸಗಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 24 ರಂದು ಪ್ರಕಟಿಸಲಾಗುವುದು.
ಪೂರ್ತಿ ಓದಿ06:09 PM (IST) Mar 11
Sukrutha Nag on Bharjari Bachelors Show 2: ʼಅಗ್ನಿಸಾಕ್ಷಿʼ ಹಾಗೂ ʼಲಕ್ಷಣʼ, ʼಭಾಗ್ಯಲಕ್ಷ್ಮೀʼ ಧಾರಾವಾಹಿ ಖ್ಯಾತಿಯ ನಟಿ ಸುಕೃತಾ ನಾಗ್ ಅವರು ʼಭರ್ಜರಿ ಬ್ಯಾಚುಲರ್ಸ್ʼ ಶೋನಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅವರು ತಂದೆಯ ಕಾರ್ಯವನ್ನು ಸಹೋದರಿ ಮಾಡಿದ್ದ ಬಗ್ಗೆ ಮಾತನಾಡಿದ್ದಾರೆ.
ಪೂರ್ತಿ ಓದಿ
05:52 PM (IST) Mar 11
ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 13ರ ರಾತ್ರಿ ಹಾಗೂ ಮಾರ್ಚ್ 14ರ ಬೆಳಗಿನ ಜಾವ ಘಟಿಸಲಿದೆ. ಈವೇಳೆ ರಕ್ತ ಚಂದ್ರನಾಗಿ ಗೋಚರಿಸಲಿದೆ. ಹೀಗಾಗಿಯೇ ಬ್ಲಡ್ ಮೂನ್ ಎಂದು ಕರೆಯಲಾಗುತ್ತಿದೆ.ಬ್ಲಡ್ ಮೂನ್ ಯಾವಾಗ, ಎಲ್ಲಿ ನೋಡಬಹುದು?
ಪೂರ್ತಿ ಓದಿ05:48 PM (IST) Mar 11
ನಟ ಶಿವರಾಜ್ ಕುಮಾರ್ ಸಿನಿಮಾದಲ್ಲಿ ಯಾರಿಗೆ ಶೂಟ್ ಮಾಡಿದರೂ ಅವರು ಸ್ಟಾರ್ ಆಗುತ್ತಾರೆ ಎಂದು ಕಾಕ್ರೋಚ್ ಸುಧಿ ಹೇಳಿದ್ದಾರೆ. ಯುಐ ಸಿನಿಮಾ ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ಅವರು, ಶಿವಣ್ಣನಿಂದ ಶೂಟ್ ಮಾಡಿಸಿಕೊಂಡ ನಟರ ಬಗ್ಗೆ ಉಲ್ಲೇಖಿಸಿದ್ದಾರೆ.
ಪೂರ್ತಿ ಓದಿ05:46 PM (IST) Mar 11
ಜಾಫರ್ ಎಕ್ಸ್ಪ್ರೆಸ್ ರೈಲನ್ನು ವಶಪಡಿಸಿಕೊಂಡು ಲಿಬರೇಶನ್ ಆರ್ಮಿ ನೂರಾರು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿದೆ. ಉಗ್ರ ಸಂಘಟನೆಯು ರೈಲನ್ನು ಸ್ಫೋಟಿಸುವ ಬೆದರಿಕೆ ಹಾಕಿದೆ.
ಪೂರ್ತಿ ಓದಿ05:39 PM (IST) Mar 11
ಫೇಸ್ಬುಕ್ನ ಮಾಜಿ ಸಿಒಒ ಶೆರಿಲ್ ಸ್ಯಾಂಡ್ಬರ್ಗ್ ವಿರುದ್ಧ ಅವರ ಮಾಜಿ ಉದ್ಯೋಗಿಯೊಬ್ಬರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪುಸ್ತಕವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು, ಇದು ತೀವ್ರ ಸಂಚಲನವನ್ನು ಉಂಟುಮಾಡಿದೆ.
ಪೂರ್ತಿ ಓದಿ05:38 PM (IST) Mar 11
ಕೊಡಗಿನಲ್ಲಿ ಏರ್ ಸ್ಟ್ರಿಪ್ ನಿರ್ಮಾಣದ ಕನಸು ಮತ್ತೆ ಚಿಗುರೊಡೆದಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಪೂರ್ತಿ ಓದಿ05:10 PM (IST) Mar 11
ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯೇ ಅಧಿಕೃತ ಸಂಘಟನೆ ಎಂದು ನ್ಯಾಯಾಲಯ ಆದೇಶಿಸಿದೆ. ಇನ್ನು ಮುಂದೆ ಬೇರೆ ಸಂಘಟನೆಗಳು ಇದೇ ಹೆಸರಿನಲ್ಲಿ ಕಾರ್ಯಚಟುವಟಿಕೆ ನಡೆಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಂ.ಗುರುಮೂರ್ತಿ ಶಿವಮೊಗ್ಗ ತಿಳಿಸಿದ್ದಾರೆ.
