ಧಾರವಾಡ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳ ತಂಡವು ಮಂಗಳವಾರ ಜಿಲ್ಲೆಯ 24 ಗ್ರಾಪಂಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿತು.
ಕಳಪೆ ಕಾಮಗಾರಿ, ಬಿಲ್ ಪಾವತಿಗೆ ಹಣಕ್ಕಾಗಿ ಬೇಡಿಕೆ, ಕಾಮಗಾರಿಗಳ ಹಿರಿತನ ಆಧರಿಸಿ ಬಾಕಿ ಬಿಲ್ ಪಾವತಿಸದಿರುವುದು, ದಾಖಲೆಗಳನ್ನು ನಿರ್ವಹಿಸದಿರುವುದು, ಫಲಾನುಭವಿಗಳಿಗೆ ಸೌಲಭ್ಯ ನೀಡಲು ವಿಳಂಬ ಸೇರಿ ಇನ್ನಿತರ ಲೋಪದೋಷಗಳ ಕುರಿತು ಲೋಕಾಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಜಿಲ್ಲೆಯ 24 ಗ್ರಾಪಂಗಳ ದಾಖಲಾತಿ ಪರಿಶೀಲಿಸಿದ್ದು, ತಿಂಗಳಾಂತ್ಯಕ್ಕೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
09:59 AM (IST) Jun 10
ತುಮಕೂರು ನಗರಕ್ಕೆ ಮೆಟ್ರೋ ರೈಲು ಬರುತ್ತೆ ಎಂಬ ಖುಷಿಯಲ್ಲಿದ್ದ ಈ ಭಾಗದ ಜನತೆಗೆ ಬೇಸರದ ಸಂಗತಿಯೊಂದು ಬಂದಿದೆ. ಈ ವಿಷಯ ತಿಳಿದ ಜನರು, ನಮಗ್ಯಾಕೆ ಬೇಕು ಮೆಟ್ರೋ ರೈಲು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
09:22 AM (IST) Jun 10
ಕೆಎಸ್ಆರ್ಟಿಸಿ ಬಸ್ನ ವೇಳಾಪಟ್ಟಿಯನ್ನು ಏಕಾಏಕಿ ಬದಲಿಸಿದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 25 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಅನುಕೂಲಕರವಾಗಿದ್ದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
09:07 AM (IST) Jun 10
08:56 AM (IST) Jun 10
08:53 AM (IST) Jun 10
ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ, ರಾಯಚೂರಿನ ಹಿಂದೂ ಮಹೋತ್ಸವಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಆಂಧ್ರಪ್ರದೇಶದ ವ್ಯಾಪ್ತಿಯಾಗಿದ್ದು, ಇಲ್ಲಿ ನೋಟಿಸ್ ನೀಡಿದ್ದಕ್ಕೆ ಕೆರೆಹಳ್ಳಿ ಪೊಲೀಸರ ನಡುವೆ ವಾಗ್ವಾದ.
08:41 AM (IST) Jun 10
08:08 AM (IST) Jun 10
07:40 AM (IST) Jun 10
07:23 AM (IST) Jun 10
ಪುರಸಭೆಯು ಘನತ್ಯಾಜ್ಯ ನಿರ್ವಹಣಾ ನಿಯಮದ ಅಡಿಯಲ್ಲಿ ತ್ಯಾಜ್ಯವನ್ನು 4 ವಿಧಗಳಲ್ಲಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ಈ ನಿಯಮ ಪಾಲಿಸದ ಸಾರ್ವಜನಿಕರು ಮತ್ತು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಮುಖ್ಯಾಧಿಕಾರಿ ಟಿ.ಲೀಲಾವತಿ ಎಚ್ಚರಿಕೆ ನೀಡಿದ್ದಾರೆ.
07:10 AM (IST) Jun 10