Published : Jun 10, 2026, 06:49 AM ISTUpdated : Jun 10, 2026, 10:37 PM IST

Karnataka News Live: ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ಬೆಳ್ಳಿ ಕತ್ತಿ ಗಿಫ್ಟ್‌ ಮಾಡಿದ ಬಿಗ್‌ಬಾಸ್‌ ಅಶ್ವಿನಿ ಗೌಡ

ಸಾರಾಂಶ

ಧಾರವಾಡ: ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳ ತಂಡವು ಮಂಗಳವಾರ ಜಿಲ್ಲೆಯ 24 ಗ್ರಾಪಂಗಳ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲಿಸಿತು.

ಕಳಪೆ ಕಾಮಗಾರಿ, ಬಿಲ್‌ ಪಾವತಿಗೆ ಹಣಕ್ಕಾಗಿ ಬೇಡಿಕೆ, ಕಾಮಗಾರಿಗಳ ಹಿರಿತನ ಆಧರಿಸಿ ಬಾಕಿ ಬಿಲ್​ ಪಾವತಿಸದಿರುವುದು, ದಾಖಲೆಗಳನ್ನು ನಿರ್ವಹಿಸದಿರುವುದು, ಫಲಾನುಭವಿಗಳಿಗೆ ಸೌಲಭ್ಯ ನೀಡಲು ವಿಳಂಬ ಸೇರಿ ಇನ್ನಿತರ ಲೋಪದೋಷಗಳ ಕುರಿತು ಲೋಕಾಯುಕ್ತರಿಗೆ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಎಸ್‌.ಟಿ.ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಜಿಲ್ಲೆಯ 24 ಗ್ರಾಪಂಗಳ ದಾಖಲಾತಿ ಪರಿಶೀಲಿಸಿದ್ದು, ತಿಂಗಳಾಂತ್ಯಕ್ಕೆ ಕೇಂದ್ರ ಕಚೇರಿಗೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10:37 PM (IST) Jun 10

ಕರವೇ ನಾರಾಯಣ ಗೌಡ್ರ ಜನ್ಮದಿನಕ್ಕೆ ಬೆಳ್ಳಿ ಕತ್ತಿ ಗಿಫ್ಟ್‌ ಮಾಡಿದ ಬಿಗ್‌ಬಾಸ್‌ ಅಶ್ವಿನಿ ಗೌಡ

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ 60ನೇ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ, ನಟಿ ಹಾಗೂ ಬಿಗ್‌ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ಅವರು ನಾರಾಯಣ ಗೌಡರಿಗೆ ಬೆಳ್ಳಿ ಕತ್ತಿಯನ್ನು ಉಡುಗೊರೆಯಾಗಿ ನೀಡಿ ಶುಭ ಕೋರಿದರು.
Read Full Story

09:52 PM (IST) Jun 10

ಕಾಂಗ್ರೆಸ್ ಸರ್ಕಾರಕ್ಕೆ ಇನ್ನೆರಡು ವರ್ಷ ಅಸ್ಥಿರತೆ ಕಾಡಲಿದೆ - ಸಂಸದ ಬೊಮ್ಮಾಯಿ

ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಸ್ತಾಂತರ ಮೇಲ್ನೋಟಕ್ಕೆ ಬಹಳ ಸುಗಮವಾಗಿ ಆಯಿತು ಎನ್ನುವಂತೆ ಕಾಣಿಸುತ್ತಿದೆ. ಆದರೆ, ಒಳಬೇಗುದಿ ಇನ್ನೂ ಕೆಂಡದಂತೆ ಜೀವಂತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

Read Full Story

09:49 PM (IST) Jun 10

ಡಿಕೆಶಿ ಹೇಳಿಕೆ ಬಳಿಕ ನಟ ದರ್ಶನ್ ಫ್ಯಾನ್ಸ್ ಪರಿಸ್ಥಿತಿ ಹೇಗಾಗಿದೆ ಗೊತ್ತಾ? 'ಹೀಗಾಗಿದೆ' ಅಂತ ಹೇಳಬಹುದಾ..?!

ಜಸ್ಟ್ ಎರಡು ವರ್ಷಗಳ ಹಿಂದೆ ದರ್ಶನ್ ಅಂದ್ರೆ ಎಲ್ಲರೂ ಮುತ್ತಿಕ್ತಾ ಇದ್ರು. ಚಿತ್ರರಂಗ ದಾಸನನ್ನ ಹೊತ್ತು ಮೆರೆಸ್ತಾ ಇತ್ತು. ರಾಜಕಾರಣಿಗಳು, ಉದ್ಯಮಿಗಳು ದಾಸನ ಹಿಂದೆ ಮುಂದೆ ಸುತ್ತತಾ ಇದ್ರು. ಆಗ ದರ್ಶನ್ ಥೇಟ್ ಚಕ್ರವರ್ತಿಯಂತೆ ಮೆರೀತಾ ಇದ್ರು… ಆದ್ರೀಗ ಎಲ್ಲವೂ ಉಲ್ಟಾ ಆಗಿದೆ.. 