ಪೂರ್ತಿ ಓದಿ05:10 PM (IST) Mar 11
ವಧುವಿಗೆ ಸಿಂಧೂರು ಇಡುವ ಸಂಪ್ರದಾಯದ ತನಕೆ ಎಲ್ಲವೂ ಒಕೆ ಒಕೆ, ಆದರೆ ಸಿಂಧೂರ ಇಡುವಾಗ ವರನ ಕೈ ನಡುಗಿದೆ. ಛಂಗನೆ ಎದ್ದ ವಧು, ಮದವೆ ನಿಲ್ಲಿಸಿಬಿಟ್ಟಿದ್ದಾಳೆ. ಪೊಲೀಸರು ಸ್ಥಳ್ಕಕೆ ಆಗಮಿಸಿದರೂ ಮದುವೆ ಮಾತ್ರ ನಡೆಯಲೇ ಇಲ್ಲ. ಕಾರಣವೇನು?
05:02 PM (IST) Mar 11
ಅಮಿತಾಭ್ ಬಚ್ಚನ್ ಕೆಬಿಸಿಯಲ್ಲಿ ತಮ್ಮ ಹೆಂಡತಿ ಜಯಾ ಅವರ ನಂಬರನ್ನು ಮೊಬೈಲ್ನಲ್ಲಿ ಯಾವ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಬಿಗ್ ಬಿ ಆಗಾಗ ಗೇಮ್ ಶೋನಲ್ಲಿ ತಮ್ಮ ಮತ್ತು ಕುಟುಂಬದ ಬಗ್ಗೆ ಕಥೆಗಳನ್ನು ಹೇಳುತ್ತಿರುತ್ತಾರೆ.
ಪೂರ್ತಿ ಓದಿ04:45 PM (IST) Mar 11
ಒಬ್ಬ ಸ್ಟಾರ್ ಗಾಯಕನಿಗೆ ಕೇವಲ 43 ನೇ ವಯಸ್ಸಿನಲ್ಲಿ ಹೃದಯಾಘಾತವಾಗಿ ಸಾವನ್ನಪಿದರು. ಅಕಾಲಿಕ ಮರಣವಾಗಿ ಅವರು ತಮ್ಮ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಸ್ಟಾರ್ ಗಾಯಕ ಯಾರೆಂದು ತಿಳಿಯೋಣ.
ಪೂರ್ತಿ ಓದಿ04:28 PM (IST) Mar 11
ಬಾಂಗ್ಲಾದೇಶದಲ್ಲಿ ದಂಗೆಗೆ ಪಾಕಿಸ್ತಾನದ ಸಂಚು ಬಯಲಾಗಿದೆ. ಸೇನೆಯ ಹಿರಿಯ ಅಧಿಕಾರಿಯೊಬ್ಬರು ಪಾಕಿಸ್ತಾನದ ಕುಮ್ಮಕ್ಕಿನಿಂದ ಸರ್ಕಾರ ಬದಲಾಯಿಸಲು ಪ್ರಯತ್ನಿಸುತ್ತಿದ್ದರು. ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಪೂರ್ತಿ ಓದಿ04:23 PM (IST) Mar 11
2036ರ ಒಲಿಂಪಿಕ್ಸ್ಗಾಗಿ ಅಹಮದಾಬಾದ್ನಲ್ಲಿ 10 ಕ್ರೀಡಾಂಗಣಗಳನ್ನು ನಿರ್ಮಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ. ಗುಜರಾತ್ ಈಗಾಗಲೇ ಒಲಿಂಪಿಕ್ಗೆ ಸಿದ್ಧತೆ ಆರಂಭಿಸಿದೆ. ಕರ್ನಾಟಕದ ಚಿರಂತ್ಗೆ ಯೂತ್ ಅಥ್ಲೆಟಿಕ್ಸ್ನಲ್ಲಿ ಚಿನ್ನ ಹಾಗೂ ಬಸವರಾಜ್ಗೆ ಕುಸ್ತಿಯಲ್ಲಿ ಕಂಚು.
ಪೂರ್ತಿ ಓದಿ04:13 PM (IST) Mar 11
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಬಹಳ ಹೆಚ್ಚಾಗಿದೆ. ಪ್ರತಿಯೊಂದು ಕೆಲಸಕ್ಕೂ ಯಂತ್ರಗಳು ಬರುತ್ತಿವೆ. ಮನೆಯಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಮತ್ತು ಟಿವಿ ಮುಂತಾದ ಹಲವು ವಸ್ತುಗಳು ಇವೆ. ಇದರಿಂದಾಗಿ ಕರೆಂಟ್ ಬಿಲ್ ಕೂಡ ಗಮನಾರ್ಹವಾಗಿ ಹೆಚ್ಚುತ್ತಿದೆ. ಆದಾಗ್ಯೂ, ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು ಎಂಬುದು ತಿಳಿದುಕೊಳ್ಳೋಣ.
ಪೂರ್ತಿ ಓದಿ03:50 PM (IST) Mar 11
ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಗೆ 15,000 ಕೋಟಿ ರೂಪಾಯಿ ಮೌಲ್ಯದ ಆ್ಯಂಟಿಲಿಯಾ ಮನೆ ಮಾತ್ರವಲ್ಲ, ಇದರ ಜೊತೆಗೆ ಐದಕ್ಕೂ ಹೆಚ್ಚು ಅತ್ಯಂತ ದುಬಾರಿ ಮನೆಗಳಿವೆ. ಈ ಮನೆ ಎಲ್ಲಿದೆ ಗೊತ್ತಾ? ಇದರ ಬೆಲೆ ಎಷ್ಟು?
ಪೂರ್ತಿ ಓದಿ03:50 PM (IST) Mar 11
Karnataka budget 2025 highlights: ಮಾಜಿ ಶಾಸಕ ಪರಣ್ಣ ಮನವಳ್ಳಿ ಕಾಂಗ್ರೆಸ್ ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದಾರೆ. ಇದು ಕೇವಲ ಒಂದು ಸಮುದಾಯವನ್ನು ಓಲೈಸುವಂತಿದೆ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.
ಪೂರ್ತಿ ಓದಿ03:49 PM (IST) Mar 11
ರೈಲಿನ ಬಾಗಿಲಲ್ಲಿ ನೇತಾಡುತ್ತಿದ್ದ ಪ್ರಯಾಣಿಕರನ್ನು ಶ್ವಾನವೊಂದು ಬೊಗಳಿ ಒಳಗೆ ಕಳುಹಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಕೋಲ್ಕತ್ತಾದ ಹೌರಾ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಪೂರ್ತಿ ಓದಿ03:21 PM (IST) Mar 11
ಮುಖವು ಸುಂದರವಾಗಿ, ಮೃದುವಾಗಿ ಮತ್ತು ಹೊಳೆಯುವಂತೆ ಇರಲು ಅನೇಕ ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ದುಬಾರಿ ಕ್ರೀಮ್ಗಳನ್ನು ಬಳಸುತ್ತಾರೆ. ಆದರೆ ಸ್ನಾನ ಮಾಡುವ ಮೊದಲು ಈ ಸಲಹೆಗಳನ್ನು ಪಾಲಿಸಿದರೆ ಸಾಕು. ಯಾವುದೇ ಕ್ರೀಮ್ಗಳಿಲ್ಲದೆ ಮುಖವು ಸುಂದರವಾಗಿ ಬದಲಾಗುತ್ತದೆ! ಅವು ಯಾವುವು ತಿಳಿಯಿರಿ.
ಪೂರ್ತಿ ಓದಿ03:20 PM (IST) Mar 11
ಅಣ್ಣಯ್ಯ ಧಾರಾವಾಹಿಯ ಪಾರು ಮತ್ತು ಶಿವುನ ಬೆಲ್ದಚ್ಚಂಗೆ ಪಾರು ನೀನು ನಂಗೆ ಹಾಡು ಸಖತ್ ವೈರಲ್ ಆಗಿತ್ತು, ಇದೀಗ ಅದೇ ಹಾಣನ್ನು ರೂಪಾ ರಾಜು ಮಾಡಿದ್ದು, ಅದು ಕೂಡ ಸಖತ್ ಸೌಂಡ್ ಮಾಡ್ತಿದೆ.
03:12 PM (IST) Mar 11
ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು, ಆಕೆಯ ಮೊಬೈಲ್ನಿಂದ ಡಿಲೀಟ್ ಆದ ದಾಖಲೆಗಳು ರಿಟ್ರೀವ್ ಆಗಿವೆ. ಅದರಲ್ಲಿ ಪ್ರಭಾವಿ ರಾಜಕಾರಣಿಯ ಫೋಟೋ ಮತ್ತು ಸ್ಫೋಟಕ ಆಡಿಯೋಗಳು ಪತ್ತೆಯಾಗಿವೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸಿದೆ.
ಪೂರ್ತಿ ಓದಿ