Read Full Story

09:21 PM (IST) Jun 10

ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಯತ್ನ - ಎಚ್‌ಡಿಕೆ ಆರೋಪ

ಜೆಡಿಎಸ್-ಬಿಜೆಪಿ ಮೈತ್ರಿ ಪಕ್ಷದಲ್ಲಿ ಬಿರುಕು ಮೂಡಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ರಾಜ್ಯಸಭೆ ಟಿಕೆಟ್‌ಗೆ ದೇವೇಗೌಡರು ಅರ್ಜಿಯನ್ನೇ ಹಾಕಿರಲಿಲ್ಲ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

Read Full Story

08:10 PM (IST) Jun 10

ಕಲಬುರಗಿ-ಬೆಂಗಳೂರು ವಿಮಾನ ಸೇವೆ ಪುನರಾರಂಭ ಬೆನ್ನಲ್ಲೇ ಏರ್ಪೋರ್ಟ್‌ನಿಂದ ವಿಶೇಷ ಕೆಕೆಆರ್‌ಟಿಸಿ ಬಸ್ ಸಂಚಾರ ಆರಂಭ

ಕಲಬುರಗಿ ಮತ್ತು ಬೆಂಗಳೂರು ನಡುವಿನ ವಿಮಾನ ಸೇವೆ ಪುನರಾರಂಭಗೊಂಡ ಹಿನ್ನೆಲೆಯಲ್ಲಿ, ವಿಮಾನ ಪ್ರಯಾಣಿಕರ ಅನುಕೂಲಕ್ಕಾಗಿ KKRTCಯು ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ವಿಶೇಷ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್, ವಿಮಾನದ ಸಮಯಕ್ಕೆ ಅನುಗುಣವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಅನುಕೂಲ ಮಾಡಿಕೊಡಲಿದೆ.
Read Full Story

07:20 PM (IST) Jun 10

ಬೀದರ್ ವಿಮಾನ ಸಂಚಾರಕ್ಕೆ ಸಂಕಷ್ಟದ ಭೀತಿ, ಸಿಎಂ ಡಿಕೆಶಿಗೆ ಪತ್ರ ಬರೆದ ಸಚಿವ ಈಶ್ವರ್ ಖಂಡ್ರೆ

ಸ್ಟಾರ್ ಏರ್ ಸಂಸ್ಥೆಯು ಬೆಂಗಳೂರು-ಬೀದರ್ ವಿಮಾನದ ಸಮಯವನ್ನು ಮುಂಜಾನೆಯಿಂದ ಮಧ್ಯಾಹ್ನಕ್ಕೆ ಬದಲಾಯಿಸಿದೆ. ಈ ಹೊಸ ವೇಳಾಪಟ್ಟಿಯು ಪ್ರಯಾಣಿಕರಿಗೆ ಅನಾನುಕೂಲಕರವಾಗಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹಳೆಯ ವೇಳಾಪಟ್ಟಿಯನ್ನೇ ಮರುಸ್ಥಾಪಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 

Read Full Story

06:58 PM (IST) Jun 10

ಬರೀ 16 ವರ್ಷಕ್ಕೆ ಇನ್ನೊಂದು ಜಲಾಶಯಕ್ಕೆ ಬಲಿಯಾದ ಅದ್ಬುತ ಹಿರೇಭಾಸ್ಕರ ಡ್ಯಾಮ್‌, ವರ್ಷಕ್ಕೆ ಒಮ್ಮೆ ಮಾತ್ರ ಕಾಣುವ ಸೋಜಿಗ!

ಶಿವಮೊಗ್ಗದ ಹಿರೇಭಾಸ್ಕರ ಆಣೆಕಟ್ಟು ಬೇಸಿಗೆಯಲ್ಲಿ ಮಾತ್ರ ಕಾಣಸಿಗುವ ಐತಿಹಾಸಿಕ ವಿಸ್ಮಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿತವಾದ ಇದು, 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಅದರ ಹಿನ್ನೀರಿನಲ್ಲಿ ಮುಳುಗಡೆಯಾಯಿತು. 

Read Full Story

06:37 PM (IST) Jun 10

ಅಶ್ಲೀಲ ಕಮೆಂಟಿಗರ ನಿದ್ದೆಗೆಡಿಸಿ ವಿಜಯಲಕ್ಷ್ಮಿ ದರ್ಶನ್​ - ಕಮೆಂಟ್​ ಹಾಕಿದವರಲ್ಲಿ ಶುರುವಾಯ್ತು ನಡುಕ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಕಮೆಂಟ್‌ಗಳನ್ನು ಹಾಕಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. 'ಜಲಗಾರ ಯೂನಿವರ್ಸಿಟಿ' ಎಂಬ ನಕಲಿ ಖಾತೆಯ ವ್ಯಕ್ತಿ ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Read Full Story

06:35 PM (IST) Jun 10

ದಕ್ಷಿಣ ಭಾರತದ ರೈಲ್ವೆ ಅಭಿವೃದ್ಧಿಗೆ 448 ಕೋಟಿ, ಪುಣೆ-ಬೆಂಗಳೂರು-ಕನ್ಯಾಕುಮಾರಿ ಹಳಿ ಮೇಲ್ದರ್ಜೆಗೆ 162.57 ಕೋಟಿ!

ಭಾರತೀಯ ರೈಲ್ವೆಯು ದಕ್ಷಿಣ ಭಾರತದ ಎರಡು ಪ್ರಮುಖ ರೈಲು ಮಾರ್ಗಗಳಾದ ಬೆಂಗಳೂರು-ತುಮಕೂರು ಮತ್ತು ಮಹಬೂಬ್‌ನಗರ-ಸಿಕಂದರಾಬಾದ್-ಮೇಡ್ಚಲ್ ವಿಭಾಗಗಳಲ್ಲಿ ವಿದ್ಯುತ್ ಎಳೆತ ವ್ಯವಸ್ಥೆಯನ್ನು ಆಧುನೀಕರಿಸಲು 448 ಕೋಟಿ ರೂಪಾಯಿಗಳ ಯೋಜನೆಗೆ ಅನುಮೋದನೆ ನೀಡಿದೆ.  

Read Full Story

06:19 PM (IST) Jun 10

ಶಕ್ತಿ ಯೋಜನೆಯಡಿ BMTC ಕಂಡಕ್ಟರ್‌ನಿಂದ ಯುಪಿಐ ಟಿಕೆಟ್ ವ್ಯವಸ್ಥೆ ದುರ್ಬಳಕೆ?; ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್!

ಬೆಂಗಳೂರಿನಲ್ಲಿ ಬಿಎಂಟಿಸಿ ಕಂಡಕ್ಟರ್‌ವೊಬ್ಬರು ಸತತವಾಗಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದು 'ಶಕ್ತಿ ಯೋಜನೆ'ಯ ದುರ್ಬಳಕೆ ಎಂಬ ಆರೋಪಕ್ಕೆ ಕಾರಣವಾಗಿದ್ದು, ಸಾರ್ವಜನಿಕರು ಮತ್ತು ನೆಟ್ಟಿಗರ ನಡುವೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. 

Read Full Story

06:10 PM (IST) Jun 10

ಖಾಲಿ ಜಾಗ ಇದ್ರೆ ಸಾಕು, ತಿಂಗಳಿಗೆ 22 ಲಕ್ಷ ದುಡಿಯಬಹುದು - ಗೆಳೆಯನ ಬ್ಯುಸಿನೆಸ್ ಐಡಿಯಾ ಹಂಚಿಕೊಂಡ ಯುವತಿ

ಉತ್ತರ ಪ್ರದೇಶದ ಮೀರತ್‌ನ ಯುವಕ ಖಾಲಿ ಜಾಗದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿ ಬೇಸಿಗೆಯಲ್ಲಿ ತಿಂಗಳಿಗೆ ₹22.5 ಲಕ್ಷ ಹಾಗೂ ಉಳಿದ ತಿಂಗಳುಗಳಲ್ಲಿ ₹7.5 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಈ ಸ್ಮಾರ್ಟ್ ಬ್ಯುಸಿನೆಸ್ ಮಾದರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Read Full Story

05:48 PM (IST) Jun 10

'ಶಿವಪ್ಪ ಕಾಯೋ ತಂದೆ' ಎಂದು ಕೊಟ್ಟಿಯೂರು ಶಿವಾಲಯಕ್ಕೆ ಹೋದ ದರ್ಶನ್ ಫ್ಯಾನ್ಸ್‌ಗೆ ಆಗಿದ್ದೇನು?

‘ಇಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ, ಇಲ್ಲಿಗೆ ಬರಬೇಡಿ’ ಅಂತ ಅನೇಕರು ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಹರಿಬಿಡ್ತಾ ಇದ್ದಾರೆ. ಅಷ್ಟಕ್ಕೂ ನಿಮಗ್ಯಾರು ಅಲ್ಲಿಗೆ ಹೋಗ್ಲಿಕ್ಕೆ ಹೇಳಿದ್ರು ಅಂದ್ರೆ ಇವರು ರಿಷಬ್, ದರ್ಶನ್ ರನ್ನ ನೋಡಿ ಹೋದ್ವಿ ಅಂತಾರೆ. ಎನೆಲ್ಲಾ ಪರದಾಟ ಅನುಭವಿಸಿದ್ರು ನೋಡಿ..!

Read Full Story

05:14 PM (IST) Jun 10

ಕೊಪ್ಪಳದ ಸೊಸೆ ಮೈಮೇಲೆ ಬಂದ ಮಾವನ ಆತ್ಮ! ಬೀಡಿ ಸೇಯುತ್ತಾ ದಂಗು ಬಡಿಸಿದ ಮಹಿಳೆ- ವಿಡಿಯೋ ವೈರಲ್

ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹತ್ತು ವರ್ಷಗಳ ಹಿಂದೆ ನಿಧನರಾದ ಮಾವನ ಆತ್ಮ ತನ್ನ ಮೈಮೇಲೆ ಬಂದಿದೆ ಎಂದು ಹೇಳುತ್ತಿರುವ ಸೊಸೆಯೊಬ್ಬಳು, ಮಾವನಂತೆಯೇ ಬೀಡಿ ಸೇದಲು ಆರಂಭಿಸಿದ್ದಾಳೆ. ಈ ಘಟನೆಯು ಸ್ಥಳೀಯರಲ್ಲಿ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.
Read Full Story

04:51 PM (IST) Jun 10

ಗ್ರೇಟರ್ ಬೆಂಗಳೂರು ಆಸ್ತಿ ತೆರಿಗೆ - ಪ್ರಸಕ್ತ ಹಣಕಾಸು ವರ್ಷದ ಎರಡೂವರೆ ತಿಂಗಳಲ್ಲೇ ದಾಖಲೆಯ ₹2,949 ಕೋಟಿ ಸಂಗ್ರಹ

ನೂತನ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) 2026-27ನೇ ಹಣಕಾಸು ವರ್ಷದ ಆರಂಭದಲ್ಲೇ ದಾಖಲೆಯ ₹2,949.55 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಶೇ. 5ರ ರಿಯಾಯಿತಿ ವಿಸ್ತರಣೆ ಮತ್ತು 'ಬಿ-ಟು-ಎ' ಖಾತಾ ಯೋಜನೆ ಈ ಯಶಸ್ಸಿಗೆ ಕಾರಣವಾಗಿದ್ದು, ಪ್ರಾಧಿಕಾರವು ತೆರಿಗೆ ಬಾಕಿದಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.
Read Full Story

04:48 PM (IST) Jun 10

AI ಯಡವಟ್ಟು; ಸಿಎಂ ವಿಜಯ್ ದೇಹಕ್ಕೆ ನಿರ್ದೇಶಕ ಭಾರತಿರಾಜಾ ಶ್ರದ್ಧಾಂಜಲಿ; ನೆಟ್ಟಿಗರಿಂದ ಫುಲ್ ಕ್ಲಾಸ್

ಎಲೋನ್ ಮಸ್ಕ್ ಅವರ 'ಗ್ರಾಕ್' (Grok) ಎಐ ಇತ್ತೀಚೆಗೆ ಮಾಡಿದ ಒಂದು ದೊಡ್ಡ ಎಡವಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳಿನಿಂದ ಸುದ್ದಿಯನ್ನು ಅನುವಾದಿಸುವಾಗ ಎಐ ತಂತ್ರಜ್ಞಾನವು, ನಟ ವಿಜಯ್ ಅವರನ್ನು 'ಮುಖ್ಯಮಂತ್ರಿ' ಎಂದು ಸಂಬೋಧಿಸಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ನಿರ್ದೇಶಕ ಭಾರತಿರಾಜ ಅವರು ಅಂತಿಮ ನಮನ ಸಲ್ಲಿಸಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ.

Read Full Story

04:32 PM (IST) Jun 10

ಕಿಚ್ಚ ಸುದೀಪ್‌ ಮೆಚ್ಚಿದ ಅಸಲಿ ಪಚ್ಚ ಪ್ರಶಾಂತ್‌ ಹಿರೇಮಠ - ಯಾರು ಈ ಹೊಸ ಖಳನಟ?

ಪ್ರಶಾಂತ್‌ ಹಿರೇಮಠ 1989ರಿಂದ 2022ರವರೆಗೆ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರು. 180ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದಾರೆ. ನಿರ್ದೇಶನ ಮಾಡಿದ್ದಾರೆ. ಮಹತ್ವದ..

Read Full Story

03:48 PM (IST) Jun 10

ವಿಶ್ವದ ಅತ್ಯುತ್ತಮ ಆಹಾರ ನಗರ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಏಕೈಕ ಸಿಟಿ ಬೆಂಗಳೂರು, ಕನ್ನಡಿಗರು ಮೆಚ್ಚಿದ ತಿಂಡಿ ಇದೇ ನೋಡಿ!

ಪ್ರಖ್ಯಾತ 'ಟೈಮ್ ಔಟ್' ನಿಯತಕಾಲಿಕೆಯು 2026ರ ವಿಶ್ವದ ಅತ್ಯುತ್ತಮ ಆಹಾರ ನಗರಗಳ ಪಟ್ಟಿಯನ್ನು ಪ್ರಕಟಿಸಿದ್ದು, ಬೆಂಗಳೂರು 13ನೇ ಸ್ಥಾನ ಪಡೆದಿದೆ. ಈ ಪ್ರತಿಷ್ಠಿತ ಟಾಪ್-20 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಗರ ಇದಾಗಿದ್ದು, ಸಾಂಪ್ರದಾಯಿಕ  ಪಾಕಪದ್ಧತಿಯ ಸಮ್ಮಿಶ್ರಣಕ್ಕಾಗಿ ಈ ಮನ್ನಣೆ ಲಭಿಸಿದೆ.

Read Full Story

03:25 PM (IST) Jun 10

ಫುಟ್ಬಾಲ್ ಮುಂದೆ ಕ್ರಿಕೆಟ್ ಏನೂ ಅಲ್ಲ! T20 ವಿಶ್ವಕಪ್ ಗೆದ್ದ ಭಾರತಕ್ಕೆ ಸಿಕ್ಕಿದ್ದು ₹22 ಕೋಟಿ, ಫುಟ್ಬಾಲ್‌ನಲ್ಲಿ ಸೋತೋರಿಗೂ ಸಿಗುತ್ತೆ ₹87 ಕೋಟಿ!

2026ರ ಫಿಫಾ ವಿಶ್ವಕಪ್ ಮತ್ತು ಟಿ20 ವಿಶ್ವಕಪ್‌ಗಳ ಬಹುಮಾನದ ಹಣದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಫುಟ್ಬಾಲ್ ವಿಶ್ವಕಪ್‌ನಲ್ಲಿ ಸೋತ ತಂಡಕ್ಕೆ ಸಿಗುವ ಹಣವು, ಇಡೀ ಟಿ20 ವಿಶ್ವಕಪ್‌ನ ಒಟ್ಟು ಬಹುಮಾನದ ಮೊತ್ತಕ್ಕೆ ಸಮನಾಗಿರುವುದು ಫುಟ್ಬಾಲ್‌ನ ಆರ್ಥಿಕ ಶಕ್ತಿಯನ್ನು ತೋರಿಸುತ್ತದೆ.
Read Full Story

03:17 PM (IST) Jun 10

ರೇಣುಕಾಸ್ವಾಮಿ ಕೇಸ್ - ದರ್ಶನ್ ಗ್ಯಾಂಗ್‌ನ ಐವರು ಆರೋಪಿಗಳ ಜಾಮೀನು ರದ್ದು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಗ್ಯಾಂಗ್‌ನ ಪವನ್, ರಾಘವೇಂದ್ರ, ನಂದೀಶ್, ವಿನಯ್ ಹಾಗೂ ಧನರಾಜ್ ಜಾಮೀನು ರದ್ದು ಕೋರಿದ್ದ ಪ್ರಾಸಿಕ್ಯೂಷನ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Read Full Story

01:45 PM (IST) Jun 10

ಶಿವಂ ಅಸೋಸಿಯೇಟ್ಸ್ ಅಕ್ರಮ ಹಣದಲ್ಲಿ ಸನ್ನಿ ಲಿಯೋನ್‌ ಮಾತ್ರವಲ್ಲ, ಇನ್ನೂ 4 ಕನ್ನಡದ ನಟ-ನಟಿಯರಿಗೆ ಪಾಲಿದೆಯಾ?!

ಬಡವರ ರಕ್ತ ಹೀರಿ ಕಟ್ಟಿದ ಈ 2,400 ಕೋಟಿ ರೂಪಾಯಿಗಳ ಸಾಮ್ರಾಜ್ಯ ಈಗ ಬುಡಮೇಲಾಗುತ್ತಿದೆ. ಸಿಐಡಿ ಅಧಿಕಾರಿಗಳು ದಾಖಲೆಗಳ ಬೆನ್ನತ್ತಿದ್ದು, ಚಿತ್ರರಂಗದ ಗಣ್ಯರು ಈ ವಂಚನೆಯ ಜಾಲದಲ್ಲಿ ಎಷ್ಟು ಆಳಕ್ಕೆ ಸಿಲುಕಿದ್ದಾರೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಲಿದೆ. 

Read Full Story

01:32 PM (IST) Jun 10

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ 2028ಕ್ಕೆ ಪೂರ್ಣ - ರೈಲ್ವೆ ರಾಜ್ಯ ಸಚಿವ ಸೋಮಣ್ಣ

ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಬೆಂಗಳೂರು ಮತ್ತು ತುಮಕೂರು ಭಾಗದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಭೆಯಲ್ಲಿ, ಬಹುನಿರೀಕ್ಷಿತ ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗವನ್ನು 2028ರೊಳಗೆ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ಘೋಷಿಸಿದರು. ಜೊತೆಗೆ, ತುಮಕೂರು-ರಾಯದುರ್ಗ ಯೋಜನೆ ಮತ್ತು 32 ಆರ್‌ಒಬಿ/ಆರ್‌ಯುಬಿ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಲಾಯಿತು.
Read Full Story

01:19 PM (IST) Jun 10

Kollur Mookambika temple - ಕೊಲ್ಲೂರು ಮೂಕಾಂಬಿಕಾ ದರ್ಶನಕ್ಕೆ ತಮಿಳು ನಾಡು ಸಿಎಂ!

ತಮಿಳುನಾಡು ನೂತನ ಮುಖ್ಯಮಂತ್ರಿ ಹಾಗೂ ನಟ ಜೋಸೆಫ್ ವಿಜಯ್, ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಆಗಮಿಸುತ್ತಿರುವ ಅವರು, ದವಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. 

Read Full Story

01:07 PM (IST) Jun 10

ಒಣಗಿದ ಗಿಡಕ್ಕೂ ಜೀವ ಬಂತು, ಆಸೆ ಬಿಟ್ಟಿದ್ದ ಗಿಡಗಳಲ್ಲಿ ತರಕಾರಿ ತುಂಬಿತು - ಹುಣಸೂರ ಮಹಿಳೆ ಯಶೋಗಾಥೆ

ಮೈಸೂರಿನ ಕೃಷಿ ಪದವೀಧರೆ ಸುಧಾ ಸಂದೀಪ್ ಅವರು ಪಂಚಗವ್ಯ ಬಳಸಿ ತಮ್ಮ ಒಣಗಿದ ತೋಟಕ್ಕೆ ಮರುಜೀವ ನೀಡಿದ್ದಾರೆ. ರಾಸಾಯನಿಕ ಮುಕ್ತವಾದ ಈ ಸಾಂಪ್ರದಾಯಿಕ ವಿಧಾನದಿಂದಾಗಿ, ಅವರ ತೋಟದಲ್ಲಿ ತರಕಾರಿಗಳು ಸಮೃದ್ಧವಾಗಿ ಬೆಳೆಯುತ್ತಿದ್ದು, ಇದು ಇತರ ಕೃಷಿಕರಿಗೆ ಸ್ಫೂರ್ತಿಯಾಗಿದೆ.
Read Full Story

01:01 PM (IST) Jun 10

ಗಂಡನ ಮೊಬೈಲ್‌ನಲ್ಲಿದ್ದ ಆ ಫೋಟೋ..ಮಗು ವಿಷ್ಯ..ಕಣ್ಣೀರಿನ ರಾತ್ರಿ - Jodi No 1 ಸೆಲೆಬ್ರಿಟಿ ದಾಂಪತ್ಯದಲ್ಲಿ ಸಮಸ್ಯೆ

Zee Kannada Jodi No 1 Show: ಜೋಡಿ ನಂ 1 ಶೋನಲ್ಲಿ ಈ ವಾರ ದಂಪತಿಗಳು ತಮ್ಮ ನಡುವಿನ ಸಮಸ್ಯೆ ಏನು ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೆ ನಿಜಕ್ಕೂ ಸಮಸ್ಯೆ ಏನು? ಆಮೇಲೆ ಏನು ಪರಿಹಾರ ಸಿಕ್ಕಿತು ಎಂದು ಕೂಡ ಅವರು ಹೇಳಿದ್ದಾರೆ.

 

Read Full Story

12:39 PM (IST) Jun 10

ರೇಣುಕಾಸ್ವಾಮಿ ಹತ್ಯೆ ಪ್ರಕರಣ - ಜೈಲಿಂದ ಹೊರಗಿರುವ ದರ್ಶನ್‌ ಸಹಚರರ ಜಾಮೀನು ಭವಿಷ್ಯ ಹೈಕೋರ್ಟ್‌ನಿಂದ ಇಂದು ನಿರ್ಧಾರ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸಹಚರರಾದ ಐವರು ಆರೋಪಿಗಳ ಜಾಮೀನು ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಇಂದು ಪ್ರಕಟಿಸಲಿದೆ. ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಈ ಅರ್ಜಿಯ ಮೇಲಿನ ತೀರ್ಪು, ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ.
Read Full Story

12:06 PM (IST) Jun 10

ಡಿವೋರ್ಸ್ ವಿಚಾರ, ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಶುಭಾ ಪೂಂಜಾ

ನಟಿ ಶುಭಾ ಪೂಂಜಾ ಡಿವೋರ್ಸ್ ವಿಷ್ಯ ಸದ್ಯ ಸುದ್ದಿಯಲ್ಲಿದೆ. ಶುಭಾ ಪೂಂಜಾ ಹಾಗೂ ಅವ ಪತಿ ಸುಮಂತ್ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಶುಭಾ ಪೂಂಜಾ ಈಗ ಸ್ಪಷ್ಟನೆ ನೀಡಿದ್ದಾರೆ.

 

Read Full Story

12:02 PM (IST) Jun 10

Davanagere Horror - ಮಹಿಳೆಗೆ ಮತ್ತು ಬರಿಸುವ ಪಾನೀಯ ನೀಡಿ ಹೊಲಕ್ಕೆ ಹೊಯ್ಯೊಯ್ದು ಸಾಮೂಹಿಕ ಬಲತ್ಕಾರ - ಬೆತ್ತಲೆ ವಿಡಿಯೋ ಮಾಡಿ ವಿಕೃತಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಪತಿಯೊಂದಿಗೆ ಜಗಳವಾಡಿ ಮನೆಬಿಟ್ಟ ಮಹಿಳೆಗೆ, ಯುವಕನೊಬ್ಬ ಪಾನೀಯ ನೀಡಿ ಬಳಿಕ ಸಾಮೂಹಿಕ ಅತ್ಯಾ೧ಚಾರ ಎಸಗಲಾಗಿದೆ. ಈ ಘಟನೆಯ ವಿಡಿಯೋಗಳು ಹರಿದಾಡಿದ ನಂತರ ಸಂತ್ರಸ್ತೆ ದೂರು ನೀಡಿದ್ದು, ಪೊಲೀಸರು 10 ಮಂದಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

Read Full Story

12:00 PM (IST) Jun 10

ಪತಿ ಬಾಳು ಬೆಳಗುಂದಿ ನನ್ನ ಸಮಸ್ಯೆಗೆ ಸ್ಪಂದಿಸ್ತಿಲ್ಲ - Jodi No 1 ಶೋನಲ್ಲಿ ಪತ್ನಿ ಮಾಲಾಶ್ರೀ ಕಣ್ಣೀರು

Jodi No 1 Balu Belagundi: ಜೋಡಿ ನಂ 1 ಸೀಸನ್‌ 2 ಶೋ ಪ್ರಸಾರ ಆಗ್ತಿದೆ. ಈ ಶೋನಲ್ಲಿ ಈ ವಾರ ಸ್ಪರ್ಧಿಗಳು ತಮ್ಮ ದಾಂಪತ್ಯದಲ್ಲಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಗಾಯಕ ಬಾಳು ಬಾಳೆಗುಂದಿ ಪತ್ನಿ ಮಾಲಾಶ್ರೀ ಅವರು ಪತಿ ಬಗ್ಗೆ ದೂರು ನೀಡಿದ್ದಾರೆ.

Read Full Story

11:22 AM (IST) Jun 10

ಗೃಹಲಕ್ಷ್ಮಿ ಯೋಜನೆಗೆ ಸರ್ಕಾರದ ಮೇಜರ್ ಸರ್ಜರಿ, ಇನ್ಮುಂದೆ ಬಯೋಮೆಟ್ರಿಕ್ ಕಡ್ಡಾಯ, ಎಲ್ಲೆಲ್ಲಿ ಲಭ್ಯ!

ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಲ್ಲಿನ ಅಕ್ರಮಗಳನ್ನು ತಡೆಯಲು, ರಾಜ್ಯ ಸರ್ಕಾರವು ಫಲಾನುಭವಿಗಳಿಗೆ ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ. ಮೃತಪಟ್ಟವರು ಮತ್ತು ತೆರಿಗೆ ಪಾವತಿದಾರರು ಸೇರಿದಂತೆ ಸಾವಿರಾರು ಅನರ್ಹರನ್ನು ಪತ್ತೆಹಚ್ಚಿದ ನಂತರ, ಅರ್ಹ ಮಹಿಳೆಯರಿಗೆ ಮಾತ್ರ ಹಣ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Read Full Story

11:12 AM (IST) Jun 10

ಕರ್ನಾಟಕ ಕಾಂಗ್ರೆಸ್‌ಗೆ ಹೊಸ ಬಿಗ್ ಬಾಸ್ - ಜೂನ್ 21ರಂದು ಬಿಕೆ ಹರಿಪ್ರಸಾದ್ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ!

ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ.ಹರಿಪ್ರಸಾದ್‌ ಅವರು ಜೂ.21 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್‌ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದು, ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ನಾಯಕರ ಸಮ್ಮುಖದಲ್ಲಿ ಪದಗ್ರಹಣ ಮಾಡಲಿದ್ದಾರೆ.

Read Full Story

10:47 AM (IST) Jun 10

ಮೂರು ವರ್ಷದಿಂದ ಬತ್ತಿದ್ದ ಸೋಮನಹಳ್ಳಿ, ಮರದೂರು ಭಾಗದ ಕೆರೆಗಳಿಗೆ ಜೀವ ಕಳೆ; ಶಾಸಕರೇ ಇಲ್ಲಿ ಭಗೀರಥ

ಹುಣಸೂರಿನ ಸೋಮನಹಳ್ಳಿ ಮತ್ತು ಮರದೂರು ಭಾಗದ ಬತ್ತಿದ್ದ ಕೆರೆಗಳಿಗೆ ನೀರು ತುಂಬಿಸಲು ₹5.45 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಮೂರು ವರ್ಷಗಳಿಂದ ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು, ಈ ಯೋಜನೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

Read Full Story

10:16 AM (IST) Jun 10

ರಾಯಚೂರು - ಕುಡಿದ ಮತ್ತಿನಲ್ಲಿ ಯರ್ರಾಬಿರ್ರಿ ಕಾರು ಚಲಾಯಿಸಿ ಡಿವೈಡರ್ ಡಿಕ್ಕಿ; 'ಕಣ್ಣು ಮಂಜಾಗಿ' ಹತ್ತಿಸಿದ ಎಂದ ಭೂಪ!

ರಾಯಚೂರು ನಗರದಲ್ಲಿ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಯರ್ರಾಬಿರ್ರಿ ಕಾರು ಚಾಲಯಿಸಿ ಡಿವೈಡರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪೊಲೀಸರ ವಿಚಾರಣೆ ವೇಳೆ ‘ಕಣ್ಣು ಮಂಜಾಗಿ’ ಹತ್ತಿಸಿದೆ ಸಾರ್ ಎಂದಿರುವ ಭೂಪನಿಗೆ ಏನು ಹೇಳಬೇಕು? 

Read Full Story

09:59 AM (IST) Jun 10

ಮೆಟ್ರೋ ಬರುವ ಖುಷಿಯಲ್ಲಿದ್ದ ತುಮಕೂರಿನ ಜನತೆಗೆ ಬೇಸರದ ಸಂಗತಿ; ನಮಗ್ಯಾಕೆ ಬೇಕೆಂದ ಜನ

ತುಮಕೂರು ನಗರಕ್ಕೆ ಮೆಟ್ರೋ ರೈಲು ಬರುತ್ತೆ ಎಂಬ ಖುಷಿಯಲ್ಲಿದ್ದ ಈ ಭಾಗದ ಜನತೆಗೆ ಬೇಸರದ ಸಂಗತಿಯೊಂದು ಬಂದಿದೆ. ಈ ವಿಷಯ ತಿಳಿದ ಜನರು, ನಮಗ್ಯಾಕೆ ಬೇಕು ಮೆಟ್ರೋ ರೈಲು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Read Full Story

09:22 AM (IST) Jun 10

25 ವರ್ಷದ ಬಳಿಕ KSRTC ಬಸ್ ವೇಳಾಪಟ್ಟಿ ದಿಢೀರ್‌ ಬದಲಾವಣೆ - ಗ್ರಾಮಸ್ಥರಿಂದ ಪ್ರತಿಭಟನೆ

ಕೆಎಸ್‌ಆರ್‌ಟಿಸಿ ಬಸ್‌ನ ವೇಳಾಪಟ್ಟಿಯನ್ನು ಏಕಾಏಕಿ ಬದಲಿಸಿದ್ದಕ್ಕೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. 25 ವರ್ಷಗಳಿಂದ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಅನುಕೂಲಕರವಾಗಿದ್ದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read Full Story

09:07 AM (IST) Jun 10

Bengaluru - ಬರೋಬ್ಬರಿ 5 ವರ್ಷದ ಬಳಿಕ ಪೀಣ್ಯ ಫ್ಲೈಓವರ್ ಪ್ರಯಾಣಿಕರಿಗೆ ಸಂತಸದ ಸುದ್ದಿ

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯು ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು, ಇದೀಗ ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಸದೃಢವಾಗಿದೆ. ಮುಂಬೈ ಮೂಲದ ಕಂಪನಿಯು ನಡೆಸಿದ 'ಲೋಡ್ ಟೆಸ್ಟಿಂಗ್' ವರದಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿದ ನಂತರ, ಸಂಚಾರ ಪುನರಾರಂಭದ ಬಗ್ಗೆ ಅಧಿಕೃತ ಘೋಷಣೆ ಹೊರಬೀಳಲಿದೆ.
Read Full Story

08:56 AM (IST) Jun 10

ಆಝಾನ್ ಕೊಡುತ್ತಿದ್ದ ವೇಳೆ ಹೃದಯಾಘಾತದಿಂದಾಗಿ ಧರ್ಮಗುರು ನಿಧನ; ಮೈಕ್ ಮುಂದೆಯೇ ಸಾವು

ಹೊನ್ನಾವರದ ಮಸೀದಿಯೊಂದರಲ್ಲಿ ಆಝಾನ್ ನೀಡುತ್ತಿದ್ದ ವೇಳೆ ಬಂಟ್ವಾಳ ಮೂಲದ ಧರ್ಮಗುರು ಅಬ್ದುಲ್ ಲತೀಫ್ ಮದನಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಜೆಯ ನಮಾಝ್‌ಗೆ ಬಾಂಗ್ ಕೊಡುತ್ತಿದ್ದಾಗ ಅವರು ಮೈಕ್ ಮುಂದೆಯೇ ಕುಸಿದು ಬಿದ್ದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

08:53 AM (IST) Jun 10

Puneeth kerehalli - ರಾಯರ ದರ್ಶನಕ್ಕೆ ಹೋಗಿದ್ದ ಪುನೀತ್‌ ಕೆರೆಹಳ್ಳಿಗೆ ರಾಯಚೂರು ಪೊಲೀಸರು ಮಂತ್ರಾಲಯಕ್ಕೆ ಹೋಗಿ ನೋಟಿಸ್ ಕೊಟ್ಟಿದ್ದು ಸರಿಯೇ?

ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ತೆರಳಿದ್ದ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಗೆ, ರಾಯಚೂರಿನ ಹಿಂದೂ ಮಹೋತ್ಸವಕ್ಕೆ ಆಗಮಿಸದಂತೆ ರಾಯಚೂರು ಪೊಲೀಸರು ನೋಟಿಸ್ ನೀಡಿದ್ದಾರೆ. ಇದು ಆಂಧ್ರಪ್ರದೇಶದ ವ್ಯಾಪ್ತಿಯಾಗಿದ್ದು, ಇಲ್ಲಿ ನೋಟಿಸ್ ನೀಡಿದ್ದಕ್ಕೆ ಕೆರೆಹಳ್ಳಿ ಪೊಲೀಸರ ನಡುವೆ ವಾಗ್ವಾದ.

Read Full Story

08:41 AM (IST) Jun 10

ಕುಸಿದ ಕಡವಾಡದ 60 ವರ್ಷ ಹಳೆಯ ಐತಿಹಾಸಿಕ ಸೇತುವೆ; ಮೀನುಗಾರರ ಬದುಕಿನ ಆಸರೆ ಈ ಸೇತುವೆ

ಕಾರವಾರದ ಕಡವಾಡ ಗ್ರಾಮದಲ್ಲಿ 60 ವರ್ಷಗಳ ಇತಿಹಾಸವಿದ್ದ, ರಾಮಕೃಷ್ಣ ಹೆಗಡೆಯವರಿಂದ ಉದ್ಘಾಟನೆಗೊಂಡಿದ್ದ ಹಳೆಯ ಸೇತುವೆಯು ಬಿರುಗಾಳಿ ಮಳೆಗೆ ಕುಸಿದು ಬಿದ್ದಿದೆ. ವಾಹನ ಸಂಚಾರಕ್ಕೆ ಮುಚ್ಚಿದ್ದರೂ, ಈ ಸೇತುವೆಯು ನೂರಾರು ಸ್ಥಳೀಯ ಮೀನುಗಾರ ಕುಟುಂಬಗಳ ಜೀವನೋಪಾಯಕ್ಕೆ ಪ್ರಮುಖ ಆಧಾರವಾಗಿತ್ತು.
Read Full Story

08:08 AM (IST) Jun 10

ಕಾಲಿಗೆ ಪೊರಕೆ ತಾಗಿದ್ದಕ್ಕೆ ಬೈದ ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಥಳಿಸಿದ ಮಹಿಳೆ!

ರಾಯಚೂರಿನ ಕೇಂದ್ರ ಬಸ್ ನಿಲ್ದಾಣದ ಕ್ಯಾಂಟೀನ್‌ನಲ್ಲಿ, ಪೊರಕೆ ತಾಗಿದ್ದಕ್ಕೆ ಕೋಪಗೊಂಡ ಗ್ರಾಹಕನೊಬ್ಬ ಮಹಿಳಾ ಸಿಬ್ಬಂದಿಗೆ ಬೈದಿದ್ದಾನೆ. ಇದರಿಂದ ಕೆರಳಿದ ಮಹಿಳೆ, ಗ್ರಾಹಕನ ಕಣ್ಣಿಗೆ ಖಾರದ ಪುಡಿ ಎರಚಿ ಪೊರಕೆಯಿಂದಲೇ ಥಳಿಸಿದ್ದಾರೆ. ಈ ಬೀದಿ ಜಗಳದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

07:40 AM (IST) Jun 10

ವರ್ಷಧಾರೆಗೆ ತುಂಬಿದ ನರೇಗಾ ಕಂದಕಗಳು - ಗಜೇಂದ್ರಗಡ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ!

ಗಜೇಂದ್ರಗಡ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಿಂದಾಗಿ, ಇತ್ತೀಚಿನ ಮಳೆಗೆ ಸಾವಿರಾರು ಕಂದಕಗಳು ಜಲಾವೃತಗೊಂಡಿವೆ. ಇದು ಮಣ್ಣಿನ ಸವಕಳಿಯನ್ನು ತಡೆಯುವುದರ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ನೆರವಾಗಿದ್ದು, ರೈತರಲ್ಲಿ ಸಂತಸ ಮೂಡಿಸಿದೆ.
Read Full Story

More Trending